ಇಮ್ಮನ ಹತ್ತಿಯಕಾಳ ಸುರಿದು ಪಶು ಮೇವುತ್ತಿರಲಾಗಿ
ಓಮ್ಮನವ ಮೇದು ಇಮ್ಮನ ಉಳಿಯಿತು.
ಅದ ಸುಮ್ಮಾನದಲ್ಲಿ ಕರೆಯ ಹೋಗಲಿಕೆ
ಅಂಡೆಯಲ್ಲಿ ಐಗುಳವ ಕರೆದು
ಕಂದಲಲ್ಲಿ ಸುರಿಯಲಾಗಿ ಮೂಗುಳವಾಯಿತ್ತು.
ಆ ಮೂಗುಳವ ಒಲೆಯ ದೆಸೆಯಲ್ಲಿರಿಸಲಿಕೆ
ಕಾಸೂದಕ್ಕೆ ಮುನ್ನವೆ ನಾಶವಾಯಿತ್ತು.
ಇಂತೀ ಈಶ್ವರ ವಿಶ್ವಾಸದಲ್ಲಿ ಆತ್ಮ ನಿಶ್ಚಯಿಸಲಾಗಿ
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದೊಳಗಾದವನ ಇರವು.