ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಭವಕ್ಕೆ ಬಿತ್ತುವಪ್ಪ ಬಯಕೆ ಇಹನ್ನಬರಕಾಮನ ಕಾಟವು ಕಡೆಗಾಣದಯ್ಯಾ.ಲಿಂಗದೇವನ ಮರಹಿನಿಂದಪ್ಪ ಮರಣಬಾಧೆ ಇಹನ್ನಬರಕಾಲದೂತರ ಭೀತಿಯು ತಪ್ಪದಯ್ಯಾ.ತನುತ್ರಯದ ಅಭಿಮಾನ ಇಹನ್ನಬರಸಂಸಾರಸಂತಾಪ ಓರೆಯಾಗದಯ್ಯಾ.ಕೂಡಲಚೆನ್ನಸಂಗಮದೇವಾ,_ಇದು ಸೃಷ್ಟಿ ಸ್ಥಿತಿ ಸಂಹಾರರೂಪವಪ್ಪನಿನ್ನ ಮಾಯದ ಮಾಟವೆಂದರಿದೆನಯ್ಯಾ.