ಎಲೆ ಅಯ್ಯಾ, ನೀನು ಕುಲವು, ಅವಕುಲವು ಎನ್ನದೆ ಒಲಿದು ಅವರಿಗೆ ಬೆಲೆಯಿಲ್ಲದ ಬಲವ ಮಾಡಿದೆ. ಒಲಿದು ನಿನ್ನ ಪೂಜಿಪರಿಗೆ ಗೆಲವ ಮಾಡಿ, ನಿಲುಗಡೆಯ ಮರೆದವರ ತಲೆಯರಿದು ಬಿಸುಡಿ[ದೆ] ಕಲಿದೇವ, ನಿನಗಾರು ಸರಿಯಿಲ್ಲ ಕಾಣಾ ಚೆನ್ನಬಸವೇಶ್ವರಾ.
ಎಲೆ ಅಯ್ಯಾ, ನಿನ್ನ ಆಸೆ ಬವುಸೆ ತೀರಿಸಿಕೊಂಡು ಧ್ಯಾನ ಮುಗಿಸಿ ಜವಳವರಿದು ಪವನವೇಗದಿ ಬಂದು ಗಿರಿಜೆಗೆ ಅರುಹಿ ಮಂದಗರ್ವದ ರಾಕ್ಷಸರನು ಸಂಹರಿಸುವೆನೆಂದು ಬಸವಗಣನಜ ಹರಿ ಬ್ರಹ್ಮ ದೇವೇಂದ್ರ ಯಮ ದಿಕ್ಪಾಲ ನವಗ್ರಹ-ರವಿ ಕೇತು ಕಾಲ ರಾಹು ಮರುಳ ಭೂತವು ಹ್ರೀಂಕಾರಿ ಪ್ರೇತಸ್ವಿನಿ ಚಾಮುಂಡಿ ನಿಗಂಡಿ ಇಂತಪ್ಪವಿವೇಕವಾದ ಚಂದ್ರ ಸೂರ್ಯ ವಾಯು ಮೊದಲಾದ ಸಂಕುಳ ಸಹ ಕೂಡಿ ಬಲವ ನಿಂದು ನಿಲುಕಡೆ ಕಂಡ ನಮ್ಮ ಘನಗುರು ಸದಾಶಿವನು ಕಾಣಾ ಕುವರ ಚೆನ್ನಬಸವೇಶ್ವರಾ.