ಎ ಪದದಿಂದ ಪ್ರಾರಂಭವಾಗುವ ವಚನಗಳು:
ಎಲ್ಲವನರಿದಲ್ಲಿ,ಕಡೆಯಲ್ಲಿ ಕೊಲ್ಲಬೇಕೆಂಬುದೊಂದು ವೇದ ಉಂಟೆ?ಶಾಸ್ತ್ರವನೆಲ್ಲವ ಕಲಿತಲ್ಲಿ ಗೆಲ್ಲ ಸೋಲಕ್ಕೆಹೋರಬೇಕೆಂದು ಕಡೆಯಲ್ಲಿ ಒಂದು ಸೊಲ್ಲುಂಟೆ?ಪುರಾಣವನ್ನೆಲ್ಲವನೋದಿದಲ್ಲಿ ಸರ್ವಜೀವವಕೊಲ್ಲು ಕೊರೆ ಎಂಬುದೊಂದು ದಳ್ಳುರಿಯುಂಟೆ?ಶ್ರುತಿಯ ಕೇಳುವಲ್ಲಿ ಸ್ಮೃತಿಯನಂಗೀಕರಿಸುವಲ್ಲಿಸರ್ವಹತವ ಮಾಡಬೇಕೆಂಬುದೊಂದು ಗತಿಯುಂಟೆ?ಇಂತೀ ಆತ್ಮನಲ್ಲಿ ಸರ್ವಭೂತ ಹಿತವುಳ್ಳಂಗೆಆತ ಅತೀತ ಸ್ವಯವಸ್ತು ದಸರೇಶ್ವರಲಿಂಗವು.
ಎಲು ನರ ಚರ್ಮ ಮಜ್ಜೆ ಮಾಂಸದೊಳಗಾದಕ್ರಿಮಿ ಎನ್ನಂಗದೊಳು ಹುಟ್ಟಿ,ಮಲ ಹುಣ್ಣು ಉಗುಳುಗಳಲ್ಲಿ ಬೀಳುವುದ ಕಂಡುಅವ ನಾ ರಕ್ಷಿಸಿದೆನೆ?ಅವು ಬೀಳಬೇಕೆಂದು ನಾ ಶಿಕ್ಷಿಸಿದೆನೆ?ಇಂತೀ ಜೀವದ ದೃಷ್ಟವ ಕಂಡುಎನಗಿದೆತ್ತಣ ಸರ್ವ ಜೀವದಯಈ ರಕ್ತದ ಲೇಪವ ಬಿಡಿಸಾ,ಕಲ್ಲು ಮಣ್ಣು ಮರನಂತೆಚೆನ್ನ ದಸರೇಶ್ವರಲಿಂಗಾ.