ವಾರಾಸಿಯಿಂದತ್ತಲಾರು ಬಲ್ಲರು ದೇವಾ? ಈರೇಳನತಿಗಳೆದ ನಿತ್ಯ ನಿತ್ಯ ಕಾರುಣ್ಯಭಾವದಲಿ ಆ ಮರುಳುಗೊಂಡಡೆ ಆರು ಏವಿದ್ಥಿಯಾದಡೇನಯ್ಯ? ಕಾರುಣ್ಯಕರ ಕಪಿಲಸಿದ್ಧಮಲ್ಲೇಶ್ವರಾ ಓರಂತೆಯಾದ ಬಳಿಕಾನಂದನು.
ಬ್ರಹ್ಮ ನಿಮ್ಮ ಬಲ್ಲಡೆ ನಿರ್ಮಾಲ್ಯವಹನೆ? ವಿಷ್ಣು ನಿಮ್ಮ ಬಲ್ಲಡೆ ಗೋಪಾಲನಹನೆ? ರುದ್ರ ನಿಮ್ಮ ಬಲ್ಲಡೆ ಜಡೆಯ ಕಟ್ಟುವನೆ? ಪಶುಪತಿ ನಿಮ್ಮ ಬಲ್ಲಡೆ ವೇಷವ ಹೊತ್ತು ತೊಳಲುವನೆ? ಗಂಗೆವಾಳುಕರು ನಿಮ್ಮ ಬಲ್ಲಡೆ ಲಿಂಗವ ಪೂಜಿಸುವರೆ? ತಮ್ಮ ಬಲ್ಲಡೆ, ನಿಮ್ಮ ಬಲ್ಲರು. ಅನ್ನಕ ತಡವೆಂದಾತ ನಮ್ಮಂಬಿಗ ಚೌಡಯ್ಯ.