ಅಥವಾ

ಒಟ್ಟು 34 ಕಡೆಗಳಲ್ಲಿ , 19 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಣಹಣೆಪಟ್ಟಿ ಚಿತ್ರವಕೊಯ್ದು, ವಿಚಿತ್ರದಂಗನೆಯ ನಾಮ ರೂಪು ಕ್ರಿಯವ ತೊಳೆದು, ಬಿಳಿಯಂಬರನುಡಿಸಿ, ತಾಯಿ ತಂದೆಯ ಮದುವೆಯ ಸಂಭ್ರಮದಲ್ಲಿ ತಪ್ಪದೆ ನೆರೆದ ಪರವಶ ಶರಣ. ಅಜ ವಿಷ್ಣು ರುದ್ರರ ಗಜಬಜೆಯನರಿಯದೆ ಸೆರೆವಿಡಿದಿರ್ದ ತನ್ನನುವಿಂಗೆ ಗುರುನಿರಂಜನ ಚನ್ನಬಸವಲಿಂಗಕ್ಕೆ ಹರಿಯದ ಭೋಗ ಹವಣವಾಯಿತ್ತು ಶರಣ ಮುಖದಿಂದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅವಸ್ಥಾತ್ರಯಮಂ ಬಿಟ್ಟು ಇಷ್ಟಲಿಂಗದ ಗರ್ಭದಲ್ಲಿ ಕಾಯವ ನಿಕ್ಷೇಪವಂ ಮಾಡಿದ ಬಳಿಕ ಕಾಲನ ಭಯವಿಲ್ಲ. ನೇತ್ರದಲ್ಲಿರ್ದ ಪ್ರಾಣಲಿಂಗದ ಮೇಲೆ ಮನವ ನಿಲಿಸಿದ ಬಳಿಕ ಕಾಮನ ಭಯವಿಲ್ಲ. ಏಕಾಂತ ಸ್ಥಾನವಾಗಿ, ಅಂತರಂಗದ ಭಾವ ಜ್ಯೋತಿರ್ಲಿಂಗದಲ್ಲಿ ಅರಿವು ಸಂಧಾನದಿಂ ಸಮರಸವಾಗಲು, ಕರ್ಮದ ಭಯವಿಲ್ಲ. ಈ ತ್ರಿಲಿಂಗ ಸಂಬಂಧದಿಂದ ಕಾಲಕಾಮಕರ್ಮವನೊತ್ತಿ ಮೆಟ್ಟಿ ನಿಲ್ಲದೆ, ವಿಷಯಸುಖಕ್ಕೆ ಮೆಚ್ಚಿ ಆ ಮೂವರ ಕಾಲ ಕೆಳಗೆ ಬಿದ್ದು, ಮಹಾದುಃಖಕ್ಕೊಳಗಾದರು, ನರರು. ಈ ವಿಷಯಗಾಳಿ ಸೋಂಕಲು ಹರಿ ಹತ್ತು ಭವವೆತ್ತಿದ. ಅಜ 21 ಭವವೆತ್ತಿ ಶಿರ ಕಳಕೊಂಡ. ಇಂದ್ರನ ಮೈ ಕೆಟ್ಟಿತ್ತು, ಚಂದ್ರ ಕ್ಷಯ ರೋಗಿಯಾದ. ದಿವಸೇಂದ್ರ ಕಿರಣ ನಷ್ಟವಾದ. ಮುನೀಂದ್ರರ್ನಷ್ಟವಾಗಿ ಮಡಿದರು. ಮನು ಮಾಂಧಾತರು ಮಂದಮತಿಗಳಾದರು. ದೇವ ದಾನವ ಮಾನವರು ಮಡಿದರು. ಇದ ನೋಡಿ ನಮ್ಮ ಶರಣರು, ವಿಷಯಗಾಳಿ ತಮ್ಮ ಸೋಕೀತೆಂದು ಶಾಂಭವಪುರದಲ್ಲಿಯೆ ನಿಂದು, ನಿರ್ವಿಷಯಾಸ್ತ್ರದಲ್ಲಿ ವಿಷಯಗಾಳಿಯ ಛೇದಿಸಿ ಜಯಿಸಿ ಅಕ್ಷಯ ಸುಖಿಗಳಾದರು ನೋಡಾ ಗುಹೇಶ್ವರಲಿಂಗದಲ್ಲಿ.
--------------
ಅಲ್ಲಮಪ್ರಭುದೇವರು
ಶಿವಂಗೆ ಅಜ ಹರಿ ಸುರರು ಸರಿಯೆಂದು ಮನದಲ್ಲಿದು ಹೊರವಂಟಡೆ, ಸ್ತುತಿಸಿದಡೆ, ಶಿವದ್ರೋಹಿ ಚಾಂಡಾಲ ಮಟ್ಟಲಾಗದೆಂದುದು ವೇದ. ಮಾತ್ವಾರುದ್ರಚುಕ್ರುಧಾ ಮಾನವಮೋಭಿರ್ಮಾ ದುಷ್ಟುತೀ ವೃಷಭ ಮಾಸ ಹೂತೀ | ಉನ್ನೋ ವೀರಾಂ ಅರ್ಪಯ ಭೇಷಜೇ ಭಿರ್ಭಿಷಿಕ್ತಮಂ ತ್ವಾಂ ಭಿಷಜಾಂ ಶೃಣೋಮಿ || ಎಂದುದಾ ಶ್ರುತಿ. ಇದನರಿದರಿದು ಸರಿಯೆಂದು ನರಕಕ್ಕಿಳಿವಡೆ, ಕಾರಣವಲ್ಲದು, ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಾ.
--------------
ಸಂಗಮೇಶ್ವರದ ಅಪ್ಪಣ್ಣ
ಮನೋವಾಕ್ಕಾಯದಿಂದ ಹುಟ್ಟಿದ ಕರ್ಮ ತೊಟ್ಟನೆ ತೊಳಲಿಸಿ ಬಳಲಿಸಿದಲ್ಲದೆ ಬಿಡದು. ಕರ್ಮವ ಮೀರಿ ನಡೆವ ಬಲ್ಲಿದರನಾರನೂ ಕಾಣೆ. ಬೊಮ್ಮವಾದಿಗಳೆಲ್ಲ ಕರ್ಮಕ್ಕೀಡಾದರು. ಕರ್ಮವು ಅಜ ಹರಿಗಳ ಬಾರದ ಭವದಲ್ಲಿ ಬರಿಸಿತ್ತು. ಕಾಣದ ದುಃಖವ ಕಾಣಿಸಿತ್ತು. ಇನ್ನುಳಿದವರ ಹೇಳಲೇನುಂಟು?. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಆಧೀನವಿಡಿದು ಕಾಡುವ ಕರ್ಮದ ಬಲುಹ ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಇನ್ನು ಅಮೃತಧಾರಣವದೆಂತೆಂದಡೆ : ಮೂಲವಾಯುವಂ ಪಿಡಿದು ಮೂಲಜ್ವಾಲೆಯನೆಬ್ಬಿಸಿ, ಅಮಳೋಕ್ಯದ್ವಾರದಲ್ಲಿ ಜಿಹ್ವೆಯನೇರಿಸಿ, ಚಂದ್ರಮಂಡಲದೊಳಿಹ ಅಮೃತವನುಂಡರೆ ಅಜ ಹರಿ ಸುರ ರುದ್ರಾದಿಗಳಿಗೊಡೆಯ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ರುದ್ರ ಮುಖದಲ್ಲಿ ವಿಷ್ಣು ಭುಜದಲ್ಲಿ, ಜಂಘೆಯಲ್ಲಿ ಅಜ ಜನನವೊ. ಇಂದ್ರ ಪಾದದಲ್ಲಿ ಚಂದ್ರ ಮನದಲ್ಲಿ, ಚಕ್ಷುವಿನಲ್ಲಿ ಸೂರ್ಯ ಜನನವೊ. ಮುಖದಲ್ಲಿ ಅಗ್ನಿಯು ಪ್ರಾಣದಲ್ಲಿ ವಾಯು ನಾಭಿಯಲ್ಲಿ ಅಂತರಿಕ್ಷವೊ. ಸಿರದಲುದಯ ತೆತ್ತೀಸಕೋಟಿ ದೇವತೆಗಳು ಪಾದತಳದಲ್ಲಿ ಭೂಮಿ ಜನನವೊ. ಶ್ರೋತ್ರದಲ್ಲಿ ದಶದಿಕ್ಕುವೊ. ಜಗವ ನಿಕ್ಷೇಪಿಸಿದ ಕುಕ್ಷಿಯಲ್ಲಿ, ಅಕ್ಷಯನಗಣಿತನು. ಸಾಸಿರ ತಲೆ, ಸಾಸಿರ ಕಣ್ಣು, ಸಾಸಿರ ಕೈ, ಸಾಸಿರ ಪಾದ. ಸಾಸಿರ ಸನ್ನಿಹಿತ ನಮ್ಮ ಕೂಡಲಸಂಗಯ್ಯ.
--------------
ಬಸವಣ್ಣ
ಆಜ್ಞಾಚಕ್ರದ ದ್ವಿದಳ ಪದ್ಮದಲ್ಲಿ ಅವಿರಳ ಸುಜ್ಞಾನ ಪೀಠದೊಳಗೆ ಅಮೃತಮಯ ಲಿಂಗವ ಕಂಡೆನು ನೋಡಾ. ಆ ಲಿಂಗ ಸಂಗದಿಂದ ಉತ್ಪತ್ತಿ ಸ್ಥಿತಿ ಪ್ರಳಯವ ಗೆಲಿದು ನಿತ್ಯ ನಿರಂಜನ ಪ್ರಸಿದ್ಧ ಪ್ರಸಾದಿಯಾದೆನು ಕಾಣಾ. ಆ ಪ್ರಸಿದ್ಧ ಪ್ರಸಾದವೆ ಒಂದೆರಡಾಗಿ ಎರಡು ಮೂರಾಗಿ ಮೂರು ಆರಾಗಿ ಆರು ಮೂವತ್ತಾರಾಗಿ ಮೂವತ್ತಾರು ಇನ್ನೂರಹದಿನಾರಾಗಿ ಆ ಇನ್ನೂರ ಹದಿನಾರರ ಬೆಳಗು ಪಿಂಡಾಂಡದಲ್ಲಿ ಪರಿಪೂರ್ಣವಾಗಿ ಸದಾ ಸನ್ನಿಹಿತವಾಗಿಪ್ಪುದು. ನಿಮ್ಮ ಶರಣ ಸಂಗನ ಬಸವಣ್ಣ ಮೊದಲಾದ ಪ್ರಮಥರಿಗೆ ಸಾಧ್ಯವಲ್ಲದೆ ಅಜ ಹರಿ ಸುರ ಮನು ಮುನಿಗಳಿಗೆ ಅಗಮ್ಯ ಅಗೋಚರ ಅಪ್ರಮಾಣ ಅಸಾಧ್ಯ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶ್ರೀಗುರುಸ್ವಾಮಿ ಕರುಣಿಸಿಕೊಟ್ಟು ಪ್ರಾಣಲಿಂಗವು ಪಂಚಬ್ರಹ್ಮಮುಖವುಳ್ಳ ವಸ್ತುವೆಂದರಿವುದು. ಆ ಪಂಚಬ್ರಹ್ಮಮುಖಸಂಜ್ಞೆಯ ಭೇದವೆಂತೆಂದಡೆ: ಆವುದಾನೊಂದು ಶಿವಸಂಬಂಧವಾದ ಪರಮತೇಜೋಲಿಂಗವು ತನ್ನ ಭೋಗಾದಿಕಾರಣ ಮೂರ್ತಿಗಳಿಂದುದಯವಾದ ಬ್ರಹ್ಮಾದಿತೃಣಾಂತವಾದ ದೇಹಿಗಳಿಂದಲೂ ವೋಮಾದಿಭೂತಂಗಳಿಂದಲೂ ಇತ್ಯಾದಿ ಸಮಸ್ತತತ್ತ್ವಂಗಳಿಂದಲೂ ಮೇಲಣ ತತ್ತ್ವವುಪ್ಪುದೇ ಕಾರಣವಾಗಿ ಪರವೆಂಬ ಸಂಜ್ಞೆಯದುಳ್ಳುದಾಗಿಹುದು. ಅನಂತಕೋಟಿಬ್ರಹ್ಮಾಂಡಗಳ ತನ್ನೊಳಡಗಿಸಿಕೊಂಡು ಸಮಸ್ತಜಗಜ್ಜನಕ್ಕೆ ತಾನೇ ಕಾರಣವಾಗಿ ಅವ್ಯಕ್ತಲಕ್ಷಿತವಾದ ನಿಮಿತ್ತಂ ಗೂಢವೆಂಬ ಸಂಜ್ಞೆಯದುಳ್ಳುದಾಗಿಹುದು. ತಾನು ಶೂನ್ಯ ಶಿವತತ್ತ್ವಭೇದವಾಗಿ ಆಯಸ್ಕಾಂತ ಸನ್ನಿಧಿಯಿಂದ ಲೋಹವೇ ಹೇಗೆ ಭ್ರಮಿಸುವುದೋ ಹಾಗೆ ಬ್ರಹ್ಮಾದಿಗಳ ಹೃತ್ಕಮಲಮಧ್ಯದಲ್ಲಿದ್ದು ತನ್ನ ಚಿಚ್ಛಕ್ತಿಯ ಸನ್ನಿಧಿಮಾತ್ರದಿಂದ ಅಹಮಾದಿಗಳಿಂ ವ್ಯೋಮಾದಿಭೂತಂಗಳಂ ಸೃಷ್ಟಿಸುವುದಕ್ಕೆ ತಾನೇ ಕಾರಣವಪ್ಪುದರಿಂದ ಶರೀರಸ್ಥವೆಂಬ ಸಂಜ್ಞೆಯದುಳ್ಳುದಾಗಿಹುದು. ತನ್ನ ಸೃಷ್ಟಿಶಕ್ತಿಯಿಂದುದಯವಾದ ಸಮಸ್ತಸಂಸಾರಾದಿ ಪ್ರಪಂಚವು ತನ್ನಿಂದಲೇ ಕಾರಣವಪ್ಪುದರಿಂ ಅನಾದಿವತ್ತೆಂಬ ಸಂಜ್ಞೆಯದುಳ್ಳುದಾಗಿಹುದು. ತನ್ನ ಮಾಯಾಶಕ್ತಿಯಿಂದುದಯವಾದ ಸ್ತ್ರೀಲಿಂಗ ಪುಲ್ಲಿಂಗ ನಪುಸಕಲಿಂಗವೆಂಬ ತ್ರಿಲಕ್ಷಿತವಾದ ಸಮಸ್ತಪ್ರಪಂಚವು ವರ್ತಿಸುವುದಕ್ಕೆ ತಾನೇ ಕ್ಷೇತ್ರವಾದ ಕಾರಣ ಲಿಂಗಕ್ಷೇತ್ರವೆಂಬ ಸಂಜ್ಞೆಯದುಳ್ಳುದಾಗಿಹುದು. ಈ ಪ್ರಕಾರದಿಂ ಪರಬ್ರಹ್ಮಲಿಂಗವು ಪಂಚಮುಖಸಂಜ್ಞೆಯ ನುಳ್ಳುದಾಗಿಹುದೆಂದರಿವುದು. ಅದೆಂತೆಂದಡೆ:ಅದಕ್ಕೆ ವಾತುಳಾಗಮದಲ್ಲಿ, ಅಖಿಳಾರ್ಣವಲಯಾನಾಂ ಲಿಂಗತತ್ತ್ವಂ ಪರಂ ತತಃ ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್ ಯದಾದ್ಯಮೈಶ್ವರಂ ತೇಜಸ್ತಲ್ಲಿಂಗಂ ಪಂಚಸಂಜ್ಞಕಂ ಎಂದೆನಿಸುವ ಲಿಂಗವು. ಮತ್ತಂ, ವಾಶಿಷ*ದಲ್ಲಿ: ಪಿಂಡಬ್ರಹ್ಮಾಂಡಯೋರೈಕ್ಯಂ ಲಿಂಗಸೂತ್ರಾತ್ಮನೋರಪಿ ಸ ಬಾಹ್ಯಾಂತರಯೋರೈಕ್ಯಂ ಕ್ಷೇತ್ರಜ್ಞಪರಮಾತ್ಮನೋಃ ಎಂದೆನಿಸುವ ಲಿಂಗವು. ಮತ್ತಂ ಬ್ರಹ್ಮಾಂಡಪುರಾಣದಲ್ಲಿ, ಅಧಿಷಾ*ನಂ ಸಮಸ್ತಸ್ಯ ಸ್ಥಾವರಸ್ಯ ಚರಸ್ಯ ಚ ! ಜಗತೋ ಯದ್ಭವೇತ್‍ತತ್ತ್ವಂ ತದ್ದಿವ್ಯಂ ಸ್ಥಲಮುಚ್ಯತೇ ಎಂದೆನಿಸುವ ಲಿಂಗವು. ಮತ್ತಂ ಶಿವರಹಸ್ಯದಲ್ಲಿ, ಮಹಾಲಿಂಗಮಿದಂ ದೇವಿ ಮನೋ[s]ತೀತಮಗೋಚರಂ ನಿರ್ನಾಮಂ ನಿರ್ಗುಣಂ ನಿತ್ಯಂ ನಿರಂಜನಂ ನಿರಾಮಯಂ ಎಂದೆನಿಸುವ ಲಿಂಗವು. ಮತ್ತಂ ಉತ್ತರವಾತುಳದಲ್ಲಿ, ಆದ್ಯಂತಶೂನ್ಯಮಮಲಂ ಪರಿಪೂರ್ಣಮೇಕಂ ಸೂಕ್ಷ್ಮಂ ಪರಾತ್ಪರಮನಾಮಯಮಪ್ರಮೇಯಂ ಚಿಚ್ಛಕ್ತಿಸಂಸ್ಫುರಣರೂಢಮಹಾತ್ಮಲಿಂಗಂ ಭಾವೈಕಗಮ್ಯಮಜಡಂ ಶಿವತತ್ತ್ವಮಾಹುಃ ಎಂದೆನಿಸುವ ಲಿಂಗವು. ಮತ್ತಂ ಅಥರ್ವಣವೇದದಲ್ಲಿ, ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಂ ಅನಿಂದಿತಮ£õ್ಞಪಮ್ಯಮಪ್ರಮಾಣಮನಾಮಯಮ್ ಶುದ್ಧತ್ವಾಚ್ಛಿವಮುದ್ದಿಷ್ಟಂ ಪರಾದೂಧ್ರ್ವಂ ಪರಾತ್ಪರಂ ಎಂದೆನಿಸುವ ಲಿಂಗವು. ಮತ್ತಂ ಸಾಮವೇದದಲ್ಲಿ, ಅನಂತಮವ್ಯಕ್ತ ಮಚಿಂತ್ಯಮೇಕಂ ಹರಂ ತಮಾಶಾಂಬರಮಪ್ರಮೇಯಂ ಲೋಕೈಕನಾಥಂ ಭುಜಗೇಂದ್ರಹಾರಂ ಅಜಂ ಪುರಾಣಂ ಪ್ರಣಮಾಮಿ ನಿತ್ಯಂ `ಅಣೋರಣೀಯಾನ್ ಮಹತೋ ಮಹೀಯಾನ್' ಎಂದೆನಿಸುವ ಲಿಂಗವು. ಮತ್ತಂ ಶಿವಧರ್ಮಪುರಾಣದಲ್ಲಿ, ಆಕಾಶಂ ಲಿಂಗಮಿತ್ಯಾಹುಃ ಪೃಥ್ವೀ ತಸ್ಯಾದಿಪೀಠಿಕಾ ಆಲಯಸ್ಸರ್ವಭೂತಾನಾಂ ಲಯನಾಲ್ಲಿಂಗಮುಚ್ಯತೇ ಎಂದೆನಿಸುವ ಲಿಂಗವು. ಮತ್ತಂ ಗಾರುಡಪುರಾಣದಲ್ಲಿ, ಲಿಂಗಮಧ್ಯೇ ಜಗತ್‍ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂದೆನಿಸುವ ಲಿಂಗವು. ಮತ್ತಂ ಯಜುರ್ವೇದದಲ್ಲಿ, ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್ ಸಂಬಾಹುಭ್ಯಾಂಧಮತಿ ಸಂಪತತ್ರೈದ್ರ್ಯಾವಾಭೂಮೀ ಜನಯನ್ ದೇವ ಏಕಃ ಎಂದೆನಿಸುವ ಲಿಂಗವು. ಮತ್ತಂ ಗಾಯತ್ರಿಯಲ್ಲಿ, `ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ಎಂದೆನಿಸುವ ಲಿಂಗವು. ಮತ್ತಂ ಸ್ಕಂದಪುರಾಣದಲ್ಲಿ ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ ತದೇವ ಲಿಂಗಮಿತ್ಯಕ್ತಂ ಲಿಂಗತತ್ತ್ವಪರಾಯಣೈಃ ಎಂದೆನಿಸುವ ಲಿಂಗವು. ಮತ್ತಂ ಜ್ಞಾನವೈಭವಖಂಡದಲ್ಲಿ, ಲಕಾರಂ ಲಯಸಂಪ್ರೋಕ್ತಂ ಗಕಾರಂ ಸೃಷ್ಟಿರುಚ್ಯತೇ ಲಯನಾದ್ಗಮನಾಚ್ಚೈವ ಲಿಂಗಶಬ್ದಮಿಹೋಚ್ಯತೇ ಎಂದೆನಿಸುವ ಲಿಂಗವು. ಮತ್ತಂ ಮಹಿಮ್ನದಲ್ಲಿ, 'ಚಕಿತಮಭಿಧತ್ತೇ ಶ್ರುತಿರಪಿ' ಎಂದೆನಿಸುವ ಲಿಂಗವು. ಮತ್ತಂ ಶಿವಧರ್ಮೋತ್ತರದಲ್ಲಿ, 'ನ ಜಾನಂತಿ ಪರಂ ಭಾವಂ' ಯಸ್ಯ ಬ್ರಹ್ಮಸುರಾದಯಃ ಎಂದೆನಿಸುವ ಲಿಂಗವು. ಮತ್ತಂ ಪುರುಷಸೂಕ್ತದಲ್ಲಿ, `ಅತ್ಯತಿಷ*ದ್ದಶಾಂಗುಲಂ ಎಂದೆನಿಸುವ ಲಿಂಗವು. ಮತ್ತಂ ಉಪನಿಷತ್ತಿನಲ್ಲಿ, 'ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ' ಎಂದೆನಿಸುವ ಲಿಂಗವು. ಮತ್ತಂ ಕೂರ್ಮಪುರಾಣದಲ್ಲಿ, 'ವಾಚಾತೀತಂ ಮನೋತೀತಂ ಭಾವಾತೀತಂ ನಿರಂಜನಂ ಅವರ್ಣಮಕ್ಷರಂ ಬ್ರಹ್ಮ ನಿತ್ಯಂ ಧ್ಯಾಯಂತಿ ಯೋಗಿನಃ ' ಎಂದೆನಿಸುವ ಲಿಂಗವು. ಮತ್ತಂ ಋಗ್ವೇದದಲ್ಲಿ, 'ಆಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ ಅಯಂ ಮೇ ವಿಶ್ವಭೇಷಜೋ[s]ಯಂ ಶಿವಾಭಿಮರ್ಶನಃ ಅಯಂ ಮಾತಾ ಅಯಂ ಪಿತಾ ಅಯಂ ಜೀವಾತುರಾಗಮ್ ಎಂದೆನಿಸುವ ಲಿಂಗವು. ಮತ್ತಂ ಉತ್ತರವಾತುಳದಲ್ಲಿ, ಸ ಬಾಹ್ಯಾಭ್ಯಂತರಂ ಸಾಕ್ಷಾಲ್ಲಿಂಗಜ್ಯೋತಿಃ ಪರಂ ಸ್ವಕಂ ತಿಲೇ ತೈಲಮಿವಾಭಾತಿ ಅರಣ್ಯಾಮಿವ ಪಾವಕಃ ಕ್ಷೀರೇ ಸರ್ಪಿರಿವ ಸ್ರೋತಸ್ಯಂಬುವತ್ ಸ್ಥಿತಮಾತ್ಮನಿ ಏಕೋ[s]ಯಂ ಪುರುಷೋ ವಿಶ್ವತೈಜಸಪ್ರಾಜ್ಞರೂಪತಃ ಸದಾ ಸ್ವಾಂಗೇಷು ಸಂಯುಕ್ತಮುಪಾಸ್ತೇ ಲಿಂಗಮದ್ವಯಂ ಎಂದೆನಿಸುವ ಲಿಂಗವು. ಮತ್ತಂ ಲೈಂಗ್ಯದಲ್ಲಿ, ಅನಯೋರ್ದೃಷ್ಟಿಸಂಯೋಗಾಜ್ಞಾಯತೇ ಜ್ಞಪ್ತಿರೂಪಿಣೀ ವೇಧಾದೀಕ್ಷಾ ತು ಸೈವಸ್ಯಾನ್ಮಂತ್ರರೂಪೇಣ ತಾಂ ಶ್ರುಣು ಎಂದೆನಿಸುವ ಲಿಂಗವು. ಮತ್ತಂ ¸õ್ಞರಪುರಾಣದಲ್ಲಿ, ಹಸ್ತಮಸ್ತಕಸಂಯೋಗಾತ್ಕಲಾ ವೇಧೇತಿ ಗೀಯತೇ ಗುರುಣೋದೀರಿತಾ ಕರ್ಣೇ ಸಾ ಮಂತ್ರೇತಿ ಕಥ್ಯತೇ ಶಿಷಾಣಿತಲೇದತ್ತಾ ಸಾ ದೀಕ್ಷಾ ತು ಕ್ರಿಯೋಚ್ಯತೇ ಎಂದೆನಿಸುವ ಲಿಂಗವು. ಮತ್ತಂ ಕಾಳಿಕಾಖಂಡದಲ್ಲಿ, ಅಂಗಂ ಚ ಲಿಂಗಂ ಚ ಮುಖಂ ಚ ಹಸ್ತಂ ಶಕ್ತಿಶ್ಚ ಭಕ್ತಶ್ಚ ತಥಾರ್ಪಣಂ ಚ ಆನಂದಮೇವ ಸ್ವಯಮರ್ಪಣಂ ಚ ಪ್ರಸಾದರೂಪೇಣ ಭವೇತ್ರಿತತ್ತ್ವಂ ಎಂದೆನಿಸುವ ಲಿಂಗವು. ಮತ್ತಂ ಶಂಕರಸಂಹಿತೆಯಲ್ಲಿ, ತದೇವ ಹಸ್ತಾಂಬುಜಪೀಠಮಧ್ಯೇ ನಿಧಾಯ ಲಿಂಗಂ ಪರಮಾತ್ಮಚಿಹ್ನಂ ಸಮರ್ಚಯೇದೇಕಧಿಯೋಪಚಾರರೈರ್ನರಶ್ಚ ಬಾಹ್ಯಾಂತರಭೇದಭಿನ್ನಂ ಎಂದೆನಿಸುವ ಲಿಂಗವು. ಮತ್ತಂ ವೀರಾಗಮದಲ್ಲಿ, ಭಾವಪ್ರಾಣಶರೀರೇಷು ಲಿಂಗಂ ಸಂಸಾರಮೋಚಕಂ ಧಾರಯೇದವಧಾನೇನ ಭಕ್ತಿನಿಷ*ಸ್ಸುಬುದ್ಧಿಮಾನ್ ಎಂದೆನಿಸುವ ಲಿಂಗವು. ಮತ್ತಂ ಶಿವರಹಸ್ಯದಲ್ಲಿ, ಕರ್ಣದ್ವಾರೇ ಯಥಾವಾಕ್ಯಂ ಗುರುಣಾ ಲಿಂಗಮೀರ್ಯತೇ ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಚೈಕಂ ವರಾನನೇ ಎಂದೆನಿಸುವ ಲಿಂಗವು ಮತ್ತಂ ಶಿವರಹಸ್ಯದಲ್ಲಿ, ಏಕಮೂರ್ತಿಸ್ತ್ರಯೋಭಾಗಾಃ ಗುರುರ್ಲಿಂಗಂ ತು ಜಂಗಮಃ ಜಂಗಮಶ್ಚ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ ಎಂದೆನಿಸುವ ಲಿಂಗವು. ಗುರುಲಿಂಗಜಂಗಮರೂಪಾಗಿ ಎನ್ನ ಕರಸ್ಥಲಕ್ಕೆ ಬಿಜಯಂಗೈದು ಕರತಲಾಮಲಕವಾಗಿ ತೋರುತ್ತೈದಾನೆ. ಆಹಾ ಎನ್ನ ಪುಣ್ಯವೇ, ಆಹಾ ಎನ್ನ ಭಾಗ್ಯವೇ, ಆಹಾ ಎನ್ನ ಸತ್ಯವೇ, ಆಹ ಎನ್ನ ನಿತ್ಯವೇ, ಶಿವ ಶಿವ, ಮಹಾದೇವ, ಮಹಾದೇವ, ಮಹಾದೇವ ನೀನೇ ಬಲ್ಲೆ, ನೀನೇ ಬಲ್ಲೆ, ಉರಿಲಿಂಗಪೆದ್ದಿಪ್ರಿಯವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶಿವಶಿವಾ ಎಂದು ಶಿವನ ನೆನೆದು, ಭವದ ಬೇರ ಕಿತ್ತೊಗೆಯಿರೋ. ಪರಶಿವಮೂರ್ತಿ ಪರಬ್ರಹ್ಮಲಿಂಗವ ಪೂಜಿಸಿ, ಹರಿ ಹತ್ತು ಭವವ ನೀಗಿದ ! ಅಜ ಅನಂತಕಲ್ಪವ ಮೀರಿದ, ಸುಜನ ಮುನಿಗಳು ನಿಜಪದವನೈದಿದರು ನೋಡಿರೋ ನಮ್ಮ ಅಖಂಡೇಶ್ವರಲಿಂಗದಲ್ಲಿ !
--------------
ಷಣ್ಮುಖಸ್ವಾಮಿ
ಅಜ ಎಮ್ಮೆ ಹಾಲಬಿಟ್ಟಲ್ಲಿ ಹೇರಂಡವ ಬೆಳೆಯಲಿಲ್ಲ ಬೆಳೆದಡೆ ಮನೆಗೆ ತರಲಿಲ್ಲ ತರಲಿಲ್ಲದ ಮತ್ತೆ ಅಡಲಿಲ್ಲ ಅದು ದೀಪದ ಬೆಳಗಿಂಗೆ ದೇವರಿಗೆ ನಿಹಿತವಲ್ಲ, ಅದು ರಾಕ್ಷಸವಂಶಭೂತವಾದ ಕಾರಣ. ಕಂಡುದ ಬಿಟ್ಟು ಕಾಣದುದನರಸಿಕೊಳಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಮುಕ್ತನ ನೇಮ.
--------------
ಅಕ್ಕಮ್ಮ
ಹರಂಗೆ ಅಜ ಹರಿ ಮೊದಲಾದ ದೈವಂಗಳ ಸರಿಯೆಂಬ ನರಕಿಗಳ, ಗುರುವಿಂಗೆ ನರರ ಸರಿಯೆಂಬ ಕಡುಪಾಪಿಗಳ, ಪರಶಿವಧರ್ಮಕ್ಕೆ ವೇದಾಗಮಂಗಳ ಸರಿಯೆಂಬ ಪಾತಕರ, ಪರಶಕ್ತಿ ಜಗದಂಬೆ ಉಮಾದೇವಿಯರಿಗೆ ಉಳಿದಾದ ಶಕ್ತಿಗಳ ಸರಿಯೆಂಬ ಕರ್ಮಿಗಳ, ಇಂತಿವರ ಮುಖವ ನೋಡಿದವರಿಗೆ ನರಕವಲ್ಲದೆ ಮತ್ತೊಂದು ಗತಿಯಿಲ್ಲ. ಇಂತಿವರ ಹೊರೆಯಲ್ಲಿರಲಾಗದು, ಒಡನೆ ನುಡಿಯಲಾಗದು, ಒಂದಾಸನದಲ್ಲಿ ಕುಳ್ಳಿರಲಾಗದು. ಶಿವಂ ಬ್ರಹ್ಮಾದಿಭಿಃ ಸಾಮ್ಯಂ ಗುರುಃ ಪ್ರಾಕೃತೈಸ್ಸಮಂ | ಶಿವಂ ವಿದ್ಯಾ ಚ ವೇದಾದ್ಯೈರ್ಮನುತೇ ಯಸ್ತು ಮಾನವಃ || ಸ ಪಾಪೀ ದುರ್ಮತಿಃ ಕ್ರೂರಃ ಶ್ವಪಚಃ ಶ್ವಪಚಾಧಮಃ | ಶಿವಂ ಬ್ರಹ್ಮಾದಿಭಿಃ ಸಾಮ್ಯಂ ಶಿವಂ ಲಕ್ಷ್ಯಾದಿ ಶಕ್ತಿಭಿಃ || ಸ್ವಗುರುಂ ಪ್ರಾಕೃತೈಸ್ಸಾರ್ಧಂ ಯೇ ಸ್ಮರಂತಿ ವದಂತಿ ಚ | ತೇಷಾಂ ಪಾಪಾನಿ ನಶ್ಯಂತಿ ಶ್ರೀಮತ್ ಪಂಚನದಾಶ್ರಯಃ || ಇಂತೆಂದುದಾಗಿ, ಇದು ಕಾರಣ, ಇಂತೀ ಮರುಳು ದುರಾತ್ಮರನೆನಗೆ ತೋರಿಸದಿರಯ್ಯಾ. ಬಸವಪ್ರಿಯ ಕೂಡಲಚೆನ್ನಸಂಗಯ್ಯಾ, ಬೇಡುವೆ ನಿಮ್ಮದೊಂದೇ ವರವನು.
--------------
ಸಂಗಮೇಶ್ವರದ ಅಪ್ಪಣ್ಣ
ಅಜ ಹರಿ ಸುರ ಮನು ಮುನಿಗಳ ಮರುಳುಮಾಡಿ ಕಾಡಿತ್ತೀ ಮಾಯೆ. ಪತಿವ್ರತೆಯೆಂಬುವರ ಪರಿಯಟಣಗೊಳಿಸಿತ್ತೀ ಮಾಯೆ. ಯತಿಗಳೆಂಬವರ ಎದೆಯೆದೆಯನೊದೆದಿತ್ತೀ ಮಾಯೆ. ಸಚರಾಚರಂಗಳನೆಲ್ಲವ ಜನನ ಮರಣಗಳೆಂಬ ಅಣಲೊಳಗಿಕ್ಕಿ ಆಗಿದಗಿದು ಉಗಿಯಿತ್ತು ನೋಡ ಮಾಯೆ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ನಿಮ್ಮ ಶರಣರಲ್ಲದವರ ಕೊಂದು ಕೂಗಿಸಿತ್ತು ನೋಡ ಈ ಮಾಯೆ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆ ಪರಶಿವನ ನಿರ್ಬಯಲವೇ ಮಹಾಬಯಲು, ಚಿದ್ಬಯಲು, ಬಯಲು ಮೂರಾದರೂ ಒಂದೇ. ಚಿನ್ನಾದ ಚಿದ್ಬಿಂದು ಚಿತ್ಕಳೆ, ನಾದ, ಬಿಂದು, ಕಳೆ ಆರಾದರೂ ಒಂದೇ. ಆರು ಮೂರು ಒಂಬತ್ತಾದರೂ ಒಂದೇ. ಒಂದು ಒಂಬತ್ತಾಗಿ, ಆ ನಿರ್ಬಯಲು ತಾನೆ ಹಲವಾಗಿತ್ತು. ಈ ಹಲವಾದರೂ ನಿರ್ಬೈಲೊಂದೇ, ಒಂದೇ ಎಂದರೆ ಒಂದೂ ಇಲ್ಲಾ. ನಿರ್ಬೈಲಿಗೆ ನಾಮ ಉಂಟೇ ? ರೂಪ ಉಂಟೇ ? ಕ್ರೀಯ ಉಂಟೇ ? ನಿರ್ಬೈಲೇ ನಿರ್ಬೈಲೆಂಬುದು ಇದು ಎಲ್ಲಿ ಇದೇ ನಿರ್ಬೈಲು. ಮತ್ತೆ ತಾ ನಿರ್ಬೈಲ ರೂಪಾದರೂ, ಆ ರೂಪ ತಾ ನಿರ್ಬೈಲಲ್ಲವೇ ? ತಾ ಕೂಡಲಿಕ್ಕೆ ಠಾವು ಬ್ಯಾರುಂಟೇ ? ಗಂಧ ರುಚಿ ರೂಪ ಸ್ಪರ್ಶ ಶಬ್ದ ತೃಪ್ತಿ ಇವು ತನ್ನ ತಾನಲ್ಲವೇ ? ಇದ್ದದ್ದು ತಾನೇ ಇಲ್ಲದ್ದು ತಾನೇ, ಹ್ಯಾಂಗಾದರೂ ತಾನೇ ನಿರ್ಬೈಲು. ಇದನರಿಯದೇ ಪೂರ್ವಪುಣ್ಯದಿಂದೆ ಮಾನವ ಜನ್ಮವ ತಾಳಿ, ಅಜ್ಞಾನವಳಿದು ಸುಜ್ಞಾನಿಯಾಗಿ, ಸುಜ್ಞಾನದಿಂದ ಸಾಧುರ ಸಂಗವ ಮಾಡಿ, ಗುರುಕರುಣವ ಪಡೆದು ಲಿಂಗವ ಪೂಜಿಸಿ, ಜಂಗಮಾರಾಧನೆಯ ಮಾಡಿ, ಪಾದೋದಕ ಸಲ್ಲಿಸಿ, ಪ್ರಸಾದವನುಂಡು, ವಿಭೂತಿಯ ಧರಿಸಿ, ರುದ್ರಾಕ್ಷಿಯ ಶೃಂಗರಿಸಿ, ಮಂತ್ರವನೋದಿ, ಯಂತ್ರವ ಕಟ್ಟಿ, ತಂತ್ರವ ತಿಳಿದು, ಸ್ವತಂತ್ರಸಿದ್ಧಲಿಂಗನಾದ ಮೇಲೆ ತನ್ನೊಳಗೆ ತಾನೇ ವಿಚಾರಿಸಿ, ಮತ ಒಂದಾದ ಮತಿಜ್ಞಾನ, ಸ್ತುತಿ ನಿಂದ್ಯ ಒಂದಾದ ತತ್ವಜ್ಞಾನ, ಸರ್ವವೂ ಒಂದಾದ ಸಮ್ಯಜ್ಞಾನ, ಅಂಗ ಒಂದಾದ ತತ್ವಜ್ಞಾನ, ಆ ಪ್ರಾಣ ಒಂದಾದ ಆತ್ಮಜ್ಞಾನ, ಕತ್ತಲೆ ಬೆಳಗು ಒಂದಾದ ಮಹಾಜ್ಞಾನ, ನಿಸ್ಸೀಮವಾದ ಅಖಂಡಜ್ಞಾನ, ಶಬ್ದಮುಗ್ಧವಾದುದ್ದೇ ಸ್ವಯಂಭುಬ್ರಹ್ಮಜ್ಞಾನ, ಅರವಾದದ್ದು ಅರವು, ಮರವಾದದ್ದು ಮರವು. ಈ ಮರವಾದದ್ದು ಮರವಾಗದೆ ಮರವು ಮರಳಿ ಅರವಾಗಿ, ಎಚ್ಚರಗೊಂಡು ಇಚ್ಛೆ ಉಳಿದರೆ ಅದೇ ಭವಮರವು, ಮರವಾಗಿ ಮರವು ಮರವಾದರೆ, ಸಾವಿಗೆ ಸಾವಾಗಿ ಸಾವು ಸತ್ತಿತ್ತು. ಮರವಿನ ಮರವೇ ಸಾವಿನ ಸಾವು; ಸಾವೆಂಬುದೇ ಮಾಯೆ. ಮಾಯೆಯೆಂಬುದೇ ಮರಗಿ, ಮರಗಿಯೆಂಬುದೇ ದುರಗಿ, ದುರಗಿಯೆಂಬುದೇ ಶಕ್ತಿ , ಶಕ್ತಿಯೆಂಬುದೇ ಅಂಗ, ಅಂಗವೆಂಬುದೇ ಲಿಂಗ, ಲಿಂಗವೆಂಬುದೇ ಮನ, ಮನವೆಂಬುದೇ ಘನ, ಘನವೆಂಬುದೇ ಗುರು, ಗುರುವೆಂಬುದೇ ಪರ, ಪರವೆಂಬುದೇ ತಾನು, ತಾನುಯೆಂಬುದೇ ಬೈಲು, ಬೈಲೆಂಬುದೇ ಮುಕ್ತಿ, ಮುಕ್ತಿಯೆಂಬುದೇ ಏನೋ ಏನೋ ಎಂಬುದೇ ಮಾತು, ಮಾತುಯೆಂಬುದೇ ವಚನ, ವಚನಯೆಂಬುದೇ ಅಕ್ಷರ, ಅಕ್ಷರಯೆಂಬುದೇ ಮಂತ್ರ, ಮಂತ್ರಯೆಂಬುದೇ ಪ್ರಣವ, ಪ್ರಣವಯೆಂಬುದೇ ನಾದ, ನಾದಯೆಂಬುದೇನಾದುದೇ ಹೇಳಲಿಕ್ಕೆ ನಿರ್ಬೈಲು. ನಿರ್ಬೈಲೇ ಸುಳ್ಳು, ಈ ಸುಳ್ಳು ಖರೇ ಮಾಡದೆ ಹರಿ ಅಜ ಇಂದ್ರಾದಿ ಮನು ಮುನಿ ನರ ನಾಗ ಸುರ ಸಿದ್ಧ ಸಾಧ್ಯರು, ರುದ್ರ ಈಶ್ವರ ಸದಾಶಿವ ಮಹಾದೇವರು ಮತ್ತೆ ಮಾದೇವರು, ಅಷ್ಟಾಂಗಯೋಗಿಗಳು, ಅಷ್ಟಾವರಣ ನಿಷೆ*ಯುಳ್ಳವರು, ಮಹಾನುಭಾವಿಗಳು, ನಿಜಜ್ಞಾನಿಗಳು, ಮಹಾ ಅರವಿಗಳು, ಸುಳ್ಳು ಸುಳ್ಳು ಮಾಡಿ, ಸುಳ್ಳು ಬ್ಯಾರೆ, ಖರೆಬ್ಯಾರೆ, ಬ್ರಹ್ಮವು ಬ್ಯಾರೆ, ಹಮ್ಮು ಬ್ಯಾರೆ, ಬ್ರಹ್ಮಾಂಡ ಬ್ಯಾರೆ, ಪಿಂಡಾಂಡ ಬ್ಯಾರೆ, ಕಾಯ ಬ್ಯಾರೆ, ಕರಣ ಬ್ಯಾರೆ, ಆತ್ಮ ಬ್ಯಾರೆ, ಪರಮಾತ್ಮ ಬ್ಯಾರೆ, ಭವ ಬ್ಯಾರೆ, ಶಿವ ಬ್ಯಾರೆ, ಬೆಳಗು ಬ್ಯಾರೆ, ಕತ್ತಲು ಬ್ಯಾರೆ, ಪುಣ್ಯ ಬ್ಯಾರೆ, ಪಾಪ ಬ್ಯಾರೆ, ಸತ್ಕರ್ಮ ಬ್ಯಾರೆ, ದುಷ್ಕರ್ಮ ಬ್ಯಾರೆ, ಅಜ್ಞಾನ ಬ್ಯಾರೆ, ಸುಜ್ಞಾನ ಬ್ಯಾರೆ, ಹೆಣ್ಣು ಬ್ಯಾರೆ, ಗಂಡು ಬ್ಯಾರೆ, ಸ್ವರ್ಗ ಬ್ಯಾರೆ, ನರಕ ಬ್ಯಾರೆ, ಸಾವು ಬ್ಯಾರೆ, ಜೀವ ಬ್ಯಾರೆ, ಗುರು ಬ್ಯಾರೆ, ಶಿಷ್ಯ ಬ್ಯಾರೆ, ಮಹಾಂತ ಬ್ಯಾರೆ, ಮಡಿವಾಳ ಬ್ಯಾರೆ, ಮೃತ್ಯು ಬ್ಯಾರೆ, ಮಾತು ಬ್ಯಾರೆ, ಭಕ್ತಿ ಬ್ಯಾರೆ, ಮುಕ್ತಿ ಬ್ಯಾರೆ, ನಾವು ಬ್ಯಾರೆ, ನೀವು ಬ್ಯಾರೆ, ತಾ ಬ್ಯಾರೆ ಬ್ಯಾರೆಯೆಂದು ತಾ ಬ್ಯಾರ್ಯಾಗಿ ಸುಳ್ಳು ಖರೇ ಮಾಡದ, ತುಪ್ಪ ಹಾಲುವ ಮಾಡದೇ ಹಾಲು ತುಪ್ಪವ ಮಾಡಿದಂತೆ ತಾವು ಸುಳ್ಳಾಗದೆ ಸುಳ್ಳು ಸುಳ್ಳೆಂದು ಸುಳ್ಳು ಜೊಳ್ಳಾದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಬೆಂಕಿಗೆ ಚಳಿ ಬಂದು, ಉದಕವ ಕಾಯಲಾಗಿ, ಹಿಮಹಿಂಗಿ ಜ್ವರ ಬಂದಿತ್ತು. ಜ್ವರದ ತಾಪಕಾರದೆ ಅರುಹಿರಿಯರೆಲ್ಲರು ಮಡಿದರು. ಅಜ ಕುಡಿಕೆಯ ನೀರಿನಲ್ಲಿ, ಆ ಕುಡಿಕೆಯ ಒಡೆಯದೆ ಒಡೆದು, ಹಿಮ್ಮಡಿಯಲ್ಲಿ ಒಡನೋಡಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವನರಿಯಬಲ್ಲಡೆ.
--------------
ಸಗರದ ಬೊಮ್ಮಣ್ಣ
ಸ್ಥೂಲ ಸೂಕ್ಷ ್ಮ ಪರತತ್ವವೆಂಬ ನಾಮ ನಿನಗಿಲ್ಲದಂದು, ನಿನ್ನ ಸ್ಥೂಲನೆಂದು ಕುರುಪಿಡುವ ಅಜ, ಹರಿ, ಸುರಪತಿ ಮೊದಲಾದ ದೇವತೆಗಳಿಲ್ಲದಂದು, ನಿನ್ನ ಸೂಕ್ಷ ್ಮನೆಂದು ಕುರುಪಿಡುವ ಮನು ಮುನೀಶ್ವರರಿಲ್ಲದಂದು, ನಿನ್ನ ಸ್ಥೂಲ ಸೂಕ್ಷ ್ಮ ಪರಾತ್ಪರನೆಂದು, ನಿನ್ನ ಆದಿ ಮಧ್ಯಾವಸಾನ ಅಖಂಡ ಪರಿಪೂರ್ಣತ್ವವನರಿವ, ಅವಿರಳಜ್ಞಾನಸಂಬಂಧಿಗಳಪ್ಪ ಗಣಾಧೀಶ್ವರರಿಲ್ಲದಂದು, ಇವರಾರೂಯಿಲ್ಲದಂದು ಅನಾದಿ ಪರಶಿವನೆಂದೆನಲಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->