ಖ ಪದದಿಂದ ಪ್ರಾರಂಭವಾಗುವ ವಚನಗಳು:
ಖೇಚರದ ಗಮನವ ಖೇಚರರಲ್ಲದೆಭೂಚರರು ಬಲ್ಲರೆ ಅಯ್ಯಾ?ಸವಿವಾಲು ಸಕ್ಕರೆಯ ಸವಿಯ ಸವಿದ ಭೋಗಿಯಲ್ಲದೆರೋಗಿ ಬಲ್ಲನೆ ಅಯ್ಯಾ?ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,ನಿಮ್ಮ ಲಿಂಗಾಂಗದ ಲಿಂಗ ಸಹಗಮನಿಯ ಹೃದಯವಲಿಂಗಾಂಗಿಯಲ್ಲದೆ ಅಂಗಜೀವಿಗಳು ಬಲ್ಲರೆ ಅಯ್ಯಾ?.
ಖಂಡಿತಜ್ಞಾನವಳಿದು, ಅಖಂಡಿತಜ್ಞಾನಸ್ವರೂಪವಾದುದೇ ತೃಪ್ತಿ.ಅಂಥ ತೃಪ್ತಿಯ ಅಮೃತಸೇವೆನೆಯಿಂದ ತೃಪ್ತನಾದ ಪ್ರಸಾದಿ.ಶರಣಂಗೆ ಅಂತರಂಗ ಬಹಿರಂಗವೆಂಬುಭಯಾಂಗವಿಲ್ಲದಮಹಾನಂದರೂಪಪ್ರಸಾದಿ ದಶದಿಗ್ಭರಿತನಾಗಿ,ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ, ಬೆಳಗುತ್ತಿಹನು.
ಖಂಡಿತವಿಲ್ಲದ ಅಖಂಡಿತರೂಪ ನೀನು ಕಂಡಾ ಎಲೆ ಅಯ್ಯಾ.ಮಂಡಲತ್ರಯದ ಮಧ್ಯದಲ್ಲಿ ನಿಂದು ಖಂಡಿತನೆಂಬ ಹಾಂಗೆತೋರುತ್ತಿದ್ದೆಯಯ್ಯಾ.ನಿನ್ನ ಬೆಡಗ ನಾ ಬಲ್ಲೆ.ಖಂಡಪತ್ರದಲ್ಲಿ ತೋರುವ ಚಂಡಕಿರಣದಂತೆ ತೋರಿದೆಯಾಗಿ,ಎನ್ನ ಕಂಗಳ ಕೊನೆಯಲ್ಲಿ ನಿಂದು ನೋಡುವಾತ ನೀನೇ,ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.