ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಊರಿಗೆ ಹೋಹ ದಾರಿಯಲ್ಲಿಒಂದು ಕೋಡಗ ಕುಳಿತಿಪ್ಪುದ ಕಂಡೆನಯ್ಯ.ಊರಿಗೆ ಹೋಹ ಅಣ್ಣಗಳ ಏಡಿಸಿ ಕಾಡುತ್ತಿದೆ ನೋಡಾ.ಕೋಡಗನ ಹಿಡಿದು ಕೊಡತಕ್ಕೆ ಹಾಕಿಹೆನೆಂದು ಹೋದರೆ,ಊರನೆಲ್ಲ ನುಂಗಿತ್ತು.ಆರಿಗೂ ಕಾಣಿಸದಿದೆ ಇದೇನು ಸೋಜಿಗವೋ,ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಊರನೆಲ್ಲ ಸುಟ್ಟು ಬೆಂಕಿಯಲ್ಲಿ ಕಾಯವನರಸಲತಿ ಚೋದ್ಯ ಕಾಣಾ.ಭೂತಾದಿ ಸಕಲಗುಣನಿಕರವನುರುಹಿ ಭಸ್ಮೀಕೃತವ ಮಾಡಿದಚಿದಾರ್ಯನ ಅಪೂರ್ವಪ್ರಕೃತಿಯನರಸಲದು ಅತಿಚೋದ್ಯ ನೋಡಾ.ತನ್ನ ಶೋಧನಮಾಡಿದ ಠಾವಿನಲ್ಲಿ ಅಶುದ್ಧವನರಸಿದರೆ ಭವಬಂಧನ ತಪ್ಪದುಗುರುನಿರಂಜನ ಚನ್ನಬಸವಲಿಂಗ ಸೂತ್ರವನರಿಯದ ಭ್ರಾಂತರಿಗೆ.
ನಡುಮನೆ ಕಂಬದೊಳಗಿರ್ದ ಬೆಂಕಿಹೊರಗೆದ್ದು ಊರನೆಲ್ಲ ಸುಟ್ಟಿತ್ತು ನೋಡಾ!ತಳವಾರನ ಮಡದಿ ಹಡೆದಮಕ್ಕಳ ಬಿಟ್ಟುಉರಿಯ ಸೀರೆಯನುಟ್ಟು ಗಂಡನ ಶಿರವ ಕೊಯ್ದುಹಿರಿಯ ಮಗನ ನುಂಗಿ ಉಗುಳದಿರಲುಗುರುನಿರಂಜನ ಚನ್ನಬಸವಲಿಂಗದಲ್ಲಿಪ್ರಾಣಲಿಂಗಸಂಬಂಧವೆಂಬೆ ಕಾಣಾ.