ಅಥವಾ

ಒಟ್ಟು 56 ಕಡೆಗಳಲ್ಲಿ , 36 ವಚನಕಾರರು , 50 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂಲದ ಜ್ವಾಲೆಯೆತ್ತಿ, ಕಮಲವ ತಾಳಿ, ಮೇಲೊಂದು ಕೊಡನಿಪ್ಪುದು. ಆ ಕೊಡನುಕ್ಕಿ ಅಮೃತವನುಣ್ಣಬೇಕೆಂಬ ಯೋಗಿಗಳು ಕೇಳಿರೋ, ಅದು ಶರೀರದ ಮಾತಲ್ಲ. ಮೂಲದ ದ್ವಾರವೆಂಬುದು ಬಂದ ಬಟ್ಟೆ, ಕೊಡನೆಂಬುದು ಶರೀರ, ಆ ಶರೀರವನುಂಟು ಮಾಡದೆ ಮೇಲಿಪ್ಪ ರಂಧ್ರಪದವನೊದೆದು ಭಾವಕ್ಕೆ ಬಾರದ ಪರಿಯಲ್ಲಿ ನಿಂದುದು ಅಮೃತಸೇವನೆ. ಆ ಭಾವದಲ್ಲಿ ಅರಿದು ನಿಂದು ತನ್ನಯ ಕುರುಹಿನ ಸುಖವ ವೇಧಿಸಿ ಪರಿಭ್ರಮಣಕ್ಕೆ ಸಿಕ್ಕದೆ ನಿಂದ ನಿಜವು ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ ಏಕಚಿತ್ತನಾಗಿ ಸರ್ವವಿಕಾರಂಗಳ ಕಟ್ಟುವಡೆದು, ಇಂದ್ರಿಯಂಗಳ ಇಚ್ಛೆಯಲ್ಲಿ ತ್ರಿವಿಧವ ಹಿಡಿದಿರುವರ ಸಂದಿಯಲ್ಲಿ ನುಸುಳದೆ ವಸ್ತುವಿನ ಅಂಗದಲ್ಲಿಯೆ ತನ್ನಂಗೆ ತಲ್ಲೀಯವಾಗಿಪ್ಪುದೆ ಮಹಾ ನಿಜದ ನೆಲೆ. ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಇದೆ ಬಟ್ಟೆ.
--------------
ತುರುಗಾಹಿ ರಾಮಣ್ಣ
ಕೈಲಾಸವೆಂಬುದು ಕ್ರಮಕೂಟ, ಮೋಕ್ಷವೆಂಬುದು ಭವದಾಗರ, ಕಾಯಸಮಾಧಿಯೆಂಬುದು ಪ್ರಪಂಚಿನ ಪುತ್ಥಳಿ. ಕಾಯ ಜೀವ ಕೂಡಿ ಬಯಲಾಗಿ ಇನ್ನಾವಠಾವಿನಲ್ಲಿ ಪೋಗಿ ನಿಲುವುದು? ತನುವಿನ ಗಂಭೀರವೆಂಬುದ ಮರಸಿದೆ, ಸದ್ಗುರುವ ತೋರಿ. ಸದ್ಗುರುವೆಂಬುದ ಮರಸಿದೆ ನಿಜವಸ್ತು ಶಿಲೆಯ ಮರೆಯಲ್ಲಿದ್ದು. ಲಿಂಗವೆಂಬುದ ಕುರುಹಿಟ್ಟು ಲಿಂಗವೆಂಬುದ ಮರಸಿದೆ, ತ್ರಿವಿಧ ಬಟ್ಟೆ ಕೆಡುವುದಕ್ಕೆ. ಜಂಗಮವೆಂಬುದ ತೋರಿ, ಜಂಗಮವೆಂಬುದ ಮರಸಿ ನೀನು ಎಲ್ಲಿ ಅಡಗಿದೆ? ಎಲ್ಲಿ ಉಡುಗಿದೆ? ಎಲ್ಲಿ ಬೆಂದೆರಿ ಎಲ್ಲಿ ಬೇಕರಿಗೊಂಡೆ? ನೀನು ಎಲ್ಲಿ ಹೋದೆ? ಹುಲ್ಲು ಹುಟ್ಟಿದ ಠ್ಞವಿನಲ್ಲಿ ನೀನೆಲ್ಲಿ ಹೋದೆ? ಅಲ್ಲಿ ನಿನ್ನವರೆಲ್ಲರ ಕಾಣದೆ, ಕಲ್ಲು, ಮಣ್ಣು ನೀರಿನಲ್ಲಿ ನೆರೆದಂತೆ ಬದುಕು, ನನಗಿಲ್ಲಿಯೇ ಸಾಕು. ನೀ ಕೊಟ್ಟ ಕುರುಹಿನಲ್ಲಿಯೆ ಬಯಲು ಸದ್ಯೋಜಾತಲಿಂಗವೆಂಬುದು ನಿರಾಲಂಬವಾಯಿತ್ತು.
--------------
ಅವಸರದ ರೇಕಣ್ಣ
ಶಿವಶಿವಾ, ಎನ್ನ ಮನದಾಳಾಪವನವಧರಿಸಯ್ಯ ಸ್ವಾಮಿ. ಎನಗೆ ಭಕ್ತಿ ಬೇಡ, ಎನಗೆ ಜ್ಞಾನ ಬೇಡ, ಎನಗೆ ವೈರಾಗ್ಯ ಬೇಡ, ಎನಗೆ ವಿರತಿಯು ಬೇಡ, ನಿಮ್ಮ ಶರಣರು ಉಟ್ಟ ಮೈಲಿಗೆಯ ಬಟ್ಟೆ ಉಗುಳಿದ ತಾಂಬೂಲ, ಒಕ್ಕು ಮಿಕ್ಕ ಪ್ರಸಾದವನೆ ಕರುಣಿಸಿ, ಅವರ ಪಡುಗ ಪಾದರಕ್ಷೆಯನೆ ಹಿಡಿವುದಕ್ಕೆ ಯೋಗ್ಯನ ಮಾಡಿ, ಅವರ ಕಡೆಯ ಬಾಗಿಲನೆ ಕಾಯುವಂತೆ ಮಾಡಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಮ್ಮಂತುವ ತಿಳಿದು, ನೋಡಿದರೆ ಹೇಳಿಹೆನು. ಅದೆಂತೆಂದರೆ, ಮೇಲು ಕೀಳಾಯಿತ್ತು, ಕೀಳು ಮೇಲಾಯಿತ್ತು. ನಿರಾಳ ಆಳವಾಯಿತ್ತು, ಆಳ ನಿರಾಳವಾಯಿತ್ತು. ಉತ್ತರ ಪೂರ್ವವಾಯಿತ್ತು, ಪೂರ್ವ ಉತ್ತರವಾಯಿತ್ತು, ಗುರುವು ಶಿಷ್ಯನಾಯಿತ್ತು, ಶಿಷ್ಯ ಗುರುವಾಯಿತ್ತು. ಅರ್ಪಿತ ಅನರ್ಪಿತವಾಯಿತ್ತು, ಅನರ್ಪಿತ ಅರ್ಪಿತವಾಯಿತ್ತು, ಇಂತಪ್ಪ ಘನವ ವೇಧಿಸಿ ನುಡಿಯಬಲ್ಲರೆ, ಆತನೆ ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣ. ನಡೆದುದೆ ಬಟ್ಟೆ, ನುಡಿದುದೆ ತತ್ವ. ಇಂತಪ್ಪ ಸರ್ವಾಂಗ ಪ್ರಸಾದಿಯ ಪ್ರಸಾದವ ಕೊಂಡು, ಸರ್ವಾಂಗ ಶುದ್ಧವಾಯಿತ್ತು. ನಾ ನಿಮ್ಮ ಪಾದದೊಳು ನಿರ್ಮುಕ್ತನಾಗಿ ಏನೂ ಇಲ್ಲದಂತಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ತಮಕ್ಕೂ ದಿವಕ್ಕೂ ಸೂರ್ಯನಾದ ಮತ್ತೆ, ದಿನ ಮಾಸಂಗಳೆಂಬವು ನಷ್ಟವಾಯಿತ್ತು. ಭಕ್ತನೂ ನಾನೆ, ವಿರಕ್ತನೂ ನಾನೆ ಎಂದಲ್ಲಿ, ಕೈಲಾಸದ ಬಟ್ಟೆ ಕಟ್ಟಿತ್ತು . ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಎತ್ತ ಹೋದರೆಂದರಿಯು.
--------------
ಶಿವಲೆಂಕ ಮಂಚಣ್ಣ
ಮುಂದಳೂರಿಗೆ ಬಟ್ಟೆ ಇದೇ ಹೋಗೆಂದಡೆ ಅಂಧಕನೇನು ಬಲ್ಲನು ಹೇಳಾ ? ಸಂಗ್ರಾಮದಲ್ಲಿ ಓಡಿದ ಹೆಂದೆ ಗೆಲಬಲ್ಲನೆ ಹೇಳಾ ? ನಿಂದ ನಿಲವಿನ (ನೀರಿನ ?) ಮಡುವ ಕಂದನೀಸಾಡ ಬಲ್ಲನೆ ಹೇಳಾ ? ಗುಹೇಶ್ವರನೆಂಬ ನಿರಾಳದ ಘನವ ಪಂಚೇಂದ್ರಿ[ಯ]ಕÀನೆತ್ತ ಬಲ್ಲನು ಹೇಳಾ?
--------------
ಅಲ್ಲಮಪ್ರಭುದೇವರು
ತಾ ಹಿಡಿದ ವ್ರತಕ್ಕೆ ನಿಶ್ಚಯವ ಕಂಡು ನಡೆವಲ್ಲಿ ಸೋಂಕು ಬಹುದಕ್ಕೆ ಮುನ್ನವೆ ಸುಳುಹನರಿದು, ತಟ್ಟುಮುಟ್ಟು ಬಹುದಕ್ಕೆ ಮುನ್ನವೆ ಕಟ್ಟಣೆಯ ಮಾಡಿ, ಮೀರಿ ದೃಷ್ಟದಿಂದ ಶಿವಾಧಿಕ್ಯ ತಪ್ಪಿ ಬಂದಲ್ಲಿ ತನ್ನ ಕಟ್ಟಳೆಯ ವ್ರತಸ್ಥಭಕ್ತರು ಗಣಂಗಳು ಗುರುಲಿಂಗಜಂಗಮ ಮುಂತಾಗಿ ಎನ್ನ ವ್ರತದ ದೃಷ್ಟದ ಕಟ್ಟಳೆ ತಪ್ಪಿತ್ತೆಂದು ಮಹಾಪ್ರಮಥರಲ್ಲಿ ತಪ್ಪನೊಪ್ಪಿಸಿ, ಇನ್ನು ಘಟವಿಪ್ಪುದಿಲ್ಲಾಯೆಂದು ಬೀಳ್ಕೊಂಡು ಸತ್ಯಕ್ಕೊಪ್ಪಿದಂತೆ ತನ್ನ ಚಿತ್ತವಿದ್ದು ಪರಿಹರಿಸಿಕೊಂಬುದು ಮತ್ರ್ಯದ ಅನುಸರಣೆ. ತಪ್ಪಿದಲ್ಲಿಯೆ ಆತ್ಮವಸ್ತುವಿನಲ್ಲಿ ಕೂಡುವುದು ಕಟ್ಟಾಚಾರಿಯ ನೇಮ. ಇಂತೀ ಉಭಯವ ವಿಚಾರಿಸಿ ನಿಂದ ವ್ರತಕ್ಕೆ ನಿಮ್ಮ ಮನವೆ ಸಾಕ್ಷಿ. ಆಜ್ಞೆಯ ಮೀರಲಿಲ್ಲ, ಬಂಧನದಲ್ಲಿ ಅಳಿಯಲಿಲ್ಲ. ನೀವು ನೀವು ಬಂದ ಬಟ್ಟೆಯ ನೀವೆ ನೋಡಿಕೊಳ್ಳಿ. ಎನ್ನ ಬಟ್ಟೆ, ಏಲೇಶ್ವರಲಿಂಗದ ಗೊತ್ತು, ಕೆಟ್ಟಿಹಿತೆಂದು ಸೂಚನೆದೋರಿತ್ತು.
--------------
ಏಲೇಶ್ವರ ಕೇತಯ್ಯ
ಜಾಳೇಂದ್ರದೇಶದ ಅರಸು ಆನೆಯನೇರಿ, ನಾಯಕ ಪಾಯಕ ಮಾವತಿಗರ ತಳತಂತ್ರ ಮಾರ್ಬಲ ಸಹಿತ ರಾಜಬೀದಿಯೊಳು ಬರುತಿರಲು, ಹೆಜ್ಜೆಗಾಣದೆ ತಳಿತಕಾರೆಯಮೆಳೆಯೊಳಗಿಪ್ಪ ಬಿಜ್ಜು ಅರಸು, ಆನೆ ಮೊದಲಾದ ತಳತಂತ್ರ ಮಾರ್ಬಲನ ನುಂಗಿತ್ತ ಕಂಡೆ. ಎರಡೂರ ಬಟ್ಟೆ, ಒಂದಾದ ತಲೆವೊಲದಲ್ಲಿ ಒಬ್ಬ ತನ್ನ ತಲೆಯ ಕೊಯ್ದು ಮುಂದಿರಿಸಿಕೊಂಡು ಮುಂಡದಲಿ ಹೇನ ಕಳವುದ ಕಂಡೆ. ಅಂಗವ ಕೈಯಲ್ಲಿ ಹಿಡಿದುಕೊಂಡು ಅರಸಿ ಬಳಲುತ್ತಿರೆ ಹಲಬರು. ನಿಜಗುರು ಭೋಗೇಶ್ವರನ ಶರಣ ಚೆನ್ನಬಸವಣ್ಣನ ಕರುಣವುಳ್ಳವರಿಗಲ್ಲದೆ ಮಿಕ್ಕಿನ ಜಡಮತಿಗಳಿಗೆಂತು ಸಾಧ್ಯವಪ್ಪುದು ಕೇಳಿರಣ್ಣಾ.
--------------
ಭೋಗಣ್ಣ
ಕಟ್ಟಿ ಕಳೆ ಪಾಪವ, ಬಿಟ್ಟು ಕಳೆ ಪುಣ್ಯವ. ಒತ್ತು ರೋಷವ, ಸಮತೆಯ ಪಸರಿಸಾ. ಎತ್ತಿದರ್ಥವನು ಬೈಚಿಟ್ಟು, ಮನದಲ್ಲಿ ಚಕ್ಕನೆ ತೀವು ಪರಿಣಾಮವನು, ಇದು ಬಟ್ಟೆ, ದೇವತತ್ವದ ಮುಟ್ಟಲುಪದೇಶವ ಕೊಟ್ಟನಂಬಿಗ ಚೌಡ ತನ್ನನೊಲಿವರಿಗೆ.
--------------
ಅಂಬಿಗರ ಚೌಡಯ್ಯ
ನಾನೊಂದೂರಿಗೆ ಹಾದಿಯ ಕೇಳಿಕೊಂಡು ಹೋಗುತ್ತಿರಲಾಗಿ, ಮುಂದೆ ಅರಣ್ಯದೊಳಗೆ ಮೂರುಬಟ್ಟೆಯಾಯಿತ್ತು. ಎರಡು ಪಥವ ಬಿಟ್ಟು, ಒಂದು ಪಥವ ಹಿಡಿದು ಬರಲಾಗಿ, ಮುಂದೆ ಮೂರು ಬಟ್ಟೆಯೂ ಒಂದಾದವು. ಆ ಮೂರು ಬಟ್ಟೆ ಕೂಡಿದ ಬಳಿಯಲೊಂದು ಬೆಟ್ಟ ಹುಟ್ಟಿತ್ತು. ಆ ಬೆಟ್ಟವ ಏರಬಾರದು, ಇಳಿಯಬಾರದು. ಆ ಬೆಟ್ಟವ ಬಿಟ್ಟು ಹೋದಡೆ ಎನಗೆ ಪಥವಿಲ್ಲಾಯೆಂದು ಸುತ್ತಿಸುತ್ತಿ ನೋಡುತ್ತಿರಲಾಗಿ, ಆರು ಮೆಟ್ಟಿನದೊಂದು ಏಣಿ ಹಾಕಿರುವುದ ಕಂಡೆ. ಆ ಏಣಿಯ ಮೆಟ್ಟಿ ಮೆಟ್ಟಿ, ಆ ಬೆಟ್ಟದ ತುಟ್ಟತುದಿಯನೇರಿ ನೋಡಲಾಗಿ, ಬಟ್ಟಬಯಲಾಗಿದ್ದಿತು. ಆ ಬಟ್ಟಬಯಲೊಳಗೆ ಹತ್ತಿ ಹೋಗುತ್ತಿರಲಾಗಿ, ನಾನೆತ್ತ ಹೋದೆನೆಂದರಿಯೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಆರೇನೆಂದಡೂ ಎನ್ನಲಿ, ಕೊಟ್ಟುದ ಕೊಡೆ, ಸಿಕ್ಕುಸುವುದ ಬಿಡೆ. ಅನಂಗದ ನಡೆ, ಅತಿರೇಕದ ನುಡಿ, ಗತಿಗೆಟ್ಟವರ ಸಂಗ, ಹೊಸಬರ ಕೂಟದ ಭಕ್ತಿಯನೊಲ್ಲದವರ ಒಡನಾಟ ಅಸತ್ಯರು ಹೋದ ಹಾದಿ ಎನಗದೆ ಬಟ್ಟೆ, ರಕ್ಕಸನೊಡೆಯ ಕೊಟ್ಟುದ ಬೇಡ.
--------------
ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ
ಕಾಷ*ಪದಾರ್ಥವನರಿದು, ಕರ್ಮಪದಾರ್ಥವ ಶೋಧಿಸಿಕೊಂಡು, ವರ್ಮಪದಾರ್ಥವ ನಿರ್ಧರಿಸಿ, ಇಂತೀ ಪದಾರ್ಥಂಗಳ ಅರ್ಪಿಸುವಲ್ಲಿ ಬಂದ ಬಟ್ಟೆ, ಮುಂದಣ ಪಯಣ. ನಿಂದ ಮಧ್ಯದಲ್ಲಿ ಕಾಬ ಸುಖಂಗಳ ಸಂದನಳಿದುದು, ಭರಿತಾರ್ಪಣ ಸಂದಿಗೊಂದಿಯ ಸಂಸಾರಿಗಳಲ್ಲಿ ಬೆಂಬಳಿಯಾಗಿಹುದೆ ? ಅವರ ಮಂದಿರಂಗಳಲ್ಲಿ ಸ್ತುತಿನಿಂದ್ಯಾದಿಗಳ ತಂದುಕೊಳ್ಳದೆ, ಅವರಿಗೆ ಬಂಧ ಮೋಕ್ಷ ಕರ್ಮಂಗಳ ಭಾವಕ್ಕೆ ಸಂದನಿಕ್ಕದೆ, ತಾ ಬಂದನಲ್ಲದಿಪ್ಪುದೆ ಭರಿತಾರ್ಪಣ. ಇಂತೀ ನಿಹಿತ ತಿಳಿದು, ಸಂಸಾರ ಘಾತಕವ ಬಿಟ್ಟು, ಪರದೇಶಿಕತ್ವವಾದುದು ಭರಿತಾರ್ಪಣ. ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಗಂಡಗಂಡರ ಎದೆಯ ಮೆಟ್ಟಿ ನಡೆವರುಂಟೆ ? ಗಂಡಗಂಡರ ಚಲ್ಲಣವ ಮಾಡಿ ಉಟ್ಟವರುಂಟೆ ? ಗಂಡಗಂಡರ ಚರ್ಮವ ಹೊದ್ದವರುಂಟೆ ? ಗಂಡಗಂಡರ ತೊಟ್ಟವರುಂಟೆ ? ಗಂಡಗಂಡರ ತುರುಬಿದವರುಂಟೆ ? ಗಂಡಗಂಡರ ಭಸ್ಮವಮಾಡಿ ಹೂಸಿದವರುಂಟೆ ? ಗಂಡಗಂಡರಿಗೆ ಗಂಡನ ಕಣ್ಣು ಕಾಲಲ್ಲದೆ. ಗಂಡಗಂಡರಿಗೆ ಗಂಡನ ಶಿರ ಕರದಲ್ಲದೆ. ಗಂಡುವೇಷವೆಂಬುದು ನಿಮ್ಮ ಶಕ್ತಿರೂಪು. ಗಂಡರಿಗೆ ಗಂಡನು ನಡೆಯಿತ್ತೆ ಬಟ್ಟೆ ಎಂಬುದು ನಿಮಗೆ ಸಂದಿತ್ತು. ಶಂಭುಜಕ್ಕೇಶ್ವರ ಶರಣ ಜಗದೊಳಗೊಬ್ಬನೆ ಗಂಡನು.
--------------
ಸತ್ಯಕ್ಕ
ಕೆರೆ ತೊರೆ ಬಟ್ಟೆ ಬಾಗಿಲಲ್ಲಿ ಪೂಜಿಸಿಕೊಂಬುವ ದೈವವೆಂದು ಪ್ರಮಾಣಿಸುವಲ್ಲಿ ತಮ್ಮ ಮನಕ್ಕೆ ಸಂದೇಹವಂ ಬಿಡಿಸಿದೆವೆಂದು ತಮ ತಮಗೆ ಹಿಂಗದ ದೈವವೆಂದು ನಿಂದು ಹೋರಲಾಗಿ ಕೊಂದನೆ ಶಿವನು? ಅವರಂಗದ ಪ್ರಮಾಣು ಇದಕ್ಕೆ ಕೊಂದಾಡಲೇತಕ್ಕೆ? ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಇನ್ನಷ್ಟು ... -->