ಗಜಕರ್ಣದಂತೆ, ಇಂದ್ರಮಹೇಂದ್ರಜಾಲದಂತೆ,
ಅಗ್ನಿಸ್ತಂಭನೆಯಂತೆ, ಬಿಲ್ಲುವಿದ್ಯೆಯಂತೆ,
ಜಲಸೂತ್ರದಂತೆ, ರಣಕ್ಕೆ ತೊಲಗದ ಪಟುಭಟನಂತೆ.
ಇಂತೀ ಸರ್ವಾಂಗಲಿಂಗಿಯಾದ ಪರಿಪೂರ್ಣಭಕ್ತಜಂಗಮಕ್ಕೆ
ಇಂತಿವನರಿವ ಭೃತ್ಯಕುಲಕ್ಕೆ ತ್ರಿಸಂಧ್ಯಾಕಾಲ ಶರಣೆಂದು,
ಎನ್ನ ಮುಕ್ತನ ಮಾಡು, ನಿನ್ನ ಧರ್ಮ,
ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗಾ.