ಅಥವಾ

ಒಟ್ಟು 62 ಕಡೆಗಳಲ್ಲಿ , 18 ವಚನಕಾರರು , 51 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೊಲೆಯಿಲ್ಲದಾವಿಂಗೆ ತಲೆ[ಯೆ] ಮೊಲೆ ! ಮನದಲ್ಲಿ ಉಣ್ಣು ಕಂಡಾ, ಮನದಲ್ಲಿ ಉಣ್ಣು ಕಂಡಾ ! ತಾ ಸತ್ತು, ಹಾಲ ಕುಡಿಯ ಬಲ್ಲಡೆ, ಗುಹೇಶ್ವರನೆಂಬ ಲಿಂಗವು ತಾನೆ ಕಂಡಾ !
--------------
ಅಲ್ಲಮಪ್ರಭುದೇವರು
ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು, ಒರೆಯಾವಿನ ಬೆನ್ನ ಹರಿಯಲದೇಕಯ್ಯಾ ಲಜ್ಜೆಗೆಡಲೇಕೆ ನಾಣುಗೆಡಲೇಕೆ ಕೂಡಲಸಂಗಮದೇವನುಳ್ಳನ್ನಕ್ಕ ಬಿಜ್ಜಳನ ಭಂಡಾರವೆನಗೇಕಯ್ಯಾ.
--------------
ಬಸವಣ್ಣ
ಹರಿಯ ಕೈಯೊಳಗಣ ಗಿಳಿಗೆ, ಬೆಕ್ಕಿನ ಭಯ. ಗಿಳಿಯೆದ್ದೋಡಿ ಹಾಲ ಕುಡಿಯಲು, ಹರಿಯ ಕೈ ಮುರಿದು, ಮಾರ್ಜಾಲಗೆ ಮರಣವಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆನೆ ಕುದುರೆ ಒಂಟೆ ನಾಯಿ ಕೋತಿಗಳು ಮೊದಲಾದ ಪಂಚವಾಹನಾರೂಢರಾಗಿ ಚರಿಸುವವರಿಗೆ ಸುಂಕ. ಮನೆಯ ಕೆಡಿಸಿ ಮನೆಯ ಕಟ್ಟುವವರಿಗೆ ಸುಂಕ. ಹಾದರನಾಡುವವರಿಗೆ ಸುಂಕ. ತಳಮೇಲು ನಡುಮಧ್ಯ ಚತುದರ್ಶದಲ್ಲಿರುವವರಿಗೆ ಸುಂಕ. ಕಾಮಧೇನುವಿನ ಹಾಲ ಕರದು ಕುಡಿದವರಿಗೆ ಸುಂಕಿಲ್ಲ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ. ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ. ಆಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ. ಪುಷ್ಪದ ನೇಮವ ಹಿಡಿದಾತ ತುಂಬಿಯಾಗಿ ಹುಟ್ಟುವ ... ಇವು ಷಡುಸ್ಥಲಕ್ಕೆ ಹೊರಗು. ನಿಜಭಕ್ತಿ ಇಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ಕಾಳಿಯ ಕಡೆಗಣ್ಣ ಕಿತ್ತು, ಏಡಿಯ ಸರ್ವಾಂಗವ ಸೀಳಿ, ಅಚ್ಚ ಬೆಳ್ಳಿಗೆಯ ಹಾಲ ನಿಶ್ಚಯದಲ್ಲಿ ತೆಗೆದು ತೃಪ್ತಿಯಾಗಿ ಕೊಳ್ಳಬಲ್ಲಡೆ, ಆತನೆ ಸದಾಶಿವಮೂರ್ತಿಲಿಂಗವು.
--------------
ಅರಿವಿನ ಮಾರಿತಂದೆ
ಹಸಿಹುಲ್ಲು ಮೆಯ್ದ ಪಶುವಿಗೆ ಹಾಲುಂಟು, ಬೆಣ್ಣೆಯಿಲ್ಲ. ಒಣಹುಲ್ಲು ಮೆಯ್ದ ಪಶುವಿಗೆ ಹಾಲಿಲ್ಲ, ಬೆಣ್ಣೆಯುಂಟು. ಸರ್ವರು ಪಶುವಿಂಗೆ ರಸದ ಹುಲ್ಲು ಮೆಯ್ಸಿ ಹಾಲ ಕರೆದುಂಬರು. ಅದರೊಳೊಬ್ಬ ಅಧಮ ಕರಡವ ಪಶುವಿಗೆ ಮೆಯ್ಸಿ ಹಾಲ ಕರೆದುಂಬನು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಐದು ವರ್ಣದ ಪಶುವಿನ ಬಸುರಿನಲ್ಲಿ, ಮೂರು ವರ್ಣದ ಕರು ಹುಟ್ಟಿ, ಒಂದೇ ವರ್ಣದ ಹಾಲ ಸೇವಿಸಿ, ಹಲವು ಹೊಲದಲ್ಲಿ ತಿರುಗಾಡುತ್ತಿದ್ದಿತ್ತು. ನಿಃಕಳಂಕ ಮಲ್ಲಿಕಾರ್ಜುನಲಿಂಗದ ಕುಳದ ಹೊಲಬುಗಾಣದೆ.
--------------
ಮೋಳಿಗೆ ಮಾರಯ್ಯ
ಪಂಚವರ್ಣದ ಗೋವಿನ ಹಾಲ ಕರದು ಬಿಸಿಲಿಗೆ ಕಾಸಿ ಹಾಲು ಬೆಣ್ಣೆ ತುಪ್ಪವ ಮಾರಿ, ಮೊಸರು ಮಜ್ಜಿಗೆ ಮಾರದೆ ಕಾಯಕ ಮಾಡುತ್ತಿರ್ದೆ ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬಾಲಕಿ ಹಾಲ ಸವಿದಂತೆ, ಮರುಳಿನ ಮನದ ನೆನಹಿನಂತೆ, ಮೂಗ ಕಂಡ ಕನಸಿನಂತೆ, ಮೈಯರಿಯದ ನೆಳಲಿನಂತೆ, ಬಂಜೆಯ ಮನದ ಸ್ನೇಹದಂತೆ, ಮಹಾಲಿಂಗ ಕಲ್ಲೇಶ್ವರನಲ್ಲಿ ಎನಗೆ ಲಿಂಗೈಕ್ಯವು.
--------------
ಹಾವಿನಹಾಳ ಕಲ್ಲಯ್ಯ
ಯೋನಿಯಿಲ್ಲದ ಆಕಳಿನಲ್ಲಿ, ಬಾಯಿಯಿಲ್ಲದ ಕರು ಹುಟ್ಟಿತ್ತು. ಮೊಲೆಯಿಲ್ಲದ ಹಾಲ ಕುಡಿದು, ಒಡಲಿಲ್ಲದೆ ತಿರುಗಾಡುತ್ತದೆ. ಏಣಾಂಕಧರ ಸೋಮೇಶ್ವರಲಿಂಗ, ಇದೇನು ಸೋಜಿಗವೆಂದರಿಯೆ.
--------------
ಬಿಬ್ಬಿ ಬಾಚಯ್ಯ
ಹಾಲ ನೇಮ, ಹಾಲ ಕೆನೆಯ ನೇಮ, ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ, ಬೆಣ್ಣೆಯ ನೇಮ, ಬೆಲ್ಲದ ನೇಮ, ಅಂಬಲಿಯ ನೇಮದವರನಾರನೂ ಕಾಣೆ. ಕೂಡಲಸಂಗನ ಶರಣರಲ್ಲಿ ಅಂಬಲಿಯ ನೇಮದಾತ ಮಾದಾರ ಚೆನ್ನಯ್ಯ. 232
--------------
ಬಸವಣ್ಣ
ಕಾದ ಹಾಲ ನೊಣ ಮುಟ್ಟಬಲ್ಲುದೆ ? ಕಿಚ್ಚಿನೊಳಗಣ ಗುಂಡ ಬೆಕ್ಕು ಮುಟ್ಟಬಲ್ಲುದೆ ? ಮರುಜವಣಿಯ ಕಡ್ಡಿ ಕಯ್ಯಲಿದ್ದವಂಗೆ ಸರ್ಪ ಕಡಿಯಬಲ್ಲುದೆ ? ಈ ತ್ರಿವಿಧವನರಿದವಂಗೆ ಹಿಂದೆ ಶಂಕೆಯಿಲ್ಲ ! ಮುಂದೆ ಭೀತಿಯಿಲ್ಲ. ಕಳಂಕು ಇಲ್ಲದೆ ಅಮುಗೇಶ್ವರಲಿಂಗವು ಅಪ್ಪಿಕೊಂಡಿತ್ತು.
--------------
ಅಮುಗೆ ರಾಯಮ್ಮ
ಎನ್ನ ಮಡದಿ ಹಾಲ ಕಾಸುವಾಗ, ಹಾಲಿನ ಕುಡಿಕೆಯಲ್ಲಿ ಹಾವು ಬಿದ್ದು ಸತ್ತಿತ್ತು. ಮಡದಿಯ ಬಿಡಬಾರದು, ಹಾಲ ಚೆಲ್ಲಬಾರದು. ಹಾವಿನ ವಿಷ ಹಾಲಿನಲ್ಲಿ ಸೋರಿತ್ತು, ಇದಕಿನ್ನಾವುದು ತೆರ? ಕ್ರೀಯ ಬಿಡಬಾರದು, ಅರಿವಿಂಗೆ ಆಶ್ರಯ ಬೇಕು. ಅರಿವನರಿದೆಹೆನೆಂದಡೆ ಪ್ರಪಂಚಕ್ಕೆ ಒಡಲಾಯಿತ್ತು. ಹುಲಿ ಬಾವಿ ಹಾವಿನ ಎಡೆಯಲ್ಲಿ ಸಿಕ್ಕಿದ ತೆರ ಎನಗಾಯಿತ್ತು. ಈ ಸಂದೇಹವ ಬಿಡಿಸು, ಸದಾಶಿವಮೂರ್ತಿಲಿಂಗವೆ, ನಿನ್ನ ಧರ್ಮ.
--------------
ಅರಿವಿನ ಮಾರಿತಂದೆ
ತಾಳಮರದ ಕೆಳಗೆ ಒಂದು ಹಾಲ ಹರಮಿದ್ದಡೆ ಅದ ಹಾಲಹರವಿಯೆನ್ನರು, ಸುರೆಯ ಹರವಿಯೆಂಬರು. ಈ ಭಾವನಿಂದೆಯ ಮಾಣಿಸಾ ಕೂಡಲಸಂಗಮದೇವಾ. 90
--------------
ಬಸವಣ್ಣ
ಇನ್ನಷ್ಟು ... -->