ಅಥವಾ

ಒಟ್ಟು 20 ಕಡೆಗಳಲ್ಲಿ , 8 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

``ದಂಡಶ್ಚ ತಾರಕಾಕಾರೋ ಭವತಿ | ಓಂ ಸಾರ್ವತ್ಮಾ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ಪಂಚದಶಮೇ ಪ್ರಣವಾಂಶಕೇ ||'' ಅಕಾರವೆಂಬ ಪ್ರಣವದಲ್ಲಿ- ``ಕುಂಡಲಶ್ಚ ಅರ್ಧಚಂದ್ರೋ ಭವತಿ | ಓಂ ಪರಮಾತ್ಮಾ ದೇವತಾ | ಅಕಾರೇ ಚ ಲಯಂ ಪ್ರಾಪ್ತೇ ಷೋಡಶೇ ಪ್ರಣವಾಂಶಕೇ ||'' ಉಕಾರವೆಂಬ ಪ್ರಣವದಲ್ಲಿ- ``ಜ್ಯೋತಿಶ್ಚ ದರ್ಪಣಾಕಾರೋ ಭವತಿ | ಓಂ ಶಿವಾತ್ಮಾ ದೇವತಾ | ಉಕಾರೇ ಚ ಲಯಂ ಪ್ರಾಪ್ತೇ ಸಪ್ತದಶ ಪ್ರಣವಾಂಶಕೇ ||'' ``ಮಕಾರೇ ಚ ಅಕಾರೇಚ ಉಕಾರೇಚ ನಿರಾಮಯಂ | ಇದಮೇಕಂ ಸಮುತ್ಪನ್ನಂ ಓಂ ಇತಿ ಜ್ಯೋತಿರೂಪಕಂ || ಪ್ರಥಮಂ ತಾರಕಾರೂಪಂ ದ್ವಿತೀಯಂ ದಂಡ ಉಚ್ಯತೇ | ತೃತೀಯಂ ಕುಂಡಲಾಕಾರಂ ಚತುರ್ಥಂ ಅರ್ಧಚಂದ್ರಕಂ || ಪಂಚಮಂ ದರ್ಪಣಾಕಾರಂ ಷಷ್ಠಂ ಜ್ಯೋತಿರೂಪಕಂ | ಇತಿ ಪ್ರಣವಃ ಜ್ಞೇಯಂ ಏತದ್ಗೋಪ್ಯಂ ವರಾನನೇ || ಓಂಕಾರ ಪ್ರಭವೋ ವೇದಃ ಓಂಕಾರಂ ಪ್ರಭವ ಸ್ವರಃ | ಓಂಕಾರಪ್ರಭವಾ ಭೂಃ ಓಂಕಾರಪ್ರಭವಾ ಭುವಃ || ಓಂಕಾರಪ್ರಭವಾ ಸ್ವಹಃ ಓಂಕಾರ ಪ್ರಭವಾ ಮಹಃ | ಓಂಕಾರಪ್ರಭವೋ ಜನಃ ಓಂಕಾರ ಪ್ರಭವಂ ತಪಃ || ಓಂಕಾರಪ್ರಭವಂ ಸತ್ಯಂ ಓಂಕಾರ ಪ್ರಭವೋ ರವಿ ಃ | ಓಂಕಾರಪ್ರಭವಸ್ಸರ್ವಂ ತ್ರೈಲೋಕ್ಯಂ ಸಚರಾಚರಂ || ಸರ್ವವ್ಯಾಪಕಮೋಂಕಾರಂ ಮಂತ್ರಸ್ಯಾತ್ರ ನ ಸಂಭವೇತ್ | ಪ್ರಣವೋಹಿ ಪರಬ್ರಹ್ಮ ಪ್ರಣವಃ ಪರಮಂ ಪದಂ || ಓಂಕಾರಂ ನಾದರೂಪಂ ಚ ಓಂಕಾರಂ ಬಿಂದುರೂಪಕಂ | ಓಂಕಾರಂ ಚ ಕಲಾರೂಪಂ ಓಂಕಾರಂ ಮಂತ್ರರೂಪಕಂ || ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ | ಇತಿ ಪ್ರಣವಃ ವಿಜ್ಞೇಯಃ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭವಿಯಾಚಾರವ ಬಿಡದೆ ಭಯಾಗರವ ಹೊಗದೆ, ಶಿವಾಚಾರದಲ್ಲಿ ನಡೆವ ನಾಯಿಗಳು ಬರಿದೆ ನಾವು ಶಿವಾಚಾರಿಗಳೆಂದರೆ ನಮ್ಮ ಶಿವಾಚಾರಿ ಶರಣ ಬಸವಣ್ಣ ಮೆಚ್ಚ ನೋಡಯ್ಯ. ಶಿವಾಚಾರದ ಮಾರ್ಗವನು, ಶಿವಾಚಾರದ ಮರ್ಮವನು, ಶಿವಾಚಾರದ ವಿಸ್ತಾರವನು ನಮ್ಮ ಶರಣ ಬಸವಣ್ಣ ಬಲ್ಲನಲ್ಲದೆ ಉದರವ ಹೊರವ ವೇಷಧಾರಿಗಳೆತ್ತಬಲ್ಲರಯ್ಯ ? ಅಂತಪ್ಪ ಶಿವಾಚಾರದ ವಿಸ್ತಾರ ಸಕೀಲ ಹೇಳಿಹೆ ಕೇಳಿರಣ್ಣ. ಅದೆಂತೆಂದೊಡೆ v ಲಿಂಗಾಚಾರವೆಂದು, ಸದಾಚಾರವೆಂದು, ಶಿವಾಚಾರವೆಂದು, ಭೃತ್ಯಾಚಾರವೆಂದು, ಗಣಾಚಾರವೆಂದು ಶಿವಾಚಾರವು ಐದುತೆರನಾಗಿಪ್ಪುದು ನೋಡಯ್ಯಾ. ಶ್ರೀ ಗುರು ಕರುಣಿಸಿಕೊಟ್ಟ ಲಿಂಗವನಲ್ಲದೆ ಅನ್ಯದೈವಂಗಳಿಗೆರಗದಿಹುದೇ ಲಿಂಗಾಚಾರ ನೋಡಯ್ಯ. ತಾ ಮಾಡುವ ಸತ್ಯ ಕಾಯಕದಿಂದ ಬಂದ ಅರ್ಥಾದಿಗಳಿಂದ ತನ್ನ ಕುಟುಂಬ ರಕ್ಷಣೆಗೊಂಬ ತೆರದಿ ಗುರುಲಿಂಗಜಂಗಮ ದಾಸೋಹಿಯಾಗಿಪ್ಪುದೇ ಸದಾಚಾರ ನೋಡಯ್ಯ. ಶಿವಭಕ್ತರಾದ ಲಿಂಗಾಂಗಿಗಳಲ್ಲಿ ಪೂರ್ವದ ಜಾತಿಸೂತಕಾದಿಗಳನ್ನು ವಿಚಾರಿಸದೆ ಅವರ ಮನೆಯಲ್ಲಿ ತಾ ಹೊಕ್ಕು ಒಕ್ಕು ಮಿಕ್ಕ ಪ್ರಸಾದವ ಕೊಂಬುದೇ ಶಿವಾಚಾರ ನೋಡಯ್ಯ. ಲಿಂಗಾಂಗಿಗಳಾದ ಶಿವಭಕ್ತರೇ ಮರ್ತ್ಯದಲ್ಲಿ ಮಿಗಿಲಹರೆಂದು ತಾನು ಅವರ ಭೃತ್ಯನೆಂದರಿದು ಅಂತಪ್ಪ ನಿಜಲಿಂಗಾಂಗಿಗಳ ಚಮ್ಮಾವುಗೆಯ ಕಾಯ್ದಿಪ್ಪುದೇ ಭೃತ್ಯಾಚಾರ ನೋಡಯ್ಯ. ಗುರುಲಿಂಗಜಂಗಮ ಪಾದೋದಕ ಪ್ರಸಾದ ರುದ್ರಾಕ್ಷಿ ಮಂತ್ರಗಳೆಂಬಷ್ಟಾವರಣಂಗಳು ತನ್ನ ಪ್ರಾಣಸ್ವರೂಪವಾಗಿ ಅವುಗಳ ನಿಂದೆಯನ್ನು ಕೇಳಿ ಸೈರಿಸದೆ ಶಿಕ್ಷಿಸುವೆನೆಂಬ ನಿಷ್ಠೆಗೊಂಡುದೇ ಗಣಾಚಾರ ನೋಡಯ್ಯ. ಇದಕ್ಕೆ ಸಾಕ್ಷಿ - ಪರಮರಹಸ್ಯೇ- 'ಲಿಂಗಾಚಾರಸ್ಸದಾಚಾರಶ್ಶಿವಾಚಾರಸ್ತಥವಚ ಭೃತ್ಯಾಚಾರೋ ಗಣಾಚಾರಃ ಪಂಚಾಚಾರಃ ಪ್ರಕೀರ್ತಿತಃ || ಗುರೂಣಾ ದತ್ತಲಿಂಗಂಚ ನಾಸ್ತಿ ದೈವಂ ಮಹೀತಲೇ' ಇತಿ ಭಾವಾನುಸಂಧಾನೋ ಲಿಂಗಾಚಾರಸ್ಸಮುಚ್ಯತೇ || ಧರ್ಮಾರ್ಜಿತವಿತ್ತೇನ ತೃಪ್ತಿಶ್ಚ ಕ್ರಿಯತೇ ಸದಾ ಗುರುಜಂಗಮಲಿಂಗಾನಾಂ ಸದಾಚಾರಃ ಪ್ರಕೀರ್ತಿತಃ || ಅವಿಚಾರೇಷು ಭಕ್ತೇಷು ಜಾತಿಧರ್ಮಾದಿ ಸೂತಕಾನ್ ೀ ತದ್ಗøಹೇಷ್ವನ್ನಪಾನಾದಿ ಭೋಜನಂ ಕ್ರಿಯತೇ ಸದಾ || ತಚ್ಫಿವಾಚಾರಮಿತ್ಯಾಹುರ್ವೀರಶೈವಪರಾಯಣಾ ಶಿವಭಕ್ತಜನಾ ಸರ್ವೇ ವರಿಷ್ಠಾಃ ಪೃಥಿವೀತಲೇ || ತೇಷಾಂ ಭೃತ್ಯೋಹಮಿತ್ಯೇತದ್ಭೃತ್ಯಾಚಾರಸ್ಸ ಉಚ್ಯತೇ ೀ ಗುರುಲಿಂಗ ಜಂಗಮಶ್ಚೈವ ಪಾದತೀರ್ಥಃ ಪ್ರಸಾದತಃ ೀ ಇತಿ ಪಂಚಸ್ವರೂಪೋ[s]ಯಹಂ ಗಣಾಚಾರಃ ಪ್ರಕೀರ್ತಿತಃ ||ú ಎಂದುದಾಗಿ, ಇಂತಪ್ಪ ಶಿವಾಚಾರದ ಆಚಾರವನರಿಯದೆ ನಾ ಶಿವಭಕ್ತ ನಾ ಶಿವಭಕ್ತೆ ನಾ ಶಿವಾಚಾರಿ ಎಂದು ಕೊಂಬ ಶೀಲವಂತರ ನೋಡಿ ಎನ್ನ ಮನ ನಾಚಿ ನಿಮ್ಮಡಿಮುಖವಾಯಿತ್ತಯ್ಯ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಯ್ಯ.
--------------
ಅಕ್ಕಮಹಾದೇವಿ
ಆ ಅಖಂಡಮಹಾಜ್ಯೋತಿಪ್ರಣವದ ಅರ್ಧಚಂದ್ರಕಸ್ವರೂಪವಾಗಿಹ ಬ್ರಹ್ಮಾನಂದಬ್ರಹ್ಮದಲ್ಲಿ ಈಶ್ವರ, ವಾಯು, ಸ್ಪರ್ಶ, ಮನ, ತ್ವಕ್ಕು, ಪಾಣೇಂದ್ರಿಯವೆಂಬ ಈ ಆರು ತತ್ವಂಗಳು ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ನಿರಂಜನಾತೀತಾಗಮೇ : ``ಈಶ್ವರೋ ವಾಯು ಸಂಸ್ಪರ್ಶೇ ಮನಸ್ತತ್ವಾನಿ ಉಚ್ಯತೇ | ಷಟ್‍ಸಮ್ಮಿಶ್ರಿತಂ ಯಸ್ತು ಬ್ರಹ್ಮಾನಂದಶ್ಚ ಕಥ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆಚಾರಕರ್ಪರ, ವಿಚಾರಕರ್ಪರ, ಅವಿಚಾರಕರ್ಪರದ ನಿರ್ಣಯವಾವುದೆನಲು, ಅನ್ಯದೈವ ಭವಿಮಿಶ್ರ ಅನಾಚಾರ ಭಕ್ಷಾಭಕ್ಷ ಪೇಯಾಪೇಯ ಅನ್ಯಾಯ ಇಂತಿವರನುಸರಣಿಗೊಳ್ಳದೆ ವಿಚಾರಿಸಿ ಭಕ್ತರ ಗೃಹವ ಹೋಗುವುದೀಗ ಆಚಾರಕರ್ಪರ. ನಾನಾರೊ ? ಎಂದು ವಿಚಾರಿಸಿ ತನಗೆ ಮುಸುಕಿದ ಮಾಯಾಪಟಲದ ಭ್ರಮೆಯಂ ಪರಿದು ಶ್ರೀಗುರುವಿನ ಸದ್ಭಾವಜ್ಞಾನಮನಕರಣದಿಂ ಉದಯಿಸಿದವನಜಾತಸ್ವಯಂಭುವೆಂದರಿದು, ಆಶೆಯಾಮಿಷ ಕಾಯಗುಣ ಇಂದ್ರಿಯದುರವಣೆ ಮನೋವಿಕಾರಾದಿಗಳಿಗೆ ಸಿಲ್ಕದೆ, ಆ ಮನ ಮೊದಲಾದ ಕಾರಣಂಗಳ ತನ್ನರಿವಿನಾಜ್ಞೆಯಿಂ ಲಿಂಗದಲ್ಲಿ ನೆನಹು ನೆಲೆಗೊಳಿಸಿ, ನೋಟವನಿಮಿಷವೆನಿಸಿ, ಅನ್ಯನುಡಿ ಅನ್ಯನಡೆಯೆಲ್ಲಮಂ ಮುನ್ನವೆ ತ್ಯಜಿಸಿ, ಲಿಂಗದ ನಡೆ ನುಡಿ ಚೈತನ್ಯವಳವಟ್ಟು, ಪರಶಿವನ ಪರತತ್ವವೆ ಪರಮಕರ್ಪರ ವಿಷಯ, ಶಿಕ್ಷಾದಂಡವೆ ಕಟ್ಟಿಗೆ, ಪಂಚಭೂತಕಾಯವನುಳಿದ ಅಕಾಯವೆ ಕಂಥೆ, ಪರಮವೈರಾಗ್ಯವೆ ಯೋಗವಟ್ಟಿಗೆ, ನಿರಾಶಾಪಥವೆ ಯೋಗವಾವುಗೆ, ನಿಷ್ಕಾಮಿತವೆ ಒಡ್ಯಾಣ. ಬಿಂದುಚಲಿಸಿದ ಸಂಧಾನಗತಿ ನಿಂದು ಲಿಂಗಸಂಯೋಗದ ಸಮರತಿಯ ಮುಕ್ತ್ಯಂಗನೆಯೆನಿಸುವ ಚಿಚ್ಛಕ್ತಿಯ ಕೂಟದ ಊಧ್ರ್ವರೇತಸ್ಸಿನ ಪರಮವಿಶ್ರಾಂತಿಯೆ ಕೌಪೀನ, ಅಪ್ರಮಾಣ ಚಾರಿತ್ರ್ಯವೆ ಆಧಾರಘುಟಿಕೆ, ಲಿಂಗಗಂಭೀರದ ಮಹದೈಶ್ವರ್ಯವೆ ವಿಭೂತಿ, ನಿರುಪಾಧಿಕ ತೇಜೋಮಯವಾದ ಮಹಾಲಿಂಗದ ಪ್ರಕಾಶವೆ ಭಸ್ಮೋದ್ಧೂಳನಾಗಿ, ಆ ಭಸ್ಮೋದ್ಧೂಳನ ಪ್ರಕಾಶದಿಂ ಅಜ್ಞಾನತಮವಳಿದ ಸಜ್ಞಾನಕ್ಷೇತ್ರದಲ್ಲಿ ಸುಳಿವ ಸುಳುಹೆ ದೇಶಾಂತರವಾಗಿ ಚರಿಸುವುದೆಂತೆಂದಡೆ: ಜಂಗಮಸ್ಯ ಗೃಹಂ ನಾಸ್ತಿ ಸ ಗಚ್ಛೇತ್ ಭಕ್ತಮಂದಿರಂ ಯದಿ ಗಚ್ಛೇತ್ ಭವೇರ್ಗೇಹಂ ತದ್ಧಿಗೋಮಾಂಸಭಕ್ಷಣಂ ಎಂದುದಾಗಿ ಇಂತೀ ವಿಚಾರದಲ್ಲಿ ಸುಳಿವ ಸುಳುಹೆ ವಿಚಾರಕರ್ಪರ. ವೇದಾತೀತಾಗಮಾತೀತಃ ಶಾಸ್ತ್ರಾತೀತೋ ನಿರಾಶ್ರಯಃ ಆನಂದಾಮೃತಸಂತುಷ್ಟೋ ನಿರ್ಮಮೋ ಜಂಗಮಃ ಸ್ಮೃತಃ ಇಂತೆಂದುದಾಗಿ, ಕಾಯಗುಣವಳಿದು, ಪರಕಾಯಗುಣವುಳಿದು, ಇಂದ್ರಿಯಗುಣವಳಿದು, ಅತೀಂದ್ರಿಯತ್ವದಲ್ಲಿ ವಿಶ್ರಾಂತಿಯನೈದಿ, ರಣಗುಣವಳಿದು, ನಿರಾವರಣ ನಿರ್ಮಲ ನಿರ್ವಿಕಾರ ನಿಜಲಿಂಗದಲ್ಲಿ ನಿಶ್ಚಲಿತನಾಗಿ, ಜೀವನ ಗುಣವಳಿದು, ಪರಮಾತ್ಮಲಿಂಗದಲ್ಲಿ ಘನಚೈತನ್ಯ ತಲ್ಲೀಯವಾಗಿ, ತನಗಿದಿರಿಟ್ಟು ತೋರುವ ತೋರಿಕೆಯೆಲ್ಲವೂ ತಾನಲ್ಲದೇನು ಇಲ್ಲವೆಂದರಿದು, ಕಾಬವೆಲ್ಲವೂ ಶಿವರೂಪು, ಕೇಳುವವೆಲ್ಲವೂ ಶಿವಾನುಭಾವ, ನಡೆದುದೆಲ್ಲವೂ ಶಿವಮಾರ್ಗ, ನುಡಿದುದೆಲ್ಲವೂ ಶಿವತತ್ವ, ಕೊಡುವ ಕೊಂಬೆಡೆಯಲ್ಲಿ ಎಡೆದೆರಪಿಲ್ಲದೆ ಅಖಂಡಾದ್ವಯ ಪರಿಪೂರ್ಣಚಿದಾನಂದರೂಪ ತಾನೆಂದರಿದು, ನಿಂದ ನಿಲವೆ ಅವಿಚಾರಕರ್ಪರ. ಅದೆಂತೆಂದಡೆ: ಚರಾಚರವಿಹೀನಂ ಚ ಸೀಮಾಸೀಮಾವಿವರ್ಜಿತಂ ಸಾಕ್ಷಾನ್ ಮುಕ್ತಿಪದಂ ಪ್ರಾಹುರುತ್ತಮಂ ಜಂಗಮಸ್ಥಲಂ ಎಂದುದಾಗಿ, ಶಬ್ದ ಚಲನೆಯಿಲ್ಲದುದೆ ಲಿಂಗವೆಂದರಿದು, ಬಿಂದುಚಲನೆಯಿಲ್ಲದುದೆ ಜಂಗಮವೆಂದರಿದು, ಆ ಬಿಂದುವನೆ ಲಿಂಗಮುಖದಲ್ಲಿ ನಿಲಿಸಿ ಆ ನಾದವನೆ ಘನಚೈತನ್ಯಜಂಗಮಮುಖದಲ್ಲಿ ನಿಲಿಸಿ, ಆ ನಾದಬಿಂದುವನೊಂದು ಮಾಡಿ ನಿಂದ ನಿಲವೆ ಉಪಮಾತೀತವದೆಂತೆಂದಡೆ: ನಾದನಿಶ್ಚಲತೋ ಲಿಂಗಂ ಬಿಂದುನಿಶ್ಚಲತೋ ಚರಃ ನಾದಬಿಂದು ಸಮಾಯುಕ್ತ ಶ್ರೇಷ*ಂ ತಲ್ಲಿಂಗಜಂಗಮಂ ಎಂದುದಾಗಿ, ಮನಶ್ಚಂದಿರ ಇತ್ಯುಕ್ತಂ ಚಕ್ಷುರಾದಿತ್ಯ ಉಚ್ಯತೇ ಚಂದಿರಾದಿತ್ಯಸಂಯುಕ್ತಂ ಉತ್ತಮಂ ಜಂಗಮಸ್ಥಲಂ ಎಂದುದಾಗಿ, ಮನಸ್ಥಂ ಮನೋಮಧ್ಯಸ್ಥಂ ಮನೋಮಧ್ಯಸ್ಥ ವರ್ಜಿತಾಃ ಮನಸಾ ಮನ ಆಲೋಕ್ಯ ಸ್ವಯಂ ಸಿದ್ಧಾ ಸುಯೋಗಿನಃ ಇಂತೆಂದುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಮ್ಮ ಶರಣರಜಾತಜನಿತರು, ಅನುಪಮಚರಿತರು.
--------------
ಉರಿಲಿಂಗಪೆದ್ದಿ
ಇನ್ನು ಪ್ರಣವದ ಲಕ್ಷಣವದೆಂತೆಂದಡೆ : ಪ್ರಥಮ ತಾರಕ ಸ್ವರೂಪವಾಗಿಹುದು. ದ್ವಿತೀಯ ದಂಡಸ್ವರೂಪವಾಗಿಹುದು. ತೃತೀಯ ಕುಂಡಲಾಕಾರವಾಗಿಹುದು. ಚತುರ್ಥ ಅರ್ಧಚಂದ್ರಕಾಕಾರವಾಗಿಹುದು. ಪಂಚಮ ದರ್ಪಣಾಕಾರವಾಗಿಹುದು. ಷಷ* ಜ್ಯೋತಿಸ್ವರೂಪವಾಗಿಹುದು ನೋಡಾ. ಇದಕ್ಕೆ ಈಶ್ವರೋýವಾಚ : ``ಪ್ರಥಮಂ ತಾರಕಾರೂಪಂ ದ್ವಿತೀಯಂ ದಂಡ ಉಚ್ಯತೇ | ತೃತೀಯಂ ಕುಂಡಲಾಕಾರಂ ಚತುರ್ಥಂ ಚಾರ್ಧಚಂದ್ರಕಂ || ಪಂಚಮಂ ದರ್ಪಣಾಕಾರಂ ಷಷ*ಂ ಜ್ಯೋತಿಸ್ವರೂಪಕಂ | ಇತಿ ಪ್ರಣವಂ ವಿಜ್ಞೇಯಂ ಯದ್ಗೋಪ್ಯಂ ವರಾರನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎನಿಸನೋದಿದಡೇನು ! ಎನಿಸ ಕೇಳಿದಡೇನು ! ಚತುರ್ವೇದಪಠ ತೀವ್ರವಾದಡೇನು ಲಿಂಗಾರ್ಚನೆ ಹೀನವಾದಡೆ, ಶಿವಶಿವಾ ! ಬ್ರಾಹ್ಮಣನೆಂಬೆನೆ ಎನಲಾಗದು. ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ ಶ್ರುತೇನ ಶ್ರೋತ್ರಿಯಶ್ಚೈವ ಬ್ರಹ್ಮ ಚರತಿ ಬ್ರಾಹ್ಮಣಾ ಎಂದುದಾಗಿ ಬ್ರಹ್ಮನಾಸ್ತಿ ಶ್ವಪಚರಧಮರೆಂದುದಾಗಿ, ಇದು ಕಾರಣ ಕೂಡಲಸಂಗಮದೇವಾ `ವೇದಭಾರಭರಾಕ್ರಾಂತಾ ಬ್ರಾಹ್ಮಣಾಃ ಗರ್ದಭಾಃ ಎಂಬೆನು.
--------------
ಬಸವಣ್ಣ
ಇನ್ನು ಆ ಅಖಂಡಮಹಾಜ್ಯೋತಿಪ್ರಣವದ ತಾರಕಸ್ವರೂಪವೇ ಮೂರ್ತಿಬ್ರಹ್ಮವು. ಆ ಅಖಂಡಮಹಾಜ್ಯೋತಿಪ್ರಣವದ ದಂಡಸ್ವರೂಪವೆ ಪಿಂಡಬ್ರಹ್ಮವು. ಆ ಅಖಂಡಮಹಾಜ್ಯೋತಿಪ್ರಣವದ ಕುಂಡಲಾಕಾರವೆ ಕಲಾಬ್ರಹ್ಮವು. ಆ ಅಖಂಡಮಹಾಜ್ಯೋತಿಪ್ರಣವದ ಅರ್ಧಚಂದ್ರಾಕಾರವೆ ಬ್ರಹ್ಮಾನಂದ ಬ್ರಹ್ಮವು. ಆ ಅಖಂಡಮಹಾಜ್ಯೋತಿಪ್ರಣವದ ದರ್ಪಣಾಕಾರವೆ ವಿಜ್ಞಾನಬ್ರಹ್ಮವು. ಆ ಅಖಂಡಮಹಾಜ್ಯೋತಿಪ್ರಣವದ ಜ್ಯೋತಿಸ್ವರೂಪವೆ ಪರಬ್ರಹ್ಮವು. ಈ ಆರು ಷಟ್ಸ್ಥಲಬ್ರಹ್ಮ ನೋಡಾ. ಇದಕ್ಕೆ ನಿರಂಜನಾತೀತಾಗಮೇ : ``ಓಂಕಾರ ತಾರಕಂ ರೂಪಂ ಮೂರ್ತಿಬ್ರಹ್ಮ ಯಥಾ ಭವೇತ್ | ಓಂಕಾರ ದಂಡರೂಪೇ ಚ ಪಿಂಡಬ್ರಹ್ಮೇತಿ ಕಥ್ಯತೇ || ಓಂಕಾರ ಕುಂಡಲಾಕಾರಂ ಕಲಾಬ್ರಹ್ಮೇತಿ ಕೀರ್ತಿತಂ | ಓಂಕಾರಂ ಅರ್ಧಚಂದ್ರಂ ಚ ಬ್ರಹ್ಮಾನಂದಂ ತಥಾ ಭವೇತ್ || ಓಂಕಾರಂ ದರ್ಪಣಾಕಾರಂ ವಿಜ್ಞಾನಬ್ರಹ್ಮ ಉಚ್ಯತೇ | ಓಂಕಾರಂ ಜ್ಯೋತಿರೂಪಂ ಚ ಪರಬ್ರಹ್ಮ ಯಥಾ ಭವೇತ್ || ಪ್ರಣವಂ ಷಡ್ವಿಧಂ ಚೈವ ಷಟ್ಸ್ಥಲಬ್ರಹ್ಮ ಉಚ್ಯತೇ | ಇತಿ ಷಟ್‍ಬ್ರಹ್ಮ ವಿಜ್ಞೇಯಂ ಏತದ್ಗೋಪ್ಯಂ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇದಕ್ಕೆ ಪ್ರಣವೋಪನಿಷತ್ತು : ಅಕಾರವೆಂಬ ಪ್ರಣವದಲ್ಲಿ- ``ದಂಡಶ್ಚ ತಾರಕಾಕಾರೋಭವತಿ ಓಂ ನಿರಾಳಾತ್ಮ ದೇವತಾ | ಅಕಾರೇ ಚ ಲಯಂ ಪ್ರಾಪ್ತೇ ದಶಮಂ ಪ್ರಣವಾಂಶಕೇ ||'' ಉಕಾರವೆಂಬ ಪ್ರಣವದಲ್ಲಿ- ``ಕುಂಡಲಶ್ಚ ಅರ್ಧಚಂದ್ರೋಭವತಿ ಓಂ ನಿರಂಜನಾತ್ಮಾ ದೇವತಾ ಉಕಾರೇ ಚ ಲಯಂ ಪ್ರಾಪ್ತೇ ಏಕಮೇವ ಪ್ರಣವಾಂಶಕೇ ||'' ಮಕಾರವೆಂಬ ಪ್ರಣವದಲ್ಲಿ- ``ದರ್ಪಣಶ್ಚ ಜ್ಯೋತಿರೂಪೋ ಭವತಿ ಓಂ ನಿರಾಮಯಾತ್ಮಾ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ದ್ವಾದಶಂ ಪ್ರಣವಾಂಶಕೇ ||'' ``ಅಕಾರೇ ಚ ಉಕಾರೇ ಚ ಮಕಾರೇ ಚ ನಿರಂಜನಂ | ಇದಮೇಕಂ ಸಮುತ್ಪನ್ನಂ ಓಂ ಇತಿ ಜ್ಯೋತಿರೂಪಕಂ || ಪ್ರಥಮಂ ಕಾರಕಾರೂಪಂ ದ್ವಿತೀಯೋ ದಂಡ ಉಚ್ಯತೇ | ತೃತೀಯಃ ಕುಂಡಲಾಕಾರಃ ಚತುರ್ಥಶ್ಚಾರ್ಧಚಂದ್ರಕಂ || ಪಂಚಮಂ ದರ್ಪಣಾಕಾರಂ ಷಷೊ*ೀ ಜ್ಯೋತಿಸ್ವರೂಪಕಂ | ಇತಿ ಪ್ರಣವಃ ವಿಜ್ಞಾತಃ ಏತದ್ಗೋಪಂ ವರಾನನೇ || ಓಂಕಾರಪ್ರಭವೋ ರುದ್ರಃ ಓಂಕಾರ ಪ್ರಭುವೋ ಜಪಃ | ಓಂಕಾರಪ್ರಭವೋ ಬ್ರಹ್ಮಾ ಓಂಕಾರ ಪ್ರಭವೋ ಹರಿಃ || ಓಂಕಾರಪ್ರಭವಶ್ಚಂದ್ರಃ ಓಂಕಾರ ಪ್ರಭುವೋ ರವಿಃ | ಓಂಕಾರಪ್ರಭವೋ ವೇದಃ ಓಂಕಾರ ಪ್ರಭವಃ ಸ್ವರಃ || ಓಂಕಾರಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಂ | ಸರ್ವವ್ಯಾಪಕಮೋಂಕಾರಂ ಮಂತ್ರಾಣ್ಯನ್ಯತ್ರನಸೋ ಭವೇತ್ || ಪ್ರಣವೋಹಿಃ ಪರಬ್ರಹ್ಮ ಪ್ರಣವಃ ಪರಮಂ ಪದಂ | ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ | ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ | ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆದಿಶೂನ್ಯಂ ಮಧ್ಯಶೂನ್ಯಂ ಅಂತ್ಯಶೂನ್ಯಂ ನಿರಾಮಯಂ ಸರ್ವಶೂನ್ಯಂ ನಿರಾಕಾರಂ ನಿಶ್ಶಬ್ದಂ ಬ್ರಹ್ಮ ಉಚ್ಯತೇ ಆ ನಿರವಯಸ್ಥಲವು, ಉರಿಯುಂಡ ಕರ್ಪುರದಂತಿದ್ದಿತ್ತು; ಇಂತಿದು ನಿರವಯಸ್ಥಲವಯ್ಯಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಭಕ್ತಿಭಾಂಡದ ಶಿವಭಕ್ತರ ನಿಷೇಧವ ಮಾಡುವ ಕರ್ಮಭಾಂಡದ ದ್ವಿಜರು ನೀವು ಕೇಳಿಭೋ : `ಸತ್ಯಂ ಭೋ ಬ್ರೂತ ಪಂಚಪ್ರಾಣ ಇಂದ್ರಿಯನಿಗ್ರಹಮೆಂದೋದಿ ಗುದ್ದಿ ಗುದ್ದಿ ಹೋತನ ತಿಂಬುದಾವಾಚಾರವೊ ? `ಪಿತಾಮಹಶ್ಚ ವೈಶ್ಯಸ್ತು ಕ್ಷತ್ರಿಯೋ ಪರಯೋ ಹರಿಃ ಬ್ರಾಹ್ಮಣೋ ಭಗವಾನ್ ರುದ್ರಃ ಸರ್ವೇಷ್ವ್ಯುತ್ತಮೋತ್ತಮಃ ಎಂಬ ಶ್ರುತಿಯ ನೋಡಿ, ತಮ್ಮ ಕುಲದೈವವಹ ಬ್ರಾಹ್ಮಣನಹ ರುದ್ರನ ನಿಂದಿಸಿ, ತಮಗಿಂದ ಕೀಳುಜಾತಿಯಹ ಕ್ಷತ್ರಿಯ ಹರಿಯ ಆರಾಧಿಸುವ ಕುಲಹೀನರು ನೀವು ಕೇಳಿಭೋ : `ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ `ವೇದಾಭ್ಯಾಸೇನ ವಿಪ್ರಸ್ತು ಬ್ರಹ್ಮಣಾ ಚರಂತೀತಿ ಬ್ರಾಹ್ಮಣಃ ಎಂಬ ಶ್ರುತಿಯನೋದಿ, ಪರಬ್ರಹ್ಮನಂತಹ ಶಿವಲಿಂಗಪೂಜೆಯನಾಚರಿಸಿ ಬ್ರಾಹ್ಮಣತ್ವವನೈ[ದದೆ] ಶತಯಾಗಂಗಳ ಮಾಡಿ ಶೂದ್ರನಹ ಇಂದ್ರತ್ವವ ಬಯಸುವ ಅಧಮರು ನಿವು ಕೇಳಿಭೋ : `ಜನ್ಮನಾ ಜಾಯತೇ ಶೂದ್ರಃ ಮಾತಾ ಸಾ ಪ್ರಥಮಂ ಶೂದ್ರಾಣಿ ನಚೋಪದೇಶಃ ಗಾಯತ್ರೀ ನ ಚ ಮೌಂಜೀ ನ ಚ ಕ್ರಿಯಾ ಎಂದುದಾಗಿ, ದೀಕ್ಷೆಯಿಲ್ಲದೆ ಸತಿಶೂದ್ರಗಿತ್ತಿಗೆ ಹುಟ್ಟಿದವನೊಡನುಂಬ ಅನಾಚಾರಿಗೆ ಎಲ್ಲಿಯದೊ ಬ್ರಾಹ್ಮಣತ್ವ ? ಆವ ಜಾತಿಯವನಾದರೇನು ಶಿವಭಕ್ತನೆ ಬ್ರಾಹ್ಮಣ. ಅದಕ್ಕೆ ಸಾಕ್ಷಿ : . `ತಪಸಾ ಬ್ರಾಹ್ಮಣೋ[s]ಭವತ್ ಸಾಂಖ್ಯಾಯನ ಮಹಾಮುನಿಃ ತಪಸಾ ಬ್ರಾಹ್ಮಣೋ[s]ಭವತ್ ಗೌತಮಸ್ತು ಮಹಾಮುನಿಃ ಜಾತಿಂ ನ ಕಾರಯೇತ್ತೇಷು ಶ್ರೇಷಾ*ಃ ಸಮಭವಂಸ್ತತಃ ತಜ್ಜಾತಿರಭವತ್ತೇನ' ಎಂದುದಾಗಿ, ತಮ್ಮ ತಮ್ಮ ಗೋತ್ರಂಗಳೆ ಸಾಕ್ಷಿಯಾಗಿ ಸಾರುತ್ತಿರಲು ಕುಭ್ರಮೆಯಾತಕ್ಕೆ ? ಶ್ವಪಚೋ[s]ಪಿ ಮುನಿಶ್ರೇಷ*ಃ ಶಿವಭಕ್ತಿಸಮನ್ವಿತಃ ಶಿವಭಕ್ತಿವಿಹೀನಸ್ತು ಶ್ವಪಚೋ[s]ಪಿ ದ್ವಿಜಾಧಮಃ ಎಂದುದಾಗಿ ಶಿವಭಕ್ತನೆ ಕುಲಜ, ಶಿವಭಕ್ತಿ ಇಲ್ಲದವನೆ ಶ್ವಪಚನೆಂದರಿಯದ ಅಜ್ಞಾನಿಗಳು ನೀವು ಕೇಳಿಭೋ ! `ಏಕ ಏವ ರುದ್ರೋ ನ ದ್ವಿತೀಯಾಯತಸ್ಥೇ' ಎಂದು ವೇದವನೋದಿ `ಪಶುಪತಯೇ ನಮಃ' ಎಂದಾ ರುದ್ರವನೋದಿ ಶಿವನೆ ಪತಿ ಮಿಕ್ಕಿನ ದೈವಂಗಳೆಲ್ಲ ಪಶುಗಳೆಂಬುದ ತಿಳಿದು ಮತ್ತೆಯೂ ಈ ದ್ವಿಜರು ಕಾಣಲರಿಯರು. ಹರಹರನೊಂದೆಯೆಂಬ ನರಗುರಿಗಳು ನೀವು ಕೇಳಿಭೋ ! ಪಾರಾಶ[ರ] ಪುರಾಣೇ : ಆದೌ ರುದ್ರಾಂಗಮುತ್ಪತ್ತಿಃ ಮುಖೇ ಬ್ರಾಹ್ಮಣವೀಶ್ವರಃ ವಿಷ್ಣುಂ ಕ್ಷತ್ರಿಯಮಿತ್ಯಾಹುರ್ಬಾಹುನಾ ಚ ಅವಸ್ಥಿತಃ ವೈಶ್ಯಶ್ಚ ಬ್ರಹ್ಮಾ ಇತ್ಯಾಹುಃ ಲಿಂಗಾದೇವ ಅವಸ್ಥಿತಃ ಸುರಪೋ ಶೂದ್ರಯಿತ್ಯಾಹುಃ ದೇವಪಾದಾದವಿಸ್ಥಿತಃ ಎಂದುದಾಗಿ, ರುದ್ರನ ಮುಖದಲ್ಲಿ ಹುಟ್ಟಿದವನೆ ಬ್ರಾಹ್ಮಣ, ಮಿಕ್ಕಾದ ವಿಪ್ರರೆಲ್ಲರು ಋಷಿಗೋತ್ರದಲ್ಲಿ ಹುಟ್ಟಿದರು. ಆ ಋಷಿಮೂಲದ ವಿಪ್ರರೆಲ್ಲರು ಅಧಮಜಾತಿ ಅಧಮಜಾತಿಯಾದರೇನು ? ರುದ್ರಭಕ್ತರಾದ ಕಾರಣ ಬ್ರಾಹ್ಮಣರಾದರು. ಈ ವರ್ಮವನರಿಯದ ಚಾಂಡಾಲ ವಿಪ್ರರ್ಗೇನೂ ಸಂಬಂಧವಿಲ್ಲ. ಕಾಕ ರುದ್ರನ ಮುಖದಲ್ಲಿ ಉದ್ಭವವೆಂಬುದಕ್ಕೆ ಶ್ವಾನಸೂಕರರೂಪೇ ಪ್ರೇತಪಿಂಡ ಪ್ರದಾನತಃ ಪ್ರೇತತ್ವಂ ಚ ಸದಾ ಸ್ಯಾತ್ ತಥಾ ಧರ್ಮೇಣ ಲುಪ್ಯತೇ ಎಂದುದಾಗಿ ಆಗಮಾರ್ಥವನರಿಯದೆ, ಪ್ರೇತಪಿಂಡವನಿಕ್ಕುವ ಪಾತಕರು, [ಪ್ರಾಣಾಯಸ್ವಾಹಾ]ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ' ಎಂದು ಭೂತಬಲಿಯ ಬೆಕ್ಕು ನಾಯಿಗೆ ಹಾಕಿ ಮಿಕ್ಕ ಭೂತಶೇಷವ ಕೊಂಬ ಅಕುಲಜರು, ನೀವು ಕೇಳಿಭೋ ! `ವಸುರೂಪೋ ಮಧ್ಯಪಿಂಡಃ ಪುತ್ರ¥õ್ಞತ್ರಪ್ರವರ್ಧನಃ' ಎಂದು, ರುದ್ರಪ್ರಸಾದವನೆ ಕೊಂಡು ರುದ್ರಪಿಂಡದಿಂದ ಹುಟ್ಟಿ, ದೀಕ್ಷಾಕಾಲದಲ್ಲಿ ಭಸಿತವ ಧರಿಸಿ, ಬ್ರಹ್ಮಕಪಾಲಪಾತ್ರೆಯಂ ಪಿಡಿದು, ಪಲಾಶಕಂಕಾಳದಂಡಮಂ ಪಿಡಿದು, `ಭವತೀ ಭಿಕ್ಷಾಂ ದೇಹಿ'ಯೆಂದು ಭಿಕ್ಷಮಂ ಬೇಡಿ ಪಿತೃಕಾರ್ಯದಲ್ಲಿ `ವಿಶ್ವೇ ದೇವಾಂಸ್ತರ್ಪಯಾಮಿ'ಯೆಂದರ್ಚಿಸಿ, ಮರಣಕಾಲದಲ್ಲಿ ರುದ್ರಭೂಮಿಯಲ್ಲಿ ರುದ್ರಾಗ್ನಿಯಿಂದ ದಹನ ರುದ್ರವಾಹನದ ಬಾಲವಿಡಿದು ಸ್ವರ್ಗವನೆಯ್ದಿದರು, ರುದ್ರಭಕ್ತಿವಿರುದ್ಧ ವಿಚಾರಹೀನರು. `ತ್ರ್ಯಾಯುಕ್ಷಂ ಜಮದಗ್ನೇಃ ಕಶ್ಯಪಸ್ಯ ತ್ರಿಯಾಯುಷಂ, ಅಗಸ್ತ್ಯಸ್ಯ ತ್ರಿಯಾಯುಷಂನತನ್ಮೇಡಿಸ್ತುಫತ್ರಿಯಾ ಶತಸಯುಷಂ ಎಂದು ಸಕಲಋಷಿಗಳು ಶ್ರೀ ವಿಭೂತಿಯನು ಧರಿಸಿ, ಬಹಳಾಯುಷ್ಯಮಂ ಪಡೆದರೆಂದು ಮತ್ತೆಯು ಯಜುಸ್ಸಿನಲ್ಲಿ ದೀಕ್ಷೆಯನೈದಲ್ಲಿ, `ಭೂತಿವಾಂಶ್ಚ ಪ್ರಿಯಂ ಹೋತವ್ಯಂ'ಯೆಂದು, ಶ್ರೀವಿಭೂತಿಯನೆ ಧರಿಸಹೇಳಿತ್ತು ವೇದವು. `ಗೋಪೀ ಮಲಿನಧಾರೀ ತು ಶಿವಂ ಸ್ಪೃಶತಿ ಯೋ ದ್ವಿಜಃ ತದೈಕವಿಂಶತಿಕುಲಂ ಸಾಕ್ಷಾತ್ತು ನರಕಂ ವ್ರಜೇತ್ ' ಎಂದು, ಗೋಪಿ ಮಲಿನ ಚಂದನವನಿಟ್ಟು, ಪಾತಕರು[ವ] ಶಿವಲಿಂಗ ಮುಟ್ಟಿದರೆ ತಮ್ಮಿಪ್ಪತ್ತೊಂದು ಕುಲಸಹಿತ ಕೇಡಿಲ್ಲದ ನರಕದಲ್ಲಿ ಬೀಳುವರೆಂದರಿಯದೆ ಮುಟ್ಟಿಯನಿಟ್ಟ ಭ್ರಷ್ಟರು, ಮತ್ಸ್ಯ ಕೂರ್ಮ ವರಾಹ ನಾರಸಿಂಹ ಈ ನಾಲ್ಕೂ ಅವತಾರದಲ್ಲಿ ನೀರಿಂದ ಬಲಿ ಧಾರೆಯನೆರೆದನೆಂಬುದನರಿದು, ವಿಷ್ಣುವಿನ ಪಾದದಲ್ಲಿ ಗಂಗೆ ಹುಟ್ಟಿತೆಂಬ ವಿಚಾರಹೀನರು `ವಿಯದ್ವಿಷ್ಣುಪದಂ ಪ್ರೋಕ್ತಂ ಪುಂಸ್ಯಾಕಾಶವಿಹಾಯಸೀ ವಿಹಾಯಸೋ[s]ಪಿನಾಕೋ[s]ಪಿ ದ್ಯುರಪಿ ಸ್ಯಾತ್ತಿದವ್ಯಯಂ' ಎಂದು ನಿಘಂಟಿನಲ್ಲಿ ಆಕಾಶದ ಹೆಸರು ವಿಷ್ಣುಪದಿ, ಆಕಾಶಗಂಗೆ ಮುನ್ನಲುಂಟೆಂಬುದನರಿತು, ವಿಷ್ಣುವಿನ ಕಾಲಲ್ಲಿ ಗಂಗೆ ಹುಟ್ಟಿತೆಂಬ ದುಷ್ಟರು, ವೇದಕ್ಕೆ ನೆಲೆಗಟ್ಟು ಓಂಕಾರ, ಬ್ರಾಹ್ಮಣಕ್ಕೆ ನೆಲೆಗಟ್ಟು ಗಾಯತ್ರಿಯಲ್ಲಿ ಶಿವನೆ ದೈವವೆಂದಿತ್ತು. `ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ಹರ ಹರಿಭಕ್ತನೆಂದನಿಸುವ ವಿಚಾರಹೀನರು ನೀವು ಕೇಳಿಭೋ ! ಹರಿ ಶಿವನ ಭಕ್ತನೆಂಬುವದಕ್ಕೆ ಸಾವಿರಕಮಲ ಕೊರತೆಗೆ ತನ್ನ ನಯನ ಕಮಲಮಂ ಕಳೆದು ಶಿವನಂಘ್ರಿಗರ್ಪಿಸಿ, ಚಕ್ರಮಂ ಪಡೆದನೆಂದು ಮಹಿಮದಲ್ಲಿ ಹರಿಸ್ತೇ ಸಾಹಸ್ರಂ ಕಮಲಬಲಿಯಾಧಾಯ ಪದಯೋಃ' ಎಂದೋದಿ ಮರೆದ ಮತಿಭ್ರಷ್ಟರು ನೀವು ಕೇಳಿಭೋ ! ಹರನೆ ಕರ್ತ, ಹರಿಯೆ ಭೃತ್ಯನೆಂಬುದಕ್ಕೆ ರಾಮಪ್ರತಿಷೆ* ಶಿವಲಿಂಗ[ದ] ಮೂರ್ತಿಗಳಿಂ ಕಾಣಿರೆ, ಕಂಡು ತಿಳಿಯಲರಿಯದ ಹುಲಮನುಜರು ಶ್ರೀರಾಮನ ಗುರು ವಶಿಷ* ಹಂಪೆಯಲ್ಲಿ ವಿರೂಪಾಕ್ಷಲಿಂಗನ ಭಕ್ತನೆಂದರಿದು, ಕೃಷ್ಣಾವಿಷ್ಣುವಿನ ಗುರು ಉಪಮನ್ಯು ಅಹಿಪುರದಲ್ಲಿ ಸೋಮೇಶ್ವರಲಿಂಗನ ಭೃತ್ಯನೆಂಬುದನರಿದು, ಇಂತು ಭೃತ್ಯನ ಶಿಷ್ಯಂಗೆ ಕರ್ತನ ಸರಿಯೆಂಬ ಕರ್ಮಚಂಡಾಲರು ನೀವು ಕೇಳಿಭೋ ! `ಅಸಂಖ್ಯಕೋಟಿಬ್ರಹ್ಮಾಣಾಂ ಕೋಟಿವಿಷ್ಣುಗಣಂ ತತಃ ಗಂಗಾವಾಲುಕ ಸಮೌ ಹೇvõ್ಞ ಕಿಂಚಿದಜ್ಞಾಃ ನ ಮಹೇಶ್ವರಾತ್ ಎಂದು ರುದ್ರನ ಎವೆಯಾಡುವನಿತಕ್ಕೆ ಲೆಕ್ಕವಿಲ್ಲದ ಕೋಟಿ ಬ್ರಹ್ಮವಿಷ್ಣುರು ಸತ್ತುಹೋದರೆಂದು ಓದಿ ತಿಳಿದು ಇಂಥ ಹುಲುದೈವಂಗಳ `ಮೃತ್ಯುಂಜಯಃ ನಿತ್ಯಃ ಏಕೋ ದೇವಃ ನ ದ್ವಿತೀಯಃ' ಎಂದೆನಿಸುವ ಶಿವಗೆ ಸರಿಯಂದೆನಿಸುವ ಭವಿವಿಪ್ರರಿಗೆ ತಾವು ಓದುವ, ವೇದಾಗಮಂಗಳು ತಮಗೆ ಹಗೆಯಾಗಿ ನಡೆಯೊಂದು ಪರಿ ನುಡಿಯೊಂದು ಪರಿ ಆಗಿಹುದು. ಅದೆಂತೆಂದರೆ:ಗೌತಮ ದಧೀಚಿ ಭೃಗುವಾದಿಯಾಗಿ ಹಿರಿಯರುಗಳೇ ಶಾಪದಿಂದ ಶಾಪಹತರಾಗಿ ಶಿವದ್ರೋಹಿಗಳಾಗಿ ನರಕಕ್ಕಿಳಿವ ಚಾಂಡಾಲರಿಂದ ವಿಪ್ರರ ಸತ್ಪಾತ್ರರೆಂದಾರಾಧಿಸುವರ ನರಕದ ಕುಳಿಯೊಳು ಮೆಟ್ಟಿ ನರಕಾಗ್ನಿಯಿಂದ ಸುಡುತಿರ್ಪ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಆ ಅಖಂಡಮಹಾಜ್ಯೋತಿಪ್ರಣವದ ದರ್ಪಣಾಕಾರವಾಗಿಹ ವಿಜ್ಞಾನಬ್ರಹ್ಮದಲ್ಲಿ ಸದಾಶಿವ, ಮಹಾಕಾಶ, ಶಬ್ದ, ಜ್ಞಾನ, ಶ್ರೋತ್ರ, ವಾಕು ಈ ಆರು ತತ್ವಂಗಳು ಹುಟ್ಟಿತ್ತು ನೋಡಾ. ಇದಕ್ಕೆ ನಿರಂಜನಾಗಮೇ : ``ಸದಾಶಿವಂ ಮಹಾಕಾಶಂ ಶಬ್ದಜ್ಞಾನಂ ಚ ಶ್ರೋತ್ರಕಂ | ವಾಕ್ತಥಾ ಷಡ್ವಿಧಂ ಪ್ರೋಕ್ತಂ ವಿಜ್ಞಾನಂ ಬ್ರಹ್ಮ ಉಚ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಲ್ಲೆನ್ನ ಅಹುದೆನ್ನ, ಎಲ್ಲವು ತನ್ನಿಂದಾಯಿತ್ತಾಗಿ. ಬೇಕೆನ್ನ ಬೇಡೆನ್ನ, ನಿತ್ಯತೃಪ್ತ ತಾನೆಯಾಗಿ. ಆಕಾರ ನಿರಾಕಾರವೆನ್ನ, ಉಭಯವನೊಳಕೊಂಡ ಗಂಭೀರ ತಾನೆಯಾಗಿ. 'ನಿಶ್ಯಬ್ದಂ ಬ್ರಹ್ಮ ಉಚ್ಯತೇ ' ಎಂಬ ಶ್ರುತಿಯ ಮತದಿಂದ ನುಡಿಗೆಟ್ಟವನಲ್ಲ. ಬೆಳಗು ಬೆಳಗನೆಯ್ದಿ ಮಹಾಬೆಳಗಾದ ಬಳಿಕ, ಹೇಳಲಿಲ್ಲದ ಶಬ್ದ ಕೇಳಲಿಲ್ಲದ ಕೇಳುವೆ. ರೂಹಿಲ್ಲದ ಕೂಟ, ಕೂಟವಿಲ್ಲದ ಸುಖ. ಸುಖವಿಲ್ಲದ ಪರಿಣಾಮ, ಪರಿಣಾಮವಿಲ್ಲದ ಪರವಶ. ಪರವಶ ಪರಮಾನಂದವೆಂಬುದಕ್ಕೆ ಎರವಿಲ್ಲವಾಗಿ ಆತ ಲಿಂಗೈಕ್ಯನು. ಇಂತಪ್ಪ ಲಿಂಗೈಕ್ಯನೊಳಗೆ ಏಕವಾಗಿ ಬದುಕಿದೆನು ಕಾಣಾ, ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯ.
--------------
ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ
ಇನ್ನು ಆ ಅಕಾರ ಉಕಾರ ಮಕಾರ ಇವು ಮೂರು ಬೀಜಾಕ್ಷರ. ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ. ಅಕಾರವೇ ರುದ್ರ, ಉಕಾರವೇ ಈಶ್ವರ, ಮಕಾರವೇ ಸದಾಶಿವ. ಅಕಾರವೆಂಬ ಪ್ರಣವದಲ್ಲಿ ನಕಾರ ಮಕಾರ ಉತ್ಪತ್ಯ ಲಯ. ಉಕಾರವೆಂಬ ಪ್ರಣವದಲ್ಲಿ ಶಿಕಾರ ವಕಾರ ಉತ್ಪತ್ಯ ಲಯ. ಮಕಾರವೆಂಬ ಪ್ರಣವದಲ್ಲಿ ಯಕಾರ ಆತ್ಮನುತ್ಪತ್ಯ ಲಯ. ಅಕಾರ ಮಕಾರ ಉಕಾರ ಸಂಯುಕ್ತವಾಗಿ ಓಂಕಾರ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಓಂಕಾರೋಪನಿಷತ್ : ಅಕಾರವೆಂಬ ಪ್ರಣವದಲ್ಲಿ- ``ನಕಾರಶ್ಚ ಮಕಾರೋ ಭವತಿ | ಓಂ ರುದ್ರೋ ದೇವತಾ | ಅಕಾರೇ ಚ ಲಯಂ ಪ್ರಾಪ್ತೇ ದ್ವಿತೀಯೇ ಪ್ರಣವಾಂಶಿಕೇ ||'' ಉಕಾರವೆಂಬ ಪ್ರಣವದಲ್ಲಿ- ``ಶಿಕಾರಶ್ಚ ನಕಾರೋ ಭವತಿ | ಓಂ ಈಶ್ವರೋ ದೇವತಾ | ಉಕಾರೇ ಚ ಲಯಂ ಪ್ರಾಪ್ತೇ ತೃತೀಯಂ ಪ್ರಣವಾಂಶಿಕೇ ||'' ಮಕಾರವೆಂಬ ಪ್ರಣವದಲ್ಲಿ- ``ಯಕಾರಶ್ಚಾತ್ಮಾ ಭವತಿ | ಓಂ ಸದಾಶಿವೋ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ಚತುರ್ಥಂ ಪ್ರಣವಾಂಶಿಕೇ ||'' ``ಅಕಾರೇ ಚ ಉಕಾರೇ ಚ ಮಕಾರೇ ಚ ತ್ರಯಕ್ಷರಂ | ಅಕಾರಂ ನಾದರೂಪೇಣಂ ಉಕಾರಂ ಬಿಂದುರುಚ್ಯತೇ | ಮಕಾರಂತಿ ಕಲಾಶ್ಚೈವ ನಾದಬಿಂದುಕಲಾತ್ಮನೇ | ನಾದಬಿಂದುಕಲಾಯುಕ್ತೋ ಓಂಕಾರೋ ಪರಮೇಶ್ವರಃ || ವಕಾರಂ ತಾರಕಾರೂಪಂ ಮಕಾರಂ ದಂಡ ಉಚ್ಯತೇ | ಶಿಕಾರಂ ಕುಂಡಲಾಕಾರಂ ವಕಾರಶ್ಚಾರ್ಧಚಂದ್ರಕಂ | ಯಕಾರಂ ದರ್ಪಣಾಕಾರಂ ಓಂಕಾರೋ ಜ್ಯೋತಿರೂಪಕಂ | ಇತಿ ಪ್ರಣವಂ ವಿಜ್ಞೇಯಂ ಏತದ್ಗೋಪ್ಯಂ ವರಾನನೇ || ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕ್ಷೇತ್ರ ವಿಶೇಷವೊ, ಬೀಜವಿಶೇಷವೊ ? ಬಲ್ಲವರು ನೀವು ಹೇಳಿರೆ ! ಬೀಜವಿಶೇಷವೆಂದಡೆ ಕುಲದಲಧಿಕ ಸದ್ಬ್ರಾಹ್ಮಣನ ಸತಿ ಜಾರೆಯಾಗಿ, ಶ್ವಪಚನ ರಮಿಸಲು. ಆ ಬೀಜ ಗರ್ಭವಾಗಿ ಜನಿಸಿದ ಸುತಂಗೆ ಬ್ರಾಹ್ಮಣ ಕರ್ಮದಿಂದ ಉಪನಯನ, ಬ್ರಹ್ಮಚರ್ಯ, ವೇದಾಧ್ಯಯನ, ಅಗ್ನಿ ಹೋತ್ರ, ಯಜ್ಞಯಜನಕ್ಕೆ ಯೋಗ್ಯವಾಗನೆ ಆ ಸುತನು ? ಕುಲದಲಧಿಕ ಬ್ರಾಹ್ಮಣನು ಚಂಡಾಲ ಸತಿಯ ರಮಿಸಲು, ಜನಿಸಿದ ಸುತಂಗೆ ವಿಪ್ರಕರ್ಮ ಸಲ್ಲದೆ ಹೋಗದೆ ? ಇದು ದೃಷ್ಟ. ಇದನತಿಗಳೆದ ವೇದಾದಿ ವಿದ್ಯಂಗಳ ಬಲ್ಲ ಲೌಕಿಕ ವಿದ್ವಾಂಸರು ತಿಳಿದುನೋಡಿ ಹೇಳಿರೆ ! ಶ್ರುತಿ: ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ | ವೇದಾಧ್ಯಾಯೀ ಭವೇದ್ವಿಪ್ರಃ ಬ್ರಹ್ಮ ಚರತೇತಿ ಬ್ರಾಹ್ಮಣಃ | ವರ್ಣೇನ ಜಾಯತೇ ಶೂದ್ರಃ ಸ್ತ್ರೀ ಶುದ್ರಾಶ್ಚ ಕಾರಣಾತ್ | ಉತ್ಪತ್ತಿ ಶೂದ್ರ ಪುತ್ರಶ್ಚ ವಿಪ್ರಶೂದ್ರಂ ನ ಭುಂಯೇತ್ || ಇಂತೆಂದುದಾಗಿ, ಇದು ಕಾರಣ, ಗುರು ಸದ್ಭಾವದಲುದಯಿಸಿದ ಶಿವಜ್ಞಾನಬೀಜ ಸದ್ಭಕ್ತಿಯನಿಂಬುಗೊಂಡ ಶಿಷ್ಯನ ಹೃದಯ ಮನ ಕರಣವೆಂಬ ಸುಕ್ಷೇತ್ರವು ಕುಲಹೀನ ಸ್ತ್ರೀ, ಕುಲಯುಕ್ತ ಸ್ತ್ರೀಯರ ದೋಷಪಿಂಡದಂತಲ್ಲ. ಎನ್ನ ಮಹಾಲಿಂಗ ಕಲ್ಲೇಶ್ವರನ ಶರಣರೆ ಅಜಾತರೆಂದಿಕ್ಕಿದೆ ಮುಂಡಿಗೆಯನಾ, ಪರವೆತ್ತಿಕೊಳ್ಳಿರೆ.
--------------
ಹಾವಿನಹಾಳ ಕಲ್ಲಯ್ಯ
ಐವತ್ತೆರಡು ಅಕ್ಷರಕ್ಕೆ ಈ ಪ್ರಣವವೇ ಉತ್ಪತ್ತಿ-ಸ್ಥಿತಿ-ಲಯಸ್ಥಾನ. ಅಜಪೆ ಗಾಯತ್ರಿ ಪ್ರಾಣಾಯಾಮನಕ್ಕೆ ಪ್ರಣವವೇ ಉತ್ಪತ್ತಿ-ಸ್ಥಿತಿ-ಲಯಸ್ಥಾನ. ಅನೇಕ ವೇದಾಗಮ ಶಾಸ್ತ್ರಪುರಾಣಂಗಳಿಗೆ ಪ್ರಣವವೇ ಉತ್ಪತ್ತಿ-ಸ್ಥಿತಿ-ಲಯಸ್ಥಾನ. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಮೊದಲಾದ ಸಮಸ್ಥ ದೇವರ್ಕಳಿಗೆ ಪ್ರಣವವೇ ಉತ್ಪತ್ತಿ-ಸ್ಥಿತಿ-ಲಯಸ್ಥಾನ. ಪ್ರಣವವೇ ಪರಂಜ್ಯೋತಿ, ಪ್ರಣವವೇ ಪರಮಾನಂದ, ಪ್ರಣವವೇ ಪರಬ್ರಹ್ಮ, ಪ್ರಣವವೇ ಅಖಂಡ ಲೋಕಾದಿಲೋಕಕ್ಕೆ ಮೂಲಪ್ರಣವ ಓಂ ನಮಃಶಿವಾಯ ಪ್ರಣವ. ಓಂ ನಮಃ ಶಿವಾಯ ಪ್ರಣವ ಸಪ್ತಕೋಟಿ ಮಂತ್ರಗಳ ಸಾರ ; ಅನಂತಕೋಟಿ ವೇದಾಗಮಶಾಸ್ತ್ರಪುರಾಣಂಗಳ ಸಾರ. ಇದಕ್ಕೆ ಈಶ್ವರ ಉವಾಚ : ``ಸಪ್ತಕೋಟಿ ಮಹಾಮಂತ್ರ ಚಿತ್ತವ್ಯಾಕುಲ ಕಾರಣಂ | ಏಕಯೇಕಾಕ್ಷರಂ ದೇವೀ ತೂರ್ಯಾತೀತಂ ಮನೋಲಯಃ || ಸಪ್ತಕೋಟಿ ಮಹಾಮಂತ್ರಂ ಉಪಮಂತ್ರಂ ಸನೇಕತಾ | ಓ ಮಿತ್ಯೇಕಾಕ್ಷರಂ ಮೂಲಂ ಇತಿ ಭೇದಂ ವರಾನನೇ ||'' ಇಂತೆಂದುದಾಗಿ, ಇದಕ್ಕೆ ಚಿತ್ಪಿಂಡಾಗಮೇ : ``ಓಂಕಾರೇ ಬೀಜರೂಪಂ ಚ ವೃಕ್ಷಂ ವಿಶ್ವವಿಶಾಲಯೋಃ | ಓಮಿತ್ಯೇಕಾಕ್ಷರಂ ಬ್ರಹ್ಮ ಓಂಕಾರೇ ವಿಶ್ವಮೂರ್ತಯೇ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಅಕಾರೋಕಾರ ಸಂಯೋಗ ಓಂಕಾರಃ ಸ್ವರ ಉಚ್ಯತೇ | ಓಮಿತ್ಯೇಕಾಕ್ಷರಂ ಬ್ರಹ್ಮ ವದಂತಿ ಶಿವಯೋಗಿನಃ ||'' ಇಂತೆಂದುದಾಗಿ, ಇದಕ್ಕೆ ಮಹಾಗಮಸಾರೇ : ``ಓಂಕಾರೇ ತ್ರಿಗುಣಾತ್ಮಾ ಚ ತದರ್ಭೇತಿ ತ್ರಿಯಕ್ಷರಂ | ಅಕಾರೇ ಚ ಉಕಾರೇ ಚ ಮಕಾರೇ ಚ ತ್ರಿಯಕ್ಷರಂ || ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ | ಮಕಾರಂತು ಕಲಾಚೈವ ನಾದಬಿಂದುಕಲಾತ್ಮನೇ | ನಾದಬಿಂದುಕಲಾಯುಕ್ತೋ ಓಂಕಾರೋ ಪರಮೇಶ್ವರಃ ||'' ಇಂತೆಂದುದಾಗಿ, ಇದಕ್ಕೆ ಗೀತಸಾರೇ : ``ಪೃಥಿವಿಶ್ಚಾಗ್ನಿಶ್ಚ ಋಗ್ವೇದೋ ಭೂರಿತ್ಯೇವ ಪಿತಾಮಹಃ | ಅಕಾರೇ ತು ಲಯಂ ಪ್ರಾಪ್ತೇ ಪ್ರಥಮೇ ಪ್ರಣವಾಂಶಿಕೈಃ || ಅಂತರಿಕ್ಷಂ ಯಜುರ್ವೇದಂ ಭುಜೋವಿಷ್ಣುಃ ಸನಾತನವಃ | ಉಕಾರೇತು ಲಯಂ ಪ್ರಾಪ್ತೇ ದ್ವಿತಿಯೈೀ ಪ್ರಣವಾಂಶಿಕೇ || ದಿವಿ ಸೂರ್ಯಂ ಸಾಮವೇದಸ್ಸ್ಯೋರಿತ್ಯೇವ ಮಹೇಶ್ವರಃ | ಮಕಾರೇ ತು ಲಯಂ ಪ್ರಾಪ್ತೇ ತೃತೀಯೇ ಪ್ರಣವಾಂಶಿಕೇ | ಅಕಾರೇ ಚ ಉಕಾರೇ ಚ ಮಕಾರೇ ಚ ತ್ರಿಯಕ್ಷರಂ | ಇದಮೇಕಂ ಸಮುತ್ಪನ್ನಂ ಓಮಿತಿ ಜ್ಯೋತಿರೂಪಕಂ || ಒಂಕಾರ ಪ್ರಭವಾತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಓಮಿತ್ಯೇಕಾಕ್ಷರಂ ಬ್ರಹ್ಮ ಹೃತ್ಪದ್ಮೇಪಿ ವ್ಯವಸ್ಥಿತಂ | ಸದ್ಯೋದಹತಿ ಪಾಪಾನಿ ದೀರ್ಘೋ ಮೋಕ್ಷಂ ಪ್ರಯಚ್ಛತಿ ||'' ಇಂತೆಂದುದಾಗಿ, ಇದಕ್ಕೆ ಪ್ರಣವೋಪನಿಷತ್ : ಅಕಾರವೆಂಬ ಪ್ರಣವದಲ್ಲಿ - ``ಅಗ್ನಿಶ್ಚ ಋಗ್ವೇದೋ ಭವತಿ | ಒಂ ರುದ್ರೋ ದೇವತಾ | ಅಕಾರೇಚ ಲಯಂ ಪ್ರಾಪ್ತೇ ಪ್ರಥಮಂ ಪ್ರಣವಾಂಶಿಕೇ ||'' ಉಕಾರವೆಂಬ ಪ್ರಣಮದಲ್ಲಿ- ``ಅಂತರಿಕ್ಷಜುರ್ವೇದಾದ್ಭವತಿ | ಓಮೀಶ್ವರೋ ದೇವತಾ | ಉಕಾರೇ ಚ ಲಯಂ ಪ್ರಾಪ್ತೇ ದ್ವಿತೀಯಂ ಪ್ರಣವಾಂಶಿಕೇ ||'' ಮಕಾರವೆಂಬ ಪ್ರಣವದಲ್ಲಿ- ``ವಿದ್ಯೇಸ್ಸಾಮವೇದಾ ಭವತಿ | ಓಂ ಸದಾಶಿವೋ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ತೃತೀಯಂ ಪ್ರಣವಾಂಶಿಕೇ || ಅಕಾರೇ ಚ ಉಕಾರೇ ಚ ಮಕಾರೇ ಚ ತೃತೀಯಕಂ | ಇದಮೇಕಂ ಸಮುತ್ಪನ್ನಂ ಓಮಿತಿ ಜ್ಯೋತಿರೂಪಕಂ || ಓಂಕಾರಪ್ರಭವಾ ವೇದಾ ಓಂಕಾರ ಪ್ರಭವಾತ್ಸ್ವರಾಃ | ಓಂಕಾರಪ್ರಭವಾತ್ಸರ್ವಂ ತ್ರೈಲೋಕ್ಯಂ ಸಚರಾಚರಂ || ಸರ್ವವ್ಯಾಪಕಮೋಂಕಾರಂ ಮಂತ್ರನ್ಯತ್ರ ನ ಭವೇತ್ | ಪ್ರಣವಂ ಹಿ ಪರಂ ಬ್ರಹ್ಮಂ ಪ್ರಣವಂ ಪರಮಂ ಪದಂ | ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ | ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಪ್ರಣಮಂ ನಕಾರರೂಪಂ ಚ | ಓಂಕಾರಂ ಮಂತ್ರರೂಪಕಂ | ಓಂಕಾರಂ ವ್ಯಾಪಿ ಸರ್ವತ್ರ | ಪ್ರಣವಂ ಮಕಾರರೂಪಕಂ || ಪ್ರಣವಂ ಶಿಕಾರರೂಪಂ ಚ | ಪ್ರಣವಂ ವಕಾರರೂಪಕಂ | ಪ್ರಣವಂ ಯಕಾರರೂಪಂ ಚ | ಪ್ರಣವಂ ಷಡಕ್ಷರಮಯಂ | ಇತಿ ಪ್ರಣವ ವಿಜ್ಞೇಯಂ | ಗುಹ್ಯಾದ್ಗುಹ್ಯಂ ವರಾನನೇ ||'' ಇಂತೆಂದುದಾಗಿ, ಇದಕ್ಕೆ ಯರ್ಜುವೇದೋಪನಿಷತ್ : ``ಓಮಿತ್ಯೇಕಾಕ್ಷರಂ ಬ್ರಹ್ಮ ನಮಃ ಶಿವಾಯೇತ್ಯ ಜಾಯತ ||'' ಇಂತೆಂದುದಾಗಿ, ಇದಕ್ಕೆ ಶ್ರೀರುದ್ರೇ : ``ಓಂ ನಮಃ ಶಿವಾಯ ಚ ಶಿವ ತರಾ ಯ ಚ ||'' ಇಂತೆಂದುದಾಗಿ, ಇದಕ್ಕೆ ಅಥರ್ವಣವೇದೇ : ``ಓಂಕಾರೋಭ್ಯೋ ಜಗಕ್ಷೇತ್ರಾ | ಯಜಿತಾಂ ಪತಯೇ ನಮೋ ನಮೋ | ಅಕಾರೇಭ್ಯೋ ಬ್ರಹ್ಮಕ್ಷೇತ್ರಾಯ | ಕ್ಷೇತ್ರಾನಾಂ ಪತಯೇ ನಮೋ ನಮೋ | ಉಕಾರೇಭ್ಯೋ ವಿಷ್ಣುಕ್ಷೇತ್ರಾಯ | ಕ್ಷೇತ್ರಾನಾಂ ಪತಯೇ ನಮೋ ನಮೋ | ಮಕಾರೇಭ್ಯೋ ರುದ್ರಕ್ಷೇತ್ರಾಯ | ಕ್ಷೇತ್ರಾನಾಂ ಪತಯೇ ನಮೋ ನಮೋ | ಓಂಕಾರೇಭ್ಯೋ ಅಧ್ವಕ್ಷೇತ್ರಾಯ | ಕ್ಷೇತ್ರಾನಾಂ ಪತಯೇ ನಮೋ ನಮೋ | ನಮಃ ಶಿವಾಯೇಭ್ಯೋ ಸರ್ವ | ಕ್ಷೇತ್ರಾನಾಂ ಪತಯೇ ನಮೋ ನಮೋ ||'' ಇಂತೆಂದುದಾಗಿ, ಪ್ರಣವವ ಬಲ್ಲಾತನೆ ಬ್ರಾಹ್ಮಣನು. ಪ್ರಣವವ ಬಲ್ಲಾತನೆ ವೇದಾಧ್ಯಾಯಿ. ಪ್ರಣವವ ಬಲ್ಲಾತನೆ ಆಗಮಿಕನು. ಪ್ರಣವವ ಬಲ್ಲಾತನೆ ಶಾಸ್ತ್ರಿಕನು. ಪ್ರಣವವ ಬಲ್ಲಾತನೆ ಪುರಾಣಿಕನು. ಪ್ರಣವವ ಬಲ್ಲಾತನೆ ದಿವ್ಯಯೋಗಿ. ಪ್ರಣವವ ಬಲ್ಲಾತನೆ ನಿಜಾನಂದಯೋಗಿ. ಪ್ರಣವವ ಬಲ್ಲಾತನೆ ಪರಮಜ್ಞಾನಿ. ಪ್ರಣವವ ಬಲ್ಲಾತನೆ ಪರಮಯೋಗಿ. ಪ್ರಣವವ ಬಲ್ಲಾತನೆ ಪರಮಾನಂದಯೋಗಿ. ಪ್ರಣವವ ಬಲ್ಲಾತನೆ ನಿಜಯೋಗಿ. ಪ್ರಣವವ ಬಲ್ಲಾತನೆ ಶಿವಯೋಗಿ. ಪ್ರಣವವ ಬಲ್ಲಾತನೆ ಶಿವಾನಂದಯೋಗಿ. ಪ್ರಣವವ ಬಲ್ಲಾತನೆ ಜ್ಞಾನಯೋಗಿ. ಪ್ರಣವವ ಬಲ್ಲಾತನೆ ಜ್ಞಾನಾನಂದಯೋಗಿ. ಪ್ರಣವವ ಬಲ್ಲಾತನೆ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->