ನುಡಿವಲ್ಲಿ ಕಿಂಕಲವನರಿದು,
ಕರವ ಬೀಸುವಲ್ಲಿ ತುಷಾರ ಕೀಟವನರಿದು,
ಅಡಿಯಿಡುವಲ್ಲಿ ಪೊಡವಿಯಲ್ಲಿ
ಹೊರಹೊಮ್ಮಿದ ಜೀವನ ಚೇತನಾದಿಗಳನರಿದು
ಮತ್ತೆ, ನೀಡುವಲ್ಲಿ ಹಿಡಿವಲ್ಲಿ,
ಮತ್ತೊಂದ ಒಡಗೂಡುವಲ್ಲಿ ಒಡಗೂಡಿ ಬಿಡುವಲ್ಲಿ
ಸರ್ವದಯಕ್ಕೆ ಪಡಿಪುಚ್ಚವಿಲ್ಲದಿರಬೇಕು.
ಇಂತೀ ಸಡಗರದ ಚಿತ್ತ ದಸರೇಶ್ವರಲಿಂಗವನೊಡಗೂಡುವಭಕ್ತಿ.