ಒಟ್ಟು 34 ಕಡೆಗಳಲ್ಲಿ , 20 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಪೃಥ್ವಿ ಜಡನೆಂದರಿದವಂಗೆ ಸ್ಥಾವರಾದಿಗಳಲ್ಲಿ ಎರಗಲೇಕಯ್ಯಾ ?ಅಪ್ಪು ಜಡನೆಂದರಿದವಂಗೆ ತೀರ್ಥಸ್ನಾನಂಗಳಲ್ಲಿ ಅತಿಶಯವೇಕಯ್ಯಾ ?ತೇಜ ಜಡನೆಂದರಿದವಂಗೆ ಹೋಮ ಸಮಾಧಿಗಳೇಕಯ್ಯಾ?ವಾಯು ಜಡನೆಂದರಿದವಂಗೆ ಧ್ಯಾನ ಮೌನಂಗಳ ಹಿಡಿಯಲೇಕಯ್ಯಾ ?ಆಕಾಶ ಜಡನೆಂದರಿದವಂಗೆ ಮಂತ್ರ(ತ್ರಾ ?)ರೂಡಿs ಏಕಯ್ಯಾ ?ಇನಿತೂ ಜಡನೆಂದರಿದವಂಗೆ ವಿಧಿ ಕಿಂಕರತೆ ಇಲ್ಲವಯ್ಯಾ ?ಗುಹೇಶ್ವರನ ನಿಜವು ಇದು ತಾನೆಂದರಿದ ಮಹಾತ್ಮಂಗೆ.
ಎನಿಸು ಕಾಲ ಕಲ್ಲು ನೀರೊಳಗಿದ್ದಡೇನು,ನೆನೆದು ಮೃದುವಾಗಬಲ್ಲುದೆಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ,ಮನದಲ್ಲಿ ದೃಡವಿಲ್ಲದನ್ನಕ್ಕನಿದಾನವ ಕಾಯಿದಿರ್ದ ಬೆಂತರನಂತೆಅದರ ವಿಧಿ ಎನಗಾಯಿತ್ತು, ಕೂಡಲಸಂಗಮದೇವಾ. 99
ವಿಧಿಯ ಮೀರಿ ಮೈದೋರುವಮಂತ್ರ ತಂತ್ರ ಸಿದ್ಧರ ಕಾಣೆ.ಕಾಲವಶ ಕರ್ಮವಶ ನಿಮ್ಮ ಮಂತ್ರ ತಂತ್ರ ಕಾವುದೆ?ಸಿಮ್ಮಲಿಗೆಯ ಚೆನ್ನರಾಮಲಿಂಗದಲ್ಲಿವಿಧಿ ಮುಟ್ಟುವನ್ನಕ್ಕ ವಿಜಯರಾಗಿ ಬದುಕಿರೊ.