ಅಥವಾ

ಒಟ್ಟು 4 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಗುರುಸ್ವಾಮಿ ಕರುಣಿಸಿಕೊಟ್ಟು ಪ್ರಾಣಲಿಂಗವು ಪಂಚಬ್ರಹ್ಮಮುಖವುಳ್ಳ ವಸ್ತುವೆಂದರಿವುದು. ಆ ಪಂಚಬ್ರಹ್ಮಮುಖಸಂಜ್ಞೆಯ ಭೇದವೆಂತೆಂದಡೆ: ಆವುದಾನೊಂದು ಶಿವಸಂಬಂಧವಾದ ಪರಮತೇಜೋಲಿಂಗವು ತನ್ನ ಭೋಗಾದಿಕಾರಣ ಮೂರ್ತಿಗಳಿಂದುದಯವಾದ ಬ್ರಹ್ಮಾದಿತೃಣಾಂತವಾದ ದೇಹಿಗಳಿಂದಲೂ ವೋಮಾದಿಭೂತಂಗಳಿಂದಲೂ ಇತ್ಯಾದಿ ಸಮಸ್ತತತ್ತ್ವಂಗಳಿಂದಲೂ ಮೇಲಣ ತತ್ತ್ವವುಪ್ಪುದೇ ಕಾರಣವಾಗಿ ಪರವೆಂಬ ಸಂಜ್ಞೆಯದುಳ್ಳುದಾಗಿಹುದು. ಅನಂತಕೋಟಿಬ್ರಹ್ಮಾಂಡಗಳ ತನ್ನೊಳಡಗಿಸಿಕೊಂಡು ಸಮಸ್ತಜಗಜ್ಜನಕ್ಕೆ ತಾನೇ ಕಾರಣವಾಗಿ ಅವ್ಯಕ್ತಲಕ್ಷಿತವಾದ ನಿಮಿತ್ತಂ ಗೂಢವೆಂಬ ಸಂಜ್ಞೆಯದುಳ್ಳುದಾಗಿಹುದು. ತಾನು ಶೂನ್ಯ ಶಿವತತ್ತ್ವಭೇದವಾಗಿ ಆಯಸ್ಕಾಂತ ಸನ್ನಿಧಿಯಿಂದ ಲೋಹವೇ ಹೇಗೆ ಭ್ರಮಿಸುವುದೋ ಹಾಗೆ ಬ್ರಹ್ಮಾದಿಗಳ ಹೃತ್ಕಮಲಮಧ್ಯದಲ್ಲಿದ್ದು ತನ್ನ ಚಿಚ್ಛಕ್ತಿಯ ಸನ್ನಿಧಿಮಾತ್ರದಿಂದ ಅಹಮಾದಿಗಳಿಂ ವ್ಯೋಮಾದಿಭೂತಂಗಳಂ ಸೃಷ್ಟಿಸುವುದಕ್ಕೆ ತಾನೇ ಕಾರಣವಪ್ಪುದರಿಂದ ಶರೀರಸ್ಥವೆಂಬ ಸಂಜ್ಞೆಯದುಳ್ಳುದಾಗಿಹುದು. ತನ್ನ ಸೃಷ್ಟಿಶಕ್ತಿಯಿಂದುದಯವಾದ ಸಮಸ್ತಸಂಸಾರಾದಿ ಪ್ರಪಂಚವು ತನ್ನಿಂದಲೇ ಕಾರಣವಪ್ಪುದರಿಂ ಅನಾದಿವತ್ತೆಂಬ ಸಂಜ್ಞೆಯದುಳ್ಳುದಾಗಿಹುದು. ತನ್ನ ಮಾಯಾಶಕ್ತಿಯಿಂದುದಯವಾದ ಸ್ತ್ರೀಲಿಂಗ ಪುಲ್ಲಿಂಗ ನಪುಸಕಲಿಂಗವೆಂಬ ತ್ರಿಲಕ್ಷಿತವಾದ ಸಮಸ್ತಪ್ರಪಂಚವು ವರ್ತಿಸುವುದಕ್ಕೆ ತಾನೇ ಕ್ಷೇತ್ರವಾದ ಕಾರಣ ಲಿಂಗಕ್ಷೇತ್ರವೆಂಬ ಸಂಜ್ಞೆಯದುಳ್ಳುದಾಗಿಹುದು. ಈ ಪ್ರಕಾರದಿಂ ಪರಬ್ರಹ್ಮಲಿಂಗವು ಪಂಚಮುಖಸಂಜ್ಞೆಯ ನುಳ್ಳುದಾಗಿಹುದೆಂದರಿವುದು. ಅದೆಂತೆಂದಡೆ:ಅದಕ್ಕೆ ವಾತುಳಾಗಮದಲ್ಲಿ, ಅಖಿಳಾರ್ಣವಲಯಾನಾಂ ಲಿಂಗತತ್ತ್ವಂ ಪರಂ ತತಃ ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್ ಯದಾದ್ಯಮೈಶ್ವರಂ ತೇಜಸ್ತಲ್ಲಿಂಗಂ ಪಂಚಸಂಜ್ಞಕಂ ಎಂದೆನಿಸುವ ಲಿಂಗವು. ಮತ್ತಂ, ವಾಶಿಷ*ದಲ್ಲಿ: ಪಿಂಡಬ್ರಹ್ಮಾಂಡಯೋರೈಕ್ಯಂ ಲಿಂಗಸೂತ್ರಾತ್ಮನೋರಪಿ ಸ ಬಾಹ್ಯಾಂತರಯೋರೈಕ್ಯಂ ಕ್ಷೇತ್ರಜ್ಞಪರಮಾತ್ಮನೋಃ ಎಂದೆನಿಸುವ ಲಿಂಗವು. ಮತ್ತಂ ಬ್ರಹ್ಮಾಂಡಪುರಾಣದಲ್ಲಿ, ಅಧಿಷಾ*ನಂ ಸಮಸ್ತಸ್ಯ ಸ್ಥಾವರಸ್ಯ ಚರಸ್ಯ ಚ ! ಜಗತೋ ಯದ್ಭವೇತ್‍ತತ್ತ್ವಂ ತದ್ದಿವ್ಯಂ ಸ್ಥಲಮುಚ್ಯತೇ ಎಂದೆನಿಸುವ ಲಿಂಗವು. ಮತ್ತಂ ಶಿವರಹಸ್ಯದಲ್ಲಿ, ಮಹಾಲಿಂಗಮಿದಂ ದೇವಿ ಮನೋ[s]ತೀತಮಗೋಚರಂ ನಿರ್ನಾಮಂ ನಿರ್ಗುಣಂ ನಿತ್ಯಂ ನಿರಂಜನಂ ನಿರಾಮಯಂ ಎಂದೆನಿಸುವ ಲಿಂಗವು. ಮತ್ತಂ ಉತ್ತರವಾತುಳದಲ್ಲಿ, ಆದ್ಯಂತಶೂನ್ಯಮಮಲಂ ಪರಿಪೂರ್ಣಮೇಕಂ ಸೂಕ್ಷ್ಮಂ ಪರಾತ್ಪರಮನಾಮಯಮಪ್ರಮೇಯಂ ಚಿಚ್ಛಕ್ತಿಸಂಸ್ಫುರಣರೂಢಮಹಾತ್ಮಲಿಂಗಂ ಭಾವೈಕಗಮ್ಯಮಜಡಂ ಶಿವತತ್ತ್ವಮಾಹುಃ ಎಂದೆನಿಸುವ ಲಿಂಗವು. ಮತ್ತಂ ಅಥರ್ವಣವೇದದಲ್ಲಿ, ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಂ ಅನಿಂದಿತಮ£õ್ಞಪಮ್ಯಮಪ್ರಮಾಣಮನಾಮಯಮ್ ಶುದ್ಧತ್ವಾಚ್ಛಿವಮುದ್ದಿಷ್ಟಂ ಪರಾದೂಧ್ರ್ವಂ ಪರಾತ್ಪರಂ ಎಂದೆನಿಸುವ ಲಿಂಗವು. ಮತ್ತಂ ಸಾಮವೇದದಲ್ಲಿ, ಅನಂತಮವ್ಯಕ್ತ ಮಚಿಂತ್ಯಮೇಕಂ ಹರಂ ತಮಾಶಾಂಬರಮಪ್ರಮೇಯಂ ಲೋಕೈಕನಾಥಂ ಭುಜಗೇಂದ್ರಹಾರಂ ಅಜಂ ಪುರಾಣಂ ಪ್ರಣಮಾಮಿ ನಿತ್ಯಂ `ಅಣೋರಣೀಯಾನ್ ಮಹತೋ ಮಹೀಯಾನ್' ಎಂದೆನಿಸುವ ಲಿಂಗವು. ಮತ್ತಂ ಶಿವಧರ್ಮಪುರಾಣದಲ್ಲಿ, ಆಕಾಶಂ ಲಿಂಗಮಿತ್ಯಾಹುಃ ಪೃಥ್ವೀ ತಸ್ಯಾದಿಪೀಠಿಕಾ ಆಲಯಸ್ಸರ್ವಭೂತಾನಾಂ ಲಯನಾಲ್ಲಿಂಗಮುಚ್ಯತೇ ಎಂದೆನಿಸುವ ಲಿಂಗವು. ಮತ್ತಂ ಗಾರುಡಪುರಾಣದಲ್ಲಿ, ಲಿಂಗಮಧ್ಯೇ ಜಗತ್‍ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂದೆನಿಸುವ ಲಿಂಗವು. ಮತ್ತಂ ಯಜುರ್ವೇದದಲ್ಲಿ, ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್ ಸಂಬಾಹುಭ್ಯಾಂಧಮತಿ ಸಂಪತತ್ರೈದ್ರ್ಯಾವಾಭೂಮೀ ಜನಯನ್ ದೇವ ಏಕಃ ಎಂದೆನಿಸುವ ಲಿಂಗವು. ಮತ್ತಂ ಗಾಯತ್ರಿಯಲ್ಲಿ, `ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ಎಂದೆನಿಸುವ ಲಿಂಗವು. ಮತ್ತಂ ಸ್ಕಂದಪುರಾಣದಲ್ಲಿ ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ ತದೇವ ಲಿಂಗಮಿತ್ಯಕ್ತಂ ಲಿಂಗತತ್ತ್ವಪರಾಯಣೈಃ ಎಂದೆನಿಸುವ ಲಿಂಗವು. ಮತ್ತಂ ಜ್ಞಾನವೈಭವಖಂಡದಲ್ಲಿ, ಲಕಾರಂ ಲಯಸಂಪ್ರೋಕ್ತಂ ಗಕಾರಂ ಸೃಷ್ಟಿರುಚ್ಯತೇ ಲಯನಾದ್ಗಮನಾಚ್ಚೈವ ಲಿಂಗಶಬ್ದಮಿಹೋಚ್ಯತೇ ಎಂದೆನಿಸುವ ಲಿಂಗವು. ಮತ್ತಂ ಮಹಿಮ್ನದಲ್ಲಿ, 'ಚಕಿತಮಭಿಧತ್ತೇ ಶ್ರುತಿರಪಿ' ಎಂದೆನಿಸುವ ಲಿಂಗವು. ಮತ್ತಂ ಶಿವಧರ್ಮೋತ್ತರದಲ್ಲಿ, 'ನ ಜಾನಂತಿ ಪರಂ ಭಾವಂ' ಯಸ್ಯ ಬ್ರಹ್ಮಸುರಾದಯಃ ಎಂದೆನಿಸುವ ಲಿಂಗವು. ಮತ್ತಂ ಪುರುಷಸೂಕ್ತದಲ್ಲಿ, `ಅತ್ಯತಿಷ*ದ್ದಶಾಂಗುಲಂ ಎಂದೆನಿಸುವ ಲಿಂಗವು. ಮತ್ತಂ ಉಪನಿಷತ್ತಿನಲ್ಲಿ, 'ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ' ಎಂದೆನಿಸುವ ಲಿಂಗವು. ಮತ್ತಂ ಕೂರ್ಮಪುರಾಣದಲ್ಲಿ, 'ವಾಚಾತೀತಂ ಮನೋತೀತಂ ಭಾವಾತೀತಂ ನಿರಂಜನಂ ಅವರ್ಣಮಕ್ಷರಂ ಬ್ರಹ್ಮ ನಿತ್ಯಂ ಧ್ಯಾಯಂತಿ ಯೋಗಿನಃ ' ಎಂದೆನಿಸುವ ಲಿಂಗವು. ಮತ್ತಂ ಋಗ್ವೇದದಲ್ಲಿ, 'ಆಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ ಅಯಂ ಮೇ ವಿಶ್ವಭೇಷಜೋ[s]ಯಂ ಶಿವಾಭಿಮರ್ಶನಃ ಅಯಂ ಮಾತಾ ಅಯಂ ಪಿತಾ ಅಯಂ ಜೀವಾತುರಾಗಮ್ ಎಂದೆನಿಸುವ ಲಿಂಗವು. ಮತ್ತಂ ಉತ್ತರವಾತುಳದಲ್ಲಿ, ಸ ಬಾಹ್ಯಾಭ್ಯಂತರಂ ಸಾಕ್ಷಾಲ್ಲಿಂಗಜ್ಯೋತಿಃ ಪರಂ ಸ್ವಕಂ ತಿಲೇ ತೈಲಮಿವಾಭಾತಿ ಅರಣ್ಯಾಮಿವ ಪಾವಕಃ ಕ್ಷೀರೇ ಸರ್ಪಿರಿವ ಸ್ರೋತಸ್ಯಂಬುವತ್ ಸ್ಥಿತಮಾತ್ಮನಿ ಏಕೋ[s]ಯಂ ಪುರುಷೋ ವಿಶ್ವತೈಜಸಪ್ರಾಜ್ಞರೂಪತಃ ಸದಾ ಸ್ವಾಂಗೇಷು ಸಂಯುಕ್ತಮುಪಾಸ್ತೇ ಲಿಂಗಮದ್ವಯಂ ಎಂದೆನಿಸುವ ಲಿಂಗವು. ಮತ್ತಂ ಲೈಂಗ್ಯದಲ್ಲಿ, ಅನಯೋರ್ದೃಷ್ಟಿಸಂಯೋಗಾಜ್ಞಾಯತೇ ಜ್ಞಪ್ತಿರೂಪಿಣೀ ವೇಧಾದೀಕ್ಷಾ ತು ಸೈವಸ್ಯಾನ್ಮಂತ್ರರೂಪೇಣ ತಾಂ ಶ್ರುಣು ಎಂದೆನಿಸುವ ಲಿಂಗವು. ಮತ್ತಂ ¸õ್ಞರಪುರಾಣದಲ್ಲಿ, ಹಸ್ತಮಸ್ತಕಸಂಯೋಗಾತ್ಕಲಾ ವೇಧೇತಿ ಗೀಯತೇ ಗುರುಣೋದೀರಿತಾ ಕರ್ಣೇ ಸಾ ಮಂತ್ರೇತಿ ಕಥ್ಯತೇ ಶಿಷಾಣಿತಲೇದತ್ತಾ ಸಾ ದೀಕ್ಷಾ ತು ಕ್ರಿಯೋಚ್ಯತೇ ಎಂದೆನಿಸುವ ಲಿಂಗವು. ಮತ್ತಂ ಕಾಳಿಕಾಖಂಡದಲ್ಲಿ, ಅಂಗಂ ಚ ಲಿಂಗಂ ಚ ಮುಖಂ ಚ ಹಸ್ತಂ ಶಕ್ತಿಶ್ಚ ಭಕ್ತಶ್ಚ ತಥಾರ್ಪಣಂ ಚ ಆನಂದಮೇವ ಸ್ವಯಮರ್ಪಣಂ ಚ ಪ್ರಸಾದರೂಪೇಣ ಭವೇತ್ರಿತತ್ತ್ವಂ ಎಂದೆನಿಸುವ ಲಿಂಗವು. ಮತ್ತಂ ಶಂಕರಸಂಹಿತೆಯಲ್ಲಿ, ತದೇವ ಹಸ್ತಾಂಬುಜಪೀಠಮಧ್ಯೇ ನಿಧಾಯ ಲಿಂಗಂ ಪರಮಾತ್ಮಚಿಹ್ನಂ ಸಮರ್ಚಯೇದೇಕಧಿಯೋಪಚಾರರೈರ್ನರಶ್ಚ ಬಾಹ್ಯಾಂತರಭೇದಭಿನ್ನಂ ಎಂದೆನಿಸುವ ಲಿಂಗವು. ಮತ್ತಂ ವೀರಾಗಮದಲ್ಲಿ, ಭಾವಪ್ರಾಣಶರೀರೇಷು ಲಿಂಗಂ ಸಂಸಾರಮೋಚಕಂ ಧಾರಯೇದವಧಾನೇನ ಭಕ್ತಿನಿಷ*ಸ್ಸುಬುದ್ಧಿಮಾನ್ ಎಂದೆನಿಸುವ ಲಿಂಗವು. ಮತ್ತಂ ಶಿವರಹಸ್ಯದಲ್ಲಿ, ಕರ್ಣದ್ವಾರೇ ಯಥಾವಾಕ್ಯಂ ಗುರುಣಾ ಲಿಂಗಮೀರ್ಯತೇ ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಚೈಕಂ ವರಾನನೇ ಎಂದೆನಿಸುವ ಲಿಂಗವು ಮತ್ತಂ ಶಿವರಹಸ್ಯದಲ್ಲಿ, ಏಕಮೂರ್ತಿಸ್ತ್ರಯೋಭಾಗಾಃ ಗುರುರ್ಲಿಂಗಂ ತು ಜಂಗಮಃ ಜಂಗಮಶ್ಚ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ ಎಂದೆನಿಸುವ ಲಿಂಗವು. ಗುರುಲಿಂಗಜಂಗಮರೂಪಾಗಿ ಎನ್ನ ಕರಸ್ಥಲಕ್ಕೆ ಬಿಜಯಂಗೈದು ಕರತಲಾಮಲಕವಾಗಿ ತೋರುತ್ತೈದಾನೆ. ಆಹಾ ಎನ್ನ ಪುಣ್ಯವೇ, ಆಹಾ ಎನ್ನ ಭಾಗ್ಯವೇ, ಆಹಾ ಎನ್ನ ಸತ್ಯವೇ, ಆಹ ಎನ್ನ ನಿತ್ಯವೇ, ಶಿವ ಶಿವ, ಮಹಾದೇವ, ಮಹಾದೇವ, ಮಹಾದೇವ ನೀನೇ ಬಲ್ಲೆ, ನೀನೇ ಬಲ್ಲೆ, ಉರಿಲಿಂಗಪೆದ್ದಿಪ್ರಿಯವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಾಯದ ಕಳವಳದಲ್ಲಿ ಹುಟ್ಟಿ, ಸಂಸಾರವನೆ ತೊರೆದು, ಲಿಂಗಮುಖವರಿಯದವರೆಲ್ಲಾ ಅಂತಿರಲಿ ಅಂತಿರಲಿ. ಬ್ರಹ್ಮೋಪದೇಶವನೆ ಕೊರಳಲ್ಲಿರಿಸಿಕೊಂಡು, ವಿಷಯಾದಿಗಳ ಕೊಂಡಾತನಂತಿರಲಿ, ಅಂತಿರಲಿ. ಪಂಚಮಹಾವೇದಶಾಸ್ತ್ರವನೋದಿ, ಲಿಂಗವುಂಟು ಇಲ್ಲಾಯೆಂಬ ಶ್ವಾನರಂತಿರಲಿ, ಅಂತಿರಲಿ. ತನುವ ಹೊತ್ತು ತೊಳಲಿ ಬಳಲುವ ಕಾಲವಂಚಕ ಯೋಗಿಗಳೆಲ್ಲಾ ಅಂತಿರಲಿ, ಅಂತಿರಲಿ. ಪಂಚಮಹಾಶೈವರು ಭ್ರಷ್ಟರಾಗಿಹೋದರು. ಎಂತು ಲಿಂಗವಂತಂಗೆ ಸರಿಯೆಂಬೆ ? ಅದ್ವೈತಿಗಳೆಲ್ಲಾ ಲಿಂಗಾರಾಧನೆ ಹುಸಿಯೆಂದು, ಬುದ್ಧಿ ತಪ್ಪಿ, ಗಮನಗೆಟ್ಟುಹೋದರು. ಅದೃಶ್ಯಂ ಭಾವನೋ ನಾಸ್ತಿ ದೃಶ್ಯಮೇವ ವಿನಶ್ಯತಿ | ಸದ್ಬ್ರಹ್ಮಂ ತು ನಿರಾಕಾರಂ, ತಥ್ಯಂ ಧ್ಯಾಯಂತಿ ಯೋಗಿನಃ || ಎಂದುದಾಗಿ, ಬ್ರಾಹ್ಮಣನೆಂದಡೆ ಬ್ರಹ್ಮನ ಶಿರವ ದಂಡವ ಕೊಂಡರು. ಬ್ರಹ್ಮವಾದಿಗಳು ಲಿಂಗಕ್ಕೆ ದೂರವಾಗಿ ಹೋದರು. ಅಹಮಿಲ್ಲದ ಕಾರಣ, ಸಕಳೇಶ್ವರದೇವಯ್ಯಾ, ನಿಮ್ಮ ಶರಣರು ಜಗವಂದಯರಾದರು.
--------------
ಸಕಳೇಶ ಮಾದರಸ
ಕಾಯದ ಕೊನೆಯ ಮೊನೆಯ ಮೇಲಣ ಲಿಂಗವ [ಇಷ್ಟ]ಲಿಂಗವೆಂದು ಪೂಜಿಸುವರು ಜೀವದ ಕೊನೆಯ ಮೊನೆಯ ಮೇಲಣ ಲಿಂಗವ ಪ್ರಾಣಲಿಂಗವೆಂದೆಂಬರು, ಭಾವದ ಕೊನೆಯ ಮೊನೆಯ ಮೇಲಣ ಲಿಂಗವ [ಭಾವ]ಲಿಂಗವೆಂದು ಪೂಜಿಸುವರು. ಕಾಯ ಲಿಂಗವೆಂದು ಪೂಜಿಸುವ ಖಂಡಿತರನೇನೆಂಬೆ ? ಜೀವ ಲಿಂಗವೆಂದು ಪೂಜಿಸುವ ಉಪಜೀವಿಗಳನೇನೆಂಬೆ ? ಭಾವ ಲಿಂಗವೆಂದು ಪೂಜಿಸುವ ಭ್ರಮಿತರನೇನೆಂಬೆ ? ಕಾಯ ಲಿಂಗವೇ ? ಅಲ್ಲ, ಜೀವ ಲಿಂಗವೇ ? ಅಲ್ಲ, ಭಾವ ಲಿಂಗವೇ ? ಅಲ್ಲ, ಅದೃಶ್ಯಭಾವನಾ ನಾಸ್ತಿ ದೃಶ್ಯಮೇವ ವಿನಶ್ಯತಿ ಅವರ್ಣಮಕ್ಷರಂ ಬ್ರಹ್ಮ ಕಥಂ ಧ್ಯಾಯಂತಿ ಯೋಗಿನಃ ಎಂದುದಾಗಿ_ ಇಷ್ಟಲಿಂಗವ ಪೂಜಿಸಿ ದೃಷ್ಟಲಿಂಗದಲ್ಲಿ ನೆರೆಯಬಲ್ಲರೆ ಕೂಡಲಚೆನ್ನಸಂಗಯ್ಯಾ, ಅವರ ಸರ್ವಾಂಗಲಿಂಗಿಗಳೆಂಬೆನು
--------------
ಚನ್ನಬಸವಣ್ಣ
ದೇವರು ಬಿದ್ದರು ದೇವರು ಬಿದ್ದರು ಎಂದು ಸಾಹಿತ್ಯದ ಕೂಡ ಸಾಯಬೇಕೆಂಬಿರಿ. ಆವಾಗ ಬಿದ್ದಿತ್ತೆಂದರಿಯಿರಿ ಆವಾಗ ಇದ್ದಿತ್ತೆಂದರಿಯಿರಿ, ಆವಾಗ ಇದ್ದಿತ್ತು ಆವಾಗ ಬಿದ್ದಿತ್ತು ಎಂದು ಬಲ್ಲರೆ ನೀವು ಹೇಳಿರೆ ? ``ಅದೃಶ್ಯಭಾವನೋ ನಾಸ್ತಿ ದೃಶ್ಯಮೇವ ವಿನಶ್ಯತಿ ಅವರ್ಣಮಕ್ಷರಂ ಬ್ರಹ್ಮ ಕಥಂ ಧ್ಯಾಯಂತಿ ಯೋಗಿನಃ ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯನ ಅರಿದಾಗಲಿದ್ದಿತ್ತು ಮರೆದಾಗ ಬಿದ್ದಿತ್ತು.
--------------
ಚನ್ನಬಸವಣ್ಣ
-->