ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಚ್ಚಪ್ರಸಾದವೆಂಬುದೆ ನಿಶ್ಚಲ ನಿರ್ವಯಲಕ್ಕೆ ನಾಮವು. ಅಚಲ ಅದ್ವಯ ಅಭಿನ್ನವೆಂಬುದೆ [ಅಚ್ಚಪ್ರಸಾದ ]. ಗುರುಸ್ವಾನುಭಾವದಿಂದರಿದು ನಿಶ್ಚಯವಾದುದೆ ನಿಚ್ಚಪ್ರಸಾದ. ಅಷ್ಟಮೂರ್ತಿಗಳ ಸಮಯವನರಿದುದೆ ಸಮಯಪ್ರಸಾದ. ಏಕಪ್ರಸಾದವೆಂಬುದೆ ಅಂಡಪಿಂಡ ಬ್ರಹ್ಮಾಂಡಗಳಿಗೆ ಏಕರಸಮಯವಾಗಿ ತತ್ವಮಸಿಯಾದಿ ವಾಕ್ಯಂಗಳನರಿತು ಸರ್ವಕಲ್ಪಿತಬ್ರಹ್ಮವೆಂದು ಅರಿತುಕೊಳ್ಳಬಲ್ಲರೆ ಏಕಮೇವನದ್ವಿತೀಯವೆಂದು ವಾಕ್ಯಂಗಳಿಗೆಡೆಗೊಡದೆ ಏಕಪ್ರಸಾದವ ಕೊಂಡವರು ಬಸವ ಚನ್ನಬಸವ [ಪ್ರಭುದೇವ] ಮುಖ್ಯವಾದ ಅಸಂಖ್ಯಾತ ಗಣಂಗಳು. [ಕೊಂಡವರ ಏಕ] ಪ್ರಸಾದದಿಂದ ಮುಂದಾದವರಿಗೂ ಇದೇ ಪ್ರಸಾದ ಹಿಂದಾದವರಿಗೂ ಇದೇ ಪ್ರಸಾದ ಇಂದಾದವರಿಗೂ ಇದೇ ಪ್ರಸಾದ. ಈ ಪ್ರಸಾದವಲ್ಲದೆ ನಿತ್ಯಾನಿತ್ಯ ಹಸಿವು ತೃಷೆಗೆ ಕೊಂಬುವದು ಪಾದೋದಕಪ್ರಸಾದವಲ್ಲ. ನೀರಕೂಳನುಂಡು ಜಲಮಲವೆಂಬುದು ಪಾದೋದಕ ಪ್ರಸಾದವಲ್ಲ. ನಿತ್ಯ ನಿತ್ಯ ತೃಪ್ತಿಯೇ ಪ್ರಸಾದವೆಂಬುವದು ಪರಮಾನಂದವು. ಈ ಭೇದವನರಿದುಕೊಳ್ಳಬಲ್ಲಾತನೆ ಭಕ್ತ, ಕೊಡಬಲ್ಲಾತನೆ ಗುರುವು. ಪಾದೋದಕ ಪ್ರಸಾದವ ಕೊಳ್ಳಬೇಕೆಂಬಾತ ಭಕ್ತನಲ್ಲ, ಬದ್ದಭವಿ. ಉರಿಕೊಂಡ ಕರ್ಪುರವ ಮರಳಿ ಸುಡುವರೆ ? ಪರುಷ ಮುಟ್ಟಲು ಲೋಹ ಹೊನ್ನಾದ ಮೇಲೆ ಮರಳಿ ಮರಳಿ ಪರುಷವ ಮುಟ್ಟಿಸುವರೆ ? ಜ್ಯೋತಿ ಮುಟ್ಟಿದ ಮನೆಗೆ ಕತ್ತಲುಂಟೆ ? ಪಾದೋದಕ ಪ್ರಸಾದ ಸೋಂಕಿದ ಕಾಯ ಪ್ರಸಾದವಲ್ಲದೆ ಪ್ರಸಾದಕ್ಕೆ ಪ್ರಸಾದವುಂಟೆ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ ?
--------------
ಚೆನ್ನಯ್ಯ
ದಶದಳ ಕಮಲದಲ್ಲಿ ಶಶಿಕಳೆ ಪಸರಿಸಲು ಶಶಿಕಳೆಯೊಳಗೆ ರವಿಯ ಬೆಳಗು ನೋಡಾ. ರವಿ ಶಶಿ ಶಿಖಿ ಏಕರಸಮಯವಾಗಿ ಓಂಕಾರವೊಂದಾದ ನಾದ, ಆ ಆಧಾರ ಸ್ಥಾಧಿಷಾ*ನ ಮಣಿಪೂರಕ ಅನಾಹುತ ವಿಶುದ್ಧಿ ಆಜ್ಞೇಯದಲ್ಲಿ. ಕಂಡು, ಕೂಡಿ ಸುಖಿಸುತಿರ್ದೆನಯ್ಯಾ, ಆ ನಾದ ಬೆಳಗಿನ ಕಳೆ ಶೂನ್ಯದಲ್ಲಿ ಅಡಗಲು ನಾನು ನೀನಾದೆನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->