ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಬ್ಬರು ನಾವು ಒಂದೆಡೆಯನುಂಡೆವು. ಉಂಬ ಊಟದಲ್ಲಿ ತೃಪ್ತಿಯ ತಳದು ತನು ಸೋಜಿಗವಾಯಿತ್ತಯ್ಯ. ಮನ ಮಗ್ನವನೈದಿ ಮಹಾಲಿಂಗದತ್ತ ಶುದ್ಭಿ ನಿಃಶುದ್ಧಿಯಾಯಿತ್ತಯ್ಯ. ಅಡಗಿದೆನಡಗಿದೆನತ್ತತ್ತಲೆ ನಾನು. ಉಡುಗಿದೆನೀ ಕಾಯವ. ಉಭಯದ ಸಂಗವ ಹರಿದು ಉಲುಹಡಗಿದ ವೃಕ್ಷವಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಪ್ರಭುದೇವರು ಬಂದ [ಬರವಿನ ವೃದ್ಧಿ] ಅವಧಿಯಿಲ್ಲ. ಕಲ್ಲನೆತ್ತಿದವರ ಕೂಡೆ ಗೆಲ್ಲಸೋಲಕ್ಕೆ ಹೋರಿಯಾಡಿ, ಬಲ್ಲೆವೆಂದು ಗೆಲ್ಲಗೂಳಿಗಳ ಕೂಡೆ ಬಲ್ಲತನಕ್ಕೆ ನೆಲೆ[ಗೊ]ಟ್ಟು, ಒಳ್ಳೆಹವರ ಗುಣವನರಸೆಹೆನೆಂದು, ಎಲ್ಲಾ ಠಾವಿನಲ್ಲಿ ತಿರುಗಿಬಂದು ಅಟ್ಟ ಊಟದಲ್ಲಿ ನಿಷೆ*ಯ ತೋರಿಹೆನೆಂದು, ಕಷ್ಟಗುಣವಾದ [ಬೇಟ]ವ ಹೊಕ್ಕೆನೆಂಬ ಕಷ್ಟಗುಣ ಬಿಡದು. ಭಾವದ ಕದಳಿಯಂ ಮರೆದು, ವಾಯದ ಕದಳಿಯಂ ಹೊಕ್ಕು, ಭಾವದ ಭ್ರಮೆಯಿಂದ ತಿರುಗಿ ಬಂದು, ಸಂಗನಬಸವಣ್ಣಂಗೆ ಸಂಗವಿಶೇಷವ ತೋರದೆ [ಹ]ಂಗಿಸಿ ಕೊಟ್ಟೆಯಲ್ಲಾ, ಸಂಗಮೇಶ್ವರದೇವರೆಂಬ ಕಲ್ಲಿನ ಮನೆಯ ಕಲ್ಲಿನೊಳಗೆ ಹೊಕ್ಕು ವಲ್ಲಭನನರಿಯದೆ, ಪ್ರಭು ಮೊದಲಾಗಿ ಇವರೆಲ್ಲರು ಕೆಟ್ಟರಲ್ಲಾ. ನಮಗೆ ಬಲ್ಲತನವ ತೋರಿದ ಎನ್ನ ವಲ್ಲಭ ನೀನೆ ಚೆನ್ನಬಸವಣ್ಣ, ಸಂಗನಬಸವಣ್ಣಂಗೆ, ಪ್ರಮಥಗಣಂಗಳು ಮೊದಲಾದವರಿಗೆ, ಎನಗೆ, ನಿಃಕಳಂಕ ಮಲ್ಲಿಕಾರ್ಜುನಂಗೆ, ನಿನ್ನಿಂದೆ ಭವವಿರಹಿತನಾದೆ.
--------------
ಮೋಳಿಗೆ ಮಾರಯ್ಯ
-->