ಅಥವಾ

ಒಟ್ಟು 140 ಕಡೆಗಳಲ್ಲಿ , 30 ವಚನಕಾರರು , 85 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮತ್ತೆಯು ಸಮಸ್ತವಾದ ಕರ್ಮಕೃತ ಶರೀರಿಗಳಿಗೆ ಭೋಗವುಳ್ಳುದೆ ತಪ್ಪದೆಂಬೆಯಾದಡೆ, ಶರೀರಗಳಿಗಾಗಲಿ ಪ್ರೇರಕಹರ್ತುದಿಂದಲ್ಲವೆಂಬುದೆ ಪ್ರಮಾಣ. ಶಿವ ಪ್ರೀತ್ಯರ್ಥವಾದಗ......ಳು ಕರ್ತವನೆಯ್ದುವವೆಂಬುದಕ್ಕೆ ಪ್ರಮಾಣವು ಎನಲು, ಪಿತೃವಧೆಯಿಂದ ಚಂಡೇಶ್ವರನು ಅನುಪಮ ಗಣಪದವನೈದಿದನು. ಸಿರಿಯಾಳನು ತನ್ನ ಮಗನನೆ ಹತಿಸಿ ಪುರಜನ ಬಾಂಧವರುಸಹಿತ ಶಿವಲೋಕವನೈದನೆ ? ಕಾಲಾಂತರದಲ್ಲಿ ಮನುಚೋಳನು ಪುತ್ರವಧೆ ಭ್ರೋಣಹತ್ಯವನು ಮಾ ಎಸಗಿ, ತನುವರಸಿ ಶಿವಲೋಕವೆಯ್ದನೆ ? ಅಯ್ಯೋಮ ರಾಜನು ವಿಪ್ರೋತ್ತಮನನೆ ವದ್ಥಿಸಿ ಲಿಂಗ ಗರ್ಭಾಂತರವನೆಯ್ದಿದನೆ ? ಅಂದು ಜಗವರಿಯಲದಂತಿರಲಿ. `ಸ್ವರ್ಗಕಾಮೋ ಯಜೇತ'ಯೆಂಬ ಶ್ರುತಿಪ್ರಮಾಣಿಂ ದಕ್ಷ ಪ್ರಜಾಪತಿ ಕ್ರಿಯೆಗಳಿಗೆ ಅಧ್ವರ ಕರ್ಮದಿಂದ ಶಿರಚ್ಛೇದಿಯಾಗಿ ಕುರಿದಲೆ ಪಡೆಯನೆ ? ಬರೀ ಅಚೇತನ ಕರ್ಮಂಗಳು ಕೊಡಬಲ್ಲವೆ ಸದ್ಗತಿ ದುರ್ಗತಿಗಳನು ? ಕರ್ತು ಪ್ರೇರಕ ಶಿವನಲ್ಲದೆ, `ಮನ್ನಿಮಿತ್ತಕೃತಂ ಪಾಪಮಪೀಡಾವಚಯೈ ಕಲ್ಪ್ಯತೇ' ಎನಲು, ಇಂತೀ ಚಿಟಿಮಿಟಿವಾದವೆಂಬುದು ಕೊಳ್ಳವು ಕೇಳಾ. ಶಿವಭಕ್ತಿಯೆಂಬ ಪ್ರಚಂಡ ರವಿಕಿರಣದ ಮುಂದೆ ಸಾಮಾನ್ಯಕರ್ಮವೆಂಬ ತಮ ನಿಲುವುದೆ ? ಮರುಳೆ ಆ `ವೋರಾಜಾನಮಧ್ವರಸ್ಯ ರುದ್ರಗಂ' ಎನಲು, `ಇಂದ್ರ ಉಪೇಂದ್ರಾಯ ಸ್ವಾಹಾ' ಎನಬಹುದೆ ? ಪ್ರಥಮಾಹುತಿಯಲ್ಲಿಯೆಂದು ಬೆಳಲು ಭಸ್ಮವಹವಾ ಆಹುತಿ ಫಲಂಗಳು. ಆದಡೆ ಕೆಳೆಯಾ ಶಿವಭಕ್ತಿಬಾಹ್ಯವಾದ ಪಾಪಕರ್ಮಕೆ ಬಂದ ವಿಪರೀತ ಪ್ರಾಪ್ತಿಗಳು, ವಿಷ್ಣು ಸುರರಿಗೆ ಹಿತವಾಗಿ ಭೃಗು ಸತಿಯ ಶಿರವನರಿದಡೆ, ಕರ್ಮ ದಶಜನ್ಮಂಗಳಿಗೆ ತಂದು, ಹೀನಪ್ರಾಣಿಗಳ ಯೋನಿಯಲ್ಲಿ ಬರಸಿದುದನರಿಯಿರೆ. ಮತ್ತೆಯೂ ಬಾಲೆಯ ಕೊಂದ ಕರ್ಮ ಕೃಷ್ಣಾವತಾರದಲ್ಲಿ ವ್ಯಾಧನಿಂದ ತನ್ನ ಕೊಲ್ಲಿಸಿತ್ತು. ಮತ್ತೆಯೂ ಬಲಿಯ ಬಂದ್ಥಿಸಿದ ಕರ್ಮ ಮುಂದೆ ನಾಗಾರ್ಜುನನಿಂದ ಕಟ್ಟಿಸಿತ್ತು, ಕೌರವಕುಲದ ಕೊಲಿಸಿದ ಕರ್ಮಫಲ ತನ್ನ ಯಾದವ ಕುಲವ ಕೊಲಿಸಿತ್ತು. ಮತ್ತಾ ಲೀಲೆಯಿಂದ ಮತ್ತೆಯೂ ಪರ್ವತನಾರಂದರ ಸತಿಯ ಬಲುಮೆ, ಇಂತೆ ಕೊಂಡ ಕರ್ಮಫಲ ರಾವಣಗೊಪ್ಪಿಸಿತ್ತು. ತನ್ನ ಪ್ರಿಯತಮೆಯೆನಿಸುವ ಸೀತಾಂಗನೆಯ ಇನ್ನು ಮಿಕ್ಕಿನ ದೇವದಾನವಮಾನವರನೊಕ್ಕಲಿಕ್ಕಿಯಾಡದಿಹುದೆಯಾ ಕರ್ಮವು. ಆದಡಾ ಕರ್ಮವು ಸ್ವತಂತ್ರವೋ, ಪರತಂತ್ರವೋ ಎಂಬೆಯಾದಡೆ, ಆ ಕರ್ಮ ಈಶ್ವರಾಜೆÕಯಲ್ಲದ ಕರ್ಮಿ ತಾನಾದಂತೆ, ಇದಂ ಗುರು ಕನಿಷ್ಠಾಧಮಮಧ್ಯಮ ಕ್ರಿಯೆಗಳಿಂ ವಿದ್ಥಿಸಿದ ವಿದ್ಥಿಗಳಿಂ, ವಿದ್ಥಿನಿಷೇಧ ಕರ್ಮಂಗಳೆಂಬ ಸಮೂಹಕರ್ಮಗಳಿಗೆ ತಾರತಮ್ಯವಿಡಿದು, ಪುಣ್ಯಪಾಪಂಗಳ ನಿರ್ಮಿಸಿ, ಅಜಾÕನಿಪಿತವ ಮಾಡಿದನೀಶ್ವರನು. ನಾಕನರಕಾದಿಗಳೆ ಸಾಧನವಾಗಿ, ಕರ್ಮಕರ್ತನನೆಯ್ದುವರೆ, ಕರ್ಮ ಕರ್ತನು ಈಶ್ವರನಾದಡೆ ಕರ್ಮನಿ ಶ್ವರಾಜೆÕಯಿಂದೈದುವಡೆ, ಆ ಕರ್ಮ ಕರ್ತನಹ ಈಶ್ವರನನು ಬ್ರಹ್ಮನ ಮೇಲ್ದಲೆಯನರಿದುದಲಾ. ಆ ಕರ್ಮ ಆತನನೆಯ್ದುದುಮೆನಲು, ಅಹಂಗಾಗದು. ವಿರಿಂಚನು ರಜೋಗುಣಹಂಕಾರದಿಂ ಸುರ ಕಿನ್ನರ ಗರುಡ ಗಾಂಧರ್ವ ಸಿದ್ಧ ವಿದ್ಯಾಧರರು ತಮ್ಮೊಳು ಬ್ರಹ್ಮವಾದದಿಂ ಸಂಪಾದಿಸಿ ತಿಳಿಯಲರಿಯದೆ, ಬ್ರಹ್ಮನಂ ಬೆಸಗೊಳಲು, ಬೊಮ್ಮವಾನೆನಲು, ಆ ಕ್ಷಣಂ ಗಗನದೊಳು ತೋರ್ಪ ಅತ್ಯನುಪಮ ದೇದೀಪ್ಯಮಾನ ತೇಜಃಪುಂಜ ಜ್ಯೋತಿರ್ಲಿಂಗಾಕಾರಮಂ ತೋರಲಾ ಬ್ರಹ್ಮೇಶ್ವರರು ಆ ವಸ್ತುನಿರ್ದೇಶಮಂ ಮಾಳ್ಪೆನೆಂದು ಪಿತಾಮಹನು ಚತುಸ್ಶಿರ ಮಧ್ಯದಲ್ಲಿ ಮೇಲ್ದಲೆಯಂ ಪುಟ್ಟಿಸಿ, ||ಶ್ರುತಿ|| `ಋತಂ ಸತ್ಯಂ ಪರಂ ಬ್ರಹ್ಮ'ಯೆಂದು ಋಗ್ಯಜುಸ್ಸಿನಲ್ಲಿ ನುತಿಸುತ್ತಂ ಇರಲು, ಬ್ರಹ್ಮಾದ್ಥಿಪತಿ ತತ್ಪರ ಬ್ರಹ್ಮಶಿವ ಇತಿ ಒಂ, ಇತಿ ಬ್ರಹ್ಮಾ ಇತಿ. ಇಂತೀ ಶ್ರುತಿ ಸಮೂಹವೆಲ್ಲವು ಶಿವನನೆ ಪರಬ್ರಹ್ಮವೆಂದು ಲಕ್ಷಿಸಿ, ಮತ್ತತನದಿಂ ಮರದೂ ಅಬ್ರಹ್ಮವೆನಲುಂ ದ್ರುಹಿಣನ ಮೇಲ್ದಲೆಯಂ ಅಪ್ರತಿಮ ತೇಜೋಮಯ ಲೀಲಾಲೋಲಾ ಶೀಲ ದುಷ್ಟನಿಗ್ರಹಿ ಶಿಷ್ಟ ಪ್ರತಿಪಾಲಕನನೆಯಾಕ್ಷಣಂ, ಘನರೌದ್ರ ಕೋಪಾಟೋಪಿಯೆನಿಸುವ ಕಾಲರುದ್ರಂ ಸಮೀಪಸ್ಥನಾಗಿರ್ದು, ಜ್ಯೇಷ್ಠಾ ತರ್ಜನಾಂಗುಲಿ ನಖಮುಖದಿಂ ಛೇದಿಸಲು, ವಿದ್ಥಿ ಭಯಾತುರನಾಗಿ `ಒಂ ನಮೋ ದೇವಾಯ ದೇವ್ಯೈ ನಮಃ, ಸೋಮಾಯ ಉಮಾಯೈ ನಮಃ' ಎಂದು ಸೋಮಾಷ್ಟಕದಿಂ ಸ್ತುತಿಸಿ, ನಮಿಸಿಯಜಿಸಿ ಮೆಚ್ಚಿಸಿ, ಸ್ವಾಮಿ ಸರ್ವೇಶ್ವರ, ಯ್ಯೋಮಕೇಶ, ದೇವದೇವ ಮಹಾಪ್ರಸಾದ. ಈ ಶಿರಮಂ ಬಿಸಾಟದಿರಿ, ಬಿಸಾಟಲು ಪುರತ್ರಯ ಜಗಮಳಿಗುತ್ತಂ ನಿಮಿತ್ತಂ ಪರಮ ಕೃಪಾನಿದ್ಥಿ ಪರಬ್ರಹ್ಮ ಪರಂಜ್ಯೋತಿ ಪರಮೇಶ್ವರ ಪರಮಭಟ್ಟಾರಕ ಪರಾತ್ಪರತರಸದಕ್ಷರ ಚಿನ್ಮೂರ್ತಿ ಸ್ವಯಂಭೋ ಸ್ವಾತಂತ್ರೇಶ್ವರಾಯೆನುತ ಕೀರ್ತಿಸುತ್ತಿರಲು, ಪರಬ್ರಹ್ಮ ನಿರೂಪದಿಂ ಕಾಲರುದ್ರನ ಕಪಾಲಮಂ ಧರಿಸಿದನಂದು. ಇನ್ನೆಮಗಿದೆ ಮತವೆಂದು ಸರ್ವದೆ ತಾ ಗರ್ವ ಕಂಡೂಷಮಂ ಉರ್ವಿಯೊಳೀಗಮೆ ತೀರ್ಚಿಪೆನೆಂದು ಪಿಡಿದು ನಡೆದಂ ಬ್ಥಿP್ಷ್ಞಟನಕಂದು. ಅಹಲ್ಯೆ ಸಾಯಿತ್ತಿದು, ಕರ ಹೊಸತು ಇನಿತರಿಂದ ಕಾಲರುದ್ರಂಗೆ ಬ್ರಹ್ಮೇತಿಯಾಯಿತ್ತೆಂಬ ಕರ್ಮವಾದಿ ಕೇಳಾದಡೆ. ||ಶಾಮಶ್ರುತಿ|| `ತ್ವಂ ದೇವೇಷು ಬ್ರಾಹ್ಮಣಾಹ್ವಯಃದುನುಷ್ಯೋಮನುಷ್ಯೇಮ ಬ್ರಾಹ್ಮಣಾಮುಪದಾವತ್ಯುಪದಾರತ್ಯಾ' ಎನಲು, `ಬ್ರಾಹ್ಮಣೋ ಭಗವಾನ್ ರುದ್ರಃ' ಎನಲು, `ಕ್ಷತ್ರಿಯಃ ಪರಮೋ ಹರಿಃ' ಎನುತಿರಲು, `ಪಿತಾಮಹಸ್ತು ವೈಶ್ಯಸಾತ್' ಎನಲು, ಬ್ರಾಹ್ಮಣೋತ್ತಮ ಬ್ರಾಹ್ಮಣಾದಿ ಪತಿ ಪರಬ್ರಹ್ಮವಿದ್ದಂತೆ. ತಾನೆ ಪರಬ್ರಹ್ಮಮೆನಲಾ ವಿದ್ಥಿಯ ಶಿಕ್ಷಿಪದು ವಿದಿತವಲ್ಲದೆ ನಿಷೇಧವಲ್ಲ. ಅದೆಂತೆನಲು, ಭೂಚಕ್ರವಳಯದೊಳು ಭೂಮೀಶನು ಅನ್ಯಾಯಗಳ ಶಿಕ್ಷಿಸಿದ ಭೂರಕ್ಷಣ್ಯವು, ಲೋಕಹಿತವಲ್ಲದೆ ದೋಷ ಸಾಧನಮೆಯೆಲ್ಲಾ, ಪಾಪಿಗೆ ತಕ್ಕ ಪ್ರಾಯಶ್ಚಿತ್ತಮೆಂದುಂಟಾಗಿ. ಇದು ಕಾರಣ, ಶಿಕ್ಷಯೋಗ್ಯನ ಶಿಕ್ಷಿಸಿದವದ ದೋಷವಿಲ್ಲೆಂದು ಭಾಟ್ಠ(?) ದೊಳೊಂದು ಪಕ್ಷಮಿರೆ, ಮತ್ತಮದಲ್ಲದೆ, ಅದೊಮ್ಮೆ ಹತ್ತುತಲೆಯವನಂ ಅತ್ಯುಗ್ರದಿಂ ವಂದಿಸಿದ ಶ್ರೀರಾಮಂಗೆ ಬ್ರಹ್ಮಹತ್ಯಾ ಬ್ರಹ್ಮಕರ್ಮ ವಿದ್ಯಾಬ್ರಹ್ಮರಿಂದಾವಾವ ಪ್ರಾಯಶ್ಚಿತ್ತದಿಂತೆಮ್ಮನೆ ಕೆಡದಿರಲು, ಆ ರಾಮಂ ಆ ರಾವಣಹತ ದೋಷನಿರುಹರಣಕ್ಕಾವುದು ಕಾಣದಿರಲು, ಶಂಭುಪೌರಾಣಿಕನೆಂಬ ನಾಮವಂ ತಾಳ್ದು, ಶಿವಂ ರಾಮಂಗೆ ಪ್ರತ್ಯಕ್ಷಮಾಗಿ, ಈ ದೋಷಕ್ಕೆ ಲಿಂಗಪ್ರತಿಷ್ಠೆಯ ನಿರೋಹರಣಮೆಂದರುಪಿ, ಅರಿದಾ ರಾಮಂಗಂ ಗಂಧಮಾದ ಪರ್ವತವೇ ಆದಿಯಾಗಿ, ಅದನು ಕೋಟೆಯ ಅವದ್ಥಿಯಾಗಿ ಶಿವಲಿಂಗಪ್ರತಿಷ್ಠೆಯಂ ಮಾಡೆ, ರಾಮೇಶ್ವರಲಿಂಗಮೆನಿಪ್ಪ ನಾಮಾಂಕಿತದಿಂ ತಕವಕ ಮಿಗೆವರಿದು ಸ್ವಾತ್ವಿಕಭಕ್ತಿಭಾವದಿಂದರ್ಚಿಸಿ ಸ್ತುತಿಸಿ, ಭೂವಳಯದೊಳೆಲ್ಲಂ ಪ್ರದಕ್ಷಿಣ ಮುಖದಿಂ ಶಿವಲಿಂಗಾಲಯಮನೆತ್ತಿಸಿ, ಅಂತಾ ಸಹಸ್ರಾವದ್ಥಿಯೆನಿಸುವ ದಶಗ್ರೀವ ವಧೆಯಂ ಪರಿಹರಿಸಿದ ಹಾಗೆ, ಶ್ರೀಮನ್ಮಹಾದೇವನೂ ದೇವಾದಿದೇವನೂ ದೇವಚಕ್ರವರ್ತಿ ದೇವಭಟ್ಟಾರಕನೂ ದೇವವೇಶ್ಯಾಭುಜಂಗನೂ ಸರ್ವದೇವತಾ ನಿಸ್ತಾರಕನೂ ಸರ್ವದೇವತಾ ಯಂತ್ರವಾಹಕನೂ ಒಂದಾನೊಂದೆಡೆಯಲ್ಲಿ ಮಹಾದೇವೇಶ್ವರನು ರುದ್ರೇಶ್ವರನು ಈಶ್ವರೇಶ್ವರನು ಶಂಕರೇಶ್ವರನೆನಿಪ ನಾಮಂಗಳಿಂ, ಭೂವಳಯದೊಳು ಲಿಂಗಪ್ರತಿಷ್ಠೆಯಂ ಬ್ರಹ್ಮಶಿರಚ್ಛೇದನ ನಿಮಿತ್ಯನಂ ಮಾಡಿದುದುಳ್ಳಡೆ, ಹೇಳಿರೆ ಕರ್ಮವಾದಿಗಳು. ಅಂತುಮದಲ್ಲದೆಯುಂ ಆ ಉಗ್ರನಿಂದಂ ಪಿತಾಮಹಂ ಅವದ್ಥಿಗಡಿಗೆ ಮಡಿವುದಂ ಕೇಳರಿಯಿರೆ. ಅದಲ್ಲದೆಯುಂ, ದP್ಷ್ಞಧ್ವರದೊಳಾ ದಕ್ಷ ಪ್ರಜಾಪತಿಯ ಶಿರವನರಿದು, ಕರಿಯದಲೆಯನೆತ್ತಿಸಿದ. ಅದಲ್ಲದೆಯುಂ ಸುತೆಗಳುಪಿದ ವಿರಂಚಿ ಹತಿಸಿದಂದು, ಅದಲ್ಲದೆಯುಂ ಸಮಸ್ತದೇವತೆಗಳ ಆಹಾರ ತೃಪ್ತಿಗೆ ಬೇಹ ಅಮೃತತರನಂ ಚರಣಾಂಗುಷ್ಠದಿಂದೊರಸಿದಂದು, ಅದಲ್ಲದೆಯುಂ ವಿಷ್ಣು ತಾನೆಯೆನಿಪ ವಿಶ್ವಕ್ಸೇನನ ತ್ರಿಶೂಲದಿಂದಿರಿದೆತ್ತಿ ಹೆಗಲೊಳಿಟ್ಟಂದು, ಅದಲ್ಲದೆಯುಂ ಮತ್ಸ್ಯ ಕೂರ್ಮ ವರಾಹ ನಾರಸಿಂಹ ತ್ರಿವಿಕ್ರಮಾದಿಗಳಂ ಮುಂದುವರಿದು ಕೊಂದಂದು ಅದಲ್ಲದೆಯುಂ ದೇವಿದ್ವಿಜರಿಗೆ ಗುರುವೆನಿಸುವ ಪಾವಕನ ಏಳು ನಾರಿಗೆಗಳ ಕೀಳುವಂದು, ಅದಲ್ಲದೆಯುಂ ಯಜÕವಾಟದೊಳು ಪ್ರಾಜÕನೆನಿಸುವ ಪೂಶಾದಿತ್ಯನ ಹಲ್ಲ ಕಳದು, ಭಾಗಾದಿತ್ಯನಂ ಮೀಂಟಿ ವಾಣಿಯ ಮೂಗಂ ಮಾಣದೆ ಕೊಯ, ದೇವಮಾತೃಕೆಯರ ದೊಲೆ ನಾಶಿಕವ ಚಿವುಟಿದಂದು, ಅದಲ್ಲದೆಯುಂ ಬ್ರಹ್ಮಾಂಡಕೋಟಿಗಳನೊಮ್ಮೆ ನಿಟಿಲತಟನಯನಂ ಲಟಲಟಿಸಿ ಶೀಘ್ರದಿಂದ ಸುಡಲು, ಸುರಾಸುರ ಮುನಿನಿವಹ ಹರಿಹಿರಣ್ಯಗರ್ಭರು ಶತಕೋಟಿ ಹತವಾದಂದು, ಪ್ರೊರ್ದದಾ ಬ್ರಹ್ಮಹತ್ಯಂ ನಿರ್ಧರಮಾಗಿ ಬೊಮ್ಮನ ಮೇಲ್ದಲೆಯೊಂದ ಚಿವುಟಿದುದರಿಂದಂ ಒಮ್ಮೆಯ ಶೂಲಪಾಣಿಗೆ ಬ್ರಹ್ಮೇತಿಯಾದುದತಿಚೋದ್ಯ ಚೋದ್ಯ. ಅವಲ್ಲದೆಯೂ ಬ್ರಹ್ಮ ಸಾಯನು. ಅಂಗಹೀನಮಾದುದಲ್ಲದೆ ಹೋಗಲಾ ಸಾಮಾನ್ಯ ಚರ್ಚೆ ಕರ್ಮಗತ ಕರ್ಮಿಯೆನಿಸುವ ನಿನ್ನ ಕರ್ಮವಾದವೆಲ್ಲಿಗೂ ಸಲ್ಲದು. ಬ್ರಹ್ಮಮಸ್ತಧಾರಣ ಲೀಲಾಲೋಲ ಶೀಲಬ್ರಹ್ಮೇಶ್ವರ ಪರಬ್ರಹ್ಮ ಶ್ರೀಮನ್ಮಹಾದೇವನ ನಾಮಕೀರ್ತನ ಮುತ್ರದಿಂದು ಬ್ರಹ್ಮಹತ್ಯಕೋಟಿಗಳುಂ ಮಹಾಪಾತಕವಗಣಿತಂ ನಿರಿಗೆಣೆಯಾದಕೂಲಮಂ ಭರದೊಳನಲ ಗ್ರಹಿಸಿದಂತಾಗುಮೆನೆ. ಬ್ರಹ್ಮ ಪಂಚಬ್ರಹ್ಮಮೆನಲು ಬ್ರಹ್ಮಪಾಪಕಾಶಿಯೆನಲು, ಶಿವಲಿಂಗ ದರ್ಶನ ಮಾತ್ರ ಬ್ರಹ್ಮಹತ್ಯವಳಿವವೆನಲು, ಆ ಶಿವನೆ ಬ್ರಹ್ಮಹತ್ಯವೆ ಇದುಯೆಂಬುದು ಮೊಲನ ಕೋಡಿನಂತೆ. ಇದು ಕಾರಣ, ಕರ್ಮ ಶಿವನಾಜೆÕವಿಡಿದು ಕರ್ಮಿಯ ಗ್ರಹಿಸೂದು. ಕರ್ಮಸಾರಿಯಲಿ ಕರ್ಮ ನಿರ್ಮಲಕರ್ಮ ಕಾರಣ ಕರ್ತೃವೆಂದರಿಯದಡೆ, ಎಲೆ ಕರ್ಮವಾದಿ, ನಿನಗೆ ಗತಿ ಉಂಟೆಂದುದು, ಬಸವಪ್ರಿಯ ಕೂಡಲಚೆನ್ನಸಂಗನ ವಚನ. || 65 ||
--------------
ಸಂಗಮೇಶ್ವರದ ಅಪ್ಪಣ್ಣ
ಜಡಶೀಲಗಳ ಹೊತ್ತು ಕೆಡುವೊಡಲಹೊರೆವ ತುಡುಗುಣಿಗಳಾಚಾರಕ್ಕಗಣಿತ ನೋಡಾ ನಮ್ಮ ವೀರಮಾಹೇಶ್ವರನು. ಮನದಿಚ್ಫೆಗನುವಾದ ತನುಸುಖಪದಾರ್ಥವನು ದಿನದಿನಕ್ಕೆ ವ್ರತವೆಂದು ತಿನಬಂದ ಶುನಕನಲ್ಲ ನೋಡಾ ನಮ್ಮ ವೀರಮಾಹೇಶ್ವರನು. ಮುಟ್ಟುತಟ್ಟುಗಳಿಂದೆ ಕೆಟ್ಟೆನಲ್ಲಾಯೆಂದು ಕಟ್ಟುಕಾವಲಿಗೊಂಡು ಕೆಟ್ಟಸಿಟ್ಟುಗಳಿಂದೆ ಬಟ್ಟೆಯನು ಹಿಡಿವ ಪಟ್ಟುಗುಡುವನಂತಲ್ಲ ನೋಡಾ ನಮ್ಮ ವೀರಮಾಹೇಶ್ವರನು. ಮತ್ತೆಂತೆಂದೊಡೆ : ಪರಧನ ಪರಸತಿ ಪರಹಿಂಸೆ ಪರನಿಂದೆ ಪರದೈವ ಪರಸಮಯಾದಿ ದುರಾಸೆವಿಡಿದು ನಡೆಯದಿಹುದೇ ಶೀಲ ನೋಡಾ ನಮ್ಮ ವೀರಮಾಹೇಶ್ವರಂಗೆ. ತನು ಮನ ಪ್ರಾಣಾದಿ ಸಕಲ ಕರಣಾದಿ ಗುಣವಳಿದು ಗುರುನಿರಂಜನ ಚನ್ನಬಸವಲಿಂಗನ ನೆನಹು ಬಿಡದಿಹುದೇ ವ್ರತ ನೋಡಾ ನಮ್ಮ ವೀರಮಾಹೇಶ್ವರಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶೀಲವಂತನಾದಡೆ ತಾ ಸವೆದು ಶೀಲವ ಮಾಡಬೇಕಲ್ಲದೆ ತಾನಿದೆಡೆಯಲ್ಲಿ ಸುಳಿದು ಮಾಡುವ ಶೀಲ, ಕೊಟ್ಟು ಪೂಜಿಸುವ ಕೈಕೂಲಿ ತನಗಿಲ್ಲ. ಪೂಜೆಯ ಫಲವು ಕೊಡವಾಲ ಕರೆವ ಸುರಬ್ಥಿಯಂತೆ ಅಟ್ಟಿದರಟ್ಟು ವರವ ಬೇಡಿ ಮರುಗುವ ದಾಸಿಯ ಪಥದಂತೆ, ತನ್ನ ಉದರನಿಮಿತ್ತ್ಯವಿಡಿದು, ನೇಮ ಬೇಕೆಂಬ ದುಶ್ಶೀಲರ ಮೆಚ್ಚ, ಸಕಳೇಶ್ವರದೇವನು.
--------------
ಸಕಳೇಶ ಮಾದರಸ
ಶೀಲವಂತರು, ಶೀಲವಂತರು ಎಂದೇನೊ ? ಶೀಲವಂತಿಕೆಯನಾರು ಬಲ್ಲರು? ಶೀಲವಾದರೆ ಶಿವನೊಳು ಬೆರೆವುದೇ ಶೀಲ. ಶೀಲವಾದರೆ ಗುರುಲಿಂಗಜಂಗಮವ ತನ್ನೊಳಗರಿವುದೇ ಶೀಲ. ಅದಕ್ಕೆ ಮೀರಿದ ಶೀಲವಾದರೆ, ಹಸಿವು ತೃಷೆ ನಿದ್ರೆ ವಿಷಯವ ಕೆಡಿಸುವುದೇ ಶೀಲ. ಅದಕ್ಕೆ ತುರಿಯಾತೀತ ಶೀಲವಾದರೆ, ಬಾಲನಾಗಿ ತನ್ನ ಲೀಲಾವಿನೋದವ ಭೂಮಿಯ ಮೇಲೆ ನಟಿಸುವುದೇ ಶೀಲ. ಇದನರಿಯದೆ ಶೀಲಶೀಲವೆಂದು ಮನೆಮನೆಗೆ ಶೀಲವಲ್ಲದೆ, ತನ್ನ ತನಗೆ ಕಾಯಕೃತ್ಯವಲ್ಲದೆ, ಇದನರಿದು ಮೋಹ ಘನವನೆ ಮರೆದು, ಮನವನೆ ಬಳಲಿಸಿ, ಘನವ ಮಾಡಿ, ತನುವ ಹೊರೆದೆನೆಂಬ ಬಿನುಗರ ನುಡಿಯ ಮೆಚ್ಚುವನೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ?
--------------
ಹಡಪದ ಅಪ್ಪಣ್ಣ
ತನ್ನ ಸಮ ಕ್ರೀವಂತರಲ್ಲಿಯಲ್ಲದೆ ಕೊಳುಕೊಡೆ ಮಿಕ್ಕಾದ ಹೊರಗಣ ಕ್ರೀ ಸೋಂಕು ಬಾಹ್ಯರಚನೆ ತಪ್ಪದಿರಬೇಕು. ಆತ್ಮನರಿದು ಮುಟ್ಟುವಲ್ಲಿ ತನ್ನ ವ್ರತದೆಸಕವನರಿದು ಸ್ವಪ್ನಾವಸ್ಥೆಗಳಲ್ಲಿದ್ದು ಸೂಕ್ಷ ್ಮತನುವಂ ಮುಟ್ಟದೆ, ಅಲ್ಲದುದ ಕಂಡು ಮತ್ತೆ ಆರೂ ಅರಿಯರೆಂದು ತನ್ನಲ್ಲಿಯೇ ಅಡಗದೆ, ತಲೆದೋರಿದಲ್ಲಿಯೇ ಲಯವಾಗಬೇಕು. ಇಂತೀ ಗುಣ ಆತ್ಮನ ಶೀಲ ಮನಕ್ಕೆ ಮನೋಹರ ಶಂಕೇಶ್ವರ ಲಿಂಗದಲ್ಲಿ.
--------------
ಕರುಳ ಕೇತಯ್ಯ
ಕೂಪಚಿಲುಮೆ ಬಹುಜಲಂಗಳಲ್ಲಿ ಸ್ವೀಕರಿಸಿಕೊಂಬುದು ಅದೇತರ ಶೀಲ ತನು ಕರಗದೆ, ಮನ ಮುಟ್ಟದೆ, ಆಗಿಗೆ ಮುಯ್ಯಾಂತು ಚೇಗಿಗೆ ಹಲುಬುತ್ತ, ಸುಖದುಃಖವೆಂಬ ಉಭಯವರಿಗಾಣದೆ, ಅಂದಂದಿಗೆ ಆಯು ಸಂದಿತ್ತೆಂದಿರಬೇಕು. ಆ ಗುಣ ಶಿವಲಿಂಗ ಖಂಡಿತನೇಮ, ಈ ಸಂಗವೆ ಎನಗೆ ಸುಖ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಕೂಟ.
--------------
ಅಕ್ಕಮ್ಮ
ಜಗತ್ರಯದ ಹೊ[ಲೆ]ಯನೆಲ್ಲವನು ಉದಕ ಒಳಕೊಂಬುವುದು. ಉದಕದ ಪೂರ್ವಾಶ್ರಯವ ಕಳೆವಡಾರಳವಲ್ಲ. ಅದೆಂತೆಂದಡೆ; ಯದಾ ಪೃಥ್ವೀಶ್ಮಶಾನಂ ಚ ತದಾ ಜಲಂ ನಿರ್ಮಲಿನಕಂ ಮಹಾಲಿಂಗಂ ತು ಪೂಜಾನಾಂ ವಿಶೇಷಂ ಪಾಕಂ ಭವೇತ್ ಎಂದುದಾಗಿ. ಅದಕ್ಕೆ ಮತ್ತೆಯು; ಪ್ರಥಮಂ ಮಾಂಸತೋಯಾನಾಂ ದ್ವಿತೀಯಂ ಮಾಂಸಗೋರಸಃ ತೃತೀಯಂ ಮಾಂಸನಾರೀಣಾಂ ಕಸ್ಯ ಶೀಲಂ ವಿಧೀಯತೇ ಎಂದುದಾಗಿ, ಯಥಾ ಉದಕದಿಂದಲಿ ಅಗ್ನಿಯಿಂದಲಿ ಪಾಕವಾದ ದ್ರವ್ಯಪದಾರ್ಥಂಗಳೆಲ್ಲವು ಜೀವಮಯವೆಂದು ಹೇಳುತಿರ್ದವಾಗಿ, ಆ ದೋಷದಿಂದಲಾದ ಭೋಜನವನು ಲಿಂಗಕ್ಕೆ ಸಮರ್ಪಿಸಲಾಗದು. ಅದೆಂತೆಂದಡೆ; ಭೂಮಿದ್ರ್ರವ್ಯಂ ಯಥಾ ಮಾಂಸಂ ಪ್ರಾಣಿದ್ರವ್ಯಂ ಯಥಾ ಮಧು ಸರ್ವಭೂತಮಯಂ ಜೀವಂ ಜೀವಂ ಜೀವೇನ ಭಕ್ಷಿತಂ ಎಂದುದಾಗಿ ಇಂಥ ಉದಕದ ಪೂರ್ವಾಶ್ರಯವು, ಬೋನದ ಪೂರ್ವಾಶ್ರಯವು, ಹೇಗೆ ಹೋಹುದಯ್ಯಾ ಎಂದಡೆ: ಉದಕದ ಪೂರ್ವಾಶ್ರಯವು ಜಂಗಮದ ಪಾದತೀರ್ಥ ಮುಖದಿಂದ ಹೋಯಿತ್ತು, ಬೋನದ ಪೂರ್ವಾಶ್ರಯವು ಜಂಗಮದ ಪ್ರಸಾದದ ಮುಖದಿಂದ ಹೊಯಿತ್ತು. ಇದು ಕಾರಣ, ಈ ವರ್ಮ ಸಕೀಲವು ಪ್ರಭುದೇವರ ವಳಿ ಬಸವಣ್ಣನ ವಂಶಕ್ಕಲ್ಲದೆ ಮತ್ತಾರಿಗೂ ಅಳವಡದು ಕಾಣಾ ಕೂಡಲಸಂಗಮದೇವಾ.
--------------
ಬಸವಣ್ಣ
ಮನ ಅರೋಚಕವಾದಲ್ಲಿ, ಲವಣ ವಾರಿ ಪರಿಪಾಕ ಮುಂತಾದ ರಸದ್ರವ್ಯವನೊಲ್ಲದೆಯಿಪ್ಪುದು ವ್ರತವೆ ? ಅಲ್ಲ, ಅದು ಸೌಕರಿಯವಲ್ಲದೆ. ಅದೆಂತೆಂದಡೆ: ಪರದ್ರವ್ಯ ಪರಸತಿ ಹುಸಿ ಕೊಲೆ ಕಳವು ಅತಿಕಾಂಕ್ಷೆಯಂ ಬಿಟ್ಟು, ಬಂದುದ ನಿಂದಂತೆ ಕಂಡು, ಬಾರದುದಕ್ಕೆ ಕಾಂಕ್ಷೆಯ ಮಾಡದಿಪ್ಪುದೆ, ಅರುವತ್ತನಾಲ್ಕು ವ್ರತ, ಅಯಿವತ್ತಾರು ಶೀಲ, ಮೂವತ್ತೆರಡು ನೇಮ ಸಂದಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ ಸ್ವಯಂಭುವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಶೀಲ ಶೀಲವೆಂದು ನುಡಿವ ಉದ್ದೇಶಪ್ರಾಣಿಗಳು ಎಲ್ಲರೂ ಅನಂತಶೀಲರು, ಅರಿವಿನ ನಿರ್ಣಯವನರಿಯರು. ಹೊರಗೆ ಬಳಸುವರು, ಒಳಗಣ ಶುದ್ಧಿಯನರಿಯರು. ನೇಮಶೀಲವೆಂದು ಹಿಡಿವರು, ನಿರ್ಣಯವನರಿಯರಾಗಿ, ಕೂಡಲಚೆನ್ನಸಂಗಯ್ಯನಲ್ಲಿ ಉದ್ದೇಶಪ್ರಾಣಿಗಳು.
--------------
ಚನ್ನಬಸವಣ್ಣ
ಮಾಡಿದ ಮಾಟದೊಳಗೆ ನುಡಿ ಘನವಾಡದೆ ಭಕ್ತನೆ ? ಅಲ್ಲ. ಶೀಲವ ಹೇಳಿ ಮಾಡಿಸಿಕೊಂಬನ್ನಕ್ಕರ ಶೀಲವಂತನೆ ? ಅಲ್ಲ. ನೋಡಿ ಸಯಿಧಾನಬೇಕೆಂಬನ್ನಕ್ಕರ ನಿತ್ಯನೇಮಿಯೆ ? ಅಲ್ಲ. ಶೀಲ, ಮೀಸಲು, ಭಾಷೆ ಲಿಂಗದೊಡಲು, ಪ್ರಾಣ ಜಂಗಮವಾಗಿಪ್ಪ ಭಕ್ತಂಗೆ ಮಹಾಲಿಂಗ ಕಲ್ಲೇಶ್ವರಲಿಂಗ ತಾನೆ ಪ್ರಾಣವಾಗಿಪ್ಪನು.
--------------
ಹಾವಿನಹಾಳ ಕಲ್ಲಯ್ಯ
ಲವಣವ ಕೊಂಬುದೆಲ್ಲವು ಒಂದೆ ಶೀಲ. ಸರ್ವ ಸಪ್ಪೆ ಎಂಬುದು ಒಂದೆ ಶೀಲ. ಇವೆಲ್ಲವ ವಿಚಾರಿಸಿ, ತಟ್ಟುಮುಟ್ಟಿಗೆ ಬಾರದೆ ತೊಟ್ಟುಬಿಟ್ಟ ಹಣ್ಣಿನಂತೆ ನೆಟ್ಟನೆ ವ್ರತವ ಕೂಡುವುದು ಮೂರನೆಯ ಶೀಲ. ಮೂರು ಕೂಡಿ ಒಂದಾಗಿ ನಿಂದುದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಶೀಲ.
--------------
ಅಕ್ಕಮ್ಮ
ಶೀಲ ಸಂಬಂಧವನೆಂತು ಮಾಡುವರಯ್ಯ, ಮನದಂತುವನರಿಯಬಾರದೆ ? ಕಾಯದ ಕಳವಳವು ತಮತಮಗೆ ತಟತಟ ತಾಗುತ್ತಿರಲು ಶೀಲ ಶೀಲದಂತೆ, ತಾವು ತಮ್ಮಂತೆ, ಲಿಂಗ ಲಿಂಗದಂತೆ, ಮನದೊಳಗೆ ಎನಗೆ ತನಗೆಂಬ ಭಾವ ಬಿಡದನ್ನಕ್ಕ ಶೀಲ ಮತ್ತೆಲ್ಲಿಯದೊ ? ಅಷ್ಟಮದವಳಿದು ಷಡ್ವರ್ಗವರತಡೆ, ಕೂಡಲಚೆನ್ನಸಂಗನಲ್ಲಿ ಸುಶೀಲನೆಂಬೆನು.
--------------
ಚನ್ನಬಸವಣ್ಣ
ಲಕ್ಷವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಕೃತ್ಯವಿಲ್ಲದ ನಿತ್ಯ ಎಷ್ಟಾದಡುಂಟು, ಕಟ್ಟಳೆಗೊಳಗಾದವು ಅರುವತ್ತಾರು ಶೀಲ, ಅರುವತ್ತುನಾಲ್ಕು ನೇಮ, ಅಯಿವತ್ತುಮೂರು ನೇಮ, ಮೂವತ್ತೆರಡು ನಿತ್ಯ. ಇಂತಿವರ ಗೊತ್ತಿಗೊಳಗಾಗಿ ಕಟ್ಟಳೆಯಾಗಿ ನಡೆವಲ್ಲಿ ಅರ್ಥ ಪ್ರಾಣ ಅಭಿಮಾನಂಗಳಲ್ಲಿ, ತಥ್ಯಮಿಥ್ಯ ರಾಗದ್ವೇಷಂಗಳಲ್ಲಿ, ಭಕ್ತಿ ಜ್ಞಾನ ವೈರಾಗ್ಯಂಗಳಲ್ಲಿ, ಸ್ಥೂಲ ಸೂಕ್ಷ್ಮ ಕಾರಣ ತನುತ್ರಯಂಗಳಲ್ಲಿ, ಜರ ನಿರ್ಜರ ಸಮನ ಸುಮನಂಗಳಲ್ಲಿ, ಸರ್ವೇಂದ್ರಿಯ ಭಾವಭ್ರಮೆಗಳಲ್ಲಿ, ಐದು ತತ್ವದೊಳಗಾದ ಇಪ್ಪತ್ತಾರು ಕೂಟದಲ್ಲಿ, ಆತ್ಮವಾಯು ಒಳಗಾದವನ ವಾಯುವ ಬೆರಸುವಲ್ಲಿ, ಜಿಹ್ವೆದ್ವಾರದೊಳಗಾದ ಅಷ್ಟದ್ವಾರಂಗಳಲ್ಲಿ, ಇಂತೀ ಘಟದೊಳಗಾದ ಸಂಕಲ್ಪವೆಲ್ಲಕ್ಕೂ ಬಾಹ್ಯದಲ್ಲಿ ತೋರುವ ತೋರಿಕೆಗಳೆಲ್ಲಕ್ಕೂ ಹೊರಗೆ ಕ್ರೀ, ಆತ್ಮಂಗೆ ವ್ರತ. ಅವರವರ ತದ್ಭಾವಕ್ಕೆ ವ್ರತಾಚಾರವ ಮಾಡದೆ ಕಾಮಿಸಿ ಕಲ್ಪಿಸಿದೆನಾಯಿತ್ತಾದಡೆ, ಎನ್ನರಿವಿಂಗೆ ಅದೆ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಹಿತಾಗಿಯೆ ಮಾಡುವೆನು
--------------
ಅಕ್ಕಮ್ಮ
ಲಿಂಗಸ್ವರೂಪಕ್ಕೆ ಪಂಚಸೂತ್ರ ಲಕ್ಷಣವನರಿತು ವರ್ತುಳ ಖಂಡಿಕಾದಂಡ ಗೋಮುಖ ಗೋಳಕಾಕಾರವಪ್ಪ ಲಿಂಗಮೂರ್ತಿಯಿಂದ ಶಶಿ ರವಿ ಪವನ ಪಾವಕ ಆತ್ಮ ಮುಂತಾದ ಭೇದಂಗಳನರಿದು ಪಂಚಸೂತ್ರದಿಂದ ಪ್ರಯೋಗಿಸಿ, ಅಚೇತನವಪ್ಪ ಶಿಲೆಯ ಕುಲವಂ ಹರಿದು, ತಾ ಶುಚಿರ್ಭೂತನಾಗಿ ಆ ಇಷ್ಟಲಿಂಗವ ತನ್ನ ಕರಸ್ಥಲದಲ್ಲಿ ಮೂರ್ತಿಗೊಳಿಸಿ ತನು ಕರಗಿ ಮನ ರೆುsುೂಂಪಿಸಿ ಪುಳಕಿತದಿಂದ ಆನಂದಾಶ್ರು ಉಣ್ಮಿ ನಿಧಾನಿಸಿ ನಿಕ್ಷೇಪವ ಕಾಬವನಂತೆ ಬಯಲ ಬಂದಿವಿಡಿವವನಂತೆ ಶಿಲೆಯಲ್ಲಿ ರಸವ ಹಿಳವವನಂತೆ ರತ್ನದ ಕಳೆಯ ಗಂಟನಿಕ್ಕಿ ಕಟ್ಟಿ ತಾಹವನಂತೆ ಮುತ್ತಿನೊಳಗಡಗಿದ ಅಪ್ಪುವಿನ ವಿರಾಳದಿಂದ ಶೋದ್ಥಿಸಿ ಮುಚ್ಚಿತಾಹವನಂತೆ ಜ್ಯೋತಿಗೆ ಪ್ರತಿಹಣತೆಯಿಂದ ಆ ಬೆಳಗ ಮುಟ್ಟಿಸಿ ಕಾಹವನಂತೆ, ಇಂತೀ ನಿರವಯದ ಸುವಸ್ತುವಿನ ಪ್ರಯೋಗದಿಂದ ದಿವ್ಯಪ್ರಕಾಶನ ತನ್ನ ಕರತಳಾಮಳಕದಂತೆ ಮೂರ್ತಿಗೊಂಡಿದ್ದ ಶಿವಲಿಂಗಮೂರ್ತಿಗೆ ಧ್ಯಾನದ ಕೈಯಿಂದ ಆ ಸ್ವರೂಪಕ್ಕೆ ಮೂರ್ತಿಗೊಳಿಸಿ ಷೋಡಶಕಳೆಯಿಂದ ಉಪಚರಿಸಿ ನವಕಳಶ ಪ್ರಯತ್ನ ಪ್ರಯೋಗವ ಮಾಡಿ ಚತುರ್ವಿಧ ಆಚಾರ್ಯರ ಕೂಡಿ ಅಷ್ಟದೆಸೆಗಳಲ್ಲಿ ಕರ್ತೃಕಳಶ ನಾಲ್ಕು, ಭೃತ್ಯಕಳಶ ನಾಲ್ಕು, ಶ್ರೀಗುರುಕಳಶ ಮಧ್ಯದಲ್ಲಿ ನಾಲ್ಕು ವರ್ಣಕ್ರೀ ಮುಂತಾದ ಪ್ರಾಣಲಿಂಗವೆಂದು ಉಪೇಕ್ಷಿಸಿ ಧಾರಣವ ಮಾಡುವಲ್ಲಿ ಗುರು ನಾನೆಂಬುದ ಮರೆದು ಅಹಂಕಾರವ ತೊರೆದು ಆತ್ಮತೇಜವ ಹರಿದು ಮುಂದಣ ತ್ರಿವಿಧ ಸೇವೆಯ ತೋರಿ ಮಂತ್ರಾಬ್ಥಿಷೇಕ ತೀರ್ಥಮಂ ತಳೆದು ಶ್ರೀವಿಭೂತಿಯಲ್ಲಿ ಸರ್ವಾಂಗ ಧೂಳಿತವಂ ಮಾಡಿ ತ್ರಿಕರಣ ಶುದ್ಧವಂ ಮಾಡಿ ಕಪಾಲಕ್ಕೆ ಕರವನಿಟ್ಟಲ್ಲಿ ಪರುಷರಸ ಪಾಷಾಣ ಲೋಹದ ಮೇಲೆ ಬಿದ್ದಂತೆ ನಂಜೇರಿದಂಗೆ ಸಂಜೀವನ ಸಂದ್ಥಿಸಿದಂತೆ ಇಂತೀ ಕಪಾಲಕ್ಕೆ ಕರವನಿಟ್ಟು ಕರ್ಣಕ್ಕೆ ಮಂತ್ರವ ಹೇಳಿದಲ್ಲಿ ಹುಸಿ ಕೊಲೆ ಕುಹಕ ಪಾರದ್ವಾರ ಚೋರತ್ವ ಪಿಸುಣತನವಂಬಿಟ್ಟು ಅರುವತ್ತುನಾಲ್ಕು ಶೀಲ, ಐವತ್ತೆರಡು ನೇಮ, ಮೂವತ್ತರೊಳಗಾದ ನಿತ್ಯಕೃತ್ಯ, ಆರುಸ್ಥಲದೊಳಗಾದ ಆಚಾರ, ಇಪ್ಪತ್ತೈದರೊಳಗಾದ ತತ್ತ್ವ ಇಂತಿವರೊಳಗಾದವರಲ್ಲಿ ಸತ್ವಕ್ಕೆ ತಕ್ಕ ಸಾಮಥ್ರ್ಯದಲ್ಲಿ ನಿಶ್ಚೆ ೈಸಿ ನಡೆಯೆಂದು ಲಿಂಗಧಾರಣವ ಮಾಡುವದಿದು ಗುರುದೀಕ್ಷಾ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 82 ||
--------------
ದಾಸೋಹದ ಸಂಗಣ್ಣ
ಸೂಳೆಯ ತನುಮನದ ಕೊನೆಯಲ್ಲಿ ವಿಟಗಾರನೇ ಪ್ರಾಣಲಿಂಗ; ಶೀಲವಂತನ ತನುಮನದ ಕೊನೆಯಲ್ಲಿ ಭವಿಯೇ ಪ್ರಾಣಲಿಂಗ ; ನಿತ್ಯ ಪ್ರಸಾದಿಯ ತನುಮನದ ಕೊನೆಯಲ್ಲಿ ಬೆಕ್ಕೇ ಪ್ರಾಣಲಿಂಗ ; ಬ್ರಾಹ್ಮಣರ ತನುಮನದ ಕೊನೆಯಲ್ಲಿ ಸೂತಕವೇ ಪ್ರಾಣಲಿಂಗ; ಇಂಥವರಿಗೆಲ್ಲಾ ಇಂತಾಯಿತು! ದೇವರಗುಡಿಯೆಂದು ದೇಗುಲವ ಪೊಕ್ಕು ನಮಸ್ಕಾರವ ಮಾಡುವಂಗೆ ಹೊರಗೆ ಕಳೆದ ಪಾದರಕ್ಷೆಯೆ ಪ್ರಾಣಲಿಂಗ. ಅದು ಎಂತೆಂದಡೆ : ಸೂಳೆಗೆ ವಿಟನ ಹಂಬಲು; ಶೀಲವಂತನಿಗೆ ಭವಿಯ ಹಂಬಲು; ನಿತ್ಯಪ್ರಸಾದಿಗೆ ಬೆಕ್ಕಿನ ಹಂಬಲು ; ಬ್ರಾಹ್ಮಣನಿಗೆ ಸೂತಕದ ಹಂಬಲು ; ಇವರು ಭಕ್ತಿಶೂನ್ಯರು ಕಾಣಿರಯ್ಯಾ ! ಇವಂ ಬಿಟ್ಟು, ಪರಸ್ತ್ರೀಯರ ಮುಟ್ಟದಿರ್ಪುದೇ ಶೀಲ ; ಪರದ್ರವ್ಯ[ವ]ಅಪಹರಿಸದಿರುವುದೇ ಆಚಾರ ; ಪರನಿಂದೆ[ಯ] ಕರ್ಣದಿಂ ಕೇಳದಿರ್ಪುದೇ ನಿತ್ಯಪ್ರಸಾದತ್ವ ; ಪರರಂ ದೂಷಿಸದಿರ್ಪುದೇ ಬ್ರಹ್ಮತ್ವ. ಇಂತಿದರಲ್ಲಿ ನಡೆದು, ದೇವರಿಗೆ ನಮಸ್ಕಾರವ ಮಾಡುವುದೇ ನಮಸ್ಕಾರ. ಹಿಂದಿನ ಪುರಾತನರು ನಡೆದರೆಂಬೋ ಶಾಸ್ತ್ರವಂ ಕೇಳಿ, ಈಗಿನ ಕಿರಾತರು 'ನಾವು ಶೀಲವಂತರು' 'ನಾವು ಆಚಾರವಂತರು', 'ನಾವು ನಿತ್ಯಪ್ರಸಾದಿಗಳು', 'ನಾವು 1[ 'ಪೂಜಸ್ಥರು']1, 'ನಾವು ಬ್ರಾಹ್ಮಣರು', ಎಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ !
--------------
ಕೂಡಲಸಂಗಮೇಶ್ವರ
ಇನ್ನಷ್ಟು ... -->