ಒಟ್ಟು 4 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅರತುದಯ್ಯಾ ಅಂಗಗುಣ, ಒರತುದಯ್ಯಾ ಭಕ್ತಿರಸ,ಆವರಿಸಿತ್ತಯ್ಯಾ ಲಿಂಗವಂಗವನು,ಏನೆಂದರಿಯೆನಯ್ಯಾ ಲೋಕ¯õ್ಞಕಿಕವ.ಲಿಂಗಭ್ರಾಂತನಾದೆನಯ್ಯಾ ಕೂಡಲಸಂಗಯ್ಯಾ,ನಿಮ್ಮ ಕರುಣವೆನ್ನನೆಡೆಗೊಂಡಿತ್ತಾಗಿ.
ಕತ್ತಲೆಯನೊಳಕೊಂಡ ಬೆಳಗಿನಂತೆಪಕ್ಷಿಯನೊಳಕೊಂಡ ತತ್ತಿಯಂತೆಮುತ್ತನೊಳಕೊಂಡ ಚಿಪ್ಪಿನಂತೆಸಾಗರವನೊಳಕೊಂಡ ಶಶಿಯಂತೆಜಗವನೊಳಕೊಂಡ ಆಕಾಶದಂತೆಎನ್ನ ನೀವು ಒಳಕೊಂಡಿರಿಯಾಗಿನಾನೋ ನೀನೋ ಏನೆಂದರಿಯೆನಯ್ಯಾ,ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ವಾರವೆಂದರಿಯೆ, ದಿನವೆಂದರಿಯೆ,ಏನೆಂದರಿಯೆನಯ್ಯಾ.ಇರುಳೆಂದರಿಯೆ, ಹಗಲೆಂದರಿಯೆ,ಏನೆಂದರಿಯೆನಯ್ಯಾ.ನಿಮ್ಮ ಪೂಜಿಸಿ ಎನ್ನುವ ಮರೆದೆಕೂಡಲಸಂಗಮದೇವಾ. 490