ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಪೃಥ್ವ್ಯಾದಿ ಪಂಚಭೂತಂಗು ಇದಕ್ಕೆ ವಿವರ:ಅಸ್ಥಿ ಚರ್ಮ ಮಾಂಸ ರೋಮ ಮಜ್ಜೆ ಇವೈದು ಪೃಥ್ವಿಯ ಅಂಶ.ಶುಕ್ಲ ಶೋಣಿತ ಶ್ಲೇಷ್ಮ ಪಿತ್ತ ರಕ್ತ ಇವೈದು ಅಪ್ಪುವಿನ ಅಂಶ.ಹಸಿವು ತೃಷೆ ನಿದ್ರೆ ಆಲಸ್ಯ ಸ್ತ್ರೀಸಂಗ ಇವೈದು ಅಗ್ನಿಯ ಅಂಶ.ಹವುದು ಕುಳ್ಳಿರುವುದು ಏಳುವುದು ಮೈಮುರಿವುದು ನಡೆವುದುಈ ಐದು ವಾಯುವಿನ ಅಂಶ.ಡಂಬು ಪ್ರಕಟ ಪ್ರಪಂಚು ಅಭ್ರಚ್ಛಾಯ ಆನಂದ ಇವೈದು ಆಕಾಶದ ಅಂಶ.ಇಂತೀ ಅಂಗ ಶುದ್ಧಂಗಳ ಬಿಟ್ಟು ಲಿಂಗಾಂಗವ ಮಾಡಬಲ್ಲಡೆಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು
ಸತ್ಯಶುದ್ಧದಿಂ ಬಂದ ಪದಾರ್ಥವಭಯಭಕ್ತಿ ಕಿಂಕುರ್ವಾಣದಿಂ ಗುರುಲಿಂಗಕ್ಕೆತನುಮುಟ್ಟಿ ಅರ್ಪಿಸಿಕೊಂಬುದೇ ಶುದ್ಧಪ್ರಸಾದ.ನಾಮ ರೂಪ ಕ್ರಿಯೆ ಹಂಕೃತಿಯಳಿದುಕರಣಾರ್ಪಿತದಿಂ ಶಿವಲಿಂಗಕ್ಕೆ ಮನಮುಟ್ಟಿ ಅರ್ಪಿಸಿಕೊಂಬುದು ಸಿದ್ಧಪ್ರಸಾದ.ಡಂಬು ಪ್ರಕಟ ಪ್ರಪಂಚು ಅಭ್ರಚ್ಛಾಯಯೆಂಬಚತುರ್ವಿಧಂಗಳಳಿದು ರಿಣಾತುರಿಯಮುಕ್ತ್ಯಾತುರಿಯಂಗಳನತಿಗಳೆದು ಸ್ವಯಾತುರಿಯದಿಂಜಂಗಮಲಿಂಗಕ್ಕೆ ತನುಮುಟ್ಟಿಸದ್ಭಾವದಿಂದರ್ಪಿಸಿಕೊಂಬುದು ಪ್ರಸಿದ್ಧಪ್ರಸಾದ.ಇಂತೀ ತ್ರಿವಿಧಸಂಬಂಧವಾದುದೆ ಅಚ್ಚಪ್ರಸಾದಸೌರಾಷ್ಟ್ರ ಸೋಮೇಶ್ವರಾ.
ಡಂಬು ಮಚ್ಚರ್ಯಕ್ಕೆ ಇಂಬುಗೊಡದಿರಬಲ್ಲಡೆ ಶರಣ.ಶಂಭುಪದಪದ್ಮಭಕ್ತಿನಂಬುಗೆವಿಡಿದು ಅಗಲದಿರಬಲ್ಲಡೆ ಶರಣ.ಸೂಸಲೀಯದೆ ಮನವ ಈಶಪದದಲ್ಲಿಮೀಸಲಾಗಿರಿಸಿಕೊಂಡಿರಬಲ್ಲಡೆಆ ಶರಣನ ಜಗದೀಶನೆಂಬೆನು ಕಾಣಾ,ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಅರಿಷಡುವರ್ಗವೆಂಬ ಕರ್ಮಿಯ ಬಲಿಯೊಳಿಂಬು ಗುರು ನೀ ಮಾಡಲಿಬೇಡ ಗುಪ್ತದಿಂದಲೆನ್ನ ಕೂಡೆ.ಪದ :ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಡಂಬುಈ ಮಹಾಬಲೆಯೊಳಿಟ್ಟು ನೀ ಮುನ್ನಗಲಿದೆ ದಿಟತಾಮಸಗುಣವನಳಿದು ಆ ಮಹಾಜ್ಞಾನದೊಳುಳಿದುಭೂಮಿಯೊಳಗಿಪ್ಪ ಗಣಸ್ತೋಮದ ಪದಕ್ಕೆ ನಮೋಯೆಂದು ಶರಣು. | 1 |ಕರಿಯ ಸೊಂಡಿಲ ಮುರಿದು ವ್ಯಾಘ್ರನ ಶಿರವನರಿದುಉರಗನ ಹೆಡೆಯ ಮೆಟ್ಟಿ ಸಿಂಹನ ಉರಿಯೊಳಿಟ್ಟುಮರೆಯ ಕಣ್ಣ ಕಳದು ಭಲ್ಲೂಕನ ಕರದುಇರಬಲ್ಲಡಾತನೆ ಸತ್ಯ ಈ ಭುವನದೊಳಗೆ ನಿತ್ಯ. | 2 |ಪರಮನ ಲಿಂಗಮುಖವಾಗಿ ಸತ್ಯಸಂಗಶರಣ ನಿರ್ಮಲದೇಹಿ ಸರ್ವಗಣಕೆಲ್ಲ ಮೋಹಿಗುರು ಪಡುವಿಡಿ ಸಿದ್ಧವರಮಲ್ಲಿನಾಥನೊಳಿರ್ದುಹೆರೆಹಿಂಗದಿಪ್ಪ ಜಾಣ ಮೂರುಲೋಕಪ್ರವೀಣ. | 3 |
ಅಯ್ಯಾ, ಎನಗೆ ಭಕ್ತಿಯುಂಟೆಂಬ ಮಾತೇ ಡಂಬು ನೋಡಯ್ಯಾ.ಎನಗಾ ಮಾತಿಂಗಧಿಕಾರವೆಲ್ಲಿಯದಯ್ಯಾ.ತಲೆಹುಳಿತ ನಾಯಿಗೆ ಉಚ್ಛಿಷ್ಟಾನ್ನ ಬಂದುದೆ ಭಾಗ್ಯವು.ಒಂದರೊಳಗೊಂದನರಿಯೆನಯ್ಯಾ,ಬಸವಪ್ರಿಯ ಕೂಡಲಚೆನ್ನ ಸಂಗಯ್ಯಾ.