ದಶದಳ ಕಮಲದಲ್ಲಿ ಶಶಿಕಳೆ ಪಸರಿಸಲು
ಶಶಿಕಳೆಯೊಳಗೆ ರವಿಯ ಬೆಳಗು ನೋಡಾ.
ರವಿ ಶಶಿ ಶಿಖಿ ಏಕರಸಮಯವಾಗಿ
ಓಂಕಾರವೊಂದಾದ ನಾದ,
ಆ ಆಧಾರ ಸ್ಥಾಧಿಷಾ*ನ ಮಣಿಪೂರಕ ಅನಾಹುತ
ವಿಶುದ್ಧಿ ಆಜ್ಞೇಯದಲ್ಲಿ.
ಕಂಡು, ಕೂಡಿ ಸುಖಿಸುತಿರ್ದೆನಯ್ಯಾ,
ಆ ನಾದ ಬೆಳಗಿನ ಕಳೆ ಶೂನ್ಯದಲ್ಲಿ ಅಡಗಲು
ನಾನು ನೀನಾದೆನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.