ಅಥವಾ

ಒಟ್ಟು 42 ಕಡೆಗಳಲ್ಲಿ , 22 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಯತವಾದ ಆರು ಗ್ರಾಮಕ್ಕೆ ಅರುವರು ತಳವಾರನಿಕ್ಕಿದ ನಮ್ಮರಸು. ಆ ಅರಸಿಂಗೆ ಕಟ್ಟಿತ್ತು ತೊಟ್ಟಿಯ ಮುಖಸಾಲೆಯ ಮಂಟಪ. ಆ ತಳವಾರರಿಗೆ ಕಟ್ಟಿತ್ತು ಕೈಸಾಲೆಯ ಮಂಟಪ. ಆ ಒಬ್ಬೊಬ್ಬ ತಳವಾರಂಗೆ ಆರಾರು ಗೆಣೆಯರ ಕೂಡಿಸಿ ಕೊಡಲು, ಆ ಗೆಣೆಯರು ತಮಗೊಬ್ಬೊಬ್ಬರಿಗೆ ಆರಾರು ಸಖರ ಕೂಡಿಕೊಂಡ ಪರಿಯ ನೋಡಾ. ಆ ಸಖರು ಆ ಗೆಣೆಯರೊಳಡಗಿ, ಆ ಗೆಣೆಯರು ಆ ತಳವಾರರೊಳಡಗಿ, ಆ ತಳವಾರರ ಕಂಡು ಅರಸು ತನ್ನ ಹೆಂಡತಿಯ ತಬ್ಬಿಕೊಂಡು ಉರಿಯ ಪೊಗಲಾಗಿ, ಎನ್ನ ಗಂಡ ಕಪಿಲಸಿದ್ಧಮಲ್ಲಿಕಾರ್ಜುನನ ನಾ ಕೇಳಲು ಬಯಲ ಬಿತ್ತಿ ಎಂದನು
--------------
ಸಿದ್ಧರಾಮೇಶ್ವರ
ಮೊದಲು ರೂಪಾದ ಬಿತ್ತು, ಭೂಮಿಯಲ್ಲಿ ಬಿತ್ತಿ, ಅದು ಬೀಜ ನಾಮ ನಿಂದು, ಸಸಿಯೆಂಬ ನಾಮವಾಯಿತ್ತು. ಸಸಿ ಬಲಿದು ಬೆಳೆದು, ಉಂಡಿಗೆಯ ಬೀಜವೆಂಬ ಉಭಯನಾಮವ ತಾಳಿದುದು. ಬೀಜ ಒಂದೋ, ಎರಡೋ ? ಎಂಬುದನರಿದಲ್ಲಿ, ಕ್ರೀ ಶೂನ್ಯವೆಂಬ ಉಭಯನಾಮವಡಗಿತ್ತು. ಐಘಟದೂರ ರಾಮೇಶ್ವರಲಿಂಗ[ದ] ಉಭಯನಾಮ ನಿಂದಿತ್ತು.
--------------
ಮೆರೆಮಿಂಡಯ್ಯ
ಪರಶಿವತತ್ವದ ಸ್ವರೂಪವ ಬಲ್ಲೆವೆಂಬಿರಿ, ನಿಮ್ಮ ಬಲ್ಲತನವ ಪೇಳಿರಯ್ಯಾ. ಆಗಮ ಪುರುಷರಿರಾ, ನಿಮ್ಮಾಗಮಂಗಳು ನಮ್ಮ ಶಿವನ ನಿಲುಕಡೆಯನರಿಯದೆ, ಅರಸಿ ಅರಸಿ ಆಸತ್ತು ಬಳಲಿ ಹೋದವು ಕೇಳಿರಯ್ಯಾ. ವೇದಪುರುಷರಿರಾ, ನಿಮ್ಮ ವೇದಂಗಳು ವೇದಿಸಲರಿಯದೆ ನಾಯಾಗಿ ಬೊಗಳಿ, ಬೆಂಡಾಗಿ ಹೋದವು ಕೇಳಿರಯ್ಯಾ. ಪುರಾಣಪುರುಷರಿರಾ, ನಿಮ್ಮ ಪುರಾಣಂಗಳು ಪೂರೈಸಿ ಪರಶಿವನ ಕಾಣದೆ ವೀರಶೈವ ಪುಂಡ್ರಮಸ್ತಕದಿಂದ ಮಥನಿಸಿ ಹೋದವು ಕೇಳಿರಯ್ಯಾ. ಶಾಸ್ತ್ರಸಂದ್ಥಿಗಳರಿರಾನಿಮ್ಮಶಾಸ್ತ್ರ ಸಾದ್ಥಿಸಿ ನಮ್ಮ ಪರಶಿವನ ನಿಲುಕಡೆಯ ಕಾಣದೆ ಒರಲಿ ಒರಲಿ ಹೋದವು ಕೇಳಿರಯ್ಯಾ. ತರ್ಕ ತಂತ್ರಗಳ ಕಲಿತು ಹೇಳುವರೆಲ್ಲ ಟಗರು, ಕೋಣ, ಹುಂಜಿನಂತೆ ಹೋರಾಡಿ ಮಥನದಿಂದ ಹೊಡೆದಾಡಿ ಪರಶಿವನ ಕಾಣದೆ ಸತ್ತು ಹೋದರಲ್ಲಾ ! ಇಂತೀ ವೇದ ಶಾಸ್ತ್ರಗಮ ಪುರಾಣ ತರ್ಕ ತಂತ್ರಗಳು ಶಿವನ ನಿಲುಕಡೆಯನೆಂದಿಗೂ ಅರಿಯವು. ಇಂತಿವನೆಲ್ಲವನು ನೋಡಿ ಶಿವನ ಕೂಡಬೇಕೆಂಬಣ್ಣಗಳು ಮುನ್ನವೆ ಅರಿಯರು, ಅದೇನು ಕಾರಣವೆಂದಡೆ- ಪ್ರಸೂತವಾಗದ ಮುನ್ನ ಶಿಶು ಬಯಸಿದರುಂಟೆ ? ಹಸಿಯಿಲ್ಲದ ಭೂಮಿಯಲ್ಲಿ ಬೀಜವ ಬಿತ್ತಿ ಫಲವ ಬಯಸಿದರುಂಟೆ ? ಈ ದೃಷ್ಟಾಂತದಂತೆ ತಿಳಿದು ಇಂತೀ ಎಲ್ಲವನು ವಿಸರ್ಜಿಸಿ ಕಳೆವುದು ಶಿವಜ್ಞಾನ. ಅಂತಪ್ಪ ಶಿವಜ್ಞಾನದ ನಿಲವು ಕರಸ್ಥಳದ ಇಷ್ಟಲಿಂಗ. ಆ ಇಷ್ಟಲಿಂಗಬ್ರಹ್ಮದ ನಿಜವು ತಾನೆಂದು ತಿಳಿದು ಶಿಶುಕಂಡ ಕನಸಿನಂತೆ, ಮೂಕ ಸಕ್ಕರಿಮೆದ್ದಂತೆ ಇರ್ದರಯ್ಯಾ ನಿಮ್ಮ ಶರಣರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಳಗಣವರೈವರ ಎನ್ನ ಕಣ್ಣಿಂಗೆ ತಳವೆಳಗು ಮಾಡಯ್ಯಾ. ಬೆಳವಿಗೆಯ ಬೀಜವ ಬಿತ್ತಿ, ಆ ಫಲದ ರುಚಿಯನುಂಡುಕೊಳ್ಳಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟಿಯ ಕಟ್ಟಿ, ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದಡೆ, ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು, ಕೂಡಲಸಂಗಮದೇವಾ.
--------------
ಬಸವಣ್ಣ
ಭಿತ್ತಿುಲ್ಲದೆ ಬರೆಯಬಹುದೆ ಚಿತ್ತಾರವ ಬಿತ್ತಿ ಬೆಳೆಯಬಹುದೆ ಧರೆುಲ್ಲದೆ ಜಂಗಮವಿಲ್ಲದೆ ಲಿಂಗಾರ್ಚನೆಯ ಮಾಡಬಹುದೆ ರೂಡ್ಥೀಶ್ವರನ ಭೇದಿಸಬಹುದೆ ! ಒಡಲಿಲ್ಲ[ದೆ]. ನಿರಾಳಕರ್ತೃ ಕೂಡಲಸಂಗಮದೇವ ಜಂಗಮಮುಖವಾದನಾಗಿ ಮತ್ತೊಂದನರಿಯೆನಯ್ಯಾ. 399
--------------
ಬಸವಣ್ಣ
ನೆಲವಿಲ್ಲದ ಭೂಮಿ ಭಾಗವ ಮಾಡಿ ಕಳ್ಳಿ ಮುಳ್ಳ ಹಚ್ಚದೆ ಶೀಗರೀ ಗಜಗ ಹಚ್ಚಿ, ಉಳ್ಳಿ ಮೂಲಂಗಿ ಬಳ್ಳೊಳ್ಳಿ ಸಬ್ಬಸಗಿ ನಾರಗಡ್ಡೆ ಮೊದಲಾದ ಕಿರುಕುಳ ಬಾಡವ ಬಿತ್ತದೆ, ತೆಂಗು ಹಲಸು ಮಾವು ಮೊದಲಾದ ಅಮೃತಫಲದ ವೃಕ್ಷವ ಬಿತ್ತಿ, ನೀರಿಲ್ಲದೆ ಫಲವಡ್ಡಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಯ್ಯಾ, ಅಷ್ಟತನುಮೂರ್ತಿಗಳಿಲ್ಲದಲ್ಲಿಂದತ್ತತ್ತ ಅನಿರ್ವಾಚ್ಯವಾಗಿರ್ದಿರಯ್ಯ. ಅಯ್ಯಾ, ನಿಮ್ಮ ವಿನೋದದಿಂದ ನೀವೇ ವಾಚಾಸ್ವರೂಪದಿಂದ ಜಂಗಮವಾದಿರಿ ದೇವಾ. ನಿಮ್ಮ ಮಹಾತ್ಮೆಯ ನೀವೆ ಬಲ್ಲಿರಿ. ನಿಮ್ಮ ಮುಖವೈದರಿಂದ ಉದಯಿಸಿದ ಪಂಚಭೂತಾದಿ ಸಕಲತತ್ವಂಗಳೇ ಪದಾರ್ಥವೆಂದು ನಿಮಗರ್ಪಿಸಲು, ಪಂಚಾಕ್ಷರಿ ಪ್ರಾಣಾತ್ಮಕನಾಗಿ ಬಂದಾತ ಬಸವಣ್ಣ. ಪಾದತೀರ್ಥದಲ್ಲಿ ಬೆಳಸ ಬಿತ್ತಿ, ಕ್ರೀಯಿಂದಾದ ಬೆಳೆಸಿರಿವಂತನಾಗಿ ಗುರುವಿಂಗಿತ್ತ, ಲಿಂಗಕಿತ್ತ, ಮತ್ತಾ ಜಂಗಮಕಿತ್ತ ಬಸವಣ್ಣ. ಬಸವಣ್ಣನಿಂತಹ ಶ್ರೀಮಂತನೆಂದರಿದು, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣ ಬಸವಣ್ಣಕೊಂಡಿರ್ದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಪಾಪಿ ನಾನೊಂದು ಪಾಪವ ಮಾಡಿದೆ. ಆ ಪಾಪವೆನಗೆ ಸತಿಸುತರಾಗಿ ಕಾಡುತ್ತಿದೆ. ಪಾಪವನೆ ಬಿತ್ತಿ, ಕೋಪವನೆ ಬೆಳೆದು, ಈ ಪರಿಯಲಿ ದಿನಂಗಳು ಹೋದವಲ್ಲ. ಎನಗಿನ್ನೇನು ಪರಿ ಹೇಳಾ, ದೇವರಾಯ ಸೊಡ್ಡಳಾ ?
--------------
ಸೊಡ್ಡಳ ಬಾಚರಸ
ಅಂದೊಮ್ಮೆ ಧರೆಯ ಮೇಲೆ ಬೀಜವಿಲ್ಲದಂದು ಬಸವನೆಂಬ ಗಣೇಶ್ವರನು ಭೋಂಕರಿಸಿ ಕೆಲೆದಡೆ ಬೀಜ ಉತ್ಪತ್ತಿಯಾಯಿತ್ತು. ಅದೆನೆ ಬಿತ್ತಿ ಅದನೆ ಬೆಳೆದು ಅಟ್ಟಟ್ಟು ಲಿಂಗಕ್ಕೆ ಬೋನವ ಮಾಡಿ- ನಾಗಲೋಕದ ನಾಗಗಣಂಗಳಿಗೆಯೂ ಬಸವಣ್ಣನ ಪ್ರಸಾದ, ಮತ್ರ್ಯಲೋಕದ ಮಹಾಗಣಂಗಳಿಗೆಯೂ ಬಸವಣ್ಣನ ಪ್ರಸಾದ, ದೇವಲೋಕದ ದೇವಗಣಂಗಳಿಗೆಯೂ ಬಸವಣ್ಣನ ಪ್ರಸಾದ, ಎಲೆ ಕೂಡಲಚೆನ್ನಸಂಗಮದೇವಾ, ನಿಮ್ಮಾಣೆ, ನಿಮಗೂ ಎನಗೂ ಬಸವಣ್ಣನ ಪ್ರಸಾದ !
--------------
ಚನ್ನಬಸವಣ್ಣ
ಲಿಂಗಕ್ಷೇತ್ರವೆಂಬ ಪವಿತ್ರಸ್ಥಲದಲ್ಲಿ, ಪ್ರಸಾದಿ ಭಕ್ತಿ ಬೀಜದ ಬಿತ್ತಿ ಶುದ್ಧ ಪದಾರ್ಥವ ಬೆಳೆದು, ಆ ಪದಾರ್ಥವ ಲಿಂಗಾರ್ಪಿತವ ಮಾಡಿ ಆ ಪ್ರಸಾದವ ತಾನಿಲ್ಲದೆ ಭೋಗಿಸಿ ನಿತ್ಯಸುಖಿಯಾದನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಪ್ರಸಾದಿ.
--------------
ಸ್ವತಂತ್ರ ಸಿದ್ಧಲಿಂಗ
ತಾಪತ್ರಯಂಗಳಿಗೆನ್ನನು ಒಳಗುಮಾಡುವ ಕರ್ಮತ್ರಯಂಗಳು ಕೆಟ್ಟಕೇಡ ನೋಡಾ ಎಲೆ ತಂಗಿ. ಕಾಯದ ಕಳವಳಕಂಜಿ ಸಂಚನ ಮಡಗುವ ಹೊನ್ನ ಬಿಟ್ಟಲ್ಲಿಯೇ ಸಂಚಿತಕರ್ಮ ನಾಸ್ತಿಯಾಯಿತು. ಬಂದುದು ಮೊದಲಾಗಿ ಆಗಾಗಲೇ ಅನುಭವಿಸಿ ಲಬ್ಧವನುಳಿಯಲೀಯದೆ ಭೋಗವನುಂಬ ಹೆಣ್ಣ ಬಿಟ್ಟಲ್ಲಿಯೇ ಪ್ರಾರಬ್ಧಕರ್ಮ ನಾಸ್ತಿಯಾಯಿತು. ಇಂದು ಬಿತ್ತಿ ಮುಂದಕ್ಕೆ ಆಗು ಮಾಡುವ ಮಣ್ಣ ಬಿಟ್ಟಲ್ಲಿಯೇ ಆಗಾಮಿಕರ್ಮ ನಾಸ್ತಿಯಾಯಿತು. ಸಂಚಿತಕರ್ಮ ನಾಸ್ತಿಯಾದಲ್ಲಿಯೇ ಬ್ರಹ್ಮನ ಸೃಷ್ಟಿಯೆಂಬ ಸೆರೆಮನೆ ಹಾಳಾಯಿತು. ಪ್ರಾರಬ್ಧಕರ್ಮ ನಾಸ್ತಿಯಾದಲ್ಲಿಯೇ ವಿಷ್ಣುವಿನ ಸ್ಥಿತಿಯೆಂಬ ಸಂಕೋಲೆ ತಡೆಗೆಡೆಯಿತು. ಆಗಾಮಿಕರ್ಮ ನಾಸ್ತಿಯಾದಲ್ಲಿಯೇ ರುದ್ರನ ಸಂಹಾರವೆಂಬ ಪ್ರಳಯಾಗ್ನಿ ಕೆಟ್ಟಿತ್ತು. ಇಂತೀ ಮೂವರ ದಾಂಟಿದಲ್ಲಿಯೇ ತಂದೆ ತಾಯಿಗಳೆನ್ನ ಕೈವಿಡಿದೆತ್ತಿಕೊಂಡು ಬಸವಾದಿ ಪ್ರಮಥರ ಕೈ ವಶವ ಮಾಡಿದರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಅಜಾತಲಿಂಗ ಸುಕ್ಷೇತ್ರದಲ್ಲಿ ಪವಿತ್ರಶರಣ, ಪದಾರ್ಥವ ಬಿತ್ತಿ ಪ್ರಸಾದವ ಬೆಳೆವ, ಅಂದಂದಿಗೆ ಹೊಸಫಲವನುಂಬ, ಅನ್ಯವ ಮುಟ್ಟನಾ ಶರಣ. ಕೂಡಲಚೆನ್ನಸಂಗನ ಶರಣ ಮತ್ರ್ಯನೆಂದರೆ ನರಕ ತಪ್ಪದು.
--------------
ಚನ್ನಬಸವಣ್ಣ
ತನುವೆಂಬ ಹೊಲದೊಳು ಜೀವವೆಂಬ ಒಕ್ಕಲಿಗ, ಅಜ್ಞಾನವೆಂಬ ಕೂರಿಗೆ, ಪಂಚೇಂದ್ರಿಯವೆಂಬ ತಾಳುಗಳಿಗೆ, ಪಂಚವಿಷಯವೆಂಬ ಸೆಡ್ಡಿಯಕೋಲನಿಕ್ಕಿ, ಚಿತ್ತವೆಂಬ ಸೆಡ್ಡಿಯಬಟ್ಟಲಿಗೆ ಬುದ್ಧಿಯೆಂಬ ಹಸ್ತದಿಂದ ದಶವಾಯುಗಳೆಂಬ ಬೀಜವ ಬಿತ್ತಿ, ಕರಣಾದಿಗುಣವೆಂಬ ಬೆಳೆಯ ಬೆಳೆವುತ್ತಿರೆ, ಮನವಿಕಾರಭ್ರಮೆಯೆಂಬ ಮೂಷಕನ ಹಿಂಡು ಕವಿಯೆ, ಅದಕ್ಕೆ ರೋಷವೆಂಬ ಬಡಿಗಲ್ಲನೊಡ್ಡಿ, ಆಸೆಯೆಂಬ ಜಂಪವಿಟ್ಟು, ರೋಷವೆಂಬ ಬಡಿಗಲ್ಲು ಮೇಲೆ ಬೀಳೆ, ಒದ್ದಾಡಿ ಒರಲೊರಲಿ ಸಾಯುತಿರೆ, ತನುವೆಂಬ ಹೊಲನ ಕೆಡಿಸಿ, ಜೀವವೆಂಬ ಒಕ್ಕಲಿಗನ ಕೊಂದು, ಅಜ್ಞಾನವೆಂಬ ಕೂರಿಗೆಯನುರುಹಿ, ಪಂಚೇಂದ್ರಿಯವೆಂಬ ತಾಳ ಮುರಿದು, ಪಂಚವಿಷಯವೆಂಬ ಸೆಡ್ಡಿಯಕೋಲ ಸೀಳಿಬಿಟ್ಟು, ಚಿತ್ತವೆಂಬ ಸೆಡ್ಡಿಯಬಟ್ಟಲನೊಡದು, ಬುದ್ಧಿಯೆಂಬ ಹಸ್ತದ ಸಂದ ತಪ್ಪಿಸಿ, ದಶವಾಯುಗಳೆಂಬ ಬೀಜವ ಹುರಿದು, ಕರಣೇಂದ್ರಿಯವೆಂಬ ಬೆಳೆಯ ಕೊಯಿದು ಕೆಡಿಸಿ, ನಿಃಕರಣವಾಗಿ ನಿಜಲಿಂಗಪದವ ಸಾರಿಪ್ಪ ಶರಣಂಗೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಾಜವೆಂಬ ನಿಜಮಾರ್ಗದಲ್ಲಿ ವಾಜಿಯುಳ್ಳ ಸತಿಯಳು ನಿಂದು, ಬೀಜವ ತೋರುತಿಪ್ಪಳು ನೋಡಾ. ಆ ಬೀಜವ ಬಿತ್ತಿ, ಫಲವನುಂಬ ಹಿರಿಯರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->