ಬೆನ್ನಪಳಿಗೆ ಎನ್ನ ಕೇಳಬೇಡ.
ಅಂಗಾಲ ಹುಣ್ಣಿಗೆ ಎನ್ನ ಕೇಳಬೇಡ.
ಬಾಯೊಳಗಣ ಬಗದಳಕ್ಕೆ ಎನ್ನ ಕೇಳಬೇಡ.
ಆ ವ್ಯಾಧಿಗೆ ಬಲ್ಲವರ ಬಲ್ಲೆ.
ಬೆನ್ನಿಗೆ ಬಸವಣ್ಣ, ಕಾಲಿಗೆ ಚೆನ್ನಬಸವಣ್ಣ,
ಬಾಯಿಗೆ ಪ್ರಭುದೇವರು, ಬಸುರಿಗೆ ನಿಜಗುಣ.
ಈ ರೋಗವ ಬಲ್ಲವರಿವರು, ಮಿಕ್ಕಾದ ವ್ಯಾಧಿಗೆ ನಾನರಸು.
ಮತ್ತಾರುವ ಬಳಿವಿಡಿಯಲಿಲ್ಲ.
ಚೆನ್ನಬಸವಣ್ಣ ಮುಂತು ಕಮಳೇಶ್ವರಲಿಂಗ ಹಿಂತುಳಿದು
ಒಡಗೂಡಬೇಕು.