ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ
ವಿಶುದ್ಧಿ ಆಜ್ಞೇಯವೆಂಬ ಷಡುಚಕ್ರಂಗಳ
ಚತುರ್ದಳ ಚತುಕ್ಷರ,
ಷಡುದಳ ಷಡಕ್ಷರ,
ದಶದಳ ದಶಾಕ್ಷರ,
ದ್ವಾದಳದಳ ದ್ವಾದಶಾಕ್ಷರ,
ಷೋಡಶದಳ ಷೋಡಶಾಕ್ಷರ,
ದ್ವಿದಳ ದ್ವ ್ಯಯಾಕ್ಷರವೆಂಬ,
ಚಕ್ರ ದಳ, ಅಕ್ಷರಂಗಳೆಲ್ಲವು ಬಯಲಾದವು ನೋಡಾ.
ಪೀತ ಹರಿತ ಮಾಂಜಿಷ* ಶ್ವೇತ ಕಪೋತವರ್ಣಮುಖ್ಯವಾದ
ಸಮಸ್ತವರ್ಣಂಗಳೆಲ್ಲ ಬಯಲಾದವು ನೋಡಾ.
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರೆಂಬ
ಪಂಚಾಧಿದೇವತೆಗಳು ಬಯಲಾದರು ನೋಡಾ.
ಅದೆಂತಡೆಂದಡೆ:
ಬ್ರಹ್ಮ ವಿಷ್ಣುವಿನಲ್ಲಡಗಿ, ವಿಷ್ಣು ರುದ್ರನಲ್ಲಡಗಿ,
ರುದ್ರ ಈಶ್ವರನಲ್ಲಡಗಿ, ಈಶ್ವರ ಸದಾಶಿವನಲ್ಲಡಗಿ,
ಸದಾಶಿವ ಚಿತ್ತಿನಲ್ಲಡಗಿ,
ಆ ಚಿತ್ ಸ್ವರೂಪವಪ್ಪ ಆದಿಶರಣನೆ ಮಹಾಲಿಂಗದೊಳಡಗಿ,
ನಿರ್ವಯಲಾದುದೆ ಇವರೆಲ್ಲರ ಬಯಲು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.