ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ವ್ಯೋಮದಲ್ಲಿ ತೋರುವ ತೋರಿಕೆ,ಸಾಮವ ಮುಟ್ಟಿ ಬೆರಸಬಲ್ಲುದೆ ?ಸಾಗರ ಸಂಬಂಧಕ್ಕೆ ಕಟ್ಟು ಒಡೆವುದೆ ?ಮಹದಲ್ಲಿ ಬೆರಸಿದ ಮಹಾಯೋಗಿ,ಸಂಸಾರಸಾಗರದ ಸಂಬಂಧಕ್ಕೆ ಒಳಗಪ್ಪನೆ ?ಇಂತೀ ಸೂತಕವಳಿದ ಅಜಾತಂಗೆಏತರಲ್ಲಿ ನಿಂದು ನೋಡಿದಡೂನಿರ್ಜಾತ ಶೂನ್ಯ ಕಾಮಧೂಮ ಧೂಳೇಶ್ವರಾ.
ಕನ್ನವನಿಕ್ಕಿದ ಕಳ್ಳನಿದ್ದಂತೆ ಮಣ್ಣ ಬಂಧಿಸಬಹುದೆ?ಎನ್ನ ಅಂಗ ಪ್ರಾಣಕ್ಕೆ ಲಿಂಗವಲ್ಲದೆಕರಣಂಗಳಿಗೆ ಬೇರೊಂದಂಗವುಂಟೆ?ಇದಕ್ಕೆ ಅಂಜುವಡೆ,``ಗುರೋಃ ಪಾಪಂ ಶಿಷ್ಯಸ್ಯಾಪಿ ಶಿಷ್ಯಪಾಪಂ ಗುರೋರಪಿ'ಎಂಬುದ ಹುಸಿಯಾದಡೆಹೇಳಿಸಿಕೊಂಬುವ ಗುರು ಹೇಳುವಾತ ಶಿಷ್ಯನೆ?ಆತ ಹೇಳೂದಕ್ಕೆ ಮುನ್ನ ತಾನರಿಯಬೇಕು.ಈ ಉಭಯಕ್ಕೆ ಭಿನ್ನ ಭಾವವಿಲ್ಲ.ಜೂಳಿಯ ಕುಂಭದಂತೆ ಏತರಲ್ಲಿ ಒದಗಿದಡೂ ಸರಿ.ಸಗುಣನೀತಿಗೆ ಮುಕ್ತಿ ಉಭಯಸ್ಥಲ ಯುಕ್ತಿನಾರಾಯಣಪ್ರಿಯ ರಾಮನಾಥಾ.