ವೈದ್ಯ ಸಂಗಣ್ಣ

ಕಾಯಕರ್ಮವ ಅನುಭವಿಸುತ್ತ ಮತ್ತೆ , ದಿವ್ಯಜ್ಞಾನದ ಮಾತದೇತಕ್ಕೆ ?
ವಾಗ್ವಾದಕ್ಕೂ ದಿವ್ಯಜ್ಞಾನಕ್ಕೂ ಅನುಪಾನಉಂಟೆ ?
ರಸವಾದದ ಬೇರ ಕದ್ದ ಚೋರನಂತೆ,
ಅದರ ಭೇದವನರಿಯ, ಅದ ವೇಧಿಸಿ ಕಾಣ.
ಕಳಂಕ ಹೋದ ಹೊಲಬನರಿಯ, ಆ ಚೋರನ ಮಾತ ವೇದಿಗಳೊಪ್ಪುವರೆ ?
ಇಂತಿ ಭೇದವ ತಿಳಿದು, ಷಡುಸ್ಥಲವೇದಿಗಳಾಗಬೇಕು.
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವ,
ಅರಿವಿನಲ್ಲಿ ವೇಧಿಸಿಕೊಳ್ಳಬೇಕು.
Back Delete