ಆಳು ಸಿಕ್ಕಿದಲ್ಲಿ ಕೈದುವಿನ ಒರೆಯ ತೆಗೆಯಬೇಕಲ್ಲದೆ,
ಅವಧಿಗೆ ಬಂದಲ್ಲಿ ಒದಗಬೇಕಲ್ಲದೆ,
ಬಯಲ ಚಿಪ್ಪಿರಿದು ಬೆಲ್ಲವ ಮೆದ್ದೆನೆಂದಡೆ ಮೆಚ್ಚುವರೆ?
ಗೆಲ್ಲದ ಜೂಜು, ಕೊಲ್ಲದ ಅರಿಗಳ ಬಲ್ಲವರು ಮೆಚ್ಚುವರೆ?
ಸೊಲ್ಲಿನ ಮಾತಿಂಗೆ ನೆರೆ ಬಲ್ಲವರು ಸಿಕ್ಕುವಡೆ, ಗೆಲ್ಲ ಗೂಳಿತನವೆ?
ಬರಿಯ ಚೀರದ ಪಸರಕ್ಕೆ ಲಲ್ಲೆಯ ಮಾತೇ
ಒಳ್ಳಿಹ ನಿಃಕಳಂಕ ಮಲ್ಲಿಕಾರ್ಜುನನ ಸಂಗ.