ಅಥವಾ

ಒಟ್ಟು 21 ಕಡೆಗಳಲ್ಲಿ , 6 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವಿಯ ಕಳೆದು ಭಕ್ತನ ಮಾಡಿ ಅಂಗದ ಮೇಲೆ ಲಿಂಗವ ಧರಿಸಿ, ಗುರುರೂಪನ ಮಾಡಿದ ತನ್ನ ನಿಜಗುರುವಪ್ಪ ಪೂರ್ವಾಚಾರ್ಯನನತಿಗಳೆದು; ಯತಿ ಜತಿಗಳಿವರು ಅತಿಶಯರೆಂದು ಅವರಲ್ಲಿ ಹೊಕ್ಕು, ಪ್ರತಿದೀಕ್ಷೆಯ ಕೊಂಡವಂಗೆ ಗುರುದ್ರೋಹ ಕೊಟ್ಟವಂಗೆ ಲಿಂಗದ್ರೋಹ. ಇವರಿಬ್ಬರಿಗೂ ಗುರುವಿಲ್ಲ, ಗುರುವಿಲ್ಲವಾಗಿ ಲಿಂಗವಿಲ್ಲ, ಲಿಂಗವಿಲ್ಲವಾಗಿ ಜಂಗಮವಿಲ್ಲ ಜಂಗಮವಿಲ್ಲವಾಗಿ ಪಾದೋದಕವಿಲ್ಲ, ಪಾದೋದಕವಿಲ್ಲವಾಗಿ ಪ್ರಸಾದವಿಲ್ಲ. ಇಂತೀ ಪಂಚಾಚಾರಕ್ಕೆ ಹೊರಗಾದ ಪತಿತರನು, ಗುರು ಚರ ಪರವೆಂದು ಆರಾಧಿಸಿದವಂಗೆ ಅಘೋರನರಕ ತಪ್ಪದು. ಅದೆಂತೆಂದಡೆ:``ಯಸ್ತು ಗುರು ಭ್ರಷ್ಟಾರಾರಾಧಿತಃ ತಸ್ಯ ಘೋರನರಕಃ' ಎಂದುದಾಗಿ_ ಇವಂದಿರನು ಗುರುಹಿರಿಯರೆಂದು ಸಮಪಂಕ್ತಿಯಲ್ಲಿ ಕೂಡಿ ಪ್ರಸಾದವ ನೀಡಿ, ಒಡಗೂಡಿಕೊಂಡು ನಡೆಯ ಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ವಿಕಾರದೊಳು ವಿಕಾರ ಕಪಿವಿಕಾರ. ವಿಕಾರದೊಳು ವಿಕಾರ ಸುರೆಗುಡಿದವನ ವಿಕಾರ. ವಿಕಾರದೊಳು ವಿಕಾರ ದತ್ತೂರಿಯ ಸವಿದ ವಿಕಾರ. ಇಂತೀ ಎಲ್ಲಕೆ ಗುರು ಮನೋವಿಕಾರವೆಂಬುದು. ಸುರೆ ದತ್ತೂರಿಯ ಸವಿದವನದು ಒಂದಿನಕಾದರೂ ಪರಿಹಾರವಾಗುವದು. ಮನೋವಿಕಾರದ ದತ್ತೂರಿ ಅನುದಿನ ತಲೆಹೇರಿಕೊಂಡು ಮುಳುಗಿತ್ತು. ಭೂಲೋಕದ ಯತಿ ಸಿದ್ಧ ಸಾಧ್ಯರ ಕೊಂಡು ಮುಳುಗಿತ್ತು. ದೇವಲೋಕದ ದೇವಗಣ ಅಜಹರಿಸುರರ ಜನನಮರಣವೆಂಬ ಅಣಲೊಳಗಿಕ್ಕಿತ್ತು ಮನೋವಿಕಾರ. ಮನೋವಿಕಾರದಿಂದ ತನುವಿನಕಾರ, ಮನೋವಿಕಾರದಿಂದ ಮಾಯಾಮದ. ಮನೋವಿಕಾರದಿಂದ ಪಂಚಭೂತ ಸಪ್ತಧಾತು ದಶವಾಯು ಅರಿಷಡ್ವರ್ಗ ಅಷ್ಟಮದ ಪಂಚೇಂದ್ರಿಯ, ಅಂಗದೊಳು ಚರಿಸುವ ಜೀವ ಪ್ರಾಣ ಕರಣಾದಿ ಗುಣಂಗಳೆಲ್ಲಕ್ಕೆಯು ಮನವೆ ಮುಖ್ಯ ನೋಡಾ. ಮನೋವಿಕಾರವನಳಿದು ಶಿವವಿಕಾರದೊಳು ಇಂಬುಗೊಂಡಾತ ಮೂರುಲೋಕಾರಾಧ್ಯನೆಂಬೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಯತಿಗಳು ಆಸೆರೋಷವ ಕಳೆಯಲರಿಯದೆ ಮತಿಭ್ರಷ್ಟರಾದರು. ಸಿದ್ಧರು ಆಸೆರೋಷವ ಕಳೆಯಲರಿಯದೆ ಬುದ್ಧಿಹೀನರಾದರು. ಯೋಗಿಗಳು ಆಸೆರೋಷವ ಕಳೆಯಲರಿಯದೆ ಹೆಗ್ಗರಾದರು. ಇಂತೀ ಯತಿ ಸಿದ್ಧ ಸಾಧ್ಯಯೋಗಿಗಳನರಿಯದ ಆಸೆಬದ್ಧವೆಂಬ ಮಾಯೆ ಕುರಿಮಾನವರನೆತ್ತ ಬಲ್ಲುದಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಂಚೇಂದ್ರಿಯೆಂಬ ಕರ್ಮಿಗಳ ಉರಿಯ ಪ್ರಪಂಚಿಗೆ ಗುರಿಯಾಗಿ ಯತಿ ಸಿದ್ಧ ಸಾಧ್ಯರೆಲ್ಲ ಮತಿಭ್ರಷ್ಟರಾದರು. ಅದು ಎಂತೆಂದೊಡೆ : ಹಾಳೂರ ಹೊಕ್ಕರೆ ನಾಯ ಜಗಳವ ಕಂಡಂತೆ, ಶಿವಜ್ಞಾನವಿಲ್ಲದಂಗಹಾಳಿಂಗೆ ಪಂಚೇಂದ್ರಿಯವೆಂಬ, ನಾಯಿ ಬೊಗಳೆ ಹಂಚು[ಹರಿಯಾದರು] ಕೆಲಬರು. ಇಂತೀ ಪಂಚೇಂದ್ರಿಯಂಗಳು ಸುಟ್ಟು ಲಿಂಗೇಂದ್ರಿಯಮುಖವಾಗಿಪ್ಪ ಶರಣನ ಏನೆಂದು ಉಪಮಿಸುವೆನಯ್ಯಾ ? ಆತನಂಗವೆ ಶಿವನಂಗ, ಶಿವನಂಗವೆ ಶರಣನಂಗ, ಸಾಕ್ಷಿ :``ಶಿವಾಂಗಂ ಶರಣಾಂಗಂ, ಚ ಶರಣಾಂಗಂ ಶಿವಾಂಗಕಂ | ದ್ವಯೋರಂಗಯೋರ್ಭೇದಃ ನಾಸ್ತಿ ಸಾಕ್ಷಾತ್ ಪರಶಿವಃ ||'' ಎಂದುದಾಗಿ, ನಿಮ್ಮ ಶರಣರ ದರುಶನದಿಂದಲೆನ್ನ ಬದುಕಿಸಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹರಿಯೆಂಬಾತ ನಿಮ್ಮ ಚರಣವನರಿಯ; ಬ್ರಹ್ಮನೆಂಬಾತ ನಿಮ್ಮ ಮುಕುಟವನರಿಯ; ಯತಿ ವ್ರತಿ ಋಷಿಗಲೆಂಬವರು ನಿಮ್ಮ ಒಳಗನರಿಯರು; ಸಮಸ್ತ ದೇವರ್ಕಳು ನಿಮ್ಮ ರೋಮದ ಪ್ರಮಾಣವನರಿಯರು; ಶತಕೋಟಿ ಸೂರ್ಯರು ನಿಮ್ಮ ಬೆಳಗೆ ಕಾಣಲರಿಯರು. ಕಪಿಲಸಿದ್ಧಮಲ್ಲಿಕಾರ್ಜುನಾ, ನಾ ನಿಮ್ಮನರಿಯಬಲ್ಲವನೇ ಅಯ್ಯಾ ?
--------------
ಸಿದ್ಧರಾಮೇಶ್ವರ
ಮನವಿಕಾರ ಸುಟ್ಟದನು ಮನವಿಕಾರದ ಭ್ರಮೆಯ ಹೋರಟೆಯಾಗದೆಂ ಬನುವಿನಿಂ ತ್ರಿಲೋಕಯೆಲ್ಲ ಭಂಗಿತರಾಗಿ ಜನನ ಮರಣಕೆ ಬರುವ ಮನವು ನಿರ್ಮನವಾಗಲವ ಸತ್ಯ ನಿತ್ಯ ಶರಣ. ಪದ :ಹರಿದು ಮರ್ಕಟನ ವಿಕಾರಕಿಂದಲಿ ಮೇಣು ಸುರೆ ಸವಿದವನ ವಿಕಾರವದರಿಂದ ಧ ತ್ತುರಿಯ ಸೇವಿಸಿದವನ ವಿಕಾರಯಿವು ತ್ರಿವಿಧಕೆ ಗೌರವಂ ಮನವಿಕಾರ ಚರಿಯ ಮದದ ಅಮಲು ತಲೆಗೇರಿ ತಾಮಸದಲಿಂ ಗಿರಿಯಂಧಕನವೋಲಿನಂತೆ ದೇವತಾ ಸತ್ಯ ಪುರುಷರುಂ ಶಿವಜ್ಞಾನ ಹೊಲಬನರಿಯದೆ ಕೆಟ್ಟುದನೇನ ಹೊಗಳ್ವೆ ನಾನು | 1 | ಹರಿಯ ಮುಂದುಗೆಡಿಸಿ ಅಜನ ಶಿರವ ಕಳೆಸಿ ಸುರನ ಮೈಯೋನಿಯಂ ಮಾಡಿ ದೇವರ್ಕಳಂ ನೆರೆ ಕೆಡಿಸಿ ಯತಿ ಸಿದ್ಧಸಾಧ್ಯರೆಲ್ಲರ ಸೆರೆಯ ಹಿಡಿದು ಭಂಗಿತರ ಮಾಡಿ ಧರೆಯ ಮನುಜರ ತಿಂದು ತೇಗಿ ಕಾಡುವ ಮನವ ನಿರಸನಮಾಡಿ ನಿರ್ಮೋಹಿಯಾಗಿಹ ಸತ್ಯ ಶರಣರಡಿಧೂಳಿಯ ಚಮ್ಮಾವುಗೆಯ ಪೊರೆವೆನೆನಗಿದೆ ಸತ್ಯ ಮುಕ್ತಿ ಕಂಡಾ |2| ಇಳೆಪತಿಗೆ ಮಂತ್ರಿ ತಾ ಮುಖ್ಯವಾದಂತೆ ಕಾಯ ದೊಳು ಚರಿಸುವ ಜೀವ ಪ್ರಾಣದ್ವಯ ದಶವಾಯು ಗಳು ಅಷ್ಟಮದ ಸಪ್ತವ್ಯಸನ ಅರಿವರ್ಗ ಚತುರಂತಃಕರಣವಿಷ್ಟೆಲ್ಲಕೆ ಸಲೆ ಮನಂ ಮುಖ್ಯವಾಗಿಯೂ ಪಾಪ ಅನ್ಯಾಯವ ಗಳಿಸಿ ಯಮನಿಂಗೆ ಗುರಿಮಾಡಿ ಬಂಧಿಸಿ ಜನರ ಕೊಲ್ಲಿಸುತಿಹ ವಿಧಿಗಂಜಿ ನಿಮ್ಮ ಮೊರೆಹೊಕ್ಕೆನೆಲೆ ಕಾಯೋ ಶಂಭುವೆ. | 3 | ಚಣಚಣಕ್ಕೆ ಪಾತಾಳಲೋಕಕೈದುವ ಮನಂ ಚಣಚಣಕ್ಕೆ ಆಕಾಶದತ್ತ ಹಾರುವ ಮನಂ ಚಣಚಣಕ್ಕೆ ಸಪ್ತಸಮುದ್ರವ ಚರಿಸಿಬರುವುದೀ ಮನಮರುತ ಸರ್ವಾಂಗದಿ ಚಣಕೊಂದು ಬುದ್ಧಿಯ ನೆನದು ಕಾಡುವ ಮನದ ಗುಣದಿಂದ ನಾ ಕರ್ಮಶರಧಿಯೊಳು ಮುಣಗಿದೆನು ತ್ರಿಣಯ ನೀ ಕೈವಿಡಿದು ತೆಗೆದು ರಕ್ಷಿಸು ಎನ್ನ ಕರುಣಾಳು ದುರಿತಹರನೆ |4 | ಮನದಿಂದೆ ನೊಂದೆ ನಾ ಮನದಿಂದೆ ಬೆಂದೆ ನಾ ಮನದಿಂದ ಕಂದಿ ಕುಂದಿಯೆ ಕುಸಿದು ಭವಗಿರಿಯ ನನುದಿನಂ ಸುತ್ತುತಿರ್ದೆನು ಅಂಧಕನ ತೆರದಿ ಮನದ ನಸು ಗುನ್ನಿ ಚುರಿಚಿತನವು ಸರ್ವಾಂಗವೆಲ್ಲವ ಕೊಂಡು ತಿನಿಸೆದ್ದು ಮನದ ಗಂಧೆಯ ತುರಿಸಿ ತುರಿಸನೇ ಹಂಬಲಿಸಿ ಕನಲುತಿರ್ದೆನು ಎನ್ನ ಗುಣವ ನೋಡದೆ ಕಾಯೋ ಕಾಯೋ ಕರುಣಾಳುವೆ |5| ಪಾಪಿಮನ ಠಕ್ಕಮನ ಸರ್ವರೊಳು ಕೋಪಿಮನ ಕುಕ್ಕಮನ ಕಾಕುಮನ ಜಾಪಿಮನ ಹೇವಮನ ಹೆಬಗಮನ ಗುಣಧರ್ಮಕರ್ಮದಿಂದ ತಾಪಸಬಡುತಿರ್ದೆ ಗಾಯವಡೆದ ಉರಗ ನಾಪರಿಯಲೆನ್ನ ನೆರಳಿಸಿ ಒರಲಿಸುವ ಮನದ ರೂಪನಳಿದು ಜ್ಞಾನವಿತ್ತು ಸಲವಯ್ಯಾ ಚಿದ್ರೂಪ ಚಿನ್ಮಯ ಶಂಭುವೆ. | 6 | ಕೂಳಮನ ಕುರಿಮನ ಸರ್ವಚಾಂ ಡಾಲಿಮನ ಪರಧನ ಪರಸ್ತ್ರೀಯರನ್ಯಕ್ಕೆ ಕೋಳುಗೊಂಬುವ ಹೆಡ್ಡಮನ ಜಿಡ್ಡುಮನ ಜಾಳುಮನ ಹಾಳುಮನದ ಪಾಳೆಯವು ಹಲವು ಪರಿಯ ಮನದ ಗಾಡಿಗೆ ಸಿಲ್ಕಿ ಕಾಲಕರ್ಮಕ್ಕೆ ಗುರಿಯಾದೆನಿದ ಪರಿಹರಿಸಿ ಶೂಲಿ ಸರಸಿಜನ ಕಪಾಲಿ ಶಿರಮಾಲಿ ರಕ್ಷಿಸು ಕರುಣಾಂಬುನಿಧಿ ಗಿರಿಜೇಶನೆ |7| ಅಂಗಗೂಡಿನೊಳು ಮನಪಕ್ಷಿ ಹೊರಗಿರುವ ಪ ಕ್ಕಂಗಳೆರಡರೊಳು ಉಡುಪತಿ ಭಾನುವಂ ಪಿಡಿದು ಜಂಗಿಟ್ಟು ಭೂಯ್ಯೋಮ ಮಧ್ಯದೊಳು ಚರಿಸುತಿರಲೆತಿ ಸಿದ್ಧ ಸಾಧ್ಯರೆಲ್ಲ ಭಂಗಬಡುವರು ಮನವೆಂಬ ಪಕ್ಷಿಯ ಮುರಿದು ನುಂಗಬಲ್ಲಡೆ ಸತ್ಯಶಿವಯೋಗಿ ಶರಣ ನಿ ರ್ಭಂಗ ನಿರ್ಲೇಪ ನಿರ್ಮನ ನಿರಾಭಾರಿಯಾಗಿಹರೆನ್ನ ಪ್ರಾಣಲಿಂಗ. | 8 | ಹರನ ಶ್ರೀಪಾದದೊಳು ಮನವನಿಟ್ಟಿಹ ಸತ್ಯ ಶರಣಬಸವೇಶ ಪ್ರಭುರಾಯ ಮೋಳಿಗೆ ಮಾರ ಗುರುಭಕ್ತ ನೆಂಬಣ್ಣ ದಾಸಿ ಕೇಶಯ್ಯನೋಹಿಲದೇವನುದುಟಯ್ಯ ಮರುಳಶಂಕರ ಮುಖ್ಯವಾದ ಪ್ರಮಥರ ದಿವ್ಯ ಚರಣದಲಿ ಮನವ ಮಗ್ನಿಸಿದ ದಾಸೋಹಿಗಳ ವರಪ್ರಸಾದಕ್ಕೆ ಯೋಗ್ಯನ ಮಾಡು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. | 9 |
--------------
ಹೇಮಗಲ್ಲ ಹಂಪ
ಗುರು ಸಂಸಾರಿ, ಶಿಷ್ಯ ಯತಿಯಾದರೇನಯ್ಯಾ ! ಗುನುವಿನೆಡೆಗೆ ಶಿಷ್ಯ ಭಕ್ತಿ ಕಿಂಕುರ್ವಾಣವಿರಬೇಕಯ್ಯಾ. ಇಲ್ಲದ ಅಹಂಕಾರದಲ್ಲಿ `ನಾ ಯತಿ, ಗುರು ಸಂಸಾರಿ ' ಎಂಬ ಭಾವ ಅಂಗದೊಳು ಹೊಳೆದರೆ ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ವಾಯುಮುಖದಲುಲಿವಾವಯದ ವೃಕ್ಷದೊಳು ಆಯತವಾಗಿಹ ಹಣ್ಣಿನ ರುಚಿಯನು ಸವಿಯನರಿಯದೆ ಯತಿ ಸಿದ್ಧ ಸಾಧ್ಯರು ಬಾಯಸವಿಯನುಂಬರು. ಪದ :ಸರಸಿಜನೆಂಬ ಭೂಮಿಗೆ ವಿಷ್ಣುವೆಂಬ ನೀರಾಗಿ ನೆರದು ರುದ್ರಾಗ್ನಿಯೆಂದೆಂಬುವ ಮೂಲದ ಪರಬ್ರಹ್ಮವೃಕ್ಷದ ತುಟ್ಟತುದಿಯಲ್ಲಿಹ ವರ ಅಮೂರ್ತ ಹಣ್ಣಿನ ಸವಿಗೆರಗೊಡದಲ್ಲಾಡಿ. | 1 | ಐದು ಹತ್ತನು ಕೂಡಿದ ಸ್ವಸ್ಥಾನದಲ್ಲಿ ನಿಂದು ಈ ರೈದು ಗುಣವ ಕೊಟ್ಟು ಒರಲಿ ಚೇತರಿಸುತಿರಲಿ ಮೈಗುಂದಿ ಮೂಲೋಕ ಅಸುರಪಡೆಗೆ ಸಿಲ್ಕಿ ಸಾಯಸಬಡುತಿದೆ ಸಂಸಾರಬಂಧನದೊಳು. | 2 | ವಾಯು ಸರ್ಪನ ನುಂಗಿ ಮೇಲೆ ಗಗನವನಡರಿ ಛಾಯದ ಮನೆಯೊಳು ನಿಂದು ಚತುಃಕರಣ ಮಾಯಮದದಹಂಕಾರಗಿರಿಯನೇರಿ ಆಯಸಗೊಳುತಿದೆ ಬರಿದೆ ಅಜ್ಞಾನದೊಳು. | 3 | ವಾಯುಮುಖದ ತನು ವಾಯುಮುಖದ ಮನವು ವಾಯುಮುಖದ ಕರಣ ವಾಯುಮುಖದ ಚಿತ್ತ ವಾಯುಮುಖದ ಬುದ್ಧಿ ವಾಯುಮುಖದ ಆತ್ಮ ವಾಯುವಿಂಗೆ ಗುರಿಯಾಯಿತ್ತು . | 4 | ಗುಡಿಯಮುಖದಿ ದೇವರ ಕಾಣ್ಬಂದದಿಂ ಒಡಲ ವಾಯುಮುಖದಿ ಲಿಂಗವ ಕಂಡು ಕೂಡಿಯೆ ಒಡವೆರದು ಗುರುಸಿದ್ಧಮಲ್ಲಿನಾಥನ ಪಾದ ದೆಡೆಯ ನಂಬಿಯೆ ನಿತ್ಯನಾದೆನೆಲೆ ದೇವ. | 5 |
--------------
ಹೇಮಗಲ್ಲ ಹಂಪ
ಇನ್ನು ಲಿಂಗಧಾರಣ ಮಹಾತ್ಮೆಯ ಸ್ಥಲವೆಂತೆಂದಡೆ : ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಮೊದಲಾದ ಸಮಸ್ತಗಣಂಗಳೆಲ್ಲರು ಶಿವಲಿಂಗಧಾರಣವಾಗಿ ಶಿವಪೂಜೆಯ ಮಾಡಿದರು ನೋಡಾ. ಚಂದ್ರಾದಿತ್ಯ ಇಂದ್ರಾದಿ ದೇವರ್ಕಳೆಲ್ಲರು ಶಿವಲಿಂಗಧಾರಣವಾಗಿ ಶಿವಪೂಜೆಯ ಮಾಡಿದರು ನೋಡಾ. ಮನು ಮುನಿ ಯತಿ ರಾಕ್ಷಸರು ಮೊದಲಾಗಿ ಶಿವಲಿಂಗಧಾರಣವಾಗಿ ಶಿವಪೂಜೆಯಮಾಡಿ, ಶಿವಪ್ರಸಾದವ ಕೊಂಡು ತಮ್ಮ ತಮ್ಮ ಪದವಿಯ ಪಡೆದು ಬದುಕಿದರು ನೋಡಾ. ಇದಕ್ಕೆ ಶಿವಧರ್ಮಪುರಾಣೇ : ``ಇಂದ್ರ ನೀಲಮಯಂ ಲಿಂಗಂ ವಿಷ್ಣುಃ ಪೂಜಯತೇ ಸದಾ | ವಿಷ್ಣುತ್ವಂ ಪ್ರಾಪ್ಯತೇ ತೇನ ಸಾದ್ಭುತಂ ಚ ಸನಾತನಂ || ಬ್ರಹ್ಮಾ ಪೂಜಯತೇ ನಿತ್ಯಂ ಲಿಂಗಂ ಶೈಲಮಯಂ ಶುಭಂ | ತಸ್ಯ ಸಂಪೂಜನಾತ್ತೇನ ಪ್ರಾಪ್ತಂ ಬ್ರಾಹ್ಮತ್ವಮುತ್ತಮುಂ || ಮುಕ್ತಾಫಲಮಯಂ ಲಿಂಗಂ ಸೋಮಃ ಪೂಜಯತೇ ಸದಾ | ತೇನ ಸೋಮೇನ ಸಂಪ್ರಾಪ್ತಂ ಸೋಮತ್ವಂ ಸತತೋಜ್ಜಲಂ || ಶಕ್ರೋsಪಿ ದೇವರಾಜೇಂದ್ರೋ ಲಿಂಗಂ ಮಣಿಮಯಂ ಶುಭಂ | ಭಕ್ತ್ಯಾ ಪೂಜಯತೇ ನಿತ್ಯಂ ತೇನ ಶಕ್ರತ್ವಮಾಪ್ತವಾನ್ || ಲಿಂಗಂ ರತ್ನಮಯಂ ಚಾರು ವರುಣೋsರ್ಚಯತೇ ಸದಾ | ತೇನ ತದ್ವರುಣತ್ವಂ ಹಿ ಪ್ರಾಪ್ತಂ ವೃದ್ಧಿಸಮನ್ವಿತಂ || ಲಿಂಗಂ ಹೇಮಮಯಂ ಕಾಂತಂ ಧನದೋsರ್ಚಯತೇ ಸದಾ | ತೇನಾsಸೌಧನದೋ ದೇವೋ ಧನದತ್ವಮವಾಪ್ತವಾನ್ || ಸಂಪೂಜ್ಯ ಕಾಂಸ್ಯಕಂ ಲಿಂಗಂ ವಸವಃ ಕಾಮಮಾಪ್ನುಯುಃ | ನಾಗಾಃ ಪ್ರವಾಲಜಂ ಲಿಂಗಂ ರಾಜ್ಯಂ ಸಂಪೂಜ್ಯ ಲೇಭಿರೇ | ಏವಂ ದೇವಾಃ ಸ ಗಂಧರ್ವಾಃ ಸ ಯಕ್ಷೋರಗರಾಕ್ಷಸಾಃ | ಪೂಜಯಂತಿ ಸದಾಕಾಲಮೀಶಾನಂ ಸುರನಾಯಕಂ || ಸರ್ವಂ ಲಿಂಗಮಯಂ ಲೋಕೇ ಸರ್ವಂ ಲಿಂಗೇ ಪ್ರತಿಷಿ*ತಂ | ತಸ್ತಾತ್ ಸಂಪೂಜ್ಯಯೇನ್ನಿತ್ಯಂ ಯದಿಚ್ಛೇತ್ ಸಿದ್ಧಿಮಾತ್ಮನಃ ||'' ಇಂತೆಂದುದಾಗಿ, ಇದಕ್ಕೆ ವ್ಯಾಸ ಜೈಮಿನಿ ಸಂವಾದೇ:ವ್ಯಾಸ ಉವಾಚ- ``ಇತಿಹಾಸೇಷು ವೇದೇಷು ಪುರಾಣೇಷು ಪುರಾತನೈಃ | ಮಹರ್ಷಿಭಿರ್ಮಹಾದೇವೋ ಶಿವಲಿಂಗಂತು ಧಾರಯೇತ್ || ಸುರಾಸುರೇಂದ್ರದೇವಾಶ್ಚ ಲಿಂಗಧಾರಣಯಾ ಸದಾ | ತಥಾಗಸ್ತ್ಯಾದಿ ಮುನಯೋ ದೂರ್ವಾಸು ನಂದಿಕೇಶ್ವರಃ | ಮಹಾಕಾಲೋ ದಧೀಚಿಶ್ಚ ಪಾಣಿನಿಶ್ಚ ಕಣಾದಕಃ | ಸ್ಕಂದೋ ಭೃಂಗಿರೀಟರ್ವೀರಭದ್ರಾಶ್ಚ ಪ್ರಮಥಾದಯಃ || ಅಜೋ ಹರಿಃ ಸಹಸ್ರಾಕ್ಷೋ ಬಾಣಾಸುರದಶಾನನೌ | ವಶಿಷ*ರುರುವಾಲ್ಮೀಕಿಭಾರದ್ವಾಜಾತ್ರಿಗೌತಮಾಃ || ಏತೇ ಪರಮಶೈವಾಶ್ಚ ಭಜಂತಿ ಪರಯಾ ಮುದಾ | ಪ್ರಸಾದ ಸೇವನಾತ್‍ಧ್ಯಾನಾದರ್ಚನಾದ್ಧಾರಣಾದಪಿ ||'' ಇಂತೆಂದುದಾಗಿ, ಇದಕ್ಕೆ ವಾತುಲತಂತ್ರೇ : ``ಬ್ರಹ್ಮವಿಷ್ಣುಸುರೇಶಾದಿ ದೇವತಾಃ ಪರಯಾ ಮುದಾ | ಶಿರೋಭಿರ್ಧಾರಯಂತ್ಯೇತಾ ಃ ಶಿವಲಿಂಗಮಹರ್ನಿಶಂ || ಪಾಣಿನಿಶ್ಚ ಕಣಾದಶ್ಚ ಕಪಿಲೋ ಗೌತಮಾದಯಃ | ಪ್ರಸಾದಸೇವನಾದ್ಧ್ಯಾನಾದರ್ಚನಾದ್ಧಾರಣಾದಪಿ || ಕಂಠೇಷು ಹರಕಂಠಾದಿ ಮುನಯೋ ಮಾನವಾಸ್ತಥಾ | ಸರ್ವದಾ ಶಿವಲಿಂಗಂತು ಧಾರಯಂತಿ ಯಜಂತಿ ಚ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋýವಾಚ : ``ಉತ್ತಮಾಂಗೇ ಗಲೇ ಕಕ್ಷೇ ಸರ್ವದಾ ಧಾರಯೇತ್ ಶಿವಂ | ಮಂತ್ರಾದ್ಯುತ್ಪಾರ್ಜನೇಯುವೇ ಭೋಜನೇýಪಿ ಸದಾ ಶುಚಿಃ||'' ಇಂತೆಂದುದಾಗಿ, ಇದಕ್ಕೆ ಈಶ್ವರೋýವಾಚ : ``ಗಚ್ಚನ್ ತಿಷ*ನ್ ಸ್ವಪನ್ ಜಾಗ್ರನ್ ಉನ್ಮಿಷನ್ ನಿಮಿಷನ್ನಪಿ | ಶುಚಿರ್ವಾಪ್ಯಶುಚಿರ್ವಾಪಿ ಲಿಂಗಂ ಸರ್ವತ್ರ ಧಾರಯೇತ್ ||'' ಇಂತೆಂದುದಾಗಿ, ಇದಕ್ಕೆ ಶ್ರೀ ಮಹಾದೇವ ಉವಾಚ : ``ಉದರೇ ಧಾರಯೇಲ್ಲಿಂಗಂ ಗ್ರಾಮಸ್ಯಾಧಿಪತಿರ್ಭವೇತ್ | ವಕ್ಷಸಾ ಧಾರಯೇಲ್ಲಿಂಗಂ ಇಂದ್ರಸ್ಯಾಧಿಪತಿರ್ಭವೇತ್ || ಕಂಠೇತು ಧಾರಯೇಲ್ಲಿಂಗಂ ಬ್ರಾಹ್ಮಣಾಧಿಪತಿರ್ಭವೇತ್ | ಅಪರೇ ಧಾರಯೇಲ್ಲಿಂಗಂ ರಾಕ್ಷಸ್ಯಾಧಿಪತಿರ್ಭವೇತ್ || ಸ್ಕಂದೇ ತು ಧಾರಯೇಲ್ಲಿಂಗಮೀಪ್ಸಿತಂ ಲಭತೇ ಧೃವಂ | ಶಿರಸಾ ಧಾರಯೇಲ್ಲಿಂಗಂ ಗಣತ್ವೇನ ಸಯುಜ್ಯತೇ | ತೇ ಸ್ಥಾನೇಷು ಧಾರಯೇಲ್ಲಿಂಗ ಸರ್ವಸಿದ್ಧಿ ಫಲಪ್ರದಂ ||'' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ಲಿಂಗಪ್ರಣಿತಥಾ ಲಿಂಗಂ ಶಿಖಾಯಾಂ ಧಾರಯೇತ್ಸುದೀಃ | ತದಸ್ಥಾನಾಧಿಕಂ ದಿವ್ಯಂ ಬ್ರಹ್ಮರಂಧ್ರಂ ವಿಶೇಷತಃ || ಮೂಧ್ರ್ನಿವಾ ಧಾರಯೇಲ್ಲಿಂಗಂ ನ ತಥಾ ಚ ದ್ವಿಜಯೋ ಜಯೇತ್ | ಈಶಾವಾ ನಿತ್ಯಸಂಯೋಗೋ ಪರಯೋನಿರನಿಷ್ಟಯಃ | ನಾಭೇರಧೋ ಲಿಂಗಧಾರಿ ಪಾಪೇನ ಚ ಸ ಯುಜ್ಯತೇ | ನಾಭ್ಯೋಧ್ರ್ವೇ ಲಿಂಗಧಾರೀ ಚ ಸೌಭಾಗ್ಯಜ್ಞಾನವರ್ಧನಂ ||'' ಇಂತೆಂದುದಾಗಿ, ಇದಕ್ಕೆ ಉಮಾಮಹೇಶ್ವರ ಸಂವಾದೇ : ``ಜಾತಾ ದರ್ಶನಕರ್ತಾರಃ ಶ್ರಾವಯಂತಿ ಜಗತ್ರಯಂ | ಕಕ್ಷೇ ಬ್ರಹ್ಮಾ ಕರೇ ವಿಷ್ಣುಃ ಕಂಠೇ ಮಾಹೇಶ್ವರಸ್ಸದಾ || ವ್ಯೋಮಾತೀತಸ್ತು ಶಿರಸಿ ಮುಖೇ ರುದ್ರಸ್ತು ಧಾರಯೇತ್ | ಈಶ್ವರಸ್ತ್ವಮಲೈಕ್ಯೇ ತು ಉತ್ತಮಾಂಗೇ ಸದಾಶಿವಃ | ಇತಿ ದೇವಗಣೋ ಧೃತ್ವಾ ಲಿಂಗಂತು ಯಜತೇ ಸದಾ || ನಾಭಿಂ ಚ ಹೃದಯೇ ಮೂಧ್ರ್ನಿ ಸರ್ವಾವಸ್ಥಾಸು ಸರ್ವದಾ | ತ್ರೀಲಿಂಗಧಾರಣಂ ಕುರ್ಯಾದೇವೀ ನಿತ್ಯಂ ಮಮಪ್ರಿಯಃ || ಕಾಯಸಂಬಂಧ ಲಿಂಗೇನರಹಿತಶ್ಚಾಪಿಯೋ ಭವೇತ್ | ನಿಮುಷಾರ್ಧಂ ವಿಯೋಗೇನ ವಿಶೇಷೋತ್ವಾತ್ ಕೋಭವೇತ್ || ಇಂತೆಂದುದಾಗಿ, ಇದಕ್ಕೆ ಅಥರ್ವಣವೇದೇ : ``ಓಂ ತ್ರಯೋ ದೇವಾ ಲಿಂಗಂ ಧಾರಯಂತಿ | ಋಷಯಃ ಶಿವಲಿಂಗಧಾರಯಂತಿ | ತಸ್ಮಾದ್ದೇವಲಿಂಗ ಧಾರಯಂತಿ | ಅಜಹರಿ ಲಿಂಗಂ ಧಾರಯಂತಿ | ಸುರೇಂದ್ರದೈತ್ಯಾ ಧಾರಯಂತಿ ||'' ಇಂತೆಂದುದಾಗಿ, ಇದಕ್ಕೆ ಋಗ್ವೇದೇ : ``ಸೋಮೇ ರುದ್ರಾಯುವಮೇತಾವ್ಯಸ್ಮಿ ವಿಶ್ವಾತಮಾಷುಭೇಷಾವಿದತ್ತಂ | ಅವಸ್ಯತಂ ಮುಲಚತಯಿಂ ನೋ ಅಸ್ತಿತನುಕ್ಷುಬಂಧಂ ಕ್ರುಷಮೇನೋ ಅಸ್ತಿತ್||'' ಇಂತೆಂದುದಾಗಿ, ಇದಕ್ಕೆ ಅಥರ್ವಣವೇದೇ : ``ಚತುರ್ವೇದಾ ಲಿಂಗ ಧಾರಯಂತಿ | ಅನಂತಾ ವೈ ವೇದಾಃ ಲಿಂಗಂ ಧಾರಯಂತಿ ||'' ಇಂತೆಂದುದು ಶ್ರುತಿ. ಇದನರಿದು ಶ್ರೀವಿಭೂತಿ ರುದ್ರಾಕ್ಷಿ ಶಿವಲಿಂಗಧಾರಣವಿಲ್ಲದ ಕರ್ಮಿಯನೆನಗೊಮ್ಮೆ ತೋರದಿರಯ್ಯ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನರಸುರಾದಿಗಳೆಲ್ಲರು ನಿಮ್ಮ ಹೊರೆಯೊಳಗಿದ್ದರು, ಮನು ಮುನಿ ಯತಿ ವ್ರತಿಗಳೆಲ್ಲರು ನಿಮ್ಮ ತೋಹಿನೊಳಗಿದ್ದರು. ಗಂಗೆವಾಳುಕರೆಲ್ಲರು ನಿಮ್ಮ ಮಡಿಯೊಳಗಿದ್ದರು. ಗಂಗೆ ಗೌರೀವಲ್ಲಭರೆಲ್ಲರು, ಚತುರ್ಮುಖ, ಪಂಚಮುಖ, ಷಣ್ಮಖ, ದಶಮುಖರೆಲ್ಲರು ನಿಮ್ಮ ಮಡಿಯ ಗಳಿಗೆಯೊಳಗಿದ್ದರು. ಲೋಕಾದಿ ಲೋಕವೆಲ್ಲವು ನಿಮ್ಮ ಕುಕ್ಷಿಯೊಳಗು. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ, ನಿಮ್ಮ ನಿರಾಳದ ಪ್ರಸಾದದಿಂದ ನಿರವಯಲ ಹಾದಿಯ ಕಂಡೆನಲ್ಲದೆ, ನಿಮ್ಮಿಂದಲಾನು ಘನವೆ ಮಡಿವಾಳ ಮಾಚಯ್ಯಾ ?
--------------
ಚನ್ನಬಸವಣ್ಣ
ಅಯ್ಯಾ, ಯತಿಯತ್ವವ ಪಡೆದೆನೆಂಬೋ ಮನುಜನೇ, ನೀ ಕೇಳು : ನಿನ್ನ 1ಯತಿಯತ್ವ1ದ ಬಗೆ ಎಂತೆಲಾ ? ಬರಿದೆ ದ್ರವ್ಯಕ್ಕೆ ಆಶೆಮಾಡಿ, ಪರರ ಕಾರ್ಪಣ್ಯದಿಂದ ಕಾಡಿ ಬೇಡಿ, ದ್ರವ್ಯವ ಗಳಿಸಿಕೊಂಡು, ಜನರ ಕಟ್ಟಿಕೊಂಡು ಬಡಿವಾರದಿಂದ ತಿರುಗಿದ ಬಳಿಕ, ನಿನಗೆ ಯತಿಯತ್ವವು ಎಲ್ಲೈತೆಲಾ ? ಅದು ಎಂತೆಂದರೆ, ಯತಿಯತ್ವವ ಪೇಳುವೆನು ಕೇಳೆಲಾ : ಯತಿ ನೀನಾದ ಬಳಿಕ ತನುವಿನ ಹಂಗು ಹರಿಯಬೇಕು ; ಮನವ ಘನಲಿಂಗಕ್ಕೆ ಕಟ್ಟಿಹಾಕಬೇಕು ; ಧನವ ಸ್ವಪ್ನದಲ್ಲಿ ಮುಟ್ಟಲಾಗದು ; ಅನ್ನದ ಆಸೆಯ ಬಿಡಬೇಕು ; ಚಿನ್ಮಯನಾಗಿ ನಡೆಯಬೇಕು ; ಚಿಂತೆಯ ಮರೆತು ವೈರಾಗ್ಯದಿಂದಿರಬೇಕು ; ಕಾಮದ ಹಂಗ ಕಳೆಯಬೇಕು ; ಕರ್ಮೇಂದ್ರಿಯಂಗಳ ಸುಡಬೇಕು ; ಲಿಂಗದಲ್ಲಿ ಕರುಣ ಇರಬೇಕು. ಸ್ಫಟಿಕದಂತೆ ನಿರ್ಮಳ ಕಾಯನಾಗಿ, ನಿಶ್ಚಿಂತನಾಗಿ, ಮೋಕ್ಷವ ಕಂಡಡೆ ಯತಿವರನೆಂದು ನಮೋ ಎಂಬುವೆನಯ್ಯಾ ! ಬರಿದೆ ಯತಿ ಎನಿಸಿಕೊಂಡು ಕೋಪಾಟೋಪದೊಳು ಬಿದ್ದು ಹೊರಳಾಡುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಬಲ್ಲೆನೆಂಬುವರ ಭ್ರಾಂತಿಗೊಳಗುಮಾಡಿತ್ತು ಮಾಯೆ, ಅರಿಯೆನೆಂಬುವರ ಅನಂತಭವವ ಸುತ್ತಿಸಿತ್ತು ಸಂಸಾರಮಾಯೆ, ವೀರರೆಂಬುವರ ಗಾರುಮಾಡಿತ್ತು ಮಾಯೆ, ಧೀರನೆಂಬುವರ ಎದೆಯ ನಡುಗಿಸಿತ್ತು ಸಂಸಾರಮಾಯೆ, ಯತಿಗಳೆಂಬುವರ ಏಡಿಶಾಡಿಕಾಡಿತ್ತು ಸಂಸಾರಮಾಯೆ, ಜತಿಗಳೆಂಬುವರ ಜನ್ಮವ ಮೃತ್ಯುವಿಗೆ ಈಡುಮಾಡಿತ್ತು ಮಾಯೆ ಸಿದ್ಧರೆಂಬುವರ ಬುದ್ಧಿಗೆಡಿಸಿತ್ತು ಸಂಸಾರಮಾಯೆ ಸಾಧ್ಯರೆಂಬುವರ ಬೋಧೆಗೊಳಗುಮಾಡಿತ್ತು ಮಾಯೆ. ಯತಿ ಸಿದ್ಧ ಸಾಧ್ಯರೆಂಬುವರ ಮತಿಭ್ರಷ್ಟರ ಮಾಡಿ ಕಾಡೂದದು. ನೀನಿಕ್ಕಿದ ಸಂಸಾರಮಾಯದ ವಿಗಡ ಸರ್ವರ ಬಾಯಂ ಟೊಣೆದೆ ಹೋಯಿತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆನೆಯ ಹೆಣಕ್ಕೆ ಕೋಡಗ ಶೋಕಂಗೈವುದ ಕಂಡೆ. ಮಾಗಿಗಂಜಿದ ಕೋಗಿಲೆ ಮರುಜೇವಣಿಗೆಯ ಬೆಟ್ಟದೊಳಡಗುವುದ ಕಂಡೆನು. ಸಾಗರದ ಮೇಲೆ ಹಾರುವ ಹಂಸ ಭ್ರಮರನ ಗೆಣೆವಿಡಿಯಲಿ. ಯತಿ ಸಿದ್ಧ ಸಾಧ್ಯರೆಲ್ಲ ಸಂಸಾರಭರಿತರಾದರೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?
--------------
ಹೇಮಗಲ್ಲ ಹಂಪ
ಪಕ್ಕವಿಲ್ಲದ ಹಕ್ಕಿ ಅಕ್ಕಜನ ಪಂಜರವ ಗೂಡುಮಾಡಿಕೊಂಡು ದಿಕ್ಕುದಿಕ್ಕನ್ನೆಲ್ಲ ಚರಿಸ್ಯಾಡಿ ಬರುತಿಪ್ಪದು. ಆ ಪಕ್ಷಿಯ ನೆರಳು ಬೀಳೆ ಯತಿ ಸಿದ್ಧ ಸಾಧ್ಯ ಯೋಗಿಗಳ ಯೋಗತ್ವ ಯತಿತನ ಸಿದ್ಧತ್ವ ಕೆಟ್ಟು ಕೆಲಸಾರಿ ಹೋಗುವುದ ಕಂಡೆ. ಪಕ್ಕವಿಲ್ಲದ ಹಕ್ಕಿಯ ಕೊಂದು ಅಕ್ಕಜನ ಪಂಜರವ ಮುರಿದುದಲ್ಲದೆ ನಿರ್ಮನನಲ್ಲ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಸೀಮೆಗಳೆನಿಸಿ ಯತಿ ಸಿದ್ಧ ಸಾಧ್ಯರೆಲ್ಲ ವ್ರತಭ್ರಷ್ಟರಾದರು. ಅದು ಎಂತೆಂದೊಡೆ : ಕಾಮವೆಂಬ ಅಗ್ನಿ, ಕ್ರೋಧವೆಂಬ ಕಾಷ*, ಲೋಭವೆಂಬ ಗಾಳಿ ಪುಟಮಾಡಿ, ಮೋಹವೆಂಬರಣ್ಯ, ಮದವೆಂಬ ಕುಳ್ಳು, ಮತ್ಸರವೆಂಬ ಗಿರಿಗೆ ಬೆಂಕಿ ಹತ್ತಿ , ಸುಟ್ಟು ಸುಟ್ಟು ಬೆಂದರು ಹಲಬರು, ನೊಂದರು ಹಲಬರು. ಕಾಮವ ಕಳದು ನಿಃಕಾಮಿಯಾಗಿ, ಕ್ರೋಧವ ಕಳದು ನಿಃಕ್ರೋಧಿಯಾಗಿ, ಲೋಭವ ಕಳದು ನಿರ್ಲೋಭಿಯಾಗಿ, ಮೋಹವ ಕಳದು ನಿರ್ಮೋಹಿಯಾಗಿ, ಮದವ ಕಳದು ನಿರ್ಮದವಾಗಿ, ಮತ್ಸರವ ಕಳದು ನಿರ್ಮತ್ಸರರಾಗಿಪ್ಪ ಚೆನ್ನಬಸವೇಶ್ವರದೇವರು ಪ್ರಭುರಾಯ ಮುಗ್ಧಸಂಗಯ್ಯ ಘಟ್ಟಿವಾಳಯ್ಯ ಮರುಳಶಂಕರದೇವರು ಮುಖ್ಯವಾದ ಏಳ್ನೂರಯೆಪ್ಪತ್ತು ಅಮರಗಣಂಗಳ ಪಾದಕ್ಕೆ ನಮೋ ನಮೋ ಎಂಬೆನಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇನ್ನಷ್ಟು ... -->