ಅಪ್ಪುವಿನ ಸಂಯೋಗದಿಂದ ಮೃತ್ತಿಕೆ ಮಡಕೆಯಾಗಿ,
ಮತ್ತೆ ಅಪ್ಪುವಿನೊಡಗೂಡಿ ತುಂಬಲಿಕ್ಕಾಗಿ,
ಮತ್ತಾ ಅಪ್ಪುವಿನ ದ್ರವಕ್ಕೆ ಮೃತ್ತಿಕೆ ಕರಗಿದುದಿಲ್ಲ.
ಅದೇತಕ್ಕೆ ? ಅನಲ ಮುಟ್ಟಿದ ದೆಸೆಯಿಂದ.
ಅದು ಕಾರಣ, ಇಂತೀ ವಸ್ತುವಿನ ದೆಸೆಯಿಂದ
ಸತ್ಕ್ರಿಯಾಮಾರ್ಗಂಗಳು ಭವದ ತೊಟ್ಟುಬಿಟ್ಟವು.
ಇಂತೀ ದೃಷ್ಟವನರಿದು ಸರ್ವಕ್ರೀಗಳೆಲ್ಲವೂ ವಸ್ತುವ ಮುಟ್ಟಲಿಕ್ಕಾಗಿ
ಪೂರ್ವಗುಣ ತನ್ನಷ್ಟವಾಯಿತ್ತು, ಭೋಗಬಂಕೇಶ್ವರಲಿಂಗವನರಿದ ಕಾರಣ.