ಒಟ್ಟು 5 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು,ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು,ಏನೆಂಬೆನಯ್ಯ ಒಚ್ಚೊಚ್ಚಿ ಭಕ್ತರಳ ಏನೆಂಬೆನಯ್ಯ ಒಚ್ಚೊಚ್ಚಿ ಭವಿಗಳ?ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿಭಕ್ತಕಾಯ ಮಮಕಾಯವೆಂತೆಂಬರು?
ಶಿಷ್ಯನೆಂಬ ಪ್ರತಿಭಾವವಿಲ್ಲದ ಗುರು, ಗುರುವೆಂಬ ಪ್ರತಿಭಾವವಿಲ್ಲದ ಶಿಷ್ಯ,ಏನೆಂಬೆನಯ್ಯ ಎರಡಿಲ್ಲದ ಘನವ ? ಏನೆಂಬೆನಯ್ಯ ಎರಡೊಂದಾದ ಘನವ !ಕೂಡಲಚೆನ್ನಸಂಗನಲ್ಲಿ ಗುರುಶಿಷ್ಯಸಂಬಂಧವಪೂರ್ವ.
ಏನೆಂಬೆನಯ್ಯ ? ಕಲ್ಪಿತ ಬಂಧನ ಬಿಡದು, ಪ್ರಸಾದಕ್ಕೆಂತೊ ?ಗಮನಶಂಕೆ ಬಿಡದು, ಪ್ರಾಣಲಿಂಗಕ್ಕೆಂತೊ ?ನಿಜತುಂಬಿ ನಿಕ್ಷೇಪವಾಗದು-ಇದು ಕಾರಣ, ಅರ್ಪಿತವುಳ್ಳನ್ನಕ್ಕ ಪ್ರಸಾದಿಯಲ್ಲ.ಅವಧಾನವುಳ್ಳನ್ನಕ್ಕ ಪ್ರಾಣಲಿಂಗಿಯಲ್ಲ,ಕೂಡಲಚೆನ್ನಸಂಗಯ್ಯ.