ದೇವಿಯರೊಳಗೆ ದೇವನೆ ಕೂಡಿದ.
ಹರಹರ ಮಾಯೆ[ಯ] ಘನವ ಮನವ ತನುವನಾರಿಗೆಯು ತಿಳಿಯಬಾರದು.
ತಿಳಿದೆನೆಂಬೊ ಭ್ರಮಿ[ತರಿಗೆ] ಕರ ಸನ್ನಿಹಿತವಳವಡುವಳಲ್ಲ .
ತಂದೆ ಅಣ್ಣ ತಮ್ಮ ಬಂಧು ಬಳಗ ಕುಲ ಆವುದೆನ್ನದೆ
ಕುಲಗೆಡುವಂಥವಳಲ್ಲ.
ನಮ್ಮ ಘನ ಗುರು ಅಲ್ಲಮ ಪ್ರಭುದೇವನು
ಶಾಂತಿ ಸೈರಣೆ ಉಳ್ಳಂಥವಂಗೆ
ತದ್ರೂಪದ ಮಹಿಮೆಯ ಉಸುರಿ ಹೇಳುವನು
ನಮ್ಮ ತನಯ ಶಿವಶಾಂತ ಮೂರುತಿ ಕಾಣಾ
ಚೆನ್ನಬಸವೇಶ್ವರಾ.