ಅಥವಾ

ಒಟ್ಟು 4 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣಬಾರದ ಘನವ ಕರದಲ್ಲಿ ಧರಿಸಿದ, ಹೇ?ಬಾರದ ಘನವ ಮನದಲ್ಲಿ ತೋರಿದ, ಉಪಮಿಸಬಾರದ ಘನವ ನಿಮ್ಮ ಶ್ರೀಪಾದದಲ್ಲಿ ತೋರಿದ, ಇಂತೀ ತ್ರಿವಿಧವು ಏಕಾರ್ಥವಾಗಿಹ ಭೇದವ ಬಸವಣ್ಣ ತೋರಿಕೊಟ್ಟನಾಗಿ ನಾನು ಬದುಕಿದೆನು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಕಾಣಬಾರದ ಘನವ ಕರಸ್ಥಲದಲ್ಲಿ ತೋರಿದ, ಹೇಳಬಾರದ ಘನವ ಮನಸ್ಥಲದಲ್ಲಿ ತೋರಿದ, ಉಪಮಿಸಬಾರದ ಘನವ ನಿಮ್ಮ ತೃಪ್ತಿಯ ಮುಖದಲ್ಲಿ ತೋರಿದ. ಇಂತೀ ತ್ರಿವಿಧವು ಏಕಾರ್ಥವಾಗಿಹ ಭೇದವ ಚೆನ್ನಬಸವಣ್ಣನು ತೋರಿದನಾಗಿ ಆನು ಬದುಕಿದೆನು ಕಾಣಾ ಕೂಡಲಸಂಗಮದೇವಾ.
--------------
ಬಸವಣ್ಣ
ನಿರಂಜನ ಪ್ರಣವದುತ್ಪತ್ಯ : ಏನೂ ಏನೂ ಎನಲಿಲ್ಲದ ಮಹಾಘನ ನಿರಂಜನಾತೀತದ ನೆನಹು ಮಾತ್ರದಲ್ಲಿ ನಿರಂಜನಪ್ರಣವ ಉತ್ಪತ್ಯವಾಯಿತ್ತು. ಆ ನಿರಂಜನಪ್ರಣವದ ನೆನಹುಮಾತ್ರದಲ್ಲಿ ಕಲಾಪ್ರಣವ ಉತ್ಪತ್ಯವಾಯಿತ್ತು . ಆ ಕಲಾಪ್ರಣವದ ನೆನಹುಮಾತ್ರದಲ್ಲಿ ಅನಾದಿಪ್ರಣವ ಉತ್ಪತ್ಯವಾಯಿತ್ತು. ಆ ಅನಾದಿಪ್ರಣವದ ನೆನಹುಮಾತ್ರದಲ್ಲಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು. ಆ ಅಕಾರ ಉಕಾರ ಮಕಾರದ ರೂಪಾಂಗಭೇದದಿಂದ ಒಂಬತ್ತು ಪ್ರಣವ ಉತ್ಪತ್ಯವಾಯಿತ್ತು. ಅಕಾರ ಉಕಾರ ಮಕಾರ ಈ ಮೂರು ಕೂಡಿ ಏಕಾರ್ಥವಾಗಿಹ ಪ್ರಣವ ಶಿವಸಂಬಂಧವಾಗಿಹವು. ಆ ಅಕಾರ ಉಕಾರ ಮಕಾರ ಈ ಮೂರು ಕೂಡಿ ಏಕಾರ್ಥವಾಗಿಹ ಪ್ರಣವ ಶಿವಶಕ್ತಿರಹಿತವಾಗಿಹುದು. ಆ ಶಿವಸಂಬಂಧವಾಗಿಹ ಅಖಂಡಗೋಳಕಾಕಾರಪ್ರಣವದಲ್ಲಿ ಜ್ಯೋತಿಸ್ವರೂಪಪ್ರಣವವೆಂದು, ದರ್ಪಣಾಕಾರಪ್ರಣವವೆಂದು, ಕುಂಡಲಾಕಾರಪ್ರಣವವೆಂದು, ದಂಡಕಸ್ವರೂಪಪ್ರಣವವೆಂದು ಅರ್ಧಚಂದ್ರಕಪ್ರಣವವೆಂದು, ತಾರಕಕಾಸ್ವರೂಪಪ್ರಣವವೆಂದು ಆರುಪ್ರಕಾರವಾಗಿಹುದು. ಶಕ್ತಿಸಂಬಂಧವಾದ ಪರಂಜ್ಯೋತಿಸ್ವರೂಪವಾಗಿಹ ಪರಮಪ್ರಣವದಲ್ಲಿ ತಾರಕಸ್ವರೂಪಪ್ರಣವವೆಂದು, ದಂಡಕಸ್ವರೂಪಪ್ರಣವವೆಂದು ಕುಂಡಲಾಕಾರಪ್ರಣವವೆಂದು ಅರ್ಧಚಂದ್ರಕಪ್ರಣವವೆಂದು ದರ್ಪಣಾಕಾರಪ್ರಣವವೆಂದು ಜ್ಯೋತಿಸ್ವರೂಪಪ್ರಣವವೆಂದು ಆರು ಪ್ರಕಾರವಾಗಿಹುದು. ಶಿವಶಕ್ತಿರಹಿತವಾಗಿಹ ಅಖಂಡಮಹಾಜ್ಯೋತಿಪ್ರಣವದಲ್ಲಿ ಮೂರ್ತಿಬ್ರಹ್ಮಪ್ರಣವವೆಂದು, ಪಿಂಡಬ್ರಹ್ಮಪ್ರಣವವೆಂದು, ಕಲಾಬ್ರಹ್ಮಪ್ರಣವವೆಂದು, ಬ್ರಹ್ಮಾನಂದಬ್ರಹ್ಮಪ್ರಣವವೆಂದು, ವಿಜ್ಞಾನಬ್ರಹ್ಮಪ್ರಣವವೆಂದು ಪರಬ್ರಹ್ಮಪ್ರಣವವೆಂದು ಈ ಆರು ಪ್ರಣವಂಗಳು ಷಟ್‍ಸ್ಥಲಬ್ರಹ್ಮ ತಾನೆ ಷಷ*ಪ್ರಣವವಾಗಿಹುದೆಂದು ನಿರಾಮಯಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳಿಹುದು. ಇನ್ನು ಶಿವಸಂಬಂಧವಾದ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ದರ್ಪಣಾಕಾರದ ಪ್ರಣವದಲ್ಲಿ ಈಶಾನ್ಯಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ಅರ್ಧಚಂದ್ರಕಪ್ರಣವದಲ್ಲಿ ತತ್ಪುರುಷಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ಕುಂಡಲಾಕಾರಪ್ರಣವದಲ್ಲಿ ಅಘೋರಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ದಂಡಕಸ್ವರೂಪಪ್ರಣವದಲ್ಲಿ ವಾಮದೇವಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ತಾರಕಸ್ವರೂಪಪ್ರಣವದಲ್ಲಿ ಸದ್ಯೋಜಾತಮುಖವು ಉತ್ಪತ್ಯವಾಯಿತ್ತು. ಈಶಾನ್ಯಮುಖದಲ್ಲಿ ಸಾಯುಜ್ಯಪ್ರಣವ ಉತ್ಪತ್ಯವಾಯಿತ್ತು. ತತ್ಪುರುಷಮುಖದಲ್ಲಿ ಸಾಕಲ್ಯಪ್ರಣವ ಉತ್ಪತ್ಯವಾಯಿತ್ತು. ಅಘೋರಮುಖದಲ್ಲಿ ಶಾಂಭವಪ್ರಣವ ಉತ್ಪತ್ಯವಾಯಿತ್ತು. ವಾಮದೇವಮುಖದಲ್ಲಿ ಸ್ವಾಸ್ಯಪ್ರಣವ ಉತ್ಪತ್ಯವಾಯಿತ್ತು. ಸದ್ಯೋಜಾತಮುಖದಲ್ಲಿ ಸೌಖ್ಯಪ್ರಣವ ಉತ್ಪತ್ಯವಾಯಿತ್ತು. ಶಿವಸಂಬಂಧವಾದ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವವು, ಶಕ್ತಿಸಂಬಂಧವಾದ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರ ಪರಬ್ರಹ್ಮಪ್ರಣವವು, ಶಿವಶಕ್ತಿರಹಿತವಾಗಿಹ ಅಖಂಡಮಹಾಜ್ಯೋತಿಪ್ರಣವ ಈ ಮೂರು ಪ್ರಣವಂಗಳು ಕೂಡಿ ಏಕಾರ್ಥವಾಗಿ ಅಖಂಡಿತ ಅಪ್ರಮಾಣ ಅಗೋಚರ ಅಪ್ರಮೇಯ ಅಗಮ್ಯ ವಾಚಾಮಗೋಚರಕತ್ತತ್ತವಾದ ಮಹಾಘನಕ್ಕೆ ಘನವನೇನೆಂದುಪಮಿಸಬಾರದ ಉಪಮಾತೀತಕತ್ತತ್ತವಾಗಿಹನು ನೋಡಾ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->