ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಲಿಂಗದಲ್ಲಿ ಪೂಜೆಯ ಮಾಡಿ, ಜಂಗಮಲಿಂಗದಲ್ಲಿ ಉದಾಸೀನವ ಮಾಡಿದಡೆ ಗುರುಲಿಂಗದ ಪೂಜಕರಿಗೆ ಶಿವದೂತರ ದಂಡನೆ ಎಂಬುದ ಮಾಡಿದೆಯಯ್ಯಾ. ಲೋಕದ ಕರ್ಮಿಗಳಿಗೆ ಯಮದೂತರ ದಂಡನೆ ಎಂಬುದ ಮಾಡಿದೆಯಯ್ಯಾ. ಭಕ್ತಿಯನರಿಯರು, ಯುಕ್ತಿಯನರಿಯರು ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಲಿಂಗವ ಪೂಜಿಯ ಮಾಡಿ, ಜಂಗಮವ ಕಂಡು ಉದಾಸೀನವ ಮಾಡಿದಡೆ, ಆ ಲಿಂಗಪೂಜಕರಿಗೆ ಮಾಡಿದ, ಶಿವದೂತರ ದಂಡವೆಂಬುದ. ಲೋಕದ ಕರ್ಮಿಗಳಿಗೆ ಮಾಡಿದ, ಯಮದೂತರ ದಂಡವೆಂಬುದ. ಇದು ಕಾರಣ ಲಿಂಗ ಜಂಗಮವನೊಂದೆಂದರಿಯದವರ ಎನಗೆ ತೋರದಿರಯ್ಯಾ, ಕೂಡಲಸಂಗಮದೇವಾ. 424
--------------
ಬಸವಣ್ಣ
ಗುರುವು ಲಿಂಗವಹನ್ನಬರ ಕಾಯಕದಲ್ಲಿ ವಂಚನೆಯನುಳುಹಿದರೆ ಆ ಕಾಯ ಕಿಲ್ಬಿಷಕೂಪಕ್ಕಾಹುತಿಯೆಂಬುದು ಶಿವನ ವಾಕ್ಯ. ವಾಚಕದಲ್ಲಿ ವಂಚನೆಯನುಳುಹಿದರೆ ಆ ವಾಚಕ ನಿರಯಬಾಧೆಯಧ್ವನಿಯೆಂಬುದು ಶಿವನ ವಾಕ್ಯ. ಮಾನಸದಲ್ಲಿ ವಂಚನೆಯನುಳುಹಿದರೆ ಆ ಮಾನಸ ಯಮದೂತರ ಕೋಪಾಹುತಿಯ ಅನಾನಂದದಾಲಯವೆಂಬುದು ಶಿವನ ವಾಕ್ಯ. ಅದುಕಾರಣ, ಆ ಕರಣತ್ರಯವು ದುರ್ವೋಚ್ಫಿಷ್ಟವಾಗಿ ಬಿದ್ದು ಹೋದ ಪ್ರಾಣಿಗಳನು ನೋಡಲಾಗದು ಮಾತಾಡಲಾಗದು ಸುಜ್ಞಾನಿ ಕ್ರಿಯಾಸಂಬಂಧಿಗಳು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
-->