ಆ ಪದದಿಂದ ಪ್ರಾರಂಭವಾಗುವ ವಚನಗಳು:
ಆವಾವಸ್ಥಾನದಲ್ಲಿಯುಉಗ್ರಮೂರ್ತಿ ನಯನ ಕರುಣದಿಂದಶಿವಲೀಲಾನಂದವಾಗಿ ಇರುವ ಶರಣರುಲೌಕಿಕದ ಜಡರು ಮಂಕು ಮರುಳರುಕಳ್ಳರು ಸುಳ್ಳರು ಆಹಾರಗಳ್ಳರು ಇತ್ಯಾದಿಕರು ಅರಿಯಬಲ್ಲರೆ ?ಅಂತಪ್ಪ ಮಹಿಮರ ಶಿವಲಿಂಗನಿಷಾ*ಪರರಏಕದಾರ್ಚನೆಯರ ಮಹಿಮೆಯೆ ನೋಡಲ್ಕೆಯರಳು ಇದ್ದಲ್ಲಿಗೆ ಸಕ್ಕರೆಯು ಬಂದ ಪರಿಯಾಯಿತ್ತು ಕಾಣಾಕುವರ ಚೆನ್ನಬಸವೇಶ್ವರಾ.
ಆರಾರು ಅರಿದುದಿಲ್ಲ, ತಾನಾರಿಗೆ ಸಾಧ್ಯನಲ್ಲ.ಧಾರುಣಿಗೆ ಮಿಗಿಲಾದೆಲ್ಲ ಊರೂರಿ ತಾನಿಂತಾಗದಲ್ಲತೋರಿ ನಯಕ್ಕೆ ಸಿಕ್ಕದಲ್ಲಧೀರತನದಲ್ಲಿ ಕಂಡು ಎಸೆದನಲ್ಲಸರ್ವರನುಳುಹಿ ರಕ್ಷಿಸಿದನಲ್ಲಿನಮ್ಮ ಘನಗುರು ಸದಾಶಿವಮೂರ್ತಿ ಕಾಣಾಕುವರ ಚೆನ್ನಬಸವೇಶ್ವರಾ.
ಆದಿ ಪರಶಿವನ ಜಟಾಮಗುಟದಲ್ಲಿಫಣಿಯ ತ್ರಿಪುರ ಸಂಗ್ರಾಮದಲ್ಲಿ ರೌದ್ರವು ಪುಟ್ಟಿತ್ರಿಪುರವನೆಸೆವಲ್ಲಿ ರಾಕ್ಷಸರ ಸಂಹರಿಸಲ್ಪಟ್ಟಂಥಶೇಷನ ನಯನವು ಸಸಿಯನು ವಿವರಿಸಿ ಪೇಳಾಚೆನ್ನಬಸವೇಶ್ವರಾ.