ಸರ್ಪನ ಸಲಹಿದಲ್ಲಿ, ಬೇರೆ ವಿಷವ ಸಲಹಲುಂಟೆ ?
ಸಸಿವೃಕ್ಷಂಗಳ ಸಲಹುವಲ್ಲಿ ಬೇರೆ ಫಲವ ಸಲಹಲುಂಟೆ ?
ಕ್ರೀ ನಿರ್ಧಾರವಾದಲ್ಲಿ, ಆಚಾರಕ್ಕೆ ಅಂಕುರ,
ಆಚಾರ ಅಂಕುರವಾದಲ್ಲಿ, ದಿವ್ಯಜ್ಞಾನ ಪಲ್ಲವಿಸಿತ್ತು.
ಆ ಪಲ್ಲವದ ಮರೆಯಲ್ಲಿ, ಪರತತ್ವ ವಸ್ತು ಫಲವಾಗಿ,
ಉಭಯದ ತೊಟ್ಟು ಹರಿದು ಬಿದ್ದ ಹಣ್ಣು, ಅಭೇದ್ಯ ಲಿಂಗಕ್ಕೆ ತೃಪ್ತಿಯಾಯಿತ್ತು.
ಇಂತೀ ಭಾವದ ಭ್ರಮೆಯ ಕಳೆದು, ಜೀವವಿಕಾರ ಹಿಂಗಿ,
ನಾ ನೀನೆಂಬ ಉಭಯದ ದೃಷ್ಟ ಏನೂ ಇಲ್ಲದೆ ನಿಂದುದು, ಪ್ರಾಣಲಿಂಗಸಬಂಧ.
ಆ ಸಂಬಂಧವ ಸ್ವೀಕರಿಸಿ ನಿಂದುದು ಪ್ರಾಣಲಿಂಗಿಯ ತೃಪ್ತಿ.
ಇಂತೀ ನಿಜದಲ್ಲಿ ತಾನು ತಾನಾಗಬಲ್ಲಡೆ, ಆತನೇ ಐಕ್ಯಾನುಭಾವಿ,
ನಿಃಕಳಂಕ ಮಲ್ಲಿಕಾರ್ಜುನಾ.