ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೊಗಲ ಕೈಯಲ್ಲಿ ಶಿಲೆಯ ಲಿಂಗವ ಹಿಡಿದು, ಮಣ್ಣ ಪರಿಯಾಣದಲ್ಲಿ ಓಗರವನಿಕ್ಕಿ, ಲಿಂಗನೈವೇದ್ಯವ ತೋರಿದಡೆ, ಓಗರ ಸವೆದುದಿಲ್ಲ, ನೈವೇದ್ಯದ ರುಚಿಯನರಿದುದಿಲ್ಲ. ಒಳಗು ಶುದ್ಭವಿಲ್ಲದೆ ಮುಟ್ಟಿ ಅರ್ಪಿತವೆಂದಡೆ, ಮೆಚ್ಚುವರೆ ಪ್ರಾಣಲಿಂಗಿಸಂಬಂದ್ಥಿಗಳು. ಉಂಡವನು ಉಂಡಂತೆ ತೇಗುವ ಸಂದಳಿದು, ದ್ವಂದ್ವ ಹಿಂಗಿ ನಿಜವಾರೆಂಬುದ ವಿಚಾರಿಸಿ ಕೊಡುವುದಕ್ಕೆ ಮೊದಲೆ, ಕೊಂಡವರಾರು ಎಂಬುದ ಭಾವಿಸುವುದಕ್ಕೆ ಮೊದಲೆ, ಭಾವನೆಗೆ ಬಂದವರಾರೆಂದು ವಿಚಾರಿಸಿ, ಬೀಜ ನೆರೆ ಬಲಿದು ಪುನರಪಿ ಬಪ್ಪಂತೆ ಲಿಂಗ ತಾನಾಗಿ, ಸಂದೇಹವಿಲ್ಲದೆ ಸೋಂಕುವುದಕ್ಕೆ ಮುನ್ನವೆ ಅರ್ಪಿತ ನಿಂದಾಯಿತ್ತಾಗಿ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಪ್ರಾಣಲಿಂಗ ಸಮರ್ಪಣ.
--------------
ಮೋಳಿಗೆ ಮಾರಯ್ಯ
ಮುಖವನರಿಯದೆಂತರ್ಪಿಸುವೆನಯ್ಯಾ? ಅದು ಭವ ಹರಿಯದು. ಅವಯವದ ಪರಿಯಾಣದಲ್ಲಿ ಅನಿಮಿಷವೆಂಬ ಓಗರವನಿಕ್ಕಿ, ತನುತ್ರಯದಿಂ ಮೇಲಣ ಆನಂದ ಕೋಣೆಯಲ್ಲಿ, ಅನಿಮಿಷಂಗಾರ್ಚನೆಯ ಮಾಡಬಲ್ಲಡೆ ಆತನನುಪಮ ಲಿಂಗಾರ್ಚಕನೆಂಬೆ; ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನೀನೆಂಬೆ.
--------------
ಸಿದ್ಧರಾಮೇಶ್ವರ
ಆಗಮದ ಹೊಲಬನರಿಯದ ಕುನ್ನಿಗಳು ಶ್ರೀಗುರುಲಿಂಗಜಂಗಮದ ನೆಲೆಯನರಿಯದೆ ಹೋಗಿ, ಬಾಗಿಲ ದಾಟುವ ಮರನ ದೇವರೆಂದು ಪೂಜಿಸಿ, ಬರುತ್ತ ಹೋಗುತ್ತ ಮರನ ಒದ್ದು ಹರಿಸಿಕೊಂಬರು. ಎಂಬತ್ತುನಾಲ್ಕುಲಕ್ಷ ಜೀವರಾಶಿಗೆ ಕಾಗೆ ಕನಿಷ*. ಆ ಕಾಗೆಯ ಬಾಯಲು ಮಾತಾಪಿತರುಂಡರೆಂದು ಓಗರವನಿಕ್ಕಿ, ಬಳಿಕ ಉಂಬವರ ಪಙÂ್ತಯಲ್ಲಿ ಶ್ರೀಗುರು ಕಾರುಣ್ಯವ ಪಡೆದ ಭಕ್ತನು, ಅಲ್ಲಿ ಹೋಗಿ ಲಿಂಗಾರ್ಪಣವ ಮಾಡಿದಡೆ ಅವನು ಕಾಗೆಗಿಂದ ಕರಕಷ್ಟವೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
-->