ಅಥವಾ

ಒಟ್ಟು 36 ಕಡೆಗಳಲ್ಲಿ , 15 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಆತ್ಮನೆ ಪಾತಕದ ಪಾಕುಳದಲ್ಲಿ ಏಕೆ ಹುಟ್ಟಿದೆ? ಹಸಿದಡುಣಬೇಕು, ವಿಷಯವನನುಕರಿಸಬೇಕು, ಹುಸಿಯಬೇಕು. ಇವರೆಲ್ಲರು ಎಂದಂತೆ ಗಸಣೆಗೊಳಗಾದೆನೆನ್ನಸುವ ಕೊಂಡೊಯ್ಯೊ. ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಂಗಳೇಕೆ `ನೋಡಬೇಡಾ' ಎಂದರೆ ಮಾಣವು ? ಶ್ರೋತ್ರಂಗಳೇಕೆ `ಆಲಿಸಬೇಡಾ' ಎಂದರೆ ಮಾಣವು ? ಜಿಹ್ವೆ ಏಕೆ `ರುಚಿಸಬೇಡಾ' ಎಂದರೆ ಮಾಣವು (ದು ?) ನಾಸಿಕವೇಕೆ `ವಾಸಿಸಬೇಡಾ' ಎಂದರೆ ಮಾಣವು ? (ದು ?) ತ್ವಕ್ಕು ಏಕೆ `ಸೋಂಕಬೇಡಾ' ಎಂದರೆ ಮಾಣವು ? (ದು ?)_ ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು! ಗುಹೇಶ್ವರಲಿಂಗಕ್ಕೆ ಒಲಿದ ಕಾರಣ, ಅಭಿಮಾನ ಲಜ್ಜೆ ಬೇಸತ್ತು ಹೋಯಿತ್ತು.
--------------
ಅಲ್ಲಮಪ್ರಭುದೇವರು
ಬ್ರಹ್ಮಸಭೆ ನೆರೆದಲ್ಲಿ ಬ್ರಹ್ಮವಿತ್ತುಗಳು ಬ್ರಹ್ಮತ್ವವಡೆದು, ತಮ್ಮ ವಚನಬ್ರಹ್ಮರೆನಿಸಿಕೊಂಡು ನೆಮ್ಮುವರು ವಿಷ್ಣುವನು- ತಮ್ಮ ದೈವವ ಬಿಡುವುದಾವುದುಚಿತ ವಿಷ್ಣು ಶಿವಭಕ್ತನಾಗಿ ನಿಷ್ಠೆಯಿಂದ ಕಣ್ಣನಿತ್ತು ಹಡೆದನು ಶಿವಭಕ್ತಿಯಿಂದ. ಕಷ್ಟಜಾತಿ ಜೀವಿಗಳಿಗೆ ಮಟ್ಟಿ ಎಂತು ಬಂದತ್ತೊ ! ಮುಟ್ಟರೊಂದುವನು ಮೂವಿಧಿಬಟ್ಟರೊ ! ಹುಸಿವನೆ ಹೊಲೆಯನೆಂದು ವಚನವುಂಟು ಲೋಕದಲ್ಲಿ. ಹುಸಿದಜನ ಶಿರ ಹೋಯಿತ್ತಾದಿಯಲ್ಲಿ, ಎಸವೋದ ಕಿರುಪಶುವನುಸರಲೀಯದೆ ವಿ[ದಾರಿ]ಸಿ ತಿಂಬ ಜನ್ಮ ಅದಾವ ಫಲವೋ. ದಕ್ಷ ಯಾಗವ ಮಾಡಿ ನಿಕ್ಷೇತ್ರ ನೆರೆದ ಅಕಟಕಟಾ, ಕೇಳಿಯೂ ಏಕೆ ಮಾಣಿರೊ ಮಮಕರ್ತ ಕೂಡಲಸಂಗನ ಶರಣರು ಅಕ್ಷಯರದ್ಥಿಕರು, ವಿಪ್ರರು ಕೀಳು ಜಗವೆಲ್ಲರಿಯಲು !
--------------
ಬಸವಣ್ಣ
ಆತನ ಬಿರುದೆನ್ನ ಉರದಲ್ಲಿ ಇದೆ ಕಂಡಯ್ಯಾ. ಏಕೆ ಬಂದಿರೋ ಎಲೆ ಅಣ್ಣಗಳಿರಾ. ನಿಮಗಪ್ಪುವುದಕ್ಕೆಡೆಯಿಲ್ಲ. ನಿಮಗಪ್ಪುವದಕ್ಕೆಡ್ಡಬಂದಹನೆಮ್ಮ ನಲ್ಲ. ಏಕೆ ಬಂದಿರೋ, ಉರಿಲಿಂಗದೇವನನಪ್ಪಿ ಸೊಪ್ಪಾದ ಹಿಪ್ಪೆಗೆ ?
--------------
ಉರಿಲಿಂಗದೇವ
ಅಮೃತಸಾಗರದೊಳಗಿರ್ದು ಆಕಳ ಚಿಂತೆ ಏಕೆ ? ಮೇರುಮಧ್ಯದೊಳಗಿರ್ದು ಜರಗ ತೊಳೆವ ಚಿಂತೆ ಏಕೆ ? ಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆ ಏಕೆ ? ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆ ಏಕೆ ? ಕರಸ್ಥಲದೊಳಗೆ ಲಿಂಗವಿರ್ದ ಬಳಿಕ, ಮತ್ತಾವ ಚಿಂತೆ ಏಕೆ ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಇಚ್ಫಾಶಕ್ತಿಯೆಂಬೆನೆ ಬ್ರಹ್ಮನ ಬಲೆಗೊಳಗು. ಕ್ರಿಯಾಶಕ್ತಿಯೆಂಬೆನೆ ವಿಷ್ಣುವಿನ ಸಂತೋಷಕ್ಕೊಳಗು. ಜ್ಞಾನಶಕ್ತಿಯೆಂಬೆನೆ ರುದ್ರನ ಭಾವಕ್ಕೊಳಗು. ಇಂತೀ ಮೂರರಿಂದ ಕಂಡೆಹೆನೆಂದಡೆ ಮಾಯಾಪ್ರಪಂಚು. ಹೆರೆಹಿಂಗಿ ನೋಡಿಹೆನೆಂದಡೆ ವಾಙ್ಮನಕ್ಕೆ ಅಗೋಚರ. ಇದ ಭೇದಿಸಲಾರೆ. ಎನ್ನ ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ, ಎನ್ನ ಕಾಡುವುದಕ್ಕೆ ಏಕೆ ಎಡಗಿದೆ ?
--------------
ಮನುಮುನಿ ಗುಮ್ಮಟದೇವ
ಗುರುದ್ರೋಹಿಯಾದವನ ಮುಖವ ನೋಡಲಾಗದು, ಮತ್ತೆ ನೋಡಬಹುದು, ಏಕೆ? ಮುಂದೆ ಲಿಂಗವಿಪ್ಪುದಾಗಿ. ಲಿಂಗದ್ರೋಹಿಯಾದವನ ಮುಖವ ನೋಡಲಾಗದು, ಮತ್ತೆ ನೋಡಬಹುದು, ಏಕೆ? ಮುಂದೆ ಜಂಗಮವಿಪ್ಪುದಾಗಿ ಜಂಗಮದ್ರೋಹಿಯಾದವನ ಮುಖವ ನೋಡಲಾಗದು, ಮತ್ತೆ ನೊಡಬಹುದು ಏಕೆ ಮುಂದೆ ಪ್ರಸಾದವಿಪ್ಪುದಾಗಿ. ಪ್ರಸಾದದ್ರೋಹಿಯಾದವನ ಮುಖವ ನೋಡಲಾಗದು ಏಕೆ? ಕೂಡಲಚೆನ್ನಸಂಗಯ್ಯನ ಪ್ರಸಾದವಿರಹಿತವಾಗಿ ಪರವಿಲ್ಲದ ಕಾರಣ
--------------
ಚನ್ನಬಸವಣ್ಣ
ನೋಡುವ ನರರಿಗೆ ನಿನ್ನ ರೂಹು ತೋರದಯ್ಯಾ. ನುಡಿಸುವ ನರರಿಗೆ ನೀ ನುಡಿದುದು ಮಾಡುವುದಲ್ಲಯ್ಯಾ. ಹಾಡುವ ನರರಿಗೆ ನೀ ಮನವನೀಡುಮಾಡುವನಲ್ಲಯ್ಯಾ. ತೋರುವ ತೋರ್ಪ, ನುಡಿವ ನುಡಿಸುವ ಪ್ರಮಥರ ಏಕೆ ಒಳಕೊಂಡೆ ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ದೇಹದೊಡನೆ ತ್ರಿದೋಷಗಳು, ವಾತ ಪಿತ್ತ ಶ್ಲೇಷ್ಮ-ಇವು ಮೂರುಕೂಡಿ ದೇಹ ಹುಟ್ಟಿತು. ಇದರ ವಿವರವು : ವಾತ 81, ಪಿತ್ತ 64, ಶ್ಲೇಷ 215. ಇವು ಕೂಡಿ 360 ವ್ಯಾಧಿಗಳಾದವು. ಇವು ಶಿವನ ಅಪ್ಪಣೆಯಿಂದ ಬಂದುವಲ್ಲದೆ, ಮನುಷ್ಯನ ಯತ್ನವಿಲ್ಲವು. ಅದಕ್ಕೆ ಮನುಷ್ಯರು ವೈದ್ಯವ ಮಾಡಿದಡೆ ಲೋಕ ಏಕೆ ಸಾವುದು ? ಅದಕ್ಕೆ ಸೊಕ್ಕಿದವರಿಗೆ, ಗುರುತಲ್ಪಕರಿಗೆ, ಭಕ್ತರ ನಿಂದ್ಯವ ಮಾಡಿದವರಿಗೆ, ತಂದೆಗೆ ಮಗ ಬೈದರೆ, ಅತ್ತೆಗೆ ಸೊಸೆ ಸೊಕ್ಕಿ ನುಡಿದಡೆ, ಅನಾಚಾರಿಗಳಿಗೆ, ಆಸೆಯ ಕೊಟ್ಟು ಭಾಷೆಗೆ ತಪ್ಪಿದವರಿಗೆ, ಶಿವಸದ್ವರ್ತನೆ ಸದ್ಧರ್ಮ ಸದಾಚಾರವಿಲ್ಲದವರಿಗೆ ಈ ವ್ಯಾಧಿಗಳು ಕಾಡುತ್ತಿಹವು. ತಲೆಶೂಲೆ, ಪಕ್ಕಶೂಲೆ, ಜ್ವರ, ಉರಿ -ಇವು ಕಣ್ಣಿಗೆ ಕಾಣಿಸದೆ ಬಂದಂಥ ವ್ಯಾಧಿಗಳು ; ಶಿವನ ಅಂಶಿಕವು. ತದ್ದು ತುರಿ ಕೆಮ್ಮು ಭಗದಳ ಕುಷ* ಗಂಡಮಾಲೆ ಕುರು ಬಾವು ಹುಣ್ಣುಗಳು ಕಣ್ಣಿಗೆ ಕಾಣಿಸುವಂಥ ಬೇನೆಗಳು ; ಪಾರ್ವತಿಯ ಅಂಶಿಕವು. ಇವು ಎಲ್ಲ ವ್ಯಾಧಿಗಳು ಅವರಿಗೆ ತಕ್ಕಷ್ಟು ಶಿಕ್ಷೆ ಮಾಡಿಸುತ್ತಿಹವು. ಮತ್ತೆ ಗುರುಮಾರ್ಗಾಚಾರವಿಡಿದು ಆಚರಿಸುವ ಪ್ರಸಾದಿಗಳಿಗೆ ಅವೇ ವ್ಯಾಧಿಗಳು ಹಿತವಾಗಿಹವು. ಮತ್ತೆ ಸರ್ಪ ಕಚ್ಚಿದಡೆ, ಸ್ತ್ರೀಯು ಹಡೆಯಲಾರದಿದ್ದಡೆ, ಯಾವ ಕುಲದವನಾಗಲಿ ವಿಚಾರಿಸದೆ ಅವರು ಮಂತ್ರಿಸಿದ ಉದಕವ ಕುಡಿವುದು. ಮತ್ತೆ ಅವರ ಕುಲಕ್ಕೆ ಭಕ್ತರ ಕುಲಕ್ಕೆ ಹೇಸುವುದು. ಅನ್ಯಕುಲದ ವೈದ್ಯನ ಕೈಯಲ್ಲಿ ಮದ್ದು ಮಾಡಿಸಿಕೊಂಬರು. ಭಕ್ತರು ಅಡುಗೆಯ ಮಾಡಿದಡೆ, ಯಾವ ಕುಲವೆಂಬರು ? ಅವರಿಗೆ ಎಂದೆಂದಿಗೂ ಮುಕ್ತಿಯಿಲ್ಲವಯ್ಯಾ. ಮತ್ತೆ ಪ್ರಸಾದವ ಕೊಂಬುವರು ಮದ್ದು ಕೇಳಲಾಗದು. ಅದೇನುಕಾರಣವೆಂದಡೆ- ಪ್ರಸಾದಕ್ಕಿಂತ ಮದ್ದು ಹಿತವಾಯಿತಲ್ಲ ! ಶಿವಮಂತ್ರ ಕಾಯಕ್ಕೆ ಅನ್ಯರ ಕೈಯಲ್ಲಿ ಮಂತ್ರಿಸಿ ಕೇಳಲಾಗದು. ಅದೇನು ಕಾರಣವೆಂದಡೆ - ಶಿವಮಂತ್ರಕ್ಕಿಂತ ಅನ್ಯರ ಮಂತ್ರ ಅಧಿಕವಾಯಿತ್ತಲ್ಲ ! ಮತ್ತೆ ವೈದ್ಯಕಾರನಿಂದ ಮಂತ್ರಗಾರನಿಂದ ಮನುಷ್ಯರ ಪ್ರಾಣ ಉಳಿವುದೆಂದು ಯಾವ ಶಾಸ್ತ್ರ ಹೇಳುತ್ತದೆ ? ಯಾವ ಆಗಮ ಸಾರುತ್ತದೆ ? ಹೇಳಿರಿ. ಅರಿಯದಿದ್ದಡೆ ಕೇಳಿರಿ : ಭಕ್ತಗಣಂಗಳು ಪಾದೋದಕ ಪ್ರಸಾದ ವಿಭೂತಿ ಶಿವಮಂತ್ರಗಳಿಂದೆ ಲೆಕ್ಕವಿಲ್ಲದೆ ಹೋಹ ಪ್ರಾಣವ ಪಡೆದರು - ಎಂದು ಬಸವೇಶ್ವರ ಪುರಾಣದಲ್ಲಿ ಕೂಗ್ಯಾಡುತ್ತದೆ. ಇಂತಪ್ಪ ದೃಷ್ಟವ ಕಂಡು ನಂಬದಿರ್ದಡೆ ಆವಿನ ಕೆಚ್ಚಲೊಳಗೆ ಉಣ್ಣೆಯಿದ್ದು ಹಾಲು ಬಿಟ್ಟು ರಕ್ತವ ಸೇವಿಸುವಂತಾಯಿತ್ತು ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಅಯ್ಯಾ ನಾ ಹುಟ್ಟಿದಂದಿಂದ ಎನ್ನ ಹೊಟ್ಟೆಗೆ ಕಾಣದೆ, ಮೂರುವಟ್ಟೆಯನೆ ಕಾದಿರ್ದೆನಯ್ಯಾ. ಹೊಟ್ಟೆಯ ಒಡೆಯರು ಹೊಟ್ಟೆಯ ಹೊಡೆದುಹೋದರೆ, ಎನ್ನ ಹೊಟ್ಟೆ ಏಕೆ ತುಂಬಿತ್ತೆಂದು ನೋಡಿದರೆ, ಅಲ್ಲಿ ಬಟ್ಟಬಯಲಾಗಿರ್ದಿತ್ತು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಕಟಕಟಾ, ಶಿವ ನಿನಗಿನಿತು ಕರುಣವಿಲ್ಲ, ಅಕಟಕಟಾ ಶಿವ ನಿನಗಿನಿತು ಕೃಪೆಯಿಲ್ಲ, ಏಕೆ ಹುಟ್ಟಿಸಿದೆ, ಇಹಲೋಕ ದುಃಖಿಯ ಪರಲೋಕದೂರನ ಏಕೆ ಹುಟ್ಟಿಸಿದೆ ಕೂಡಲಸಂಗಮದೇವಾ ಕೇಳಯ್ಯಾ, ಎನಗಾಗಿ ಮತ್ತೊಂದು ತರುಮರನಿಲ್ಲವೆ 64
--------------
ಬಸವಣ್ಣ
ಅಂಗ ಲಿಂಗವೆಂದರಿದ ಬಳಿಕ, ಲಿಂಗ ಅಂಗವೆಂದರಿದ ಬಳಿಕ, ಇನ್ನೊಂದು ಸಂಗ ಉಂಟೆಂದು ಏಕೆ ಅರಸುವಿರಯ್ಯ? ಸಂಗ ಉಂಟೆಂಬನ್ನಕ್ಕ ಕಂಗಳ ಪಟಲ ಹರಿದುದಿಲ್ಲ. ಅದು ಮರವೆಗೆ ಬೀಜ. ಈ ಮರಹಿಂದಲೆ ನೆರೆ ಮೂರುಲೋಕವೆಲ್ಲ ಬರುಸೂರೆಹೋಯಿತು. ಅರಿದ ಶರಣಂಗೆ ಅಂಗಲಿಂಗಸಂಬಂಧವಿಲ್ಲ. ಅಂಗಲಿಂಗಸಂಬಂಧವಳಿದ ಬಳಿಕ ಪ್ರಾಣಲಿಂಗಸಂಬಂಧ. ಲಿಂಗಪ್ರಾಣಿ ಇವನರಿದರೆ ಲಿಂಗಸಂಬಂಧಿ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಅಯ್ಯಾ, ಹಿಂದೆ ನಾ ಬಂದ ಹಲವು ಭವ ಸಾಲದೆ? ಏಕೆ ಕಾಡುವೆಯಯ್ಯಾ. ಹಿಂದೆ ನಿನ್ನನರಿಯದೆ ದಾನವರಾಗಿ ಹಲವು ಭವದಲ್ಲಿ ಕುಡಿದು ಆನುಂಡ ನರಕವ ನೀನರಿಯ. ಅರಿದರಿದೆನ್ನ ಕಾಡುವರೆ? ಅಯ್ಯಾ, ನಾನು ಬಂದ ಸುಖಂಗಳಲ್ಲಿ ನಿನ್ನನರಿಯದ ಕಾರಣದಲ್ಲಿ ನೀನಿಕ್ಕಿದೆ ನರಕಲ್ಲಿ, ಆನದನುಣ್ಣದ್ದಡೆ ಎನ್ನ ವಶವೆ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬೇಕು ಬೇಡೆನ್ನದೆ, ಸಾಕು ಸವಿಯೆನ್ನದೆ, ಆಕಾರವಿದು ತಾನು ಒಲ್ಲೆನೆನದೇಕೈಕ ರುದ್ರ ನಾನಾದೆನು ಎನ್ನದೆ, ಅನೇಕ ಪರಿಯಿಂ ಭಜಿಸು ಸಮತೆ ಪದವಾ. ಆ ಪದದ ಫಲದಿಂದ ನೀ ತಾನೆ ಅಪ್ಪೆಯೈ ಏಕೆ ಭ್ರಾಂತಪ್ಪೆಯೈ. ಗುರು ಕರುಣವು ತನ್ನ ಪದವನೆಯ್ದಿತ್ತು, ನಿನ್ನ ಭವನಾಶವನು ಮುನ್ನವೆ ಮಾಡೂದು ನಂಬು ಕಪಿಲಸಿದ್ಧಮಲ್ಲೇಶನಾ.
--------------
ಸಿದ್ಧರಾಮೇಶ್ವರ
ಕತ್ತಲೆಯ ಮನೆಯಲ್ಲಿ ಸಕ್ಕರೆಯ ಸವಿದವನಂತಿರಬೇಕು. ಬಟ್ಟಬಯಲಲ್ಲಿ ನಿಂದು ಇಷ್ಟಲಿಂಗವ ಕಂಡವನಂತಿರಬೇಕು. ಇದಕ್ಕೆ ಗುರುವಿನ ಹಂಗೇಕೆ, ಲಿಂಗದಪೂಜೆ ಏಕೆ, ಸಮಯದ ಹಂಗೇಕೆ ? ತನ್ನ ತಾನು ಅರಿದವಂಗೆ ಏಣಾಂಕನಶರಣರ ಸಂಗವೇಕೆ ? ಇಷ್ಟವನರಿದವಂಗೆ ನಾನೇನು, ನೀನೇನು ಎಂಬ ಗೊಜಡಿನ ಭ್ರಮೆಯೇಕೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಇನ್ನಷ್ಟು ... -->