ಕಂಟಕ ಬಂದಲ್ಲಿ ಸಂತೈಸಿಕೊಂಡು ಆತ್ಮನ ಸಂಚರಿಸದೆ
ನಿಷೆ*ಯಿಂದ ದೃಷ್ಟವ ಕಾಬುದೇ
ಶ್ರದ್ಧೆ ಸದ್ಭಕ್ತನ ಇರವು.
ವೃಥಾಳಾಪದಿಂದ ನಿಂದ, ದುರ್ಜನ ಬಂದಲ್ಲಿ
ಸಂದು ಸಂಶಯವಿಲ್ಲದೆ ಅಂಗವ ಬಂಧಿಸದೆ
ನಿಜಾತ್ಮನ ಸಂದೇಹಕಿಕ್ಕದೆ
ಪರಮಾನಂದಸ್ವರೂಪನಾಗಿ
ಬಂಧ ಮೋಕ್ಷಕರ್ಮಂಗಳ ಹರಿದಿಪ್ಪುದು
ಸರ್ವಾಂಗಲಿಂಗಿಯ ಅರಿವು.
ಅದು ಕರಿಗೊಂಡು ಎಡೆದೆರಪಿಲ್ಲದೆ
ಪರಿಪೂರ್ಣನಾದುದು ಪರಮ ವಿರಕ್ತನ ಪರಿ.
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗವು ತಾನಾದ
ಶರಣನ ಇರವು.