ಆವಂಗದ ಮರೆಯಲ್ಲಿದ್ದು ಕಾದುವ ಭಟನು:
ಆ(ವಂಗ)ದ ಮರೆಯ ಸತ್ವವೋ ? ತನ್ನ ಹೃದಯದ ಸತ್ವವೋ ?
ಒಂದನಹುದು ಒಂದನಲ್ಲಾ, ಎಂದಡೆ ಕ್ರೀ ನಿಃಕ್ರೀಯೆಂಬ ಉಭಯವಿಲ್ಲ.
ಎರಡನೊಡಗೂಡಿ ಒಂದನರಿದಿಹೆನೆಂದಡೆ
ಸಾಕಾರವೊಂದು ನಿರಾಕಾರವೊಂದು.
ಸಾಕಾರವನು ನಿರಾಕಾರವನು ಏಕೀಕರಿಸಿ ಕಂಡೆಹೆನೆಂದಡೆ
ಅದು ಒಂದು ದೃಷ್ಟ, ಒಂದು ತನ್ನಷ್ಟ.
ಆ ಉಭಯದಂಗ ಒಂದಂಗವಾಗಿ
ಕರ್ಪುರದ ಗಿರಿಯಲ್ಲಿ ಉರಿಯುದಿಸಿದ ತೆರನಂತೆ ಉಭಯ ಏಕವಾಗಿಯಲ್ಲದೆ
ಭೋಗಬಂಕೇಶ್ವರಲಿಂಗವನರಿಯಬಾರದು.