ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮಾತಿನಲ್ಲಿ ಬಲ್ಲೋತ್ತರವಂತರೆಲ್ಲರೂ ಆತನನರಿದುದಿಲ್ಲಆತ ಏತರೊಳಗೂ ಸಿಕ್ಕದ ಅಜಾತ ಶಂಭು.ಆತನ ನೀತಿಯನರಿವುದಕ್ಕೆ ಅಸುರ ಕರ್ಮವ ಬಿಟ್ಟುವೇಷದಿಂದಾದ ಘಾತಕತನವನೊಲ್ಲದೆಭಕ್ತಿಯೆಂಬ ಆಶೆ ಕುರಿತು ಪೋಷಣವ ಹೊರೆಯದೆನಿಜ ತತ್ವದ ಆಶೆಯೇ ಸಾಕಾರವಾಗಿಅರಿದ ಆತ್ಮ ಕರಿಗೊಂಡಲ್ಲಿಹರಿಪ್ರಿಯ ಅಘೋರನಾಶನ ರಾಮನಾಥಾ.
ನೋಡುವ ನೋಟ ಕೂಡಿ ಬಯಲಲ್ಲಿ ಸಿಕ್ಕಿ, ಆಡಲೀಯದೆ ಅಲುಗದೆ ಅಗಲಿ, ಆಕಾಶದಲ್ಲಿ ಕೀಲಿಸಿ, ಲೋಕಾದಿಲೋಕವ ನೋಡುತ್ತ, ಬೇಕಾದ ಠಾವಿಂಗೆ ಹೋಗುತ್ತ, ಆತ್ಮನೊಳು ಬೆರೆವುತ್ತ, ಮಾತಿನ ಕೀಲನರಿವುತ್ತ, ಪರಂಜ್ಯೋತಿಯ ಬೆಳಗಿನೊಳಗೆ ಅಜಾತನಾಗಿ ಏತರೊಳಗೂ ಸಿಲುಕದೆ ಆಡುವ ಶರಣ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.