ಅಥವಾ

ಒಟ್ಟು 11 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾಳಾಂಬಕ ಬಲೆಗೆ ಸಿಲ್ಕಿದ, ಲೀಲಾಂಗ ಕಾಲಕ್ಕೊಳಗಾದ. ಪುಷ್ಪೋದ್ಭವ ಹಿಡಿಗಟ್ಟಿಗೀಡಾದ. ಇವರ ಮೂವರ ದೇವರೆಂದಾರಾದ್ಥಿಸಿದಡೆ, ಜೇನಮಡಕೆಯಲ್ಲಿ ಸಿಕ್ಕಿದ ನೊಣದಂತಾದಿರಯ್ಯಾ. ಅಂಟಿಗೆ ಸಿಕ್ಕಿದ ವಿಹಂಗನಂತಾದಿರಣ್ಣಾ. ಅಂಥವರ ಕಂಡು ಎನಗಂಜಿಕೆಯಾಯಿತ್ತಯ್ಯಾ. ಇವರ ಮೂವರ ಬಿಡಲಾರದೆ, ಭಾಳಾಂಬಕನ ಭಾಳದಲ್ಲಿ ಧರಿಸಿದೆ. ವಿಷ್ಣುವಿನ ಅಕ್ಷಿಯಲ್ಲಿ ಧರಿಸಿದೆ, ಬ್ರಹ್ಮನ ಬಾಯಲ್ಲಿ ಧರಿಸಿದೆ. ಇವರ ಮೂವರ ಕೊಂದ ಭೇದ. ಲಲಾಟದಲ್ಲಿದ್ದವನ ತಲೆಯ ಹೊಯ್ದೆ. ಅಕ್ಷಿಯಲ್ಲಿದ್ದವನ ಕುಕ್ಷಿಯಂ ಕುಕ್ಕಿದೆ. ಬಾಯಲ್ಲಿದ್ದವನ ಬಸುರ ಒಡೆಯ ಹೊಯ್ದೆ. ಹೊಯ್ಯಲಾಗಿ ಅವರು ಬದುಕಿದರು, ನಾ ಸತ್ತೆ. ಸತ್ತವನಿಗೆತ್ತಣ ಮುಕ್ತಿಯೋ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಸಿರಿಯೆಂದಡೆಲ್ಲರೂ ಬರ್ಪರೈಸೆ. ಉರಿಯೆಂದಡಾರೂ ನಿಲಲಾರರಯ್ಯಾ. ಉರಿವುತಿದೆ ಲೋಕ ಗರಳದುರಿಯಿಂದ. ತೆರಳುತಿದೆ ದೆಸೆದೆಸೆಗೆ ಸುರಾಸುರಾಳಿ. ಹರಿವಿರಂಚಿಗಳು ಸಿರಿ ಸರಸ್ವತಿಯ ಕೈವಿಡಿದು ಮರುಳುಗೊಂಡರು, ನಿಮ್ಮ ನಿಜವನರಿಯದೆ. ಸಿರಿಯ ಭಕ್ತರಿಗಿತ್ತು, ಉರಿಯ ನೀ ಧರಿಸಿದೆ. ಸರಿಯಾರು ನಿನಗೆ ಗುರುವರದ ವಿರೂಪಾಕ್ಷಾ !
--------------
ದಶಗಣ ಸಿಂಗಿದೇವಯ್ಯ
ಅನಾಹತಸ್ಥಳದಲ್ಲಿ ಶಿವ ತನ್ನ ಲೀಲಾವಿನೋದದಿಂದ ನೀವು ಸಹಿತ ಮೂರ್ತಿಯಾದನು, ಹೊರಗೆ ಆಕಾರವ ಧರಿಸಿ, ಒಳಗೆ ನಿರವಯಕ್ಕೆ ಆರೋಗಣೆಯ ಮಾಡಿಸ[ಲು] ಇದು ಕಾರಣ ಕೂಡಲಚೆನ್ನಸಂಗಯ್ಯಾ ಬಸವಣ್ಣ ಮಡಿವಾಳಯೆಂಬೆರಡು ತೋಳ ಧರಿಸಿದೆ.
--------------
ಚನ್ನಬಸವಣ್ಣ
ಶಿವನ ಕೃಪೆಯಿಂದ ಎನ್ನ ಪುಣ್ಯ ಹಣ್ಣಾದಂತೆ ಸರ್ವಾಂಗದಲ್ಲಿ ಪ್ರಸಾದಂಗಳ ನಾನು ಎಡೆಬಿಡುವಿಲ್ಲದೆ ಧರಿಸಿದ್ದ ಸಂಭ್ರಮವ ನೋಡಾ ಎಲೆ ಅಮ್ಮ. ಮುಕ್ತಿಪುರವ ತೋರುವ ಪ್ರಸಾದವ ಪಂಚಸ್ಥಾನದಲ್ಲಿ ಧರಿಸಿದೆ. ಪ್ರಸಿದ್ಧಪ್ರಸಾದ ಸಿದ್ಧಪ್ರಸಾದ ಶುದ್ಧಪ್ರಸಾದ ಆದಿಪ್ರಸಾದ ಮಹಾಪ್ರಸಾದ ಎಂಬ ಪಂಚಪ್ರಸಾದಂಗಳಂ ಪಂಚಸ್ಥಾನದಲ್ಲಿ ಧರಿಸಿದೆ. ಪ್ರಸಿದ್ಧಪ್ರಸಾದವ ಆಕಾಶದಲ್ಲಿ ಧರಿಸಿದೆ. ಸಿದ್ದಪ್ರಸಾದವ ಬ್ರಹ್ಮರಂಧ್ರದಲ್ಲಿ ಧರಿಸಿದೆ. ಆಚಾರಾದಿ ಪ್ರಸಾದಮಂ ತತ್ವ ಎರಡರ ಮೇಲೆ ಧರಿಸಿದೆ. ಮಹಾಪ್ರಸಾದಮಂ ಪಶ್ಚಿಮದಲ್ಲಿ ಧರಿಸಿದೆ. ಇಂತಪ್ಪ ಪರಬ್ರಹ್ಮವೆನಿಸುವ ಪ್ರಸಾದಂಗಳ ನಾನು ದಿನಾರಾತ್ರಿಯೆನ್ನದೆ ಪೂಜೆಯ ಮಾಡಿದಲ್ಲಿ ಎನಗೆ ಪರಮಾರ್ಥದರಿವು ಕೈಸಾರಿತು. ಆ ಪರಮಾರ್ಥದರಿವು ಕೈಸಾರಿದಲ್ಲಿಯೇ ಎನ್ನ ತನು ಮನ ಧನಂಗಳು ಪದಾರ್ಥಗಳಾದವು. ಆ ಪದಾರ್ಥಂಗಳ ಏಕಚಿತ್ತ ಮನೋಭಾವದಲ್ಲಿ ತೋಂಟದ ಸಿದ್ಧಲಿಂಗನೆಂಬ ನಿಷ್ಕಲಬ್ರಹ್ಮಕ್ಕೆ ಸಮರ್ಪಿಸಿದಲ್ಲಿಯೇ ಎನಗೆ ಅನಿತ್ಯತೆ ಕೆಟ್ಟು ನಿತ್ಯವೆಂಬುದು ನಿಜವಾಯಿತಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
-->