ಅ ಪದದಿಂದ ಪ್ರಾರಂಭವಾಗುವ ವಚನಗಳು:
ಅಲ್ಲಿಯಬಹುರೂಪ ಇಲ್ಲಿಗೆ ಬಂದಿತ್ತು.ಇಲ್ಲಿಯ ಬಹುರೂಪ ಎಲ್ಲಿ ಅಡಗಿತ್ತೋ?ಎನ್ನ ಬಹುರೂಪ ಬಲ್ಲವರಾರೋ ?ನಾದ ಹರಿದು ಸ್ವರವು ಸೂಸಿದ ಬಳಿಕಈ ಬಹುರೂಪ ಬಲ್ಲವರಾರೋ ?ರೇಕಣ್ಣಪ್ರಿಯ ನಾಗಿನಾಥನಲ್ಲಿಬಸವಣ್ಣನಿಂದ ಬದುಕಿತೀ ಲೋಕವೆಲ್ಲ.
ಅಪ್ಪಾ ಬೊಪ್ಪಾ ಚಿಕ್ಕ ಚೋಹಮಂ ತೊಟ್ಟುಮುಖಕ್ಕೆ ಹೊತ್ತಿಗೊಂದು ಪರಿಯ ಬಚ್ಚಣೆಯನಿಕ್ಕಿಮತ್ತದನು ತಲೆಯಲ್ಲಿ ಹೊತ್ತು, ತಪ್ಪಿ ಹೆಜ್ಜೆಯನಿಕ್ಕಿ ಆಡುತ್ತಿದ್ದರೇಕಣ್ಣಪ್ರಿಯ ನಾಗಿನಾಥನಲ್ಲಿ ಹೊತ್ತುಹೋಗದ ಬಹುರೂಪವ.
ಅನುದಿನಂಗಳೆಂಬವು ಪ್ರಣತೆಯಾಗಿ,ವರುಷವೆಂಬವು ಬತ್ತಿಯಾಗಿ,ಜೀವಜಾತಿಯ ಬೆಳಗ ಬೆಳಗಿನಲರಿಯಬೇಕು.ಬೆಳಗುಳ್ಳಲ್ಲಿ ಆತ ನಡೆಸಿದಂತೆ ನಡೆಯಬೇಕು.ಬೆಳಗುಳ್ಳಲ್ಲಿ ಆತ ನುಡಿಸಿದಂತೆ ನುಡಿಯಬೇಕು.ಎಣ್ಣೆಯೆಂಬ ಜವ್ವನ ಸವೆಯದ ಮುನ್ನ,ಬೆಳಗು ಕತ್ತಲೆಯಾಗದ ಮುನ್ನರೇಕಣ್ಣಪ್ರಿಯ ನಾಗಿನಾಥ್ಞಿ, ಬೆಳಗ ಬೆಳಗಿನಲರಿಯಬೇಕು.
ಅಂಡಜ ಪೃಥ್ವಿ ಉದಯಿಸದಂದುಭೂಮಂಡಲವಾಗದಂದುಪಿಂಡಜ ಬೀಜವ ನವಬ್ರಹ್ಮರು ತಾರದಂದುನವಖಂಡವ ರಚಿಸದಂದುಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬಪಂಚಭೂತಾದಿ [ಸ್ಥ]ಳವಿಡದಂದುಅನುಕರಿಸದಂದು, ರೂಹಿಸದಂದುಅತಿಮಥನ ಒಡ್ಡದಂದುಇಪ್ಪತ್ತೈದರ ಸ್ಥಳವ ಹೆಸರುಗೊಂಡು ಕರೆಯದಂದುಎನಗೆ ತನಗೆಂಬಿಚ್ಫೆ ತನ್ನ ತಲೆದೋರದಂದುಋಷಿಗಳಾಶ್ರಯ ಲೋಕದಲ್ಲಿ ಹರಿಯದಂದುಅಂದು ಬಸವನಿದ್ದ ಕಾಣಾ, ರೇಕಣ್ಣಪ್ರಿಯ ನಾಗಿನಾಥಾ.
ಅರೆಯ ಆಲಯದಲ್ಲಿ ಕರಿಗೊಳಿಸುವ ಶ್ರವಣವೆ ಮೇಲಹ ಆಕಾಶವನಪ್ಪಲುಉಲುಹು ನಿರ್ಯಾತವಾಗಿ ಚಿತ್ತ ಸಮಾಧಾನವನೈದಲುಕಾಲ ಕರ್ಮ ಭವಾರಣ್ಯವ ಗೆಲುವುದುಎನಗರಿದೇನಯ್ಯ, ರೇಕಣ್ಣಪ್ರಿಯ ನಾಗಿನಾಥಾ.