ಅಥವಾ

ಒಟ್ಟು 4 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲು ಕೈ ತಲೆಗೆ ಹೊಣೆಯಾದ ಮತ್ತೆ ಊರೆಲ್ಲಕ್ಕೆ ಹೇಳಲೇಕಯ್ಯ? ತಲೆವೊಡೆಯ ತಲೆಯಳಿಸುತ್ತಿರ್ದು, ಹಲಬರಿಗೆ ಮೊರೆಯೇಕೆ ? ಅರ್ಕೇಶ್ವರಲಿಂಗವನರಿಯಿರಣ್ಣಾ.
--------------
ಮಧುವಯ್ಯ
ಕೆರೆ ಪೂದೋಟ ಅರವಟ್ಟಿಗೆ ಬಾವಿ ವಿವಾಹ ಮುಂತಾದ ಧರ್ಮಂಗಳ ಕಟ್ಟಿಹೆವೆಂದು ನೇಮದಿಂದ ತಿರುಗುವ ಶೀಲ ಅದಾರಿಗೆ ಯೋಗ್ಯ? ಸರಿಹುದುಗಿನ ಸೂಳೆ ಸೀರೆಯನುಟ್ಟಂತೆ ಅದಾರಿಗೆ ಸುಖದುಃಖವೆಂಬುದ ನೀನೆ ಅರಿ. ಸರಿ ಹುದುಗಿನ ಧರ್ಮವುಂಟೆ? ಅರಿಕೆಯ ಒಡವೆಯ ಊರೆಲ್ಲಕ್ಕೆ ತಂದಿಕ್ಕಿ, ನಾ ಮಾಡಿದೆನೆಂದಡೆ ಇದಾರು ಮೆಚ್ಚುವರು? ಆ ಮಾಟವನಾರಯ್ಯಲಿಲ್ಲ, ಅದು ಸ್ವಕಾರ್ಯಕ್ಕೆ ಏರಿದ ಪಥ. ಇಂತೀ ವ್ರತ ನೇಮ ಶೀಲವನರಿಯಬೇಕು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಧರ್ಮಜ್ಞನಾಗಿ ವ್ರತವನಂಗೀಕರಿಸಬೇಕು.
--------------
ಅಕ್ಕಮ್ಮ
ನಮ್ಮ ಪುರಾತನರ ವಚನಂಗಳನೆಲ್ಲ ಓದದೆ ಇದ್ದಾರು, ಓದಿಯೂ ನಂಬಿಗೆ ಇಲ್ಲದೆ ಇದ್ದಾರು, ನೂರಕ್ಕೊಬ್ಬರಲ್ಲದೆ ನಂಬರು, ನಮ್ಮ ಆದ್ಯರ ವಚನಂಗಳ ಜರೆದಾರು, ತಮ್ಮ ಕವಿತ್ವವ ಮೆರೆದಾರು, ನಮ್ಮ ಆದ್ಯರ ವಚನಂಗಳಿಂದೊದವಿದ ಜ್ಞಾನವೆಂಬುದನರಿಯರು. ತಾಯಿಯಿಂದ ಮಕ್ಕಳಾದರೆಂಬುದನರಿಯರು. ಊರೆಲ್ಲಕ್ಕೆ ಹುಟ್ಟಿದ ಹಾಗೆ ನುಡಿದಾರು ನಮ್ಮ ಪುರಾತನರ ವಚನವೆ ತಾಯಿ ತಂದೆ ಎಂದರಿಯರು. ನಮ್ಮ ಆದ್ಯರ ವಚನ ಜ್ಞಾನದ ನೆಲೆಯ ತೆಗೆದಿರಿಸಿತ್ತು ನಮ್ಮ ಆದ್ಯರ ವಚನ ಮದ ಮಾತ್ಸರ್ಯಾದಿ ಅರಿಷಡ್ವರ್ಗ ಸಪ್ತವ್ಯಸನ ಪಂಚೇಂದ್ರಿಯ ದಶವಾಯುಗಳಿಚ್ಛೆಗೆ ಹರಿವ ಮನವ ಸ್ವಸ್ಥವಾಗಿ ನಿಲಿಸಿತ್ತು ನಮ್ಮ ಆದ್ಯರ ವಚನ ಅಂಗೇಂದ್ರಿಯಂಗಳ ಲಿಂಗೇಂದ್ರಿಯಂಗಳೆನಿಸಿತ್ತು. ನಮ್ಮ ಆದ್ಯರ ವಚನ ನೂರೊಂದುಸ್ಥಲವ ಮೀರಿದ ಮಹದಲ್ಲಿ ನೆಲಸಿತ್ತು. ನಮ್ಮ ಆದ್ಯರ ವಚನ ಇನ್ನೂರಹದಿನಾರು ಲಿಂಗಕ್ಕೆ ಸರ್ವೇಂದ್ರಿಯವ ಸನ್ಮತವ ಮಾಡಿ, ಸಾಕಾರವ ಸವೆದು ನಿರಾಕಾರವನರಿದು ನಿರವಯಲ ನಿತ್ಯಸುಖದಲ್ಲಿರಿಸಿತ್ತು. ಇಂತಪ್ಪ ಆದ್ಯರ ವಚನಭಂಡಾರವ, ನಮ್ಮ ಪ್ರಭುದೇವರು ಮುಖ್ಯವಾದ ಏಳುನೂರೆಪ್ಪತ್ತು ಅಮರಗಣಂಗಳು ಅಂಖ್ಯಾತ ಪುರಾತನರು, ಪ್ರಮಥಗಣಂಗಳು ಕೇಳಿ ಹೇಳಿ ಕೊಂಡಾಡಿದ ಕಾರಣ ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ಸರ್ವಸುಖವ ಸೂರೆಗೊಂಡು ಸ್ವಯಲಿಂಗವಾದರು
--------------
ಚನ್ನಬಸವಣ್ಣ
ನಾನಾ ಸ್ಥಲಂಗಳ ಹೊಲಬಿನ ಹೊಲನ ವಿಚಾರಿಸುವಲ್ಲಿ, ಸುಖದುಃಖವೆಂಬ ಉಭಯವುಂಟು. ತಾನರಿದಲ್ಲಿ, ನಡೆನುಡಿ ಸಿದ್ಧಾಂತವಾದಲ್ಲಿ, ಇಹಪರಸುಖ. ಭಾವಕ ಪರಿಭ್ರಮಣದಿಂದ, ಯಾಚಕ ಮಾತುಗಂಟತನದಿಂದ, ವಸ್ತುಭಾವದ ನಿಹಿತವನರಿಯದೆ, ವಾಗ್ವಾದಕ್ಕೆ, ಗೆಲ್ಲಸೋಲಕ್ಕೆ ಹೋರುವಲ್ಲಿ, ಇಹಪರ ಉಭಯದಲ್ಲಿಗೆ ದುಃಖ. ಇಂತೀ ಸ್ಥಲಂಗಳ ಗರ್ಭೀಕರಿಸಿ, ಆರುಸ್ಥಲವ ಅಲ್ಲಾ ಎನ್ನದೆ, ಮೂರುಸ್ಥಲ ಇಲ್ಲಾ ಎನ್ನದೆ, ಬೇರೊಂದು ಸ್ಥಲವುಂಟೆಂದು ಊರೆಲ್ಲಕ್ಕೆ ದೂರದೆ, ಆರಾರ ಅರಿವಿನಲ್ಲಿ, ಆರಾರ ಸ್ಥಲಂಗಳಲ್ಲಿ, ಆರಾರ ಕ್ರೀ ನೇಮಂಗಳಲ್ಲಿ ಇಪ್ಪ, ವಿಶ್ವಾಸಕ್ಕೆ ತಪ್ಪದಿಪ್ಪ ಆ ವಸ್ತುವ, ಬೇರೊಂದು ಲಕ್ಷಿಸಿ, ಕಟ್ಟಗೊತ್ತಿಂಗೆ ತರವಲ್ಲ. ದೃಷ್ಟವಲ್ಲಾ ಎಂದು ಇದಿರಿಂಗೆ ಹೇಳಲಿಲ್ಲ. ತನ್ನ ಭಾವ ನಿಶ್ಚಯವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ಹುಟ್ಟುಗೆಟ್ಟ
--------------
ಮೋಳಿಗೆ ಮಾರಯ್ಯ
-->