ಪ್ರಭುದೇವರು ಬಂದ [ಬರವಿನ ವೃದ್ಧಿ] ಅವಧಿಯಿಲ್ಲ.
ಕಲ್ಲನೆತ್ತಿದವರ ಕೂಡೆ ಗೆಲ್ಲಸೋಲಕ್ಕೆ ಹೋರಿಯಾಡಿ,
ಬಲ್ಲೆವೆಂದು ಗೆಲ್ಲಗೂಳಿಗಳ ಕೂಡೆ ಬಲ್ಲತನಕ್ಕೆ ನೆಲೆ[ಗೊ]ಟ್ಟು,
ಒಳ್ಳೆಹವರ ಗುಣವನರಸೆಹೆನೆಂದು, ಎಲ್ಲಾ ಠಾವಿನಲ್ಲಿ ತಿರುಗಿಬಂದು
ಅಟ್ಟ ಊಟದಲ್ಲಿ ನಿಷೆ*ಯ ತೋರಿಹೆನೆಂದು,
ಕಷ್ಟಗುಣವಾದ [ಬೇಟ]ವ ಹೊಕ್ಕೆನೆಂಬ ಕಷ್ಟಗುಣ ಬಿಡದು.
ಭಾವದ ಕದಳಿಯಂ ಮರೆದು, ವಾಯದ ಕದಳಿಯಂ ಹೊಕ್ಕು,
ಭಾವದ ಭ್ರಮೆಯಿಂದ ತಿರುಗಿ ಬಂದು,
ಸಂಗನಬಸವಣ್ಣಂಗೆ ಸಂಗವಿಶೇಷವ ತೋರದೆ [ಹ]ಂಗಿಸಿ ಕೊಟ್ಟೆಯಲ್ಲಾ,
ಸಂಗಮೇಶ್ವರದೇವರೆಂಬ ಕಲ್ಲಿನ ಮನೆಯ
ಕಲ್ಲಿನೊಳಗೆ ಹೊಕ್ಕು ವಲ್ಲಭನನರಿಯದೆ,
ಪ್ರಭು ಮೊದಲಾಗಿ ಇವರೆಲ್ಲರು ಕೆಟ್ಟರಲ್ಲಾ.
ನಮಗೆ ಬಲ್ಲತನವ ತೋರಿದ ಎನ್ನ ವಲ್ಲಭ ನೀನೆ
ಚೆನ್ನಬಸವಣ್ಣ, ಸಂಗನಬಸವಣ್ಣಂಗೆ,
ಪ್ರಮಥಗಣಂಗಳು ಮೊದಲಾದವರಿಗೆ, ಎನಗೆ,
ನಿಃಕಳಂಕ ಮಲ್ಲಿಕಾರ್ಜುನಂಗೆ, ನಿನ್ನಿಂದೆ ಭವವಿರಹಿತನಾದೆ.