ಅಥವಾ
(0) (0) (0) (0) (1) (0) (0) (0) (2) (0) (0) (1) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (1) (0) (0) (0) (0) (0) (0) (0) (0) (0) (0) (0) (4) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸರ್ವಮಯ ನಿನ್ನ ಬಿಂದುವಾದಲ್ಲಿ ಆವುದನಹುದೆಂಬೆ, ಆವುದನಲ್ಲಾಯೆಂಬೆ? ಸರ್ವಚೇತನ ನಿನ್ನ ತಂತ್ರಗಳಿಂದ ಆಡುವವಾಗಿ ಇನ್ನಾವುದ ಕಾಯುವೆ, ಇನ್ನಾವುದ ಕೊಲುವೆ? ತರುಲತೆ ಸ್ಥಾವರ ಜೀವಂಗಳೆಲ್ಲಾ ನಿನ್ನ ಕಾರುಣ್ಯದಿಂದೊಗೆದವು. ಆರ ಹರಿದು ಇನ್ನಾರಿಗೆ ಅರ್ಪಿಸುವೆ? ತೊಟ್ಟು ಬಿಡುವನ್ನಕ್ಕ ನೀ ತೊಟ್ಟುಬಿಟ್ಟ ಮತ್ತೆ ನೀ ಬಿಟ್ಟರೆಂದು ಎತ್ತಿ ಪೂಜಿಸುತಿರ್ದೆ ದಸರೇಶ್ವರನೆಂದು.
--------------
ದಸರಯ್ಯ
ಸರ್ವಜೀವ ನಿನ್ನ ಹಾಹೆ ಎಂಬೆನೆ? ಅದು ಭಿನ್ನಭಾವ ತ್ರಿಗುಣಾತ್ಮಕರುಂಟು, ಅದು ನಿನಗನ್ಯವೆಂಬೆನೆ? ಆ ತ್ರಿಗುಣಾತ್ಮಕರು ನಿನ್ನ ತಿಲಾಂಶ. ಇಂತೀ ಸರ್ವಭೂತಕ್ಕೆ ನಿನ್ನ ದಯ. ಎನಗಿದೇಕೆ ಗೆಲ್ಲ ಸೋಲವೆಂಬ ಖುಲ್ಲತನ, ಎಲ್ಲ ಜೀವಕ್ಕೂ ಸರಿ. ಅರುಣೋದಯದಂತೆ ಎನ್ನ ಚಿತ್ತದಲ್ಲಿ ಸರ್ವಜೀವಕ್ಕೆ ಎಲ್ಲಕ್ಕೂ ದಯವ ಮಾಡು, ಚೆನ್ನ ದಸರೇಶ್ವರಲಿಂಗಾ.
--------------
ದಸರಯ್ಯ
ಸರ್ವಜೀವಂಗಳ ಕೊಲುವಲ್ಲಿ, ಜೀವ ಜೀವನ ಕೈಯಲ್ಲಿ ಸಾವಲ್ಲಿ ಆ ಕೊಲೆಗೆ ಒಲವರ ಬೇಡ. ಆ ಕೊಲೆಯ ಕೊಲುವಲ್ಲಿ ಅದು ಹೊಲೆಯೆಂದು ಆ ಜೀವವ ಬಿಡೆಂದು ಒಲವರ ಬೇಡ. ಅದು ಕೊಲುವ ಜೀವದ ನೋವು, ಸಾವ ಜೀವದ ದಯ. ಆ ಉಭಯದ ಹೊಲಬ ತಿಳಿದು ಮನದ ನೀರಿನಲ್ಲಿ ಮಜ್ಜನವ ಮಾಡಿ ಚಿತ್ತದ ಗಿಡುವಿನ ಪುಷ್ಪವ ಹರಿದು ಹೊತ್ತಿಗೊಂದು ಪರಿಯಾದ ಚಂದನದ ಗಂಧವನಿಟ್ಟು ತಥ್ಯಮಿಥ್ಯವಳಿದ ಅಕ್ಷತೆಯ ಲಕ್ಷಿಸಿ, ಸುಗುಣ ದುರ್ಗುಣವೆಂಬ ಉಭಯದ ಹಗಿನವ ತೆಗೆದು, ನಿಜ ಸುಗಂಧದ ಧೂಪವನಿಕ್ಕಿ, ನಿತ್ಯಾನಿತ್ಯವೆಂಬ ನಟ್ಟಾಲಿಯ ದರ್ಪವ ಕಿತ್ತು, ಮತ್ತಮಾ ಕಂಗಳ ತೆಗೆದ ದರ್ಪಣವ ತೋರುತ್ತ, ಪೂರ್ವ ಪಶ್ಚಿಮ ನಷ್ಟವಾದ ಸತ್ತಿಗೆಯ ಹಿಡಿದು ದುರ್ವಾಸನೆಯೆಂಬ ಉಷ್ಣವ ಪರಿಹರಿಸುವುದಕ್ಕೆ ಸುಮತೆಯೆಂಬ ಆಲವಟ್ಟವನೆ ತಿರುಹುತ್ತ, ಉತ್ತರ ಪೂರ್ವಕ್ಕೆ ಉಭಯವಲ್ಲಾಡದ ಚಾಮರವ ಢಾಳಿಸುತ್ತ, ಇಂತೀ ವರ್ತನಂಗಳಲ್ಲಿ ಸತ್ಯಸಾಕ್ಷಿಯಾಗಿ ಭಕ್ತಿ ಜ್ಞಾನ ವೈರಾಗ್ಯವೆಂಬೀ ಇಷ್ಟವ ಮಾಡಿ ನಿಜ ನಿಶ್ಚಯದ ಬೆಳಗಿನ ಆರತಿಯನೆತ್ತಿ ನೋಡುತ್ತಿರಬೇಕು ದಸರೇಶ್ವರಲಿಂಗವ.
--------------
ದಸರಯ್ಯ
ಸರ್ವವನರಿದಲ್ಲಿ ಸರ್ವಜ್ಞನಾದಲ್ಲಿ ಇದಿರೆಲ್ಲಿ ತಾನೆಲ್ಲಿ? ಅದು ತನ್ನ ಭಿನ್ನ ಭಾವ ಅನ್ಯರಲ್ಲಿ ಎಮ್ಮುವ ತೋರಿ ಆ ಗುಣ ತನ್ನನೆ ಅನ್ಯವೆನಿಸೂದು. ತನ್ನ ಶಾಂತಿ ಅನ್ಯರಲ್ಲಿ ತೋರಿ, ಅಲ್ಲಿ ಭಿನ್ನಭಾವವಿಲ್ಲದಿರೆ ಅವರನ್ಯರಲ್ಲ ಎಂಬುವುದು ತನ್ನ ಗುಣ. ಅನ್ಯವಿಲ್ಲವೆಂಬುದನರಿತು ತನ್ನೊಪ್ಪದ ದರ್ಪಣದಲ್ಲಿ ತೋರುವಂತೆ ಇದಕ್ಕೇ ಕರ್ಕಶವಿಲ್ಲ ದಸರೇಶ್ವರಲಿಂಗವನರಿವುದಕ್ಕೆ.
--------------
ದಸರಯ್ಯ