ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊರಿಗೆ ಹೋಹ ದಾರಿಯಲ್ಲಿ ಒಂದು ಕೋಡಗ ಕುಳಿತಿಪ್ಪುದ ಕಂಡೆನಯ್ಯ. ಊರಿಗೆ ಹೋಹ ಅಣ್ಣಗಳ ಏಡಿಸಿ ಕಾಡುತ್ತಿದೆ ನೋಡಾ. ಕೋಡಗನ ಹಿಡಿದು ಕೊಡತಕ್ಕೆ ಹಾಕಿಹೆನೆಂದು ಹೋದರೆ, ಊರನೆಲ್ಲ ನುಂಗಿತ್ತು. ಆರಿಗೂ ಕಾಣಿಸದಿದೆ ಇದೇನು ಸೋಜಿಗವೋ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಊರನೆಲ್ಲ ಸುಟ್ಟು ಬೆಂಕಿಯಲ್ಲಿ ಕಾಯವನರಸಲತಿ ಚೋದ್ಯ ಕಾಣಾ. ಭೂತಾದಿ ಸಕಲಗುಣನಿಕರವನುರುಹಿ ಭಸ್ಮೀಕೃತವ ಮಾಡಿದ ಚಿದಾರ್ಯನ ಅಪೂರ್ವಪ್ರಕೃತಿಯನರಸಲದು ಅತಿಚೋದ್ಯ ನೋಡಾ. ತನ್ನ ಶೋಧನಮಾಡಿದ ಠಾವಿನಲ್ಲಿ ಅಶುದ್ಧವನರಸಿದರೆ ಭವಬಂಧನ ತಪ್ಪದು ಗುರುನಿರಂಜನ ಚನ್ನಬಸವಲಿಂಗ ಸೂತ್ರವನರಿಯದ ಭ್ರಾಂತರಿಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಡುಮನೆ ಕಂಬದೊಳಗಿರ್ದ ಬೆಂಕಿ ಹೊರಗೆದ್ದು ಊರನೆಲ್ಲ ಸುಟ್ಟಿತ್ತು ನೋಡಾ! ತಳವಾರನ ಮಡದಿ ಹಡೆದಮಕ್ಕಳ ಬಿಟ್ಟು ಉರಿಯ ಸೀರೆಯನುಟ್ಟು ಗಂಡನ ಶಿರವ ಕೊಯ್ದು ಹಿರಿಯ ಮಗನ ನುಂಗಿ ಉಗುಳದಿರಲು ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗಸಂಬಂಧವೆಂಬೆ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
-->