ಹಲವು ಗಿರಿಗಳ ತಪ್ಪಲಲ್ಲಿ,
ಮಲೆಯ ಮಂದಿರಗಳಲ್ಲಿ
ಬಳನೆ ಬಳನೆ ಮೇದು
ಮತ್ತೆ ತಮ್ಮ ನೆಲಹೊಲಕ್ಕೆ ತಪ್ಪದೆ ಬಪ್ಪವು ನೋಡಾ.
ಆ ಪಶುವಿಂಗೆ ಕಟ್ಟು ಗೊತ್ತಿಲ್ಲ,
ಕಾವ ಕಟ್ಟಿಗೆ ಒಳಗಲ್ಲ.
ತಮ್ಮ ಠಾವಿಂಗೆ ಬಂದು ಹಾಲ ಕೊಟ್ಟು,
ಮತ್ತೆ ತಮ್ಮ ನೆಲೆಯ ಠಾವಿಗೆ ಹೋದ ಮತ್ತೆ ಕಾವಲು ತಪ್ಪಿಲ್ಲ,
ಕಾಲಕರ್ಮವಿರಹಿತ ತ್ರಿಪುರಾಂಕ ಲಿಂಗದೊಳ-ಗಾದವಂಗೆ.
ಕೂಗಿನ ಮಾರಯ್ಯನ ವಚನ