ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ
ವಿಶುದ್ಧಿ ಆಜ್ಞಾ ಎಂಬ ಷಡಾಧಾರಚಕ್ರಂಗಳ ಭೇದಿಸಿಕೊಂಡು,
ಬ್ರಹ್ಮ ವಿಷ್ಣು ರುದ್ರ ಈಶ್ವರ ಮಹೇಶ್ವರ ಸದಾಶಿವನ ಧ್ಯಾನಿಸಿ ಕಂಡಡೆ,
ಮಹಿಮಾದಿಗಳಳಿವವೆಂದು ನುಡಿವರು.
ಮುಟ್ಟಿ ಮುಟ್ಟಿ ನೋಡುವುದು ಮಾಯೆ,
ಕರುಣದಿಂದ ಕಂಡುದು ಮಾಯೆ,
ಮನದಿಚ್ಫೆ ಅರಿವುದು ಮಾಯೆಯಲ್ಲವೆ ?
ತನುಮನ ಹಿಡಿದು ನೋಡಿದುದೆಲ್ಲ ಮಾಯೆಯಲ್ಲವೆ ?
ದೇಹವಿಡಿದು ವಿದೇಹಿಯಾದ ಮಹಾತ್ಮಂಗೆ
ದೇಹವಿಲ್ಲ ಮಾಯೆಯಿಲ್ಲ ಕರುಣವಿಲ್ಲ
ಮರಣವಿಲ್ಲ ಜನನವಿಲ್ಲ.
ಪ್ರತಿಯಿಲ್ಲದ ಘನಮಹತೋತ್ತಮನಾದ
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.