ಅಥವಾ

ಪ್ರಾರಂಭ ಪದದ ಹುಡುಕು

(19) (5) (2) (1) (6) (0) (0) (0) (4) (4) (0) (1) (0) (0) ಅಂ (19) ಅಃ (19) (27) (0) (23) (3) (0) (4) (0) (6) (0) (0) (0) (0) (2) (0) (0) (7) (0) (7) (0) (17) (6) (0) (19) (3) (31) (0) (5) (0) (1) (13) (8) (1) (23) (10) (0)
-->

ಪ್ರಾರಂಭ ಪದದ ಹೆಸರಿರುವ ವಚನಕಾರರು

ಅಕ್ಕಮಹಾದೇವಿ
ಹನ್ನೆರಡನೆಯ ಶತಮಾನದಲ್ಲಿದ್ದ ಅಕ್ಕಮಹಾದೇವಿ, ನಿರ್ಮಲಶೆಟ್ಟಿ ಮತ್ತು ಸುಮತಿಯರ ಮಗಳು. ತಂದೆ ತಾಯಿಯರ ಹೆಸರು ಕವಿ ಕಲ್ಪನೆ ಇದ್ದೀತು ಅನ್ನುವುದು ಕೆಲವು ವಿದ್ವಾಂಸರ ಅನುಮಾನ. ಹರಿಹರನ ಮಹದೇವಿಯಕ್ಕಗಳ ರಗಳೆಯ ಪ್ರಕಾರ ಊರಿನ ಮುಖ್ಯಸ್ಥ ಕೌಶಿಕ ಮಹದೇವಿಯನ್ನು ಮದುವೆಯಾಗಲು ಬಯಸಿ ಒತ್ತಾಯಿಸಿದ. ಅಕ್ಕ ಶರತ್ತುಗಳನ್ನು ವಿಧಿಸಿ ಮದುವೆಗೆ ಒಪ್ಪಿದರೂ ಕೌಶಿಕ ವಚನ ಭಂಗ ಮಾಡಿದಾಗ ಉಡುಗೆಯನ್ನೂ ತೊರೆದು ಮನೆ ಬಿಟ್ಟು ಹೊರಟುಬಿಡುತ್ತಾಳೆ. ಇನ್ನು ಕೆಲವು ಕಥನಪರಂಪರೆಗಳಲ್ಲಿ ಅಕ್ಕ ಎಳವೆಯಲ್ಲೇ ಚನ್ನಮಲ್ಲಿಕಾರ್ಜುನನನ್ನು ವರಿಸಿದವಳು ಅನ್ನುವುದೂ ಉಂಟು. ಉರಕ್ಕೆ ಜವ್ವನಗಳು ಬಾರದ ಮುನ್ನ ಎಂದು ಆರಂಭವಾಗುವ ಅಕ್ಕನ ವಚನ ನೋಡಿ. ಪರ್ಯಟನೆ ಮಾಡುತ್ತ ಮಹದೇವಿ ಕಲ್ಯಾಣಕ್ಕೆ ಹೋದಳು, ಅಲ್ಲಿಂದ ಶ್ರೀಶೈಲದ ಕದಳಿಯಲ್ಲಿ ಐಕ್ಯಳಾದಳು ಎಂಬ ವಿವರಗಳಿವೆ. ಅಲ್ಲಮ ಮತ್ತು ಅಕ್ಕಮಹಾದೇವಿ ಒಂದೇ ಪ್ರಾಂತದವರು, ಅವರ ಬದುಕಿನ ಕಥೆಗಳಲ್ಲೂ ವೈಚಾರಿಕ ನಿಲುವುಗಳಲ್ಲೂ ಅನೇಕ ಸಾಮ್ಯಗಳಿವೆ. ಈಕೆಯ 434 ವಚನಗಳು ಮತ್ತು ಹಲವು ಹಾಡುಗಳು ದೊರೆತಿವೆ. ಯೋಗಾಂಗ ತ್ರಿವಿಧಿ, ಸೃಷ್ಟಿಯ ವಚನ ಮತ್ತು ಮಂತ್ರಗೋಪ್ಯ ಮಹಾದೇವಿಯ ಇತರ ಕೃತಿಗಳು ಎಂದು ಹೇಳುವುದುಂಟು. ಆದರೆ ಇವುಗಳ ರಚನೆಯನ್ನು ನೋಡಿದರೆ ವಚನಗಳನ್ನು ಸೃಷ್ಟಿಸಿದ ಮನಸ್ಸೇ ಈ ಕೃತಿಗಳನ್ನೂ ರಚಿಸಿತು ಎಂದು ನಂಬುವುದು ಕಷ್ಟವಾಗುವಂತಿದೆ. ಭಾವಗಳ ತೀವ್ರತೆ ಈಕೆಯ ರಚನೆಗಳ ಮುಖ್ಯ ಲಕ್ಷಣ.
ಅಕ್ಕಮ್ಮ
ಹುಟ್ಟಿದ ಊರು ಏಲೇಶ್ವರ [ಏಲೇರಿ]. ಈಕೆಯ 154 ವಚನಗಳು ದೊರೆತಿವೆ. ವ್ರತ, ನೇಮ, ಆಚಾರ, ಶೀಲ ಇವು ಆಕೆಯ ವಚನಗಳಲ್ಲಿ ಹೆಚ್ಚು ಪರಿಶೀಲನೆಗೆ ಒಳಗಾಗಿವೆ.
ಅಖಂಡ ಮಂಡಲೇಶ್ವರ
-----
ಅಂಗಸೋಂಕಿನ ಲಿಂಗತಂದೆ
ಕಾಲ : 1160. ಕೃತಿಯ ವೈಶಿಷ್ಟ್ಯ : ಧಾರ್ಮಿಕ ವಿಚಾರಗಳೇ ಪ್ರಧಾನ. ಬಸವಣ್ಣ, ಚೆನ್ನಬಸವಣ್ಣ, ಅಲ್ಲಮ, ಚಂದಯ್ಯ, ಮಡಿವಾಳಯ್ಯ, ಹಡಪದಪ್ಪಣ್ಣ, ಸೊಡ್ಡಳ ಬಾಚರಸ, ಮೋಳಿಗೆ ಮಾರಯ್ಯ, ಅನಿಮಿಷ ದೇವರು, ಮರುಳ ಶಂಕರ ದೇವ, ಘಟ್ಟಿವಾಳಯ್ಯ, ಅಜಗಣ್ಣ, ನಿಜಗುಣ, ಸಿದ್ಧರಾಮ-ಇವರನ್ನು ನೆನೆದಿರುವನು. 770 ಅಮರ ಗಣಗಳಿಗೆ ನಮೋ ಎಂದಿರುವನು.
ಅಗ್ಘವಣಿ ಹಂಪಯ್ಯ
ಕಾಲ. ಸು. 1300. ಕುಂತಳ ದೇಶದ ಮುಕುಂದಪುರದವನು. ಅಗ್ಘವಣಿ ಅಥವ ಶುದ್ಧ ನೀರನ್ನು ಭಕ್ತರಿಗೆ ಒದಗಿಸುವ ಕಾಯಕ ನಡೆಸುತ್ತಿದ್ದ. ಈತನ 14 ವಚನಗಳು ದೊರೆತಿವೆ. ಪಂಚಾಕ್ಷರಿ ಮಂತ್ರದ ಮಹಿಮೆ, ಭಕ್ತನ ಸ್ಥಿತಿಗಳ ವರ್ಣನೆ ಈತನ ವಚನಗಳ ಮುಖ್ಯ ಆಸಕ್ತಿ.
ಅಗ್ಘವಣಿ ಹೊನ್ನಯ್ಯ
ಕಾಲ ಸು. 1160. ಊರು: ಪುಲಿಗೆರೆ (ಇಂದಿನ ಲಕ್ಷ್ಮೇಶ್ವರ). ಅಗ್ಘವಣಿ ಅಥವ ಶುದ್ಧ ನೀರನ್ನು ಭಕ್ತರಿಗೆ ಒದಗಿಸುವ ಕಾಯಕ ನಡೆಸುತ್ತಿದ್ದ. 4 ವಚನಗಳು ದೊರೆತಿವೆ. ಮರಡಿಪುರ (1180) ಶಾಸನದಲ್ಲಿ ಈತನ ಉಲ್ಲೇಖವಿದೆ. ಅಬ್ಬಲೂರಿನಲ್ಲಿ ನಡೆದ ಪವಾಡ ಪ್ರಸಂಗದಲ್ಲಿ ಏಕಾಂತ ರಾಮಯ್ಯನ ತಲೆಯನ್ನು ಹರಿವಾಣದಲ್ಲಿಟ್ಟು ಮೆರೆಸಿದ ಅನ್ನುವ ಐತಿ