ಕಾಯದ ಗತಿಯಿಲ್ಲ, ನಡೆವವನಲ್ಲ.
ಅಕಾಯಚರಿತ್ರನು, ಅನುಪಮಲಿಂಗೈಕ್ಯನು.
ಕುಲ, ಛಲ, ವಿದ್ಯಾಮದ, ಮೋಹ, ಬಲುವಿಡಿಯ.
ನಿರಹಂಕಾರವಿಡಿದು, ನಿರಂಗ ಸುಜ್ಞಾನ ಒಡಲಾ[ಗಿ]
ಭರಿತಪ್ರಸಾದವಲ್ಲದನ್ಯವನರಿಯ.
ಇದಕ್ಕೆ ಶ್ರುತಿ:
ಶುಚಿರೂಪಂ ನಚಾಜ್ಞಾನಂ ಅರ್ಪಿತಾನರ್ಪಿತಂ ತಥಾ
ಯಥಾ ವರ್ತೇತ ಯಸ್ಯಾಪಿ ಶಿವೇನ ಸಹ ಮೋದತೇ
ಎಂದುದಾಗಿ
ಅಂಗರುಚಿಯ ಹಂಗು ಹಿಂಗಿ
ಲಿಂಗರುಚಿಯ ಸಂಗವಾದ ಸುಸಂಗಿ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ.