ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಉದಕದ ತಂಪವ ತಾವರೆಯಲ್ಲದೆ ಹೊರಗಣ ಕೊರಡೆತ್ತಬಲ್ಲುದೊ ?ಹೂವಿನ ಪರಿಮಳವ ತುಂಬಿಯಲ್ಲದೆ ಹೊರಗಣ ನೊಣನೆತ್ತಬಲ್ಲುದೊ ?ಕ್ಷೀರದ ರುಚಿಯ ಹಂಸೆಯಲ್ಲದೆ ಕೆಲದಲ್ಲಿ ಬಕನೆತ್ತವಬಲ್ಲುದೊ ?ಮಾವಿನ ಹಣ್ಣಿನ ರುಚಿಯನರಗಿಳಿಗಳು ಬಲ್ಲವಲ್ಲದೆಹೊರಗಣ ಕೋಳಿಗಳೆತ್ತ ಬಲ್ಲವೊ ?ಊಟದ ರುಚಿಯನು ನಾಲಗೆಯಲ್ಲದೆ ಕಲಸುವ ಕೈ ತಾನೆತ್ತ ಬಲ್ಲುದೊ?ಕೂಟದ ಸುಖವನು ಯೌವನೆಯಲ್ಲದ ಬಾಲೆ ತಾನೆತ್ತ ಬಲ್ಲಳೊ ?ಚಂದ್ರಸೂರ್ಯರÀಂತರಾಂತರವÀ ಖೇಚರರು ಬಲ್ಲರಲ್ಲದೆಗಗನದೊಳಗಾಡುವ ಹದ್ದುಗಳು ತಾವೆತ್ತ ಬಲ್ಲವೊ ?ಎಲೆ ಮಹಾಲಿಂಗ ಕಲ್ಲೇಶ್ವರಯ್ಯಾ.ನಿಮ್ಮ ನಿತ್ಯನಿಜೈಕ್ಯರ ನಿಲುವನು ಮಹಾನುಭಾವಿಗಳು ಬಲ್ಲರಲ್ಲದೆಲೋಕದ ಜಡಜೀವಿಗಳೆನಿಸುವ ಮಾನವರೆತ್ತ ಬಲ್ಲರೊ ?
ಆಟದಲಿ ಕೆಲಹೊತ್ತುಗಳೆದು, ಕೂಟದಲಿ ಕೆಲಹೊತ್ತುಗಳೆದು,ನೋಟದಲಿ ಕೆಲಹೊತ್ತುಗಳೆದು,ಊಟದ ಹೊತ್ತಿಗೆ ಲಿಂಗವ ಕೂಡಿಹೆನೆಂಬವನೊಬ್ಬ,ಊಟ ಮಾಟಕೂಟದಲ್ಲಿ ಕೋಟಲೆಗೊಳುತ್ತಿದೆನೆಂಬುವನೊಬ್ಬ ಪೋಟ.ಇವರಿಬ್ಬರ ನೋಟ ಬೇಟಕ್ಕೆ ಸಿಕ್ಕದೆ ದಾಂಟಿಹೋದನು,ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
`ಇಕ್ಕಿದ ಹರಿಗೆ ತೊಲದ ಕಂಭ'ವೆಂದು ಬಿರಿದನಿಕ್ಕಿಹುಯ್ಯಲ ಕಂಡು ಓಡಿ ಬರುವಂಗೆ ಆ ಬಿರಿದೇತಕಯ್ಯ?ಬತ್ತೀಸಾಯುಧದ ಸಾಧನೆಯ ಕಲಿತುಕಾಳಗದಲ್ಲಿ ಕೈಮರೆದು ಘಾಯವಡೆದಂಗೆ ಆ ಸಾಧನೆ ಏತಕಯ್ಯ?ಕತ್ತಲೆಗಂಜಿ ಕರದಲ್ಲಿ ಜ್ಯೋತಿಯಂ ಪಿಡಿದುಹಾಳುಗುಳಿಯಲ್ಲಿ ಬೀಳುವಂಗೆ ಆ ಜ್ಯೋತಿಯೇತಕಯ್ಯ?ಆದ್ಯರ ವಚನಂಗಳ ಸದಾಕಾಲದಲ್ಲಿ ಓದಿಶಿವತತ್ವ ಆತ್ಮತತ್ವ ವಿದ್ಯಾತತ್ವವನರಿದುಆರಕ್ಕೆ ಆರ ನೆಲೆಮಾಡಿ ಮೂರಕ್ಕೆ ಮೂರ ಸಂಬಂಧಿಸಿಐದಕ್ಕೆ ಇನ್ನು ಪ್ರತಿಯಿಲ್ಲವೆಂದು ಅರಿದ ವಿರಕ್ತರುಪುರಾತನರಂತೆ ಸಮ್ಯಜ್ಞಾನ ಕ್ರೀಯಿಂದಲೆ ಆದರಿಸುವುದು,ಭಕ್ತ ವಿರಕ್ತರ ಆಚರಣೆಯೆಲ್ಲಾ ಒಂದೇ.ಅದು ಹೇಗೆಂದರೆಭಕ್ತಂಗೆ ಬಹಿರಂಗದ ದಾಸೋಹ.ವಿರಕ್ತಂಗೆ ಅಂತರಂಗದ ದಾಸೋಹ.ಈ ಆಚರಣೆಯನತಿಗಳೆದುಮನ ಬಂದ ಪರಿಯಲ್ಲಿ ನಡೆದು ಕೆಡುವಂಗೆಆದ್ಯರ ವಚನವೇತಕಯ್ಯ?ಆದ್ಯರ ವಚನವೆಂಬುದು ಸಂತೆಯಮಾತೆ? ಪುಂಡರ ಪುರಾಣವೇ?ಲೋಕದ ಜನರ ಮೆಚ್ಚಿಸುವ ಬೀದಿಯ ಮಾತೆ?ಶಿವ ಶಿವನೀವು ಶಿವಶರಣರ ಕೂಡಾಡಿ ವಚನಂಗಳ ಕಲಿತುಆ ವಚನಂಗಳ ನಿಮ್ಮ ಊಟದ ವೆಚ್ಚಕ್ಕೆಈಡು ಮಾಡಿಕೊಂಡಿರಲ್ಲದೆಮುಂದಣ ಮುಕ್ತಿಯ ಪದವ ಕಾಣದೇ ಹೋದಿರಲ್ಲಾ?ಇದು ಕಾರಣ-ಶಿವಜ್ಞಾನೋದಯವಾದ ಲಿಂಗಾಂಗಿಗಳಿಗೆಎನ್ನ ನುಡಿ ಮೈಗಂದೆಯಂ ತುರಿಸಿದಂತೆಹಾಲು ಸಕ್ಕರೆಯನುಂಡಂತೆ ಸವಿದೋರುತ್ತದೆ.ವೇಷಧಾರಿ ವಿಶ್ವಾಸಘಾತುಕರಿಗೆಎನ್ನ ನುಡಿ ಅಲಗಿನ ಮೊನೆಯಂತೆ ಇರಿಯುತ್ತಿದೆಯಯ್ಯಾ,ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
ಊಟದ ಸುಖವ ಕಲಿತ ಮತ್ತೆ ನೋಟಕ್ಕೆ ದೃಷ್ಟ.ನೋಟದ ಸುಖವ ಕಲಿತ ಮತ್ತೆ ಬೇಟಕ್ಕೆ ದೃಷ್ಟ.ಬೇಟದ ಸುಖವ ಕಲಿತ ಮತ್ತೆ ಕೂಟಕ್ಕೆ ದೃಷ್ಟ.ಕೂಟದ ಸುಖವ ಕಲಿತ ಮತ್ತೆ ಜಗದಾಟಕ್ಕೆ ದೃಷ್ಟ.ಇಷ್ಟನರಿಯದೆ ನಿರ್ಜಾತನೆನಲೇಕೆ.ಇಷ್ಟಕ್ಕಂಜಿ ಈಸನ ಮರೆಯ ವೇಷವ ಬಿಟ್ಟು,ಎನ್ನಗಿನ್ನೇಸು ಕಾಲ ಆಸೆಯೆಂಬ ಕೋಳವೋ,ನಿಃಕಳಂಕ ಮಲ್ಲಿಕಾರ್ಜುನಾ.
ಊಟದ ದೆಸೆಯಿಂದ ಹೆಚ್ಚಿಉಡಿಗೆ ತೊಡಿಗೆಯ ಮೇಲೆ ಮೆರೆವಾತನನು ಕಂಡು,ರೂಪು ಲಾವಣ್ಯ ಸುಖಭೋಗಿಗಳೆಂಬರಯ್ಯ.ಈ ಲೋಕದ ಮಾನವರು ಸುಖಿಗಳಾದರೆತನುವ ತಾಪತ್ರಯಾದಿಗಳು ಮುಟ್ಟಬಲ್ಲವೆ?ಮಾಯಾ ಮೋಹವೆಂಬ ಮೊಲನಾಗರುಹಿಡಿದು ಬಿಡದು ನೋಡಾ.ಸುಖಿ ಸುಖಿಗಳೆಂಬ ಈ ಲೋಕದಕಾಕುವಿಚಾರವನೇನೆಂಬೆನಯ್ಯ?.ಭಕ್ತಿಯೇ ರೂಪು, ನಿತ್ಯವೇ ಲಾವಣ್ಯ, ಮುಕ್ತ್ಯಂಗನೆಯ ಕೂಡಿಸುಖಿಸುವುದೇ ಸುಖ.ಲಿಂಗಭೋಗೋಪಭೋಗಿಯಾದ ಪ್ರಸಾದ ಭೋಗವೇ ಭೋಗ.ಇಂತಪ್ಪ ನಿರಂಗಸಂಗಿಗಳು ಅವಲೋಕದಲ್ಲಿಯೂ ಇಲ್ಲ ನೋಡಾ,ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.