ಅಥವಾ

ಒಟ್ಟು 18 ಕಡೆಗಳಲ್ಲಿ , ವಚನಕಾರ ತೋಂಟದ ಸಿದ್ಧಲಿಂಗ ಶಿವಯೋಗಿಗಳು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಾಳಿ ಗಂಧವನಪ್ಪಿದಂತೆ, ಬಯಲು ಬಯಲನಪ್ಪಿದಂತೆ, ಬೆಳಗು ಬೆಳಗವಪ್ಪಿ ಮಹಾ ಬೆಳಗಾದಂತೆ, ಶರಣ ಲಿಂಗವನಪ್ಪಿ, ಮಹಾಲಿಂಗವೇ ತಾನು ತಾನಾಗಿ, ನಿರ್ವಯಲಾದನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಳೆಹುಯ್ದರಾಕಾಶ ನೆನೆವುದೇ?. ಬಿರುಗಾಳಿ ಬೀಸಿದರಾಕಾಶ ನೋವುದೇ?. ಕಿತ್ತಲಗಿನಿಂದಿರದರೆ ಆಕಾಶ ಹರಿವುದೇ?. ಬಚ್ಚಬರಿಯ ಬಯಲು ಕಟ್ಟು ಕುಟ್ಟಿಗೊಳಗಾಗಬಲ್ಲುದೇ?. ನಿಶ್ಚಿಂತ ನಿರಾಳನಾದ ನಿಜೈಕ್ಯನ, ತಥ್ಯಮಿಥ್ಯದಿಂದ ನುಡಿವ ತುಶ್ಚರ ನುಡಿ ತಟ್ಟಬಲ್ಲುದೇ ವಸ್ತುವ ವಾಕುಶಾಸ್ತ್ರ ಖಂಡಿಸಬಲ್ಲುದೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಯದ ರೂಪನು ಕಂಗಳು ನುಂಗಿತ್ತು. ಪ್ರಾಣದ ರೂಪನು ನೆನಹು ನುಂಗಿತ್ತು. ಭಾವದ ರೂಪನು ಅರುಹು ನುಂಗಿತ್ತು. ಇವೆಲ್ಲರ ರೂಪನು ನಿರೂಪು ನುಂಗಿತ್ತು, ಆ ನಿರೂಪು ಸ್ವರೂಪೀಕರಿಸಿ ನಾ ನುಂಗಿದೆನು. ಆ ನಿರೂಪು ಸ್ವರೂಪವೆರಡೂ ಬಯಲು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಳಗೆಂದೇನು? ಹೊರಗೆಂದೇನು? ಅರುಹೆಂದೇನು? ಮರಹೆಂದೇನು? ತಾನೆಂದೇನು? ಇದಿರೆಂದೇನು? ಬರಿಯ ಬಯಲುಭ್ರಮೆಗೊಳಗಾಯಿತ್ತಲ್ಲಾ ಈ ಲೋಕ. ಒಳಗು ತಾನೆ, ಹೊರಗು ತಾನೆ. ಅರುಹು ತಾನೆ, ಮರಹು ತಾನೆ. ತೆರಹಿಲ್ಲದ ಪರಿಪೂರ್ಣ ಪರಾಪರವು ತಾನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗದಿಂದ ಶರಣರುದಯಯವಾಗದಿರ್ದಡೆ, ಬಸವ ಚೆನ್ನಬಸವ ಪ್ರಭುದೇವರು ಮುಖ್ಯವಾದ ಏಳುನೂರುಯೆಪ್ಪತ್ತು ಅಮರಗಣಂಗಳು ಎಲ್ಲರೂ ಕ್ಷೀರ ಕ್ಷೀರವ ಬೆರಸಿದಂತೆ, ನೀರು ನೀರು ಬೆರಸಿದಂತೆ, ಘೃತ ಘೃತವ ಬೆರಸಿದಂತೆ, ಬಯಲು ಬಯಲ ಬೆರಸಿದಂತೆ ಲಿಂಗವ ಬೆರಸಿ ಮಹಾಲಿಂಗವೆಯಾದರು ನೋಡ. ಲಿಂಗದಿಂದ ಶರಣರುದಯವಾಗದಿರ್ದಡೆ, ನೀಲಲೋಚನೆಯಮ್ಮ ಲಿಂಗದೊಳಗೆ ತನ್ನಂಗವನೇಕೀಕರಿಸಿ, ಕೇವಲ ಪರಂಜ್ಯೋತಿರ್ಲಿಂಗದಲ್ಲಿ ನಿರವಯವಾದಳು ನೋಡಾ. ಇಂತಪ್ಪ ದೃಷ್ಟವ ಕಂಡು ನಂಬದಿರ್ಪುದು ಕರ್ಮದ ಫಲ. ಅದು ಇವರ ಗುಣವೆ? ಶಿವನ ಮಾಯಾಪ್ರಪಂಚಿನ ಗುಣ ನೋಡಾ. ಈ ಪ್ರಪಂಚುಜೀವಿಗಳು ಅಲ್ಲ ಎಂಬುದು, ಅಹುದೆಂಬುದು ಪ್ರಮಾಣೆ? ಅಲ್ಲ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೆಲ ನೀರು ಕಿಚ್ಚು ಗಾಳಿ ಬಯಲು ಕೂಡಿ ಆದ ಪಿಂಡವ ತಾನೆಂದೆಂಬ ಮಿಥ್ಯಾಚರ್ಮದೇಹಿಗಳನೇನೆಂಬೆನಯ್ಯ? ನೆಲನಲ್ಲದ ನೀರಲ್ಲದ ಕಿಚ್ಚಲ್ಲದ ಗಾಳಿಯಲ್ಲದ ಬಯಲಲ್ಲದ ಪ್ರಕೃತಿಯಲ್ಲದ ಪುರುಷನಲ್ಲದ ಮೇಲಣ ಶುದ್ಧಸ್ವಯವೆ ತಾನೆಂದು ತಿಳಿದಾತನಲ್ಲದೆ ಶರಣನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಳಗೆ ನೋಡಿದರೆ ಒಳಗೆ ಬಯಲು. ಹೊರಗೆ ನೋಡಿದರೆ ಹೊರಗೆ ಬಯಲು ನೋಡಾ. ನೆನೆದಿಹೆನೆಂದರೆ ಮನ ಬಯಲು, ನೆನೆಸಿಕೊಂಡೆನೆಂದರೆ ನೀನಿಲ್ಲವಾಗಿ ನಾನೂ ಬಯಲು, ನೀನೂ ಬಯಲು ನೋಡಾ. ಭಾವಿಸಿಕೊಂಬ ವಸ್ತುವಿಲ್ಲವಾಗಿ ಭಾವ ಬಯಲೆಂದೆನು ನೋಡಾ. ಮರಹು ನಷ್ಟವಾಯಿತ್ತಾಗಿ ಅರುಹು ಶೂನ್ಯವಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಿಶ್ಚಲನೆಂಬ ನಿರ್ದೇಹಿಯ ಮೇಲೆ ಸಚ್ಚಿದಾನಂದವೆಂಬ ಪರವು ಬಂದೆರಗಿಯೆಯ್ದಿ ಎಯ್ದೆ ನುಂಗಿತ್ತು ನೋಡಾ. ಎಯ್ದಿ ನುಂಗಲಾಗಿ ಕಾರ್ಯನೆನಲಿಲ್ಲ; ಕಾರಣವೆನಲಿಲ್ಲ; ಪರಮ ಕಾರಣವೆನಲಿಲ್ಲ; ಜೀವ ಪರಮರೈಕ್ಯನವನೊಳಕೊಂಡು ತೀವಿ ಪರಿಪೂರ್ಣ ಪರಾಪರನೆನಲಿಲ್ಲ. ಲಕ್ಷ ್ಯವೆನಲಿಲ್ಲ; ನಿರ್ಲಕ್ಷ ್ಯವೆನಲಿಲ್ಲ; ಅಲಕ್ಷ ್ಯನ ಅದ್ವಯನ. ಶೂನ್ಯನೆನಲಿಲ್ಲ; ನಿಶ್ಯೂನ್ಯನೆಲಿಲ್ಲ; ಮಹಾಶೂನ್ಯನೆನಲಿಲ್ಲ. ಏನು ಏನೂ ಎನಲಿಲ್ಲ. ನಿರಾಕಾರ ಬಯಲು ನಿಶ್ಯಬ್ದಮಯವಾದ ಕಾರಣ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆಂಬ ನಾಮ ರೂಪು ಕ್ರೀಗಳು ನಷ್ಟವಾದ ಕಾರಣ ಏನೂ ಎನಲಿಲ್ಲ ನೋಡಾ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಯಲ ಮೂರ್ತಿ ಮಾಡಿ, ಎನ್ನ ಕರಸ್ಥಲಕ್ಕೆ ಕೊಟ್ಟನಯ್ಯ ಶ್ರೀಗುರು. ಬಯಲಮೂರ್ತಿಯ ಅಮೂರ್ತಿಯ ಮಾಡಿ, ಎನ್ನ ಪ್ರಾಣದೊಳಗಿರಿಸಿದನಯ್ಯ ಶ್ರೀಗುರು. ಬಯಲು ಬಯಲನೆ ಬೆರಸಿ ಬಯಲೆಂದೆನಿಸಿ ಎನ್ನ ಭಾವದೊಳಗಿರಿಸಿದನಯ್ಯ ಶ್ರೀಗುರು. ಇದು ಕಾರಣ, ಎನ್ನ ಕರಸ್ಥಲ ಮನಸ್ಥಲ ಭಾವಸ್ಥಲದಲ್ಲಿ ನಿಮ್ಮಧರಿಸಿ ನಾನು ಅಂಗಲಿಂಗ ಸಂಬಂಧಿಯಾದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಳಗಿಪ್ಪಾತನ ಹೊರಗೆ ನೋಡಿ ಕಂಡೆನಯ್ಯ. ಹೊರಗಿಪ್ಪಾತನ ಒಳಗೆ ನೋಡಿ ಕಂಡೆನಯ್ಯ. ಒಳಹೊರಗಿಪ್ಪವರಿಬ್ಬರು ಒಂದಾಗಿ ನಿಂದ ನಿಲುವು ಬಯಲು ಬಯಲ ಬೆರಸಿದಂತೆ ನಿರಾಳವಾಯಿತ್ತು ಕಾಣಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಟ್ಟುಗ ಸವಿಯಬಲ್ಲುದೇ? ಅಟ್ಟ ಮಡಕೆ, ಉಣಬಲ್ಲುದೇ ಅಯ್ಯ? ಬಟ್ಟಬಯಲು, ಕಟ್ಟುಕುಟ್ಟಿಗೊಳಗಾಗಬಲ್ಲುದೇ? ನಿಷೆ* ಹೀನರಿಗೆ ಲಿಂಗ, ಕಟ್ಟಳೆಗೆ ಬರಬಲ್ಲುದೇ? ಕರ ಕಷ್ಟರಿರಾ ಸುಮ್ಮನಿರಿ ಭೋ. ಕಟ್ಟಳೆಗೆಯ್ದದ ಮಹಾಘನದಲ್ಲಿ ಮನಮುಚ್ಚಿ ಹಿಮ್ಮೆಟ್ಟದೆ ಅಡಗಿದಾತನೇ, ಅಚಲಿತ ಮಾಹೇಶ್ವರನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಿರಾಕಾರ ಬಯಲು ಮೂರ್ತಿಗೊಂಡು ಮಹಾಜ್ಞಾನವೇ ಚಿತ್‍ಸ್ವರೂಪವಾಯಿತ್ತು. ಆ ಚಿಚ್ಛಕ್ತಿಸ್ವರೂಪವೇ ಶರಣನಾಗಿ ಮೂರ್ತಿಗೊಂಡನು ನೋಡಾ. ಆ ಶರಣನ ಸಹಸ್ರಾಂಶದಲ್ಲಿ ಸದಾಶಿವನಾದನು. ಆ ಸದಾಶಿವನ ಸಹಸ್ರಾಂಶದಲ್ಲಿ ಈಶ್ವರ ಮೂರ್ತಿಯಾದನು. ಆ ಈಶ್ವರನ ಸಹಸ್ರಾಂಶದಲ್ಲಿ ರುದ್ರನಾದನು. ಆ ರುದ್ರನ ಕೋಟಿಯ ಅಂಶದಲ್ಲಿ ವಿಷ್ಣು ಹುಟ್ಟಿದನು. ಆ ವಿಷ್ಣುವಿನ ಕೋಟಿಯ ಅಂಶದಲ್ಲಿ ಬ್ರಹ್ಮನಾದನು. ಆ ಬ್ರಹ್ಮನ ಕೋಟಾನುಕೋಟಿಯ ಅಂಶದಿಂದ ನರರು ಸುರರು ಹೆಣ್ಣು ಗಂಡು ಮೊದಲಾದ ಸಕಲ ಚರಾಚರಂಗಳೆಲ್ಲವು ಹುಟ್ಟಿದವು ನೋಡಾ. ಇಂತಿವೆಲ್ಲವೂ ಪರಶಿವನ ನೆನಹುಮಾತ್ರದಿಂದ ತೋರಿ ಅಡಗತ್ತಿಹವು. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಇಂತೀ ಐವರನು ತನ್ನಲ್ಲಿ ಗರ್ಭೀಕರಿಸಿಕೊಂಡಿಪ್ಪನು, ಚಿತ್‍ಸ್ವರೂಪನಪ್ಪ ಶರಣನು. ಆ ಶರಣನೇ ಚೆನ್ನಬಸವಣ್ಣನು. ಆ ಚೆನ್ನಬಸವಣ್ಣನೇ ಎನ್ನಂತರಂಗದ ಸುಜ್ಞಾನ ಪ್ರಾಣಲಿಂಗವೆಂದರಿದು ಮನೋಭಾವದಿಂದ ಆರಾಧಿಸಿ ಪಾಣಲಿಂಗ ಸಂಬಂಧಿಯಾಗಿದ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯವೆಂಬ ಷಡುಚಕ್ರಂಗಳ ಚತುರ್ದಳ ಚತುಕ್ಷರ, ಷಡುದಳ ಷಡಕ್ಷರ, ದಶದಳ ದಶಾಕ್ಷರ, ದ್ವಾದಳದಳ ದ್ವಾದಶಾಕ್ಷರ, ಷೋಡಶದಳ ಷೋಡಶಾಕ್ಷರ, ದ್ವಿದಳ ದ್ವ ್ಯಯಾಕ್ಷರವೆಂಬ, ಚಕ್ರ ದಳ, ಅಕ್ಷರಂಗಳೆಲ್ಲವು ಬಯಲಾದವು ನೋಡಾ. ಪೀತ ಹರಿತ ಮಾಂಜಿಷ* ಶ್ವೇತ ಕಪೋತವರ್ಣಮುಖ್ಯವಾದ ಸಮಸ್ತವರ್ಣಂಗಳೆಲ್ಲ ಬಯಲಾದವು ನೋಡಾ. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರೆಂಬ ಪಂಚಾಧಿದೇವತೆಗಳು ಬಯಲಾದರು ನೋಡಾ. ಅದೆಂತಡೆಂದಡೆ: ಬ್ರಹ್ಮ ವಿಷ್ಣುವಿನಲ್ಲಡಗಿ, ವಿಷ್ಣು ರುದ್ರನಲ್ಲಡಗಿ, ರುದ್ರ ಈಶ್ವರನಲ್ಲಡಗಿ, ಈಶ್ವರ ಸದಾಶಿವನಲ್ಲಡಗಿ, ಸದಾಶಿವ ಚಿತ್ತಿನಲ್ಲಡಗಿ, ಆ ಚಿತ್ ಸ್ವರೂಪವಪ್ಪ ಆದಿಶರಣನೆ ಮಹಾಲಿಂಗದೊಳಡಗಿ, ನಿರ್ವಯಲಾದುದೆ ಇವರೆಲ್ಲರ ಬಯಲು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಘೃತ ಘೃತವ ಬೆರಸಿದಂತೆ, ಕ್ಷೀರ ಕ್ಷೀರವ ಬೆರಸಿದಂತೆ, ತೈಲ ತೈಲವ ಬೆರಸಿದಂತೆ, ನೀರು ನೀರ ಬೆರಸಿದಂತೆ, ಜ್ಯೋತಿ ಜ್ಯೋತಿಯ ಕೂಡಿದಂತೆ, ಬಯಲು ಬಯಲ ಬೆರಸಿದಂತೆ, ಪ್ರಾಣ ಪ್ರಾಣ ಸಂಯೋಗವಾದ ಶರಣ ಲಿಂಗ ಸಮರಸವನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->