ಕಾಯಕರ್ಮವ ಅನುಭವಿಸುತ್ತ ಮತ್ತೆ , ದಿವ್ಯಜ್ಞಾನದ ಮಾತದೇತಕ್ಕೆ ? ವಾಗ್ವಾದಕ್ಕೂ ದಿವ್ಯಜ್ಞಾನಕ್ಕೂ ಅನುಪಾನಉಂಟೆ ? ರಸವಾದದ ಬೇರ ಕದ್ದ ಚೋರನಂತೆ, ಅದರ ಭೇದವನರಿಯ, ಅದ ವೇಧಿಸಿ ಕಾಣ. ಕಳಂಕ ಹೋದ ಹೊಲಬನರಿಯ, ಆ ಚೋರನ ಮಾತ ವೇದಿಗಳೊಪ್ಪುವರೆ ? ಇಂತಿ ಭೇದವ ತಿಳಿದು, ಷಡುಸ್ಥಲವೇದಿಗಳಾಗಬೇಕು. ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವ, ಅರಿವಿನಲ್ಲಿ ವೇಧಿಸಿಕೊಳ್ಳಬೇಕು. |