ಯತ್ರ ಯತ್ರ ಮಾಹೇಶ್ವರರಿರ್ದ ಗ್ರಾಮ ತತ್ರ ತತ್ರ ಶಿವಲೋಕ ನೋಡಾ, ಎಲೆ ಅಯ್ಯಾ. ಸತ್ಯ! ವಚನ ತಪ್ಪುವುದೆ ಅಯ್ಯಾ! ಕಪಿಲಸಿದ್ಧಮಲ್ಲಿನಾಥಾ, ನಿಮ್ಮ ಶರಣರು ಮೆಟ್ಟಿ ನಿಂದ ಧರೆ ಪಾವನವೆಂಬುದು ಇಂದೆನಗೆ ಅರಿಯಬಂದಿತ್ತಯ್ಯಾ.
ತಿಳಿಯದೆ ಪೂಜಿಸಿದಡಾಗುವುದೇನೊ ಅಯ್ಯಾ! ತಿಳಿದು ತಿಳಿದು ಮಾಡಬೇಕು ಲಿಂಗಪೂಜೆಯ; ತಿಳಿದು ತಿಳಿದು ಮಾಡಬೇಕು ಜಂಗಮಾರ್ಚನೆಯ. ತಿಳಿದು ಮಾಡಬೇಕು; ತಿಳಿಯದೆ ಮಾಡಲು ನಿನ್ನ ಸಿದ್ಧಿಗೆ ಸಿದ್ಧರಾದರಲ್ಲದೆ, ನಿನ್ನಂಗ ದೊರೆಕೊಂಬ ಪರಿಯ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.