ನಾನಾ ಸ್ಥಲಂಗಳ ಹೊಲಬಿನ ಹೊಲನ ವಿಚಾರಿಸುವಲ್ಲಿ,
ಸುಖದುಃಖವೆಂಬ ಉಭಯವುಂಟು.
ತಾನರಿದಲ್ಲಿ, ನಡೆನುಡಿ ಸಿದ್ಧಾಂತವಾದಲ್ಲಿ, ಇಹಪರಸುಖ.
ಭಾವಕ ಪರಿಭ್ರಮಣದಿಂದ, ಯಾಚಕ ಮಾತುಗಂಟತನದಿಂದ,
ವಸ್ತುಭಾವದ ನಿಹಿತವನರಿಯದೆ, ವಾಗ್ವಾದಕ್ಕೆ, ಗೆಲ್ಲಸೋಲಕ್ಕೆ ಹೋರುವಲ್ಲಿ,
ಇಹಪರ ಉಭಯದಲ್ಲಿಗೆ ದುಃಖ.
ಇಂತೀ ಸ್ಥಲಂಗಳ ಗರ್ಭೀಕರಿಸಿ, ಆರುಸ್ಥಲವ ಅಲ್ಲಾ ಎನ್ನದೆ,
ಮೂರುಸ್ಥಲ ಇಲ್ಲಾ ಎನ್ನದೆ, ಬೇರೊಂದು ಸ್ಥಲವುಂಟೆಂದು ಊರೆಲ್ಲಕ್ಕೆ ದೂರದೆ,
ಆರಾರ ಅರಿವಿನಲ್ಲಿ, ಆರಾರ ಸ್ಥಲಂಗಳಲ್ಲಿ, ಆರಾರ ಕ್ರೀ ನೇಮಂಗಳಲ್ಲಿ ಇಪ್ಪ,
ವಿಶ್ವಾಸಕ್ಕೆ ತಪ್ಪದಿಪ್ಪ ಆ ವಸ್ತುವ,
ಬೇರೊಂದು ಲಕ್ಷಿಸಿ, ಕಟ್ಟಗೊತ್ತಿಂಗೆ ತರವಲ್ಲ.
ದೃಷ್ಟವಲ್ಲಾ ಎಂದು ಇದಿರಿಂಗೆ ಹೇಳಲಿಲ್ಲ.
ತನ್ನ ಭಾವ ನಿಶ್ಚಯವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ಹುಟ್ಟುಗೆಟ್ಟ