ನಿನ್ನ ಹರೆಯದ ರೂಹಿನ ಚೆಲುವಿನ, ನುಡಿಯ ಜಾಣಿನ,
ಸಿರಿಯ ಸಂತೋಷದ,
ಕರಿ ತುರಗ ರಥ ಪದಾತಿಯ ನೆರವಿಯ,
ಸತಿ ಸುತರ ಬಂಧುಗಳ ಸಮೂಹದ,
ನಿನ್ನ ಕುಲದಭಿಮಾನದ
ಗರ್ವವ ಬಿಡು, ಮರುಳಾಗದಿರು.
ಅಕಟಕಟಾ ರೋಮಜನಿಂದ ಹಿರಿಯನೆ?
ಮದನನಿಂ ಚೆಲುವನೆ?
ಸುರಪತಿಯಿಂದ ಸಂಪನ್ನನೆ?
ವಾಮದೇವ ವಶಿಷ್ಟರಿಂದ ಕುಲಜನೆ?
ಅಂತಕನ ದೂತರು ಬಂದು ಕೈವಿಡಿದೆಳದೊಯ್ಯುವಾಗ
ನುಡಿ ತಡವಿಲ್ಲ ಕೇಳೋ ನರನೆ!
ಎನ್ನ ಮಾಹಾಲಿಂಗ ತ್ರಿಪುರಾಂತಕದೇವರ ಪೂಜಿಸಿಯಾದರೆ
ಕೇಡಿಲ್ಲದ ಪದ ದೊರಕೊಂಬುದು ಮರುಳೆ.